doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Thursday, April 7, 2011

ಅವನೊಬ್ಬನಿದ್ದ ನಮ್ಮೊಂದಿಗೆ...



(ಬಾಳಿನ ದಾರಿಯಲ್ಲಿ ಬೇಗನೆ ಕಳೆದುಹೋದ ಗೆಳೆಯನಿಗೆ ಅಕ್ಷರಗಳ ಅಶ್ರುತರ್ಪಣ)

ಜೀವನ ಅಂದ್ರೆ ಹೀಗೇ ಏನೋ...! ನಾವಂದ್ಕೊಂಡಂತೆ ಆಗಲ್ಲ, ಆಗೋದಾದ್ರೂ ನಮ್ಗೆ ಆಗದವರು ನಮ್ಮನ್ನು ಬಿಡಲ್ಲ... ಹೀಗೆ ಸದಾ ಏರಿಳಿತದ ಜೀವನದಿಂದ ಬೇಸತ್ತು ನಾವಾದ್ರೂ ಯಾಕಪ್ಪಾ ಬದುಕಿರ್ಬೇಕು? ನಾನು ಸತ್ರೆ ಒಳ್ಳೇದಿತ್ತು, ಆವಾಗ ಏನೂ ಟೆನ್ಷನ್ ಇರಲ್ಲ... ಹೀಗೆ ನಮ್ಮ ಪ್ರತಿಯೊಬ್ಬರ ಮನಸ್ಸು ಯಾವತ್ತಾದ್ರೂ ಒಂದ್ಸಲ ಯೋಚಿಸಿರುತ್ತೆ ಬಿಡಿ, ಆದ್ರೆ ಈ ಸತ್ಯಾನಾ ಒಪ್ಕೊಳ್ಳೋಕೆ ಮಾತ್ರ ಯಾರೂ ಸಿದ್ಧರಿರಲ್ಲ...

ಚಿಕ್ಕಂದಿನಿಂದಲೂ ದಿನ, ಕ್ಷಣ ಬಿಡದಂತೆ ಏನಾದರೊಂದು ಸಮಸ್ಯೆ ನಮ್ಮನ್ನು ಕಾಡ್ತಾನೇ ಇರತ್ತೆ. ಈ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಕೆಲವೊಂದು ಹೇಡಿಗಳು ಸಾವಿನ ಮೊರೆ ಹೋಗ್ತಾರೆ. `ಸಾವು' ಅಂತಂದ್ರೆ ಸಮಸ್ಯೆಗಳಿಂದ ಮುಕ್ತಿ ಅನ್ನೋದೇ ಹೆಚ್ಚಿನವರ ವಾದ. ಆದ್ರೆ ಅದೇ ಸಾವಿನಿಂದ ಸಮಸ್ಯೆಗಳ ಆರಂಭ ಅಂತ ತಿಳಿರೋರು ಮಾತ್ರ ತೀರಾ ವಿರಳ. ಹುಟ್ಟು-ಸಾವು ಈ ಎರಡರ ನಡುವೆ ಮೂರು ದಿನದ ಬಾಳು ಅಂತ ದಾಸಶ್ರೇಷ್ಟರೇನೋ ಹೇಳಿದ್ದಾರೆ ಸ್ವಾಮೀ... ಆದ್ರೆ ಈ ಮೂರು ದಿನದ ಬಾಳು ಎಷ್ಟೊಂದು ನೋವು, ಅವಮಾನ, ಕಷ್ಟ ನೀಡುತ್ತೆ ಅಂತ ಅವರ್ಗೇನು ಗೊತ್ತು?

ಹೀಗ ಸಾಯೋದಕ್ಕೆ ಬೇಕಿರೋ ಕಾರಣ, ಆರ್ಹತೆಗಳನ್ನು ಪಟ್ಟಿ ಮಾಡೋದು ಸುಲಭ. ಕ್ಷಣ ಕಾಲ ಯೋಚಿಸಿ ನೋಡಿ. ನಮ್ಮ ಮನಸ್ಸು `ಸಾವು' ಅನ್ನೋ ಎರಡಕ್ಷರಾನಾ ನಮ್ಮ ಕಣ್ಮುಂದೆ ತಂದು ನಿಲ್ಲಿಸಲಿ. ಆಗ ಭಯ ಶುರುವಾಗುತ್ತೆ. ಸಾಯದಕ್ಕಿಂತ ಹೇಗಾದ್ರೂ ಸರಿ ಬದುಕೋದೇ ಬೆಟರ್ ಅನ್ನೋದನ್ನು ಮನಸ್ಸು ಒಪ್ಪಿಕೊಳ್ಳುತ್ತೆ.

ಕೆಲವರು ಮಾತು-ಮಾತಿಗೂ ನಾನು ಸಾಯ್ತೀನಿ ಅಂತ ಹೇಳ್ತಾರೆ, ಆದ್ರೆ ಅಂಥವ್ರು ಯಾರೂ ಸತ್ತ ಉದಾಹರಣೆಗಳೂ ಇಲ್ಲ. ಸಾಯಬೇಕೆಂದಿರುವವರು ಎಂದೂ ತನ್ನ ಸಾವನ್ನು ಯಾರ ಜೊತೆಯೂ ಹಂಚ್ಕೊಳ್ಳಲ್ಲ. ಇಷ್ಟಕ್ಕೂ ಸಾವನ್ನು ನಾವಾಗೇ ತಂದುಕೊಂಡ್ರೆ? ಇದು ಖಂಡಿತಾ ಅಪರಾಧವೇ ಸರಿ. ಎಕ್ಸಾಮಲ್ಲಿ ಫೇಲ್ ಆಗ್ತೀವಿ, ಲವರ್ ಕೈಕೊಟ್ರು, ಮನೇಲಿ ಬೈದ್ರು, ಕೆಲಸ ಕೈಕೊಡುತ್ತೆ ಇಂಥ ಕಾರಣಕ್ಕೆ ಸಾಯ್ಬೇಕು ಅಂಥ ನಿಧರ್ಾರ ಮಾಡರಿಗೆ ನಾನು-ನೀವು ಏನು ಹೇಳೋಕಾಗುತ್ತೆ ಬಿಡಿ. ಅವರಿಗೆ ಒಟ್ಟಾರೆ ಹೇಗಾದ್ರೂ ಸಾಯಲೇಬೇಕು. ಅದಕ್ಕಾಗಿ ಆತ್ಮಹತ್ಯೆ ಎನ್ನುವ ಪಾಪದ ಕೃತ್ಯಕ್ಕೆ ಕೊರಳೊಡ್ಡುತ್ತಾರೆ.

ಆತ್ಮಹತ್ಯೆ ಹೇಳೋಕೆ ಎಷ್ಟೊಂದು ಸುಲಭ ಅಲ್ವಾ? ಆದರೆ ಆತ್ಮಹತ್ಯೆ ಮಾಡ್ಕೊಂಡೋರ ಮನೋಸ್ಥಿತಿ ಹೇಗಿರಬಹುದು ಅಂತ ದೂರದಲ್ಲಿ ನಿಂತು ಕಲ್ಪಿಸಿಕೊಳ್ಳೋಕೂ ಅಸಾಧ್ಯ. ನಾನಂತೂ ಆತ್ಮಹತ್ಯೆ ಮಾಡ್ಕೊಂಡೋರ ಹೆಣ ನೋಡೋಕ್ಕೂ ಹೋಗಲ್ಲ. ಅವರ ನಿಸ್ತೇಜ ದೇಹ ನೋಡಿ ಕಣ್ಣೀರೂ ಸುರಿಸಲ್ಲ. ಯಾಕೇಂದರೆ ನನ್ ಜೀವನದಲ್ಲಿ ಇಂತಹ ಆತ್ಮಹತ್ಯೆಯ ಕೃತ್ಯವನ್ನು ಅದೆಷ್ಟೋ ಕಂಡಿದ್ದೀನಿ. ನಿಮಗೆ ಹೀಗೆ ಹೇಳೋದಕ್ಕೆ ಮುಖ್ಯ ಕಾರಣಾನೇ ನನ್ನ ಬಾಲ್ಯ ಸ್ನೇಹಿತ.

ಅವನೊಬ್ಬನಿದ್ದ ನಮ್ಮೊಂದಿಗೆ...

ನಾನು, ನನ್ನ ಕಸಿನ್ ಬ್ರದರ್ ಮತ್ತು ಆತ ನಾವೆಲ್ಲಾ ಚಡ್ಡಿ ಹಾಕದ ಕಾಲದಿಂದಲೂ ಚಡ್ಡಿದೋಸ್ತ್ಗಳು. ಎಲ್ಲಿಗೋ ಹೋದ್ರೋ ನಮ್ಗೆ ತ್ರಿಮೂತರ್ಿ ಅನ್ನೋ ಅಡ್ಡ ಹೆಸರು ಬೇರೆ. ಕಲಿಯುವುದರಲ್ಲೂ ಅಷ್ಟೇ... ಆತ ನಮಗಿಂತ ಸ್ವಲ್ಪ ಮುಂದೆ, ನಾವೆಲ್ಲಾ ಹಿಂದೆ. ಬಾಲ್ಯದಲ್ಲೇ ಅವನ ಜತೆ ನಾವೆಲ್ಲಾ ಜೀವನಪೂತರ್ಿ ಜತೆಯಾಗಿರುವ ಪಣ ತೊಟ್ಟಿದ್ದೆವು. ಹಸ್ತಕ್ಕೆ ಹಸ್ತವನ್ನು ತಾಗಿಸಿ ಭಾಷೆಯೇನೋ ಕೊಟ್ಟಿದ್ವಿ. ಆದ್ರೆ ಆ ಭಾಷೆ, ಪಣ ಇವೆಲ್ಲದರಿಂದ ಆತನನ್ನು ನಮ್ಜೊತೆ ಉಳಿಸೋಕ್ಕೆ ಆಗಿಲ್ಲ. ಮೆಟ್ರಿಕ್ ಮುಗಿದ ನಂತರ ನಾವು ಮೂವರೂ ಬೇರೆ-ಬೇರೆಯಾದೆವು. ಆತ ಮತ್ತು ನಾನು ಪ್ರತಿದಿನ ಅಲ್ಲದಿದ್ರೂ ವಾರದಲ್ಲಿ ಒಂದು ದಿನ ಭೇಟಿಯಾಗಿ ಮಾತಾಡುವಷ್ಟು ಗೆಳೆತನ ಇನ್ನೂ ಉಳಿದಿತ್ತು. ಆತನಂದ್ರೆ ನನಗೆ ಏನೋ ಅಕ್ಕರೆ... ನಮ್ಮ ಮನೆಯಲ್ಲೂ ಅಷ್ಟೇ... ನನಗಿಂತ ನನ್ನ ಗೆಳೆಯನ ಮೇಲೆ ಮಮತೆ ಹೆಚ್ಚು. ಹೌದು... ಆತ ಇಂದು ನಮ್ಮೊಂದಿಗಿಲ್ಲ... ಆತ ಆತ್ಮಹತ್ಯೆ ಎಂಬ ಪಾಪದ ಕೂಪಕ್ಕೆ ಕೊರಳೊಡ್ಡಿ ಬರಲಾರದ ಊರಿಗೆ ಪಾದ ಬೆಳೆಸಿ ಆಗಿದೆ. ಕೊನೆಯ ಸಲ ನನ್ನನ್ನು ಭೇಟಿಯಾದಾಗ ತುಂಬಾ ಮಾತನಾಡಿದ್ದ. ಆದ್ರೆ ಅದೇ ದಿನ ಕೊನೆಯ ಮಾತು ಹೇಳದೆ ಸಾವಿಗೆ ಶರಣಾದ ಎಂದರೆ ಊಹಿಸಲು ಕಷ್ಟವಾಗಿತ್ತು. ಸಾವು ಅನ್ನೋ ಪದಾನೇ ನನಗಾಗೇ ಅಪರಿಚಿತ. ಹಾಗಾಗಿ ಆತನ ಸಾವನ್ನು ಅರಗಿಸಿಕೊಳ್ಳೋಕೆ ನಾನು ಸಿದ್ಧನಿರಲಿಲ್ಲ. ಆತನ ಮನೆಮುಂದೆ ಶವ ಅಂಗಾತ ಮಲಗಿತ್ತು. ಎಲ್ಲರೂ ಬಿಳಿವಸ್ತ್ರಧಾರಿಗಳೇ... ಅಮ್ಮನ ಬಲವಂತಕ್ಕೆ ಕಟ್ಟುಬಿದ್ದು ಅಲ್ಲಿಗೆ ಹೋಗಿದ್ದೆ. ಆದರೆ ಯಾಕೋ ಮನಸ್ಸು ಕಠಿಣವಾಗಿತ್ತು. ಕಣ್ಣಿಂದ ಒಂದ ಹನಿ ಕಣ್ಣೀರೂ ಉರುಳಲಿಲ್ಲ. ಅವನು ಕಾಲನ ಕರೆಗೆ ಓಗೊಟ್ಟು ಹೋಗಿದ್ದರೆ ಕ್ಷಮಿಸುತ್ತಿದ್ದೆನೇನೋ... ಆದರೆ ಆತನೇ ಕಾಲನನ್ನು ಕೈಬೀಸಿ ಕರೆದರೆ...?

ಸತ್ತವನ ಮನೆಯ ಮುಂದೆ ಜಾತ್ರೆಯ ವಾತಾವರಣ.., ಯಾರು ಯಾರಿಗೆ ಅಳುವುದೋ? ಅಯ್ಯೋ.. ಅಮ್ಮಾ ಅಂತ ಎಷ್ಟು ದಿನ ಬೊಬ್ಬಿಡಬಹುದಲ್ವಾ? ಕೊನೆಗೊಂದು ದಿನ ಕಣ್ಣೀರು ಬತ್ತಿಹೋದಾಗ ಸಾವಕಾಶವಾಗಿ ಅವನ ನೆನಪೂ ಕರಗುತ್ತೆ.

ಬಾಲ್ಯ ಸ್ನೇಹಿತನ ಅಕಾಲ ಮರಣ ನನ್ನನ್ನು ಅಧೀರನನ್ನಾಗಿಸಿದ್ದು ಹೌದು.! ಆಮೇಲೆ ಸಾವಿಗೆ ಭಯ ಪಡಬಾರದು ಅಂದುಕೊಂಡೆ. ಸತ್ತೋರಿಗ ಅತ್ರೆ ಅವರು ಮತ್ತೆ ಬರ್ತಾರಾ? ಅದಕ್ಕೆ ಹೇಳೋದು... ಸಾವು ತಾನಾಗೇ ಬರ್ಬೇಕು, ನಾವು ಅದನ್ನು ಹುಡ್ಕೊಂಡು ಹೋಗೋದು ಮೂರ್ಖತನವೇ ಸರಿ.

ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಸಿಗಲಿ ಆದರೆ, ಆತ್ಮಹತ್ಯೆಯಂತಹ ಪಾಪಕ್ಕೆ ಕೊರಳೊಡ್ಡುವ ಮುನ್ನ ಕೊಂಚ ಹೊತ್ತು ಯೋಚಿಸೋಣ. ಸಾಯಲು ಮತ್ತು ಸಾಯದಿರಲು ಕಾರಣ ಹುಡುಕೋಣ. ಆತ ಸಾವು ಬೇಡವೆನ್ನಿಸುತ್ತೆ. ಮನಸ್ಸು ಬುದ್ಧಿಯ ಜಾಡು ಹಿಡಿದು ನಡೆಯುತ್ತೆ. ದೂರದಲ್ಲೆಲ್ಲೋ ದೀಪವೊಂದು ಬೆಳಗುತ್ತಿರುವುದು ಕಾಣುತ್ತೆ. ಸಾಯೋದು ಬಿಟ್ಟು ಆ ಕಡೆ ನಡೆದರೆ ಸಾಕು, ನಾವು ನಡೆಯೋ ದಾರಿ ಸ್ಪಷ್ಟವಾಗುತ್ತೆ. ಆದ್ದರಿಂದ ನೋ ಮೋರ್ ಸುಸೈಡ್ ಪ್ಲೀಸ್..

ನಿನ್ನೆಗೆ ಆತ ನನ್ನಿಂದ ದೂರವಾಗಿ 10 ವರ್ಷಗಳು ಸಂದಿವೆ. ಗೆಳೆಯನ ನೆನಪಿನಲ್ಲಿ ಕಣ್ಣು ಮಂಜಾಗುತ್ತಿವೆ. ಮತ್ತೊಂದು ಜನ್ಮ ಅಂತಿದ್ದರೆ ನಾನೂ-ಅವನೂ ಮತ್ತೆ ಗೆಳೆಯರಾಗಿ ಹುಟ್ಟುತ್ತೇವೆ.... ಎಂಬ ವಿಶ್ವಾಸ ಮಾತ್ರ ಹಾಗೇ ಉಳಿದಿದೆ...!!!

Wednesday, March 2, 2011

ಪ್ರೀತೀಲಿ ಬೀಳೋ ಮುನ್ನ...






ಹದಿಹರೆಯಕ್ಕೆ ಕಾಲಿಟ್ಟ ಪ್ರತೀ ಹೆಣ್ಣು ಅಥವಾ ಗಂಡು ಮಕ್ಕಳು ಕೂಡಾ ತನ್ನ ಸಂಗಾತಿಯ ಆಯ್ಕೆಯಲ್ಲಿ ತೊಡಗುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಡೆವ ದಾರಿಯಲ್ಲಿ ಎದುರಿಗೆ ಸಿಕ್ಕ ಹುಡುಗಿ ಚಂದದ ನಗೆ ಬೀರಿದರೆ ಸಾಕು, ಆಕೆ ತನಗೇ ಸೇರಬೇಕು ಎಂದು ಬಯಸೋ ಹುಡುಗರ ಸಂಖ್ಯೆಗೇನೂ ಕಮ್ಮಿಯಿಲ್ಲ. ಸಿಗೋ ಹುಡುಗೀರನ್ನು ಒಂದು ಬಾರಿ ನೋಡಿ, ಆ ಬಳಿಕ ಬಾರಿ-ಬಾರಿ ತಿರುಗಿ ನೋಡಿ ಸಾಗುವ ಹುಡುಗರ ಕಣ್ಣುಗಳು ಆಕೆಯನ್ನು ತನ್ನ ಖಾಸಗಿ ಆಸ್ತಿಯೇನೋ ಎಂಬಂತೆ ಭಾವಿಸಿ ಪ್ರೀತಿ, ಪ್ರೇಮ ಎಂದು ಹಿಂಬಾಲಿಸುವುದೂ ಇದೆ. ನಾನೀಗ ಹೇಳಹೊರಟಿರುವುದು ಹುಡುಗರ ಬಗ್ಗೆಯಲ್ಲ.

ಸದಾ ನಾಚಿಕೆಯ ಬುಗ್ಗೆಯಾಗಿ, ದೂರದಿಂದ ಹುಡುಗರನ್ನು ಕಂಡ ಕೂಡಲೇ ಕೆನ್ನೆ ಕಂಪಡರಿ ಕಣ್ಣಲ್ಲೇ ಮಾತಾಡೋ ಹುಡ್ಗೀರಿಗೂ ಒಬ್ಬೊಬ್ಬ ಹುಡುಗ ಒಂದೊಂದು ಕಾರಣಕ್ಕೆ ಇಷ್ಟವಾಗ್ತಾರೆ. ಆದ್ರೆ ಇವರಲ್ಲಿ ಶೇಕಡಾ ಐದರಷ್ಟೋ, ಹತ್ತರಷ್ಟೋ ಮಂದಿ ಖುಲ್ಲಾಂಖುಲ್ಲಾ ಆಗಿ ತಮ್ಮ ಹುಡ್ಗರನ್ನು ಆರಿಸಿದ್ರೆ, ಇನ್ನುಳಿದ ಹುಡ್ಗೀರು ತಮ್ಮ ಹುಡುಗನನ್ನು ಅಷ್ಟು ಸುಲಭವಾಗಿ ಆರಿಸೋದಿಲ್ಲ. ಆತನ ಗುಣ-ನಡತೆಗಳ ಇಂಚಿಂಚು ಅಳೆದು ತೂಗಿ ಆತ ತನಗೆ ಸಮರ್ಥನೋ, ಅಲ್ವೋ ಅಂತ ನಿರ್ಧರಿಸ್ತಾರೆ. ಇಂತಹ ಹುಡ್ಗೀರು ನಿಜವಾಗಿಯೂ ಕನಸಿನ ಹುಡ್ಗನ ಬಗ್ಗೆ ಇರಿಸುವ ಹೊಂಗನಸುಗಳೇನು ಅನ್ನೋದರ ಬಗ್ಗೆ ಒಂದು ಪುಟ್ಟ ಸಮೀಕ್ಷೆ.(ತಪ್ಪಿದ್ರೆ ಕ್ಷಮೆ ಇರಲಿ... ನಾನೇ ಮಾಡಿದ್ದು...)

ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿ, ಅಡುಗೆ ಕೋಣೆಯೇ ಪ್ರಪಂಚ ಅನ್ನೋ ಕಾಲವೊಂದಿತ್ತು. ಓರಗೆಯ ಹುಡುಗರೊಂದಿಗೆ ಚಿನ್ನಿದಾಂಡು ಆಟವಾಡುತ್ತಿದ್ದ ತುಂಡು ಲಂಗದ ಹುಡುಗಿ ದೊಡ್ಡವಳಾಗಿದ್ದಾಳೆ ಎನ್ನುವುದನ್ನು ಮನೆಮಂದಿ ನೆನಪಿಸಿದ ನಂತರವಂತೂ ಆಕೆ ಪರ್ಮನೆಂಟಾಗಿ ಮನೆಯೊಳಕ್ಕೆ ಸೇರುತ್ತಾಳೆ. ಆ ಬಳಿಕವೂ ಹುಡುಗ್ರ ಜತೆ ಸೇರಿದರೆ ಆಕೆಯ ಬಗ್ಗೆ ನಾನಾ ಬಗೆಯ ಕಮೆಂಟ್ಸ್ಗಳು ಓಣಿಯುದ್ದಕ್ಕೂ ಹರಿದಾಡುತ್ತೆ. ಅಡುಗೆಯ ಸೌಟು, ತಟ್ಟೆಗಳೇ ಆಟದ ವಸ್ತುಗಳಾಗುತ್ತೆ. ಇಂತಹ ಪರಿಸ್ಥಿತಿ ಹಿಂದಿನ ಕಾಲದ್ದಾದರೆ ಈಗ ಪರಿಸ್ಥಿತಿ ತೀರಾ ಭಿನ್ನ. ಹುಡುಗೀರು ಮೊದಲಿನಂತಿಲ್ಲ. ತೀರಾ ಮಾಡನರ್್ ಅಲ್ಲದ, ಗ್ರಾಮೀಣ ಸೊಗಡನ್ನು ಅಷ್ಟಿಷ್ಟು ಅಲ್ಲಲ್ಲಿ ಉಳಿಸ್ಕೊಂಡಿರೋ ಕರಾವಳಿ ತೀರದ ಹುಡ್ಗೀರು ಈಗ ತುಂಬಾನೇ ಬದಲಾಗಿದ್ದಾರೆ. ಹಾಗೆ ಹೇಳೋಕ್ಕೆ ಹೋದ್ರೆ ಹುಡ್ಗೀರು ಟೋಟಲ್ ಆಗಿ ಬದಲಾಗಿದ್ದಾರೆ. ತಮಗೆ ಬೇಕಾದ ಹೇರ್ಕ್ಲಿಪ್ನಿಂದ ಹಿಡಿದು ಕೈ ಹಿಡಿಯೋ ಗಂಡನವರೆಗೆ ಆಕೆ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ ಅಂದಮೇಲೆ ಕೇಳಬೇಕೆ? ಆಕೆ ಸ್ಮಾಟರ್್ ಆಗಿರೋ ಕಾರಣದಿಂದ ಹುಡುಗರ ದೃಷ್ಟಿಗೆ ಸಿಲುಕದೆಯೂ ಓಡಾಡಬಲ್ಲಳು. ಇಂತಹ ಹುಡುಗಿ ಬಯಸೋದಾದರೂ ಏನನ್ನು ಅನ್ನೋದನ್ನು ತಿಳಿಯೋಣ.

1. ಸಾಮಾನ್ಯವಾಗಿ ಲವ್ ಅಥವಾ ಬಾಯ್ಫ್ರೆಂಡ್ ಈ ಎರಡು ವಿಭಾಗದಲ್ಲೂ ಹೆಣ್ಣಾದವಳು ತನಗೆ ಇಷ್ಟವಾಗೋ ಹುಡುಗನ ಪರ್ಸನಾಲಿಟಿಯನ್ನು ಮೊದಲು ಗಮನಿಸುತ್ತಾಳೆ. ಉತ್ತಮ ದೇಹದಾಢ್ರ್ಯತೆ ಇರಬೇಕೆಂದು ಹುಡ್ಗೀರು ಆಸೆ ಪಟ್ಟರೂ ಸ್ಥೂಲಕಾಯರನ್ನು ಲೈಕ್ ಮಾಡಲ್ಲ. ಸದೃಢವಾಗಿ, ಆರೋಗ್ಯದಿಂದಿರುವ ಹುಡುಗರು ಬಲು ಬೇಗನೆ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ.

2. ಹುಡ್ಗೀರಿಗೆ ಹುಡುಗರ ಕಿರುನಗೆಯ ಶೈಲಿಯೂ ತುಂಬಾನೇ ಇಷ್ಟ. ನೀವೇ ಗಮನಿಸಿ. ಸಭೆ ಅಥವಾ ಸಮಾರಂಭದಲ್ಲಿ ಅಂದವಾಗಿ ನಗುವ ಹುಡ್ಗರನ್ನು ನೋಡಿ, `ಆತ ಎಷ್ಟು ಚೆನ್ನಾಗಿ ನಗುತ್ತಾನೆ ನೋಡೇ ಎಂದು ಹೇಳುತ್ತಾರೆ. ಇದರರ್ಥ ಹುಡುಗರ ಸುಂದರ ನಗು ಹುಡ್ಗೀರನ್ನು ಬಹುಬೇಗನೆ ಮೋಡಿ ಮಾಡಬಲ್ಲದು. ಬಾಲಿವುಡ್ ತಾರೆ ಅಕ್ಷಯ್ ಕುಮಾರ್ನನ್ನು ಅರೆಗಳಿಗೆ ನೆನಪಿಸಿಕೊಳ್ಳಿ, ಆಗ ನಿಮಗೇ ತಿಳಿಯುತ್ತದೆ.

3. ಹುಡುಗ ಅಂದವಾಗಿರಬೇಕಾದ್ದು ನಿಜ. ಬಿಳಿ, ಎಣ್ಣೆಕಪ್ಪು ಬಣ್ಣ ಹೊಂದಿದ್ದರೂ ಮುಖದಲ್ಲಿ ತೇಜಸ್ಸು ತುಂಬಿರಬೇಕೆಂದು ಆಶಿಸುವ ಹುಡುಗಿ, ಚುರುಕಾಗಿ ಕಾಣುವ, ಸದಾ ಕ್ರಿಯಾಶೀಲರಾಗಿ ಕಣ್ಣಲ್ಲೇ ನಗುವ ಹುಡುಗರತ್ತ ಬೇಗ ಆಕಷರ್ಿತರಾಗುತ್ತಾರೆ. ಅದೇ ರೀತಿ ಹುಡುಗ ಪ್ರತಿಭಾವಂತನಾಗಿದ್ದು, ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಬೇಗನೆ ಆಕಷರ್ಿಸಲ್ಪಡುತ್ತಾನೆ.

4. ಕಪಟವಿಲ್ಲದೆ ನೇರಾನೇರ ಮಾತಾಡುವ ಕಲೆ ಹೊಂದಿದ್ದರೆ ಹುಡುಗ ಬೇಗನೆ ಇಷ್ಟವಾಗುತ್ತಾನೆ. ಮನಸ್ಸಿನಲ್ಲಿ ಏನನ್ನೋ ಇರಿಸಿ, ಬೇರೇನನ್ನೋ ಹೇಳುವ ಹುಡುಗನನ್ನು ಯಾವ ಹುಡುಗಿಯೂ ಕೇರ್ ಮಾಡಲ್ಲ. ನೆಲ ನೋಡದೆ ತಲೆ ಎತ್ತಿ ಮಾತಾಡುವ ಹುಡುಗ ತನ್ನ ಜತೆ ಇರುವಾಗಲಾದರೂ ವಿಧೇಯತೆಯಿಂದ ನಡೆಯಲಿ ಎಂದು ಆಶಿಸೋರೇ ಹೆಚ್ಚು.

5. ಭಯಪಡುವ ಹುಡುಗನನ್ನು ಖಂಡಿತಾ ಹುಡುಗಿ ಮೆಚ್ಚುವುದಿಲ್ಲ. ಏನೇ ಬಂದರೂ ಆತ್ಮವಿಶ್ವಾಸ ಹೊಂದಿದ್ದರೆ ಹುಡುಗ ತನಗೆ ಒಪ್ಪಿಗೆ ಎಂದೇ ಹುಡುಗಿ ಭಾವಿಸುತ್ತಾಳೆ. ಇದು ಆಕೆಯ ಮುಂದಿನ ಬಾಳಿನ ಯೋಚನೆಯನ್ನೂ ಅವಲಂಬಿಸಿರುತ್ತದೆ.

6. ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು. ಹೀಗಾಗಿ ಪ್ರೀತಿ ಅಥವಾ ಸ್ನೇಹದಂತೆಯೇ ತನ್ನನ್ನು ಕಂಡಾಗ ಸೌಂದರ್ಯದ ಬಗ್ಗೆ, ಪ್ರೀತಿಯ ಬಗ್ಗೆ ಕನಿಷ್ಠ ಮೆಚ್ಚುಗೆ, ಅಭಿಮಾನವನ್ನಾದರೂ ಹೊಂದಿರಲಿ ಎಂದೇ ಹುಡ್ಗೀರು ಬಯಸುತ್ತಾರೆ. ತನ್ನ ಹಿತ, ಅಹಿತಗಳನ್ನು ಗಮನಿಸಿ ಕೇರ್ ತೆಗೆದುಕೊಳ್ಳುವ ಹುಡುಗ ಹೆಚ್ಚಿನ ಹುಡುಗಿಯರಿಗೆ ಇಷ್ಟವಾಗುತ್ತಾನೆ.

7. ದಿನನಿತ್ಯದ ಬಿಡುವಿರದ ದುಡಿಮೆಯ ವೇಳೆಯಲ್ಲೂ ತನಗಾಗಿ ಒಂಚೂರು ಟೈಮನ್ನಾದರೂ ತನ್ನ ಹುಡುಗ ಮೀಸಲಿಡಲಿ ಎನ್ನುವುದೇ ಹೆಚ್ಚಿನ ಹುಡ್ಗೀರ ಬೇಡಿಕೆ. ಮಾತು ತಪ್ಪಿ ನಡೆಯುವ, ತನ್ನನ್ನು ಬಿಟ್ಟು ಬೇರೊಬ್ಬಳ ಜತೆ ಸಲುಗೆ ತೋರಿಸುವ ಹುಡುಗರು ಅಷ್ಟಕ್ಕಷ್ಟೆ. ಆದ್ರೆ ಕೆಲವೊಮ್ಮೆ ಟೈಮ್ ಇಲ್ಲ ಎಂಬ ಸಾಮಾನ್ಯ ಸಮಸ್ಯೆಯೇ ಸಂಬಂಧದ ನಡುವೆ ಬಿರುಕು ಮೂಡಿಸಲು ಕಾರಣವಾಗುತ್ತದೆ. ಆತನ ಎಲ್ಲಾ ಗುಣಗಳನ್ನು ಆಕೆ ಮೆಚ್ಚಿ, ಅಡ್ಜಸ್ಟ್ ಆಗಿದ್ದರೂ ಇದೊಂದು ಕಾರಣ ಮಾತ್ರ ಯಾವಾಗಲೂ ಸಹಿಸಿಕೊಳ್ಳುವುದಿಲ್ಲ.

8. ಜವಾಬ್ದಾರಿ ಇರಬೇಕಾದ್ದು ಅತಿಮುಖ್ಯ. ಕುಟುಂಬ, ಮನೆಯಲ್ಲಿ, ಹೋದಲ್ಲಿ, ಬಂದಲ್ಲಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಮೇಲೆ ಹುಡ್ಗೀರ ಪ್ರೀತಿ ಅವಲಂಬಿತವಾಗಿರುತ್ತದೆ. ಮನೆಕೆಲಸದಲ್ಲಿ ನೆರವಾಗುವುದು, ತನ್ನನ್ನು ಪ್ರೀತಿಸಿದಂತೆ ತನ್ನ ತಾಯಿ, ತಂದೆಯೊಂದಿಗೆ ಕೂಡಾ ಗೌರವ, ಅಭಿಮಾನದಿಂದ ವ್ಯವಹರಿಸುವ ಹುಡುಗ ಹುಡುಗಿಗೆ ಇಷ್ಟವಾಗುತ್ತಾನೆ.

9. ಹೆಚ್ಚಿನ ಹುಡುಗರು ತಾವು ಹೇಳಬೇಕಾದ್ದನ್ನು ಎಲ್ಲೂ ನಿಲ್ಲಿಸದೆ ಹೇಳಿ ಹುಡುಗಿ ಬಾಯ್ತೆರೆದಾಗ ಮಾತ್ರ ಕಿವಿ ಮುಚ್ಚಿ ತಮ್ಮಷ್ಟಕ್ಕೆ ತಾವಿರುತ್ತಾರೆ. ಇದರಲ್ಲಿ ಹುಡುಗರು ಫೇಲ್ ಆದ್ರೆ ಲವ್ ಲೈಫ್ ಅರ್ಧಕ್ಕೆ ನಿಲ್ಲುತ್ತದೆ. ಕೇಳುವ ಗುಣ ಮುಖ್ಯ. ಆಕೆ ಹೇಳಿದ್ದನ್ನು ಸಮಾಧಾನದಿಂದ ಆಲಿಸಿದರೆ ಆಕೆಗೆ ಅಷ್ಟೇ ಇಷ್ಟವಾಗುತ್ತೆ ಅನ್ನೋದನ್ನು ಮರೆಯಬಾರದು.

10. ಹುಡುಗ ಎಂದರೆ ಜೋರು. ಆದರೆ ತನ್ನ ಜತೆ ಮಾತ್ರ ಆತ ಅನಗತ್ಯ ದರ್ಪ ತೋರುವುದು ಬೇಡ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಮನೆಯೊಳಗೆ ಕೂಡಾ ತನ್ನ ಜತೆ ನಯ, ವಿನಯದಿಂದ ನಡೆಯುವ ಹುಡುಗನನ್ನು ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ. ಹುಡುಗ ತನ್ನ ಜನ್ಮತ: ಸ್ವಭಾವ ಬದಿಗಿರಿಸಿ ನವಿರು ಭಾವನೆಗಳಿಂದ ವತರ್ಿಸಿದಲ್ಲಿ ಹುಡುಗಿ ಆತನಿಗೆ ಮನಸೋಲುತ್ತಾಳೆ.

ಈ ಹತ್ತು ಸಿಂಪಲ್ ಸೂತ್ರಗಳು ಯಾವುದಾದ್ರೂ ಹುಡ್ಗಿಯನ್ನು ಪ್ರೀತಿಸ್ಲೇಬೇಕು ಅಂತ ಜಿದ್ದಿಗೆ ಬಿದ್ದಿರೋ ಹುಡುಗರು ಗಮನಿಸಬೇಕಾದ್ದು ಅವಶ್ಯ. ಇವೆಲ್ಲಾ ಗುಣಗಳು ಹುಡ್ಗರಲ್ಲಿ ಇದ್ರೆ ಅವರು ಪ್ರೀತಿಸೋಕ್ಕೂ ಲಾಯಕ್ಕು, ಪ್ರೀತಿ ಪಡೆಯೋಕ್ಕೂ ಲಾಯಕ್ಕು. ಇದರಲ್ಲಿ ಒಂದೆರಡು ಗುಣಗಳು ಮಾತ್ರ ಇದ್ರೆ ಪ್ರಯತ್ನಿಸೋದ್ರಲ್ಲಿ ತಪ್ಪಿಲ್ಲ. ಆದ್ರೆ ಒಮ್ಮೆಗೆ ಸಿಕ್ಕ ಪ್ರೀತಿ ಮತ್ತೆಂದೂ ದೂರವಾಗದು ಅನ್ನೋ ಭ್ರಮೆ ಬೇಡ. ಯಾಕೇಂದ್ರೆ ಪ್ರೀತಿ ಚೇಂಜ್ ಕೇಳುತ್ತೆ. ಕಾಲ ಬದಲಾದಂತೆ ಪ್ರೀತಿಸೋರು ಕೂಡಾ ಬದಲಾಗ್ತಾರೆ. ಪ್ರೀತಿಸಲು ಬೇಕಾಗುವ ಗುಣ, ಲಕ್ಷಣಗಳೂ ಕೂಡಾ ಬದಲಾಗುತ್ತೆ. ಎನಿವೇ... ಭಾವನೆಗಳನ್ನು ಅರಿತುಕೊಳ್ಳೋ ಹುಡುಗ-ಹುಡುಗಿ ಎಲ್ರಿಗೂ ಸಿಗಲಿ. ಆಯ್ಕೆ ಮಾತ್ರ ಜೋಪಾನವಾಗಿರಲಿ.

Friday, February 4, 2011

ಮಾಲ್ಗುಡಿ ಚಿತ್ರಪಟ






ದಕ್ಷಿಣ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಭೇಟಿ ನನ್ನ ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದು ಎಂದೇ ಭಾವಿಸುತ್ತೇನೆ. ಕೊರೆವ ಚಳಿಗಾಲದಲ್ಲಿ ಹಿಮದಿಂದ ಮಿಂದು ಮೇಲೆದ್ದು ನಿಂತಂತೆ ಗೋಚರಿಸುವ ಆಗುಂಬೆ ಎನ್ನುವ ಮಲೆನಾಡಿನ ಪುಟ್ಟ ಊರು ಅದೆಷ್ಟೋ ಸುಂದರ ಸ್ಥಳಗಳನ್ನು ತನ್ನೊಡಲಿನಲ್ಲಿ ತುಂಬಿಕೊಂಡಿದೆ. ದೂರದರ್ಶನದ ಪ್ರಸಿದ್ಧ ಧಾರಾವಾಹಿ `ಮಾಲ್ಗುಡಿ ಡೇಸ್, ಚಿತ್ರೀಕರಣಗೊಂಡ ದೊಡ್ಡಮನೆ, ಲಾಲೆ ಬೀದಿ ಇಲ್ಲಿಯೇ ಪಕ್ಕದಲ್ಲಿದೆ. ಆಗುಂಬೆಯ ದಟ್ಟವಾದ ಕಾಡಿನಲ್ಲಿ ಅವಿತಿರುವ ಒನಕೆ ಅಬ್ಬಿ ಜಲಧಾರೆಯ ಟ್ರೆಕ್ ಅನುಭವ ಸವಿಯಲು ಆಗುಂಬೆಯ ನೆಲಕ್ಕೊಮ್ಮೆ ಕಾಲೂರಲೇಬೇಕು. ಕಾಡುಪ್ರಾಣಿಗಳ ಸದ್ದು, ಕಾಲಿಟ್ಟಷ್ಟು ಮುತ್ತಿಕೊಳ್ಳುವ ಇಂಬಳಗಳ ಸ್ವಾಗತ ಎಲ್ಲವನ್ನೂ ನೆನೆಸಿಕೊಂಡರೆ ಸಾಕು, ಚಳಿಯಲ್ಲೂ ಮೈ ಬೆವರುತ್ತದೆ...(ಈ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ)

ಅಂತಿರುವ ಆಗುಂಬೆಯಲ್ಲಿ ನಾನು ಮತ್ತು ನನ್ನ ತಂಡ ಕಳೆದ ಒಂದು ಸುಂದರ ಸಂಜೆಯ ಚಿತ್ರಪಟ ನಿಮಗಾಗಿ... ಮಾಲ್ಗುಡಿಗೆ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ ಹೇಳುತ್ತಾ...

Saturday, January 29, 2011

ಮುಸ್ಸಂಜೆಯ ಮಾಲ್ಗುಡಿ ಪಯಣ...





ಮಾಲ್ಗುಡಿ ಹಸರು ಕೇಳದವರು ಬಹುಷ: ವಿರಳವೇ ಇರಬಹುದು. ಸುಮಾರು 15 ವರ್ಷಗಳ ಹಿಂದೆ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಜನರನ್ನು ಯಾವ ರೀತಿ ಆಕಷರ್ಿಸಿತ್ತು ಎಂದರೆ ಜನರು ಮಾಲ್ಗುಡಿ ಎಂಬ ಊರಿನ ಬಗ್ಗೆ ಸಹಜವಾಗೇ ಕುತೂಹಲ ಬೆಳೆಸಿದ್ದರು. ಅದು ಪ್ರಸಾರವಾಗುತ್ತಿದ್ದುದು ಹಿಂದಿ ಭಾಷೆಯಲ್ಲಾದರೂ ನಮಗೆಲ್ಲಾ ಅದು ಅಚ್ಚುಮೆಚ್ಚು. ಕಾರಣ ಅದರಲ್ಲಿ ಅಭಿನಯಿಸುತ್ತಿದ್ದ ದಿವಂಗತ ವಿಷ್ಣು, ಶಂಕರನಾಗ್ ಅವರಂತಹ ನಟರುಗಳು. ಮಾತ್ರವಲ್ಲದೆ ಮಾಸ್ಟರ್ ಮಂಜುನಾಥ್ ಎಂಬ ಬಾಲ ಪ್ರತಿಭೆಯನ್ನು ಕಿರುತೆರೆಗೆ ಮೊದಲ ಬಾರಿ ಈ ಧಾರಾವಾಹಿ ಮೂಲಕವೇ ಶಂಕರನಾಗ್ ಪರಿಚಯಿಸಿದ್ದರು. ಆರ್.ಕೆ. ನಾರಾಯಣ್ ರಚಿಸಿದ್ದ `ಸ್ವಾಮಿ ಆ್ಯಂಡ್ ಫ್ರೆಂಡ್ಸ್' ಕಥಾ ಸಂಕಲನವನ್ನು ಹಿರಿಯ ನಟ ಶಂಕರನಾಗ್ ದಕ್ಷ ನಿದರ್ೇಶನದಲ್ಲಿ ಧಾರಾವಾಹಿಯನ್ನಾಗಿ ಮಾಡಲಾಗಿತ್ತು. ಸೊಗಸಾಗಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ರಾತ್ರಿ ನಿದ್ದೆಗೆಟ್ಟಾದರೂ ನೋಡದಿದ್ದರೆ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ಆದರೆ ಇದೇ ಮಾಲ್ಗುಡಿ ಬಗ್ಗೆ ಮನದಲ್ಲಿ ಇದ್ದ ಅದೆಷ್ಟೋ ಕುತೂಹಲಕ್ಕೆ ತೆರೆ ಬಿದ್ದಿದ್ದು ದೂರದರ್ಶನಕ್ಕಾಗಿ 25 ವರ್ಷಗಳ ಹಿಂದೆ ಮಾಲ್ಗುಡಿಯಾಗಿ ರೂಪವೆತ್ತಿದ್ದ ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿಗೆ ಕಾಲಿಟ್ಟಾಗಲೇ.

ಹೌದು... ಆರ್.ಕೆ. ನಾರಾಯಣ್ ಬರೆದಿದ್ದ ಪುಸ್ತಕ ಓದಿದ ಮೇಲಂತೂ ಅಲ್ಲಿಗೊಮ್ಮೆ ಭೇಟಿಕೊಡದಿದ್ದರೆ ಹೇಗೆ ಎಂದು ಮನಸ್ಸು ಹೇಳುತ್ತಿತ್ತು. ಮಾಲ್ಗುಡಿ ಎನ್ನುವುದು ಆಗುಂಬೆಯೆಂಬ ಪುಟ್ಟ ಊರಿನ ಒಂದು ಬೀದಿಯಲ್ಲಿ ಮೂಡಿಬಂದ ಅದೆಷ್ಟೋ ಕಲ್ಪನೆಯ ಸಾಕಾರ ರೂಪ ಎಂದು ಅರಿತಾಗ ಆ ಬಗೆಗಿನ ತವಕ, ಕುತೂಹಲ ಇನ್ನಷ್ಟು ಹೆಚ್ಚುತ್ತಿತ್ತು. ಕಾದು ಕಾದು ಕೊನೆಗೊಮ್ಮೆ ಆ ದಿನ ಬಂದೇಬಿಟ್ಟಿತು. ಮಂಗಳೂರಿನಿಂದ ಹೊರಡುವ ಪುಟ್ಟ ಬಸ್ನಲ್ಲಿ ಹೊರಟು ಆಗುಂಬೆ ತಲುಪಿದಾಗ ಮಧ್ಯಾಹ್ನ ದಾಟಿತ್ತು. ಸೂರ್ಯನ ಸುಡು ಬೇಗೆಯ ಸುಳಿವಿರಲಿಲ್ಲ. ಮಳೆ ಹೆಚ್ಚು ಸುರಿಯುವ ಕಾರಣಕ್ಕೋ ಏನೋ, ಅಷ್ಟಾಗಿ ಇಲ್ಲಿ ಬಿಸಿಲು ಸುಡುವುದಿಲ್ಲ. ಇನ್ನೇನು ಕೆಲ ಹೊತ್ತು ಕಳೆದರೆ ಕೊರೆವ ಚಳಿ ಆರಂಭವಾಗುತ್ತದೆ ಎನ್ನುವುದನ್ನು ಪ್ರಕೃತಿ ಸಾರಿ ಹೇಳುತ್ತಿತ್ತು.

ದೊಡ್ಡಮನೆ ಊರಿಗೆ ದೊಡ್ಡದು...

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ದಿವಂಗತ ಶಂಕರನಾಗ್ ಆರಿಸಿದ್ದ ದೊಡ್ಡಮನೆಯ ಬಗ್ಗೆ ಬೀದಿಯಲ್ಲಿ ಯಾರ ಹತ್ರ ಕೇಳಿದರೂ ಮಾಹಿತಿ ಇತ್ತು. ಊರಿಗೆ ದೊಡ್ಡದು ಎಂಬ ಕಾರಣಕ್ಕೇ ಆಗಿರಬೇಕು, ಕೇಳಿದ ತಕ್ಷಣ ಜನರು ಕರಾರುವಾಕ್ಕಾಗಿ ದಾರಿ ತೋರಿಸುತ್ತಿದ್ದರು. ಬಸ್ ತಂಗುದಾಣದಿಂದ ಕಾಲ್ನಡಿಗೆಯ ದೂರದಲ್ಲಿರೋ ದೊಡ್ಡಮನೆ ಸುಮಾರು 115 ವರ್ಷಗಳನ್ನು ಪೂರೈಸಿದೆ. ಮಾಲ್ಗುಡಿ ಧಾರಾವಾಹಿಯ ಬಹುತೇಕ ಎಪಿಸೋಡ್ಗಳಲ್ಲಿ ಕಾಣಿಸಿಕೊಂಡ ಈ ಮನೆಯ ಎದುರು ನಿಂತಾಗ ನಮ್ಮನ್ನು ಸ್ವಾಗತಿಸಿದ್ದು ಮನೆಯ ಯಜಮಾನ್ತಿ ಕಸ್ತೂರಿ ಅಕ್ಕ. 65 ವರ್ಷ ಪ್ರಾಯದ ಇವರು ಆದರದಿಂದ ಬರಮಾಡಿಕೊಂಡು ಉತ್ಸಾಹದ ಚಿಲುಮೆಯಂತೆ ನಮ್ಮನ್ನು ಸತ್ಕರಿಸಿದ ರೀತಿ ಮಲೆನಾಡಿಗರ ಉಪಚಾರವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಮನೆಗೆ ಸೊಸೆಯಾಗಿ ಬಂದಿರುವ ಕಸ್ತೂರಿ ಅಕ್ಕ ಈಗಲೂ ಊರಿಗೆ ಮಹಾಮಾತೆಯಾಗಿದ್ದಾರೆ. ಅವರ ಔದಾರ್ಯತೆ, ಪ್ರೀತಿ, ಅಕ್ಕರೆಯ ಬಗ್ಗೆ ಊರಿನಲ್ಲಿ ಯಾರಲ್ಲಿ ಕೇಳಿದರೂ ಬೇರೆ ಉತ್ತರ ಸಿಗಲಾರದು. ಅತಿಥಿಗಳು, ಪ್ರವಾಸಿಗರು, ಚಾರಣಿಗರು ಹೀಗೆ ದಣಿದು ಬಂದ ಯಾರಿಗೂ ಎಲ್ಲೂ ಕೊರತೆಯಾಗದಂತೆ ಉಪಚರಿಸುವ ಕಸ್ತೂರಿ ಅಕ್ಕ ಮಾಲ್ಗುಡಿ ಡೇಸ್ ಸೀರಿಯಲ್ನಲ್ಲಿ ಈ ಮನೆ ಕಂಡಿದ್ದರ ಹಿಂದಿನ ರಹಸ್ಯವನ್ನು ಈ ರೀತಿ ವಿವರಿಸುತ್ತಾರೆ.

ಖ್ಯಾತ ನಿದರ್ೇಶಕ ಗಿರೀಶ್ ಕಾನರ್ಾಡ್ ಅವರ ಜತೆ ನಮ್ಮ ಯಜಮಾನರಾದ ವಿಜೇಂದ್ರ ರಾಯರಿಗೆ ಒಳ್ಳೆಯ ಸ್ನೇಹವಿತ್ತು. ದಿವಂಗತ ಶಂಕರನಾಗ್ ಸೀರಿಯಲ್ ಮಾಡುತ್ತೇನೆ. ಒಂದು ದೊಡ್ಡ ಮನೆ ತೋರಿಸಿ ಎಂದಾಗ ಕಾನರ್ಾಡರು ನಮ್ಮ ಮನೆ ತೋರಿಸಿದರು. ಇದರ ಪರಿಣಾಮ ನಾವು ಈ ಮನೆಯನ್ನು ಧಾರಾವಾಹಿ ಚಿತ್ರೀಕರಣಕ್ಕೆ ಬಿಟ್ಟುಕೊಟ್ಟೆವು. ಹಲವು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಮ್ಮ ಮನೆ ಹಾಗೂ ಆಗುಂಬೆಯ ಬೀದಿಯನ್ನು ಬಳಸಿಕೊಂಡ ಶಂಕರನಾಗ್ ನಮ್ಮ ಆತ್ಮೀಯರೇ ಆಗಿಹೋದರು. ಧಾರಾವಾಹಿಯ ಕೊನೆಯ ಕಂತಿನಲ್ಲಿ ನನ್ನ ಮಕ್ಕಳು, ಸಾಕುಪ್ರಾಣಿಗಳನ್ನೂ ಬಳಸಿಕೊಂಡರು ಎಂದು ಕಸ್ತೂರಿ ಅಕ್ಕ ಸ್ಮರಿಸಿಕೊಳ್ಳುತ್ತಾ ಮಾತು ಮುಂದುವರಿಸುತ್ತಾರೆ.

ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲಕ ದೊಡ್ಡಮನೆಯ ಸೌಂದರ್ಯ ಜಗತ್ತಿಗೇ ತಿಳಿಯುತ್ತಿದ್ದಂತೆ ಅದೆಷ್ಟೋ ಮಂದಿ ತಮ್ಮ ಚಿತ್ರಗಳಿಗಾಗಿ ಈ ಮನೆಯನ್ನು ಬಾಡಿಗೆಗೆ ಕೊಡಿ ಎಂದರು. ನಾನು ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ಆದರೂ ರಮಾನಂದ ಸಾಗರ್ ಅವರ ಒತ್ತಾಯದ ಮೇರೆಗೆ ವಿಕ್ರಂ ಔರ್ ಬೇತಾಳ್ ಧಾರಾವಾಹಿ ಚಿತ್ರೀಕರಣಕ್ಕೆ ಮನೆಯನ್ನು ಬಿಟ್ಟುಕೊಟ್ಟೆವು. ಇದಾದ ಬಳಿಕ ಕೆಲವು ವರ್ಷಗಳ ಹಿಂದೆ ಸುದೀಪ್ ಅವರ ಮೈ ಅಟೋಗ್ರಾಫ್ಗೂ ಮನೆ ಬಳಸಿಕೊಂಡಿದ್ದಾರೆ ಎನ್ನುವ ಇವರ ಮಾತಲ್ಲಿ ಸಿನಿಮಾ ಮಂದಿಯ ಬಗ್ಗೆ ಬೇಸರವೂ ಕಂಡುಬರುತ್ತದೆ. ಸಿನಿಮಾ ಚಿತ್ರೀಕರಣದ ವೇಳೆ ಇಲ್ಲಿದ್ದ ಪುರಾತನ ವಸ್ತುಗಳನ್ನು ಒಡೆದು ಹಾಕಿದ್ದು ಮಾತ್ರವಲ್ಲದೆ ಶುಚಿತ್ವದ ಕಡೆಗೂ ಗಮನ ನೀಡುತ್ತಿರಲಿಲ್ಲ, ಹೀಗಾಗಿ ಇನ್ನು ಮುಂದೆ ಮನೆ ಯಾರಿಗೂ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದೆ ಎನ್ನುತ್ತಾರೆ ಕಸ್ತೂರಿ ಅಕ್ಕ. ಇದೀಗ ಎರಡು ಅಂತಸ್ತಿನಿಂದ ಗಮನ ಸೆಳೆಯುವ ದೊಡ್ಡಮನೆ ಪ್ರಾರಂಭದಲ್ಲಿ ಮೂರು ಅಂತಸ್ತನ್ನು ಹೊಂದಿತ್ತು. ಸರ್. ಎಂ. ವಿಶ್ವೇಶ್ವರಯ್ಯ ಇಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ ಮನೆಯ ಮೇಲಿನ ಒಂದು ಅಂತಸ್ತನ್ನು ತೆಗೆಯಿರಿ ಎಂದು ಸಲಹೆ ನೀಡಿದ್ದರಿಂದ ಇದೀಗ ಎರಡು ಅಂತಸ್ತಿಗೆ ಸೀಮಿತವಾಗಿದೆ ಎನ್ನುತ್ತಾರೆ. ಕಪ್ಪು ಕಲ್ಲಿನಿಂದ ಕಟ್ಟಲ್ಪಟ್ಟಿರುವ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಲೆಕ್ಕ ಹಾಕಲು ಸುಲಭವಾಗಿ ಸಾಧ್ಯವಾಗದು. ನಾಲ್ಕು ಅಡುಗೆ ಕೋಣೆ, ಐದಾರು ದಾಸ್ತಾನು ಕೊಠಡಿ, ಎಂಟು ಬೆಡ್ರೂಂ ಹೊಂದಿರುವ ಈ ಮನೆಯಲ್ಲಿ ನಾಲ್ಕು ಸುತ್ತಲೂ ಪಡಸಾಲೆ ಇದೆ. ಮೂರು ಬಾವಿಯನ್ನೂ ಹೊಂದಿರುವ ದೊಡ್ಡಮನೆಯಲ್ಲಿ ಒಟ್ಟು 70ಕ್ಕೂ ಅಧಿಕ ಕೋಣೆಗಳಿವೆ ಎಂದರೆ ಅಚ್ಚರಿಯಲ್ಲದೆ ಇನ್ನೇನು?

ಸಂಪೂರ್ಣ ಮರದ ಕೆತ್ತನೆ, ಪೀಠೋಪಕರಣ ಹೊಂದಿರುವ ದೊಡ್ಡಮನೆ ನಜಕ್ಕೂ ಕುತೂಹಲದ ಕಣಜ. ಇಷ್ಟು ದೊಡ್ಡದಾದ ಮನೆಯಲ್ಲಿ ಸದ್ಯ ಇರುವುದು ಕಸ್ತೂರಿ ಅವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಅವರ 85 ವರ್ಷ ಪ್ರಾಯದ ತಾಯಿ. ಶುಚಿತ್ವಕ್ಕಾಗಿ ಕೆಲಸದ ಆಳುಗಳನ್ನು ಇಟ್ಟುಕೊಂಡಿದ್ದು, ದೊಡ್ಡಮನೆ ಈಗ ಪ್ರತೀ ಶನಿವಾರ ಹಾಗೂ ಆದಿತ್ಯವಾರದಂದು ಕಿಕ್ಕಿರಿದು ತುಂಬುತ್ತದೆ. ಬೆಂಗಳೂರು, ಮೈಸೂರು ಕಡೆಯಿಂದ ಬರುವ ಚಾರಣಿಗರು, ಪ್ರವಾಸಿಗರಿಗೆ ಮಲೆನಾಡಿನ ಆತಿಥ್ಯ ನೀಡುವ `ಅಜ್ಜಿಮನೆ'ಯಾಗಿ ಮಾರ್ಪಡುತ್ತದೆ. ದೊಡ್ಡಮನೆಯ ಯಜಮಾನ್ತಿಯೂ ಅಷ್ಟೇ, ಅವರು ಕೊಟ್ಟಷ್ಟು ಹಣ ಪಡೆದು ಅತಿಥಿ ದೇವೋಭವ ಎನ್ನುತ್ತಾರೆ. ಮಲೆನಾಡಿನ ಸಹಜ ಸೌಂದರ್ಯದಿಂದ ಕಂಗೊಳಿಸೋ ದೊಡ್ಡಮನೆ ಇತಿಹಾಸದ ಬಗ್ಗೆ ನೆನಪುಗಳನ್ನು ಕೆದಕುತ್ತಾ ನಮ್ಮೊಂದಿಗೆ ಒಂದಿಷ್ಟು ಹೊತ್ತು ಹರಟಿದ ಕಸ್ತೂರಿ ಅಕ್ಕ ನಮ್ಮನ್ನು ಬೀಳ್ಕೊಡುವ ವೇಳೆ ಮಜ್ಜಿಗೆ, ಚಕ್ಕುಲಿಯ ಸತ್ಕಾರವನ್ನು ಮಾಡದೆ ಬಿಡಲಿಲ್ಲ.

ಮಿಠಾಯಿವಾಲಾ...

ಮಾಲ್ಗುಡಿಯ ಎಪಿಸೋಡ್ ಒಂದರಲ್ಲಿ ಬರುವ ಮಿಠಾಯಿವಾಲಾ ಪಾತ್ರಧಾರಿ ಪಾಂಡುರಂಗ ಪಂಡಿತ್ ಅವರಿಗೆ ವಯಸ್ಸು ಎಂಬತ್ತೈದು ದಾಟಿದರೂ ಅಲ್ಲಿಯೇ ಪಕ್ಕದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಶಂಕರನಾಗ್ ಹಿಂದಿ ಭಾಷೆಯಲ್ಲಿ ಹೇಳಿಕೊಡುತ್ತಿದ್ದ ಡೈಲಾಗ್ ಅನ್ನು ಚಾಚೂ ತಪ್ಪದೆ ಹೇಳುತ್ತಿದ್ದೆ, ಇದರಿಂದ ಅವರಿಗೂ ನಾನು ಆತ್ಮೀಯನಾಗಿದ್ದೆ ಎಂದು ಕನ್ನಡಕ ತೆಗೆದು ಒರೆಸಿಕೊಳ್ಳುವ ಪಾಂಡುರಂಗ ಅವರು ಇಂದಿಗೂ ಅನಂತ್ನಾಗ್ ಈ ದಾರಿಯಲ್ಲಿ ಬರುವವರು ತಮ್ಮ ಕ್ಯಾಂಟೀನ್ಗೆ ಬಾರದೆ ಹೋಗುವುದಿಲ್ಲ ಅನ್ನುತ್ತಾರೆ. ಮಿಠಾಯಿವಾಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಲಾವಿದ ಇಡೀ ಆಗುಂಬೆಗೆ ಈಗಲೂ ಮಿಠಾಯಿವಾಲಾನೇ.

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ಮಾಲ್ಗುಡಿಯಾಗಿ ಬದಲಾಗಿದ್ದ ಆಗುಂಬೆ ಇಂದಿಗೂ ಹಾಗೇ ಇದೆ. ಎಲ್ಲೋ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಉಳಿದಂತೆ ಮಾಲ್ಗುಡಿ ಪ್ರಕೃತಿಯ ಮಡಿಲಲ್ಲಿ ಹಾಗೇ ತಣ್ಣಗೆ ಮಲಗಿದೆ ಎಂದರೆ ತಪ್ಪಾಗದು. ಎಪಿಸೋಡ್ನಲ್ಲಿ ಕಾಣಿಸಿದ್ದ ಆಗುಂಬೆ ಗ್ರಾ.ಪಂ. ಕಟ್ಟಡ ಈಗಲೂ ಹಾಗೆಯೇ ಇದೆ. ಕಥಾನಾಯಕ ಸ್ವಾಮಿ(ಮಾಸ್ಟರ್ ಮಂಜುನಾಥ್) ಓದಿದ್ದ ಶಾಲೆ ಬೇರೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಎಪಿಸೋಡ್ಗಾಗಿ ಇಲ್ಲಿನ ಸರ್ಕಲ್ನಲ್ಲಿ ಇಡಲಾಗಿದ್ದ ಬ್ರಟಿಷ್ ಅಧಿಕಾರಿ ಸರ್. ಫೆಡ್ರಿಕ್ ಲಾಲೆ ಪ್ರತಿಮೆಯನ್ನು ಗ್ರಾ.ಪಂ. ಸ್ಥಳಾಂತರ ಮಾಡಿದೆ. ಹಿಂದೆ ಇಲ್ಲಿ ಪೊಲೀಸ್ ಠಾಣೆಯ ಪುಟ್ಟ ಕಟ್ಟಡವಿದ್ದರೆ ಇಂದು ನಕ್ಸಲರ ಹೆಜ್ಜೆಗುರುತುಗಳಿಂದ ಎಎನ್ಎಫ್ ಚೆಕ್ಪೋಸ್ಟ್ ಬಂದಿದೆ. ಹೆಜ್ಜೆ, ಹೆಜ್ಜೆಗೂ ಗನ್ ಹಿಡಿದು ಕಾಣಸಿಗುವ ಪೊಲೀಸರು ಆಗುಂಬೆಯ ಹೊಸ ಅತಿಥಿಗಳು. ಉಳಿದಂತೆ ಮಾಲ್ಗುಡಿ ಅಥರ್ಾತ್ ಆಗುಂಬೆ ಕೊಂಚವೂ ಬದಲಾದಂತೆ ಕಂಡುಬರುವುದಿಲ್ಲ. ಇಲ್ಲಿನ ಜನರ ಆದರ, ಸತ್ಕಾರವೂ ಅಷ್ಟೇ. ಮಾಲ್ಗುಡಿಯ ಆ ದಿನಗಳು ಹೇಗಿತ್ತೋ, ಈಗಿನ ದಿನಗಳು ಹಾಗೇ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಜನರು. ಮುಸ್ಸಂಜೆಯ ಕೆಂಬಣ್ಣ ಬಾನಲ್ಲಿ ಚೆಲ್ಲುತ್ತಿರಲು ಆಗುಂಬೆಯ ಬೀದಿಯಲ್ಲಿ ನಡೆಯುತ್ತಿದ್ದಂತೆ ತಂಗಾಳಿ ಮೈ ಕೊರೆಯುತ್ತಿತ್ತು. ಸುಂದರ ಸೂಯರ್ಾಸ್ತವನ್ನು ಕಣ್ಣಲ್ಲಿ ತುಂಬಿಕೊಂಡು ಮರಳಿ ಬಸ್ ಹತ್ತಿದಾಗ ಮಲೆನಾಡು ಕೈ ಬೀಸಿ ಕರೆದ ಅನುಭವ. ಮರೆಯಲಾರದ ಮಾಲ್ಗುಡಿ ಮಂಜಿನ ಹೊದಿಕೆಯೊಳಗೆ ಮರೆಯಾಗುವ ತವಕದಲಿ ಇದ್ದಂತೆ ಕಂಡುಬರುತ್ತಿತ್ತು.

ಅನಾಥನಾದ ಲಾಲೆ..!

ಮಾಲ್ಗುಡಿ ಡೇಸ್ ಕಥಾಸರಣಿಯಲ್ಲಿ ಫೆಡ್ರಿಕ್ ಲಾಲೆ ಎಂಬ ಬ್ರಿಟಿಷ್ ಸವರ್ಾಧಿಕಾರಿಯೊಬ್ಬನ ಕಥೆಯೂ ಬರುತ್ತದೆ. ಧಾರಾವಾಹಿ ನಿಮರ್ಾಣದ ವೇಳೆ ದಿ. ಶಂಕರನಾಗ್ ಅವರು ಪ್ಯಾರಿಸ್ ಪ್ಲಾಸ್ಟರ್ನಿಂದ ನಿಮರ್ಿಸಲ್ಪಟ್ಟ ಫೆಡ್ರಿಕ್ ಲಾಲೆಯ ಆಳೆತ್ತರದ ಪ್ರತಿಮೆಯನ್ನು ನಿಮರ್ಿಸಿ ಅದನ್ನು ಮಾಲ್ಗುಡಿ ಅಥರ್ಾತ್ ಆಗುಂಬೆಯ ಸರ್ಕಲ್ನಲ್ಲಿ ನಿಲ್ಲಿಸುತ್ತಾರೆ. ಅಂದಿನಿಂದ ಸಮಾರು ಸಮಯ ಧಾರಾವಾಹಿ ತಂಡ ಊರನ್ನು ತೊರೆದು ಹೋದ ಬಳಿಕವೂ ಈ ರಸ್ತೆ ಲಾಲೆ ಬೀದಿ ಎಂದೇ ಕರೆಸಿಕೊಂಡಿದ್ದೂ ಇದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಆಗುಂಬೆ ಗ್ರಾ,ಪಂ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಾಲೆ ಪ್ರತಿಮೆಯನ್ನು ಇಲ್ಲಿಂದ ತೆಗೆಸುವ ನಿಧರ್ಾರ ಕೈಗೊಂಡಿತು. ಅಲ್ಲಿಂದ ಸ್ಥಳೀಯ ಎಸ್ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಸ್ವಲ್ಪ ಸಮಯ ನಿಂತಿದ್ದ ಲಾಲೆ ಪ್ರತಿಮೆ ಅಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿದ್ದನ್ನೂ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಂದಲೂ ಎತ್ತಂಗಡಿಯಾದ ಪ್ರತಿಮೆ ಶಾಲೆಯ ಹಿಂದಿನ ಮರದ ಬುಡದಲ್ಲಿ ಆಶ್ರಯ ಪಡೆದಿದೆ. ಕೈ, ಕಾಲು ಮುರಿದು ಜೀಣರ್ಾವಸ್ಥೆಯನ್ನು ತಲುಪಿರುವ ಬ್ರಿಟಿಷ್ ಸವರ್ಾಧಿಕಾರಿ ಫೆಡ್ರಿಕ್ ಲಾಲೆ ಪ್ರತಿಮೆ ಅನಾಥವಾಗಿದ್ದು, ಮಾನವನ ದುರಾಸೆ, ಸರ್ವಕ್ಕೂ ತಾನೇ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಕಂಡು ನಕ್ಕಂತೆ ಭಾಸವಾಗುತ್ತದೆ.

ಆರ್.ಕೆ.ನಾರಾಯಣ್ ಅಂದಂತೆ...

ಸಣ್ಣಕತೆಗಳ ಸಂಗ್ರಹದ ಪುಸ್ತಕಕ್ಕೆ `ಮಾಲ್ಗುಡಿ ಡೇಸ್' ಎಂಬ ಹೆಸರಿಟ್ಟುದರ ಬಗ್ಗೆ ಕತರ್ೃ ಆರ್.ಕೆ.ನಾರಾಯಣ್ ಹೀಗೆ ಹೇಳುತ್ತಾರೆ. ಕತೆಗಳ ಸಂಗ್ರಹಕ್ಕೆ ಒಪ್ಪುವಂತಹ ಭೌಗೋಳಿಕ ಅಂತಸ್ತನ್ನು ತಂದುಕೊಡುವ ಉದ್ದೇಶದಿಂದ ಕಥಾಸಂಕಲನಕ್ಕೆ ಮಾಲ್ಗುಡಿ ಡೇಸ್ ಎಂಬ ಹೆಸರಿಟ್ಟಿದ್ದೇನೆ. ಆದರೆ ಎಲ್ಲಿದೆ ಮಾಲ್ಗುಡಿ ಎಂದು ಆಗಾಗ ನನ್ನನ್ನು ಜನರು ಕೇಳುತ್ತಾರೆ. ಅದು ಕೇವಲ ಕಾಲ್ಪನಕ ಮಾತ್ರ. ಅದು ಯಾವ ಭೌಗೋಳಿಕ ನಕ್ಷೆಯಲ್ಲೂ ಸಿಗಲಾರದು ಎಂಬುದನ್ನು ಮಾತ್ರ ಹೇಳಬಲ್ಲೆ. ಮಾಲ್ಗುಡಿ ದಕ್ಷಿಣ ಭಾರತದ ಸಣ್ಣ ಊರು ಎಂದು ನಾನು ಹೇಳಿದರೆ ಅದು ಅರ್ಧಸತ್ಯದ ಅಭಿವ್ಯಕ್ತಿಯಾಗುತ್ತದೆ. ಏಕೆಂದರೆ ಮಾಲ್ಗುಡಿಯಲ್ಲಿ ಬರುವ ಪಾತ್ರಗಳೆಲ್ಲ ಸಾರ್ವತ್ರಿಕ ಎಂದೇ ನನ್ನ ಅನಿಸಿಕೆ. ಮಾಲ್ಗುಡಿಯ ಪಾತ್ರಗಳನ್ನು ನಾನು ನ್ಯೂಯಾಕರ್್ ನಗರದಲ್ಲಿ ಸಹ ಕಂಡಕೊಳ್ಳಬಲ್ಲೆ. ಇತ್ತೀಚೆಗೆ ಲಂಡನ್ನಿನಲ್ಲಿ ಉತ್ಸಾಹಿ ನಿಮರ್ಾಪಕನೊಬ್ಬ ತಾನು ಒಂದು ಗಂಟೆಯ ಟಿವಿ ಕಾರ್ಯಕ್ರಮ ಮಾಡುವುದಾಗಿಯೂ, ತನ್ನನ್ನು ಮಾಲ್ಗುಡಿಗೆ ಕರೆದೊಯ್ದು ತೋರಿಸುವಿರಾ, ನಿಮ್ಮ ಕಾದಂಬರಿಯ ಪಾತ್ರಗಳನ್ನು ತನ್ನನ್ನು ಪರಿಚಯಿಸುತ್ತೀರಾ ಎಂಬುದಾಗಿ ಕೇಳಿದಾಗ ನಾನು ಒಂದು ಕ್ಷಣ ವಿಚಲಿತನಾದರೂ. ನಾನೀಗ ಒಂದು ಹೊಸ ಕಾದಂಬರಿ ರಚಿಸುವುದರಲ್ಲಿ ನಿರತನಾಗಿದ್ದೇನೆ ಎಂದೆ. ಇನ್ನೊಂದು ಮಾಲ್ಗುಡಿ ಕಾದಂಬರಿಯಾ ಎಂದಾತ ಕೇಳಿದ... ನಾನು ಹೌದು ಎಂದೆ. ಯಾವ ವಿಚಾರವಾಗಿ? ಆತ ಮರುಪ್ರಶ್ನೆ ಎಸೆದ, ಮಾನವ ಆತ್ಮವನ್ನು ಪಡೆದಿರುವ ಹುಲಿಯ ಬಗ್ಗೆ ಎಂದೆ. ಆತ, ಆಹಾ ಒಳ್ಳೇ ಕುತೂಹಲಕಾರಿಯಾಗಿದೆ, ಹಾಗಾದರೆ ನಾನು ಕಾಯುತ್ತೇನೆ, ನಾನು ತಯಾರಿಸಲಿರುವ ಸಾಕ್ಷ್ಯಚಿತ್ರದಲ್ಲಿ ಹುಲಿಯನ್ನೂ ಸೇರಿಸಿದರೆ ಅಧ್ಭುತವಾಗಿರುತ್ತದೆ ಅಂದ.

ಮಾಲ್ಗುಡಿ ಎಲ್ಲಿದೆ?

ಮಾಲ್ಗುಡಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿ, ದೊಡ್ಡಮನೆಯನ್ನು ಸಂದಶರ್ಿಸಲು ಬಯಸುವವರು ಮಂಗಳೂರಿನಿಂದ ಆಗುಂಬೆ-ಶಿವಮೊಗ್ಗ ಕಡೆ ಸಂಚರಿಸುವ ವೇಗದೂತ ಬಸ್ನಲ್ಲಿ ಸಂಚಾರ ಬೆಳೆಸಬಹುದು. ಆದರೆ ಇವುಗಳು ನಿಗದಿತ ಸಮಯದಲ್ಲಿ ಸಂಚರಿಸುವುದರಿಂದ ಮಂಗಳೂರಿನಿಂದ ಕಾರ್ಕಳ-ಹೆಬ್ರಿ ಮೂಲಕ ಆಗುಂಬೆಯನ್ನು ತಲುಪುವುದು ಸುಲಭ. ಜೂನ್ ಮೊದಲ ವಾರದಿಂದ ಅಕ್ಟೋಬರ್ ತಿಂಗಳವರೆಗೂ ಮಳೆಯ ಆರ್ಭಟ ಸಾಮಾನ್ಯವಾಗಿ ಹೆಚ್ಚೇ ಇರುವುದರಿಂದ ಆ ಬಳಿಕದ ಸಮಯ ಸಂಚಾರಕ್ಕೆ ಯೋಗ್ಯವಾದುದು. ಆಗುಂಬೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಚಾರಣಪ್ರಿಯರಿಗೆ ಇಲ್ಲೇ ಹತ್ತಿರದಲ್ಲಿರುವ ಆಗುಂಬೆಯ ದಟ್ಟಾರಣ್ಯದಲ್ಲಿ ಮರೆಯಾಗಿರುವ ಒನಕೆ ಅಬ್ಬಿ ಜಲಪಾತ ವಿಶಿಷ್ಟ ಅನುಭವ ನೀಡಬಲ್ಲುದು. ವಿಷಪೂರಿತ ಹಾವು, ಕಾಡುಪ್ರಾಣಿಗಳು ಹಾಗೂ ಇಂಬಳದ ಹಾವಳಿ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

Tuesday, January 11, 2011

ಅಪರಿಚಿತ ಸ್ನೇಹಿತರಿಗೆ...




ಸ್ನೇಹದ ಕಡಲಲ್ಲೀ... ನೆನಪಿನ ದೋಣಿಯಲೀ...

ಪಯಣಿಗ ನಾನಮ್ಮಾ...

ಪ್ರೀತಿಯ ತೀರವ ಸೇರುವುದೊಂದೇ ಬಾಳಿನ ಗುರಿಯಮ್ಮಾ...

ಈ ಸ್ನೇಹ, ಗೆಳೆತನ ಇದರ ಬಗ್ಗೆ ಎಲ್ರಿಗೂ ತಿಳಿದಿರುತ್ತೆ ಬಿಡಿ. ಹಾಗೇನೇ ಪ್ರೀತಿ, ಒಲುಮೆ ಇವನ್ನು ನಾವು ನಮ್ಮ ಲೈಫಲ್ಲಿ ಅನುಭವಿಸದೇ ಇದ್ರೂ, ಇದರ ಬಗ್ಗೆ ತಿಳಿದಿರ್ತೀವಿ, ಎಲ್ಲೋ ಒಂದು ಕಡೆ ಓದಿರ್ತೀವಿ. ಇದರ ಬಗ್ಗೆ ಎಷ್ಟು ತಿಳಿದ್ರೂ ಕೆಲವೊಮ್ಮೆ ನಾವು ನಮ್ಮ ಲೈಫಲ್ಲಿ ಸ್ನೇಹಕ್ಕೂ-ಪ್ರೀತಿಗೂ ನಡುವಿನ ವ್ಯತ್ಯಾಸಾನಾ ಗುತರ್ಿಸೋದ್ರಲ್ಲಿ ಎಡವಿರ್ತೀವಿ. ಸ್ನೇಹಕ್ಕೂ-ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದ್ರೂ ಹೀಗೇಕಾಗುತ್ತೆ ಅಂತ ತಿಳಿಯಲ್ಲ. ಇದು ಸ್ನೇಹಾನಾ..? ಇದು ಪ್ರೀತೀನಾ..? ಅಂತಾ ತಿಳೀದೇ ಮುಂದುವರಿದ್ರೆ ಮುಂದೆ ಕಷ್ಟಗಳ ಸರಮಾಲೆಯೇ ಎದುರಾಗೋ ಸಾಧ್ಯತೆಯಂತೂ ಇದ್ದೇ ಇರುತ್ತೆ.

ಘಟನೆ-1 ಮೊಬೈಲಿಗೆ ಯಾರ್ದೋ ಮಿಸ್ಕಾಲ್ ಬರುತ್ತೆ. ಹೊಸ ನಂಬರ್. ರಾತ್ರಿ ಹಗಲು ಆ ನಂಬರ್ನಂದ ಬಿಡುವಿಲ್ಲದೆ ಮಿಸ್ಡ್ ಕಾಲ್ಗಳು. ಯಾರಪ್ಪಾ... ಇವ್ರು ಅಂದ್ಕೊಂಡು ಅತ್ತ ಕಡೆ ಕಾಲ್ ಮಾಡಿದ್ರೆ ಅದು ಯಾವುದೋ ಹೆಣ್ಣಿನ ದನಿ. ಮಿಸ್ಡ್ಕಾಲ್ನಲ್ಲಿ ಶುರುವಾದ ಈ ಮೊಬೈಲ್ ಸ್ನೇಹ ಕೆಲವೇ ದಿನ ಕಳೆಯೋದ್ರೊಳಗೆ ಆಳವಾಗಿ ಬೇರೂರಿರುತ್ತೆ. ಅತ್ತ ಕಡೆಯ ಹೆಣ್ಣು-ಇತ್ತ ಕಡೆಯ ಗಂಡು ಇಬ್ಬರೂ ಸ್ನೇಹದ ಕಡಲಲ್ಲಿ ಮಿಂದು ರಾತ್ರಿ-ಹಗಲೆನ್ನದೆ ಏನೇನೋ ಮಾತಾಡ್ತಾರೆ. ಒಬ್ಬರಿಗೊಬ್ಬರ ಪರಿಚಯವೇ ಇಲ್ಲದಿದ್ರೂ ಸ್ನೇಹ ಗಾಢವಾಗುತ್ತಾ ಹೋಗುತ್ತೆ. ಕೊನೆಗೊಂದು ದಿನ ಆ ಘಳಿಗೆ ಬಂದೇ ಬರುತ್ತೆ. ಅವತ್ತು ಯಾರೋ ಒಬ್ರು ಸ್ನೇಹಾನಾ ಪ್ರೀತಿಯಾಗಿ ಪಡೆಯಲು ಹಾತೊರೆಯ್ತಾರೆ. ಆದ್ರೆ ಇಂತಹ ಸ್ನೇಹಿತರಲ್ಲಿ ಕೇವಲ ಮೋಜಿಗಾಗಿ ಅರೆ ಕ್ಷಣ ಮಾತ್ರ ಪ್ರೀತಿಸ್ತೀನಿ ಅನ್ನಬಹುದು. ಆದ್ರೆ ಅದೇ ಶಾಶ್ವತ ವಾಗಿರೋದಿಕ್ಕೆ ಸಾಧ್ಯಾನಾ? ಅಂತೂ ಇಂತೂ... ಪ್ರೀತಿ ಬಂತು, ಅಂತ ಹಾಡಿ ಕುಣಿದ್ರೆ ಆ ಪ್ರೀತಿ ಕೆಲವೇ ದಿನಗಳಲ್ಲಿ ಮರೆಯಾಗಿರುತ್ತೆ.

ಘಟನೆ-2: ಇದ್ದಕಿಂದ್ದಂತೆ ಒಬ್ಬಳು ಹುಡುಗಿಯ ಮೊಬೈಲಿಗೆ ಯಾವುದೋ ಒಂದು ಹೊಸ ನಂಬರಿನಿಂದ ಮೆಸೇಜ್ ಬರುತ್ತೆ. ಇದು ಮುಂದುವರಿದಾಗ ಹುಡುಗಿ ಮಾತಾಡ್ತಾಳೆ. ಆತನೂ ಮಾತಾಡ್ತಾನೆ. ಮುಂದೆ ಇವರಿಬ್ಬರ ಮೊಬೈಲಿಂದ ಬೇಕಾದಷ್ಟು ಮೆಸೇಜ್ಗಳು ರವಾನೆಯಾಗುತ್ತೆ. ಅಷ್ಟರಲ್ಲಿ ಅರವರಿಬ್ರೂ ಲವ್ವಲ್ಲಿ ಬಿದ್ದಿರ್ತಾರೆ. ಇಲ್ಲೂ ಅವರಿಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿರಲ್ಲ, ಎದುರಾಗಿ ಮಾತಾಡಿರಲ್ಲ. ಆದ್ರೂ ಅದು ಪ್ರೀತಿ ಅಂತ ತಿಳ್ಕೊಂಡು ಮುಂದುವರಿಯ್ತಾರೆ.

ಹೀಗೆ ಈ ಮೇಲಿನ ಎರಡು ಸ್ಯಾಂಪಲ್ಲಲ್ಲಿ ಪರಸ್ಪರ ಗುರುತು ಪರಿಚಯವಿಲ್ಲದ ಎರಡು ಜೀವಗಳು ಸ್ನೇಹಕ್ಕೆ ಸಿಕ್ಕಿ ಹಾಕ್ಕೊಳ್ಳುತ್ತೆ. ಇಲ್ಲಿ ಸಿಕ್ಕಿ ಹಾಕ್ಕಿಕೊಳ್ಳುವಾಗ `ಐ ಲವ್ ಯು' ಅನ್ನೋವಾಗ ಮುಂದೇನಾಗುತ್ತೆ ಅನ್ನೋದೇ ತಿಳಿದಿರಲ್ಲ. ಹಾಗಾದ್ರೆ ನೋಡದೇ ಇದ್ರೂ ಪ್ರೀತಿ ಹುಟ್ಟುತ್ತಾ..? ತುಂಬಾ ವಿಚಿತ್ರ ಅನ್ನಿಸುತ್ತೆ ಅಲ್ವಾ? ಇದು ವಿಚಿತ್ರವಾದರೂ ಸತ್ಯ. ಬಹಳ ವರ್ಷಗಳ ಹಿಂದೆ ಹಿಂದಿಯಲ್ಲಿ ಬಿಡುಗಡೆಗೊಂಡಿದ್ದ ಯಶಸ್ವಿ ಚಿತ್ರ `ಸಿಫರ್್ ತುಮ್' ಕನ್ನಡದಲ್ಲಿ `ಯಾರೇ ನೀನು ಚೆಲುವೆ' ಆಯಿತು. ಅದರ ಕಥಾವಸ್ತುವೂ ಇದೇ ಆಗಿತ್ತು. ಅಚಾನಕ್ಕಾಗಿ ಭೇಟಿಯಾಗುವ ಗಂಡು-ಹೆಣ್ಣು ಫೋನ್ ಮುಖಾಂತರ ಸ್ನೇಹಿತರಾಗಿ, ಪ್ರೀತಿಯ ಬಲೆಯಲ್ಲಿ ಬಿದ್ದು ಕೊನೆಗೆ ಆ ಪ್ರೀತಿಯನ್ನು ಪಡೆಯಲು ಪಡುವ ಕಷ್ಟವನ್ನು ನಿದರ್ೆಶಕರು ಸೊಗಸಾಗಿ ನರೂಪಿಸಿದ್ದಾರೆ. ಹೀಗಾಗಿ ಆ ಚಿತ್ರ ಶತದಿನೋತ್ಸವ ಕಂಡಿತು. ಈ ವಿಷಯ ಯಾಕೆ ಹೇಳಿದ್ದೆಂದರೆ, ನೋಡದೆ ಪ್ರೀತಿಸುವ ಕಥಾ ಹಂದರ ನಮಲ್ಲಿ ಅದೆಷ್ಟೋ ಬಂದು ಹೋಗಿದೆ. ಇದು ಪ್ರೀತಿಯಲ್ಲ ಅಂತ ಬುದ್ಧಿಯಿರೋರು ಹೇಳಬಹುದು. ಹದಿಹರೆಯದ ಮಾನಸಿಕ ಸಮಸ್ಯೆ ಅಂತನ್ನಲೂಬಹುದು, ಮನಸ್ಸಿನ ತುಮುಲ ಅಂತಂದ್ರೂ ಓ.ಕೆ. ಆದ್ರೂ ಇಲ್ಲೂ ಒಂದು ಅಪ್ಪಟ ಸ್ನೇಹವಿರುತ್ತೆ. ತಾಜಾತನದಿಂದ ನಳನಳಿಸೋ ಹೂವಿನ ತರಾ ಸ್ನೇಹದ ಸುಗಂಧ ಎಲ್ಲೆಡೆಗೂ ವ್ಯಾಪಿಸಿರುತ್ತೆ.

ನೋಡದೆ ಸ್ನೇಹ ಹುಟ್ಟುತ್ತೆ. ಅದನ್ನು ಹಾಗೇ ಬಿಟ್ಟು ಅದಕ್ಕೆ ನೀರೆರೆದರೆ ಅದು ಬೆಳೆದು ಪ್ರೀತಿಯಾಗುತ್ತೆ. ಆದ್ರೆ ಆ ಸ್ನೇಹವನ್ನು ಸರಿಯಾಗಿ ಗುತರ್ಿಸಿ, ಅಥರ್ೈಸಬೇಕಾದ್ದು ನಮ್ಮ ಕರ್ತವ್ಯ. ಕೆಲವ್ರು ಯಾವುದೋ ಒತ್ತಡದಲ್ಲಿ ಬಿದ್ದು ಪ್ರೀತಿಸ್ತಾರೆ. ಸ್ನೇಹಾನ ಪ್ರೀತಿಯೆಂದು ತಿಳಿದು ಮೋಸದ ಬಲೆಗೆ ಬೀಳ್ತಾರೆ. ಪ್ರೀತಿಸ್ತೀನಿ ಅಂತಂದು ಎಲ್ಲವನ್ನೂ ದೋಚಿ ಪರಾರಿಯಾಗೋರೂ ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಹೀಗಾಗಿ ಪ್ರೀತಿ ಹೆಸರಲ್ಲಿ ಇದಕ್ಕೆಲ್ಲಾ ಆಸ್ಪದ ಕೊಡಬಾರದು ತಾನೇ?

ಸ್ನೇಹಕ್ಕೆ ಯಾವುದೇ ಬೇಧವಿಲ್ಲ ನಿಜ. ಜಾತಿ-ಮತ ಬೇಧ ತೋರದೆ ಎಲ್ಲೆಲ್ಲೂ ತುಂಬಿರೋದು ಅಂತಂದ್ರೆ ಈ ಸ್ನೇಹ ಮಾತ್ರ. ನಿಜವಾದ ಸ್ನೇಹಕ್ಕೆ ಮುಖದರ್ಶನದ ಅಗತ್ಯವಿರಲ್ಲ. ಯಾರಿಗ್ಗೊತ್ತು, ನಾಳೆ ನಮ್ಮ ಮುಖದರ್ಶನವಾದ ಕೂಡಲೇ ಅವ್ರಿಗೆ ನಾವು ಬೇಡ ಅನ್ನಿಸೋಕ್ಕೂ ಸಾಧ್ಯವಿದೆ. ಆದ್ದರಿಂದ ಸ್ನೇಹ ಸ್ನೇಹವಾಗೇ ಇರಲಿ. ನಿರ್ಮಲ, ನಿಷ್ಕಲ್ಮಶ ಸ್ನೇಹಾನ ಪ್ರೀತಿಯೆಂದು ತಪ್ಪಾಗಿ ಭಾವಿಸಿದ್ರೆ ನಾಳೆ ನಾವು ಆ ಸ್ನೇಹಾನ ಕಳ್ಕೋಬಹುದು. ನೋಡದೆ ಹುಟ್ಟೋ ಸ್ನೇಹ ಚಿರಕಾಲದ ತನಕ ಶಾಶ್ವತವಾಗಿರಲಿ. ಅದಕ್ಕೆ ಪ್ರೀತಿಯ ಲೇಪನ ಬೇಡ ಅನ್ನುವುದು ನನ್ನ ಅಭಿಮತ. ಒಂದು ವೇಳೆ ಅದೇ ಪ್ರೀತಿಯಾಗಿ ನಮ್ಮ ಮುನ್ನಡೆಸುತ್ತದೆಯಾದ್ರೆ ಅದು ನಿಜಕ್ಕೂ ಸಂತಸದ ಮಾತೇ ಸರಿ. ಗುರುತು ಪರಿಚಯವಿಲ್ಲದೆ ಮಿಸ್ಡ್ ಕಾಲ್, ಮೆಸೇಜ್ ಮೂಲಕ ಪರಿಚಯವಾದ ಅದೆಷ್ಟೋ ಸ್ನೇಹಿತರಿಗೆ ಪ್ರೀತಿ ತುಂಬಿದ ನಮಸ್ಕಾರಗಳು.

ರಾ+ಜ+ಕೀ+ಯ



ರಾ-ರಾವಣ, ಜ-ಜರಾಸಂಧ, ಕೀ-ಕೀಚಕ, ಯ-ಯಮ. ಇವರೆಲ್ಲಾ ಒಟ್ಟು ಸೇರಿದ್ರೆ ನಮ್ಮ ಹಾಳುಗೆಟ್ಟ ರಾಜಕೀಯ ಅನ್ನೋದು ನನಗಿಂತ ನಿಮಗೇ ಚೆನ್ನಾಗಿ ತಿಳಿದಿರಬಹುದು. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಬರೆಯೋ ಹಕೀಕತ್ತು ನನ್ಗೂ ಇರಲಿಲ್ಲ. ಆದ್ರೂ ಈಗಷ್ಟೇ ತಾ.ಪಂ, ಜಿ.ಪಂ. ಇಲೆಕ್ಷನ್ನು ಮುಗಿದಿದೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಯಾವಾಗ ಈ ಇಲೆಕ್ಷನ್ನು ಬರುತ್ತೆ ಅಂತ ಹೇಳೋಕೂ ಆಗಲ್ಲ. ಹೀಗಿರೋವಾಗ ಕೊಂಚನಾದ್ರೂ ನಿಮ್ಗೆ ಹೇಳದೇ ಇದ್ರೆ ಹೇಗೆ ಹೇಳಿ?

ಹಾಗಾದ್ರೆ ರಾಜಕೀಯ ವ್ಯವಸ್ಥೆಯನ್ನೋದು ನಮ್ಮ ಹೆದ್ದಾರಿಯಷ್ಟೂ ಹದಗೆಟ್ಟಿದೆಯಾ, ಅಂತ ನೀವು ನೀವೇ ಕೇಳ್ಕೊಳ್ಳಿ. ಆಗ ನಮಗೇ ತಿಳಿಯುತ್ತೆ, ನಾನ್ಯಾಕೆ ಈ ರೀತಿ ಬರೆದೆನೆಂದು. ಎಳೆ ಪ್ರಾಯದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರ ತನಕ ರಾಜಕೀಯ ಅನ್ನೋ ಹೆಸರೆತ್ತಿದ್ರೆ ಸಾಕು, ಸಿಡಿದು ಬೀಳೋ ಜನಾನೇ ನಮ್ಮಲ್ಲಿರೋವಾಗ ವ್ಯರ್ಥ ಆಲಾಪ ಯಾಕೆ ಬೇಕು? ಎಲೆಕ್ಷನ್ನು ಅಂದಮೇಲೆ ಅಲ್ಲಿ ಗಲಾಟೆ, ಪರ-ವಿರೋಧಿಗಳ ನಡುವಿನ ಕಚ್ಚಾಟ, ಕಂಟ್ರಿ ಸಾರಾಯಿಯ ಹಂಚುವಿಕೆ ಇವೆಲ್ಲಾ ಇದ್ದದ್ದೇ. ಎಲೆಕ್ಷನ್ನು ಅಂದ್ರೆ ನನ್ನ ಬಾಲ್ಯದ ನೆನಪುಗಳು ಈಗಲೂ ಮಸುಕು ಮಸುಕಾಗಿ ಗೋಚರಿಸುತ್ತೆ. ನಮ್ಮ ಊರಲ್ಲಿ ಚುನಾವಣೆ ಬಂತಂದ್ರೆ ಗೌಜಿಯೋ ಗೌಜಿ. ಊರಿಗೆ ಊರೇ ಉಲ್ಲಾಸದಿಂದ ಬೆಳಿಗ್ಗೆ ಬೇಗನೇ ಎದ್ದು ಕುಳಿತಿರುತ್ತೆ. ಹೆಚ್ಚಾಗಿ ಈ ಚುನಾವಣೆ ಅನ್ನೋದು ಶಾಲಾ ಮಕ್ಕಳ ರಜಾದಿನಗಳಲ್ಲೇ ಬರೋದ್ರಿಂದ ನಮಗೆಲ್ಲಾ ಏನೋ ಖುಷಿ. ಒಂಭತ್ತು ದಿನಗಳ ನವರಾತ್ರಿ ಉತ್ಸವ ಬಂದಾಗ ನಾನಾ ರೀತಿಯ ವೇಷ ನೋಡೋಕ್ಕೆ ಯಾವ ರೀತಿ ಕಾದಿರ್ತೀವೋ ಅದೇ ರೀತಿ ಚುನಾವಣೆಯೂ ಕೂಡಾ. ಡಿಫರೆನ್ಸ್ ಏನಂದ್ರೆ ನವರಾತ್ರಿಯ ವೇಷಗಳು ತಮ್ಮ ವೇಷವನ್ನು ಪ್ರದಶರ್ಿಸುತ್ತೆ, ಎಲೆಕ್ಷನ್ನು ಸಮಯ ಬರೋ ವೇಷಗಳು ತಮ್ಮ ಒಳಗೊಳಗೇ ನಾನಾ ರೀತಿಯ ವೇಷಗಳನ್ನು ಒಂದಾದ ಮೇಲೊಂದರಂತೆ ಧರಿಸಿರುತ್ತೆ. ಆದ್ರೆ ನಮ್ಮಗಳ ಕಣ್ಣಿಗೆ ಕಾಣೋದಿಲ್ಲ ಅಷ್ಟೆ.

ಚಿಕ್ಕಂದಿನಲ್ಲಿ ಚುನಾವಣೆ ಬಂದಾಗ ನಾನು ಮತ್ತು ನನ್ನ ಗ್ಯಾಂಗ್ಗೆ ಆನಂದವೋ ಆನಂದ. ನಮ್ಮೂರಿನ ಕುಲಗೆಟ್ಟ ರಸ್ತೆಯಲ್ಲಿ ಆಗೊಮ್ಮೆ, ಈಗೊಮ್ಮೆ ಓಡಾಡುವ ಬಿಳಿಯ ಬಣ್ಣದ ಅಂಬಾಸಿಡರ್ ಕಾರು, ಅದರೊಳಗಿಂದ ಕರಿಯ ಕನ್ನಡಕ, ಬಿಳಿ ಪಂಚೆ, ಜುಬ್ಬಾ ತೊಟ್ಟವರು ಕೆಳಗಿಳಿಯುತ್ತಲೇ ನಮ್ಮಗಳ ಉತ್ಸಾಹ ನೂರ್ಮಡಿಯಾಗುತ್ತಿತ್ತು. ಅವರ ಹಿಂದೆ ಮುಂದೆ ಅದೆಷ್ಟೋ ಬಿಳಿಯ ಅಂಗಿಗಳು ಇರುವೆಗಳಂತೆ ಮುತ್ತಿರುವುದನ್ನು ಕಂಡಾಗ ನಮ್ಗೂ ಗೌರವ ಭಾವ. ಅಷ್ಟರಲ್ಲಿ ಒಬ್ಬವೇದಿಕೆಯ ಮೇಲೇರಿ ಮೈಕಾದಲ್ಲಿ ಊರಿನ ಜನರನ್ನು `ಅಕ್ಕನಕುಲೇ... ಅಣ್ಣನಕುಲೇ...' ಎಂದು ಜೋರಾಗಿ ಅರಚಲು ತೊಡಗಿದರೆ ಎದೆ ನಡುಕ ಹುಟ್ಟುತ್ತಿತ್ತು. ಕೊನೆಗೆ ನಮ್ಮ ಊರಿನ ಓಟನ್ನು ಪಡೆಯಲು ಆ ಬಿಳಿಯ ಬಟ್ಟೆಯವರು ವೇದಿಕೆಯ ಮೇಲೆ ಹತ್ತು ಹಲವು ರೀತಿಯ ಆಶ್ವಾಸನೆಗಳನ್ನು ನೀಡುತ್ತಿದ್ದರು. ರಸ್ತೆ, ದಾರಿದೀಪ, ನಳ್ಳಿ ನೀರು, ಬೋರ್ವೆಲ್ ಹೀಗೆ ನಮ್ಮೆಲ್ಲರನ್ನೂ ನಂಬಿಸಿ ಬಿಡುತ್ತಿದ್ದರು. ನಮ್ಮ ಊರಿನವರಿಗೆ ಅವರು ಮನುಷ್ಯರೇ ಅಲ್ಲ, ದೇವರ ತದ್ರೂಪ ಎನ್ನುವ ಭಾವನೆ. ಹೀಗೆ ನಂಬಿಕೆ, ಭರವಸೆಯ ಜತೆಗೆ ಎಲೆಕ್ಷನ್ನು ಮುಗಿದು ಹೋಗುತ್ತಿತ್ತು. ತಿಂಗಳ ಕಾಲ ನಮ್ಮ ಊರಿನ ರಸ್ತೆಯ ತುಂಬಾ ರಾಡಿಯೆಬ್ಬಿಸಿ , ರಸ್ತೆಯ ಗುಂಡಿಯನ್ನು ಇನ್ನಷ್ಟು ಆಳವನ್ನಾಗಿಸಿದ್ದ ಬಿಳಿಯ ಮೋಟಾರು ವಾಹನಗಳು ಕಾಣದಾದಾಗ, ಬಿಳಿ ಅಂಗಿಗಳೆಲ್ಲಾ ಕಾಣದೆ ಮಾಯವಾದಾಗ ಸ್ವಲ್ಪ ದಿನ ಬೋರ್ ಹೊಡೆಸುತ್ತಿತ್ತು.(ನವರಾತ್ರಿ ಮುಗಿದ ನಂತರ ಆಗುತ್ತಲ್ಲಾ ಹಾಗೆ). ಆದ್ರೆ ನಂತರ ನಮ್ಮ ಊರಿನ ಪೆಕರಾಗಳ ಓಟಿನಿಂದ ಗೆದ್ದವರು ಇತ್ತ ತಲೆ ಹಾಕಿ ಮಲಗುವುದನ್ನೂ ಬಿಟ್ಟಾಗ ನಮ್ಮ ಊರಿನ ಹಿರಿ ಜೀವಗಳು ಹಿಡಿಶಾಪ ಹಾಕುವುದನ್ನು ನೋಡಿದ್ದೆ. ಆಗೆಲ್ಲಾ ಇದೊಂದು ನಾಟಕದಂತೆ ಕಾಣುತ್ತಿತ್ತು.

ಬೆಳೆಯುತ್ತಾ ರಾಜಕೀಯದ ಬಗೆಗಿನ ನನ್ನ ಆಸಕ್ತಿಗಳಿಗೆಲ್ಲಾ ಸರಿಯಾದ ಉತ್ತರ ಸಿಕ್ಕಿದಾಗ ಆಶ್ಚರ್ಯವೂ ಆಯಿತೆನ್ನಿ. ಆಮೇಲೆ ರಾಜಕೀಯ ಅಂದ್ರೆ ನನಗೆ ಈ ರೀತಿಯ ನಿಜಾರ್ಥ ಹೊಳೆದದ್ದು. ಈಗಂತೂ ನಮ್ಮ ರಾಜಕೀಯ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದನ್ನು ಕಣ್ಣೆದುರೇ ನೋಡುತ್ತೇವೆ. ಪಟಿಂಗನ ಕೊನೆಯ ಆಸರೆ ಎನ್ನುವಂತೆ ರಾಜಕೀಯ ಕೀಳಾಗಿ ಹೋಗುತ್ತಿದೆ. ಎಲೆಕ್ಷನ್ನು ಹೇಗಾದ್ರೂ ಆಗಲಿ, ಯಾರೇ ಬೇಕಾದ್ರೂ ಕುಣೀಲಿ, ಓಟು ಮಾತ್ರ ನೀಡೋದು ನಮ್ಮ ಹಕ್ಕು ಅಲ್ವೇನ್ರೀ..?

ಲಾಸ್ಟ್ ಲೈನ್: ನಮ್ಮ ಊರಿನ ಅದೇ ಹಿಂದಿನ ಮಣ್ಣಿನ ರಸ್ತೆ, ರಾತ್ರಿಯ ಕತ್ತಲು, ನಮ್ಮೂರಿನ ಹೆಣ್ಮಕ್ಕಳು ಸೊಂಟ ಬಳುಕಿಸ್ಕೊಂಡು, ಕಾಲು ಉಳುಕಿಸ್ಕೊಂಡು ದೂರದ ಕೆರೆ, ನದಿಯಿಂದ ನೀರು ತರುವುದನ್ನು ನೋಡಿ ಅಯ್ಯೋ ಪಾಪ ಅನಿಸುತ್ತೆ. ಆದ್ರೇನು ಮಾಡೋಣ, ಈ ಸಲನಾದ್ರೂ ಸರಿಯಾದ್ರೆ.... ಅನ್ನೋ ದೂರದ ಆಶೆಯಿಂದ ಜನ ಮತ್ತದೇ ತಪ್ಪು ಮಾಡ್ತಿದ್ದಾರೆ.

Thursday, December 16, 2010

Kateel thoote dara.AVI


ಇತಿಹಾಸ ಪ್ರಸಿದ್ಧ ಕಟೀಲು ದುಗರ್ಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ(ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ತುಳುನಾಡಿನ ಪರಂಪರೆ, ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿಯೂ ಇದೆ. ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಈ ವೇಳೆ ಭಕ್ತರು ಮೈಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಂಡಿರುತ್ತಾರೆ, ಹಾಗಿದ್ದೂ ನಾನು ಗಮನಿಸಿದಂತೆ ಇಲ್ಲಿಯ ತನಕ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ...
ಈ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. ಕಟೀಲು ಮಾತೆಯ ಸನ್ನಿಧಿಯಲ್ಲಿ ಪಾವನರಾಗುತ್ತಾರೆ.