doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, January 29, 2011

ಮುಸ್ಸಂಜೆಯ ಮಾಲ್ಗುಡಿ ಪಯಣ...





ಮಾಲ್ಗುಡಿ ಹಸರು ಕೇಳದವರು ಬಹುಷ: ವಿರಳವೇ ಇರಬಹುದು. ಸುಮಾರು 15 ವರ್ಷಗಳ ಹಿಂದೆ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಜನರನ್ನು ಯಾವ ರೀತಿ ಆಕಷರ್ಿಸಿತ್ತು ಎಂದರೆ ಜನರು ಮಾಲ್ಗುಡಿ ಎಂಬ ಊರಿನ ಬಗ್ಗೆ ಸಹಜವಾಗೇ ಕುತೂಹಲ ಬೆಳೆಸಿದ್ದರು. ಅದು ಪ್ರಸಾರವಾಗುತ್ತಿದ್ದುದು ಹಿಂದಿ ಭಾಷೆಯಲ್ಲಾದರೂ ನಮಗೆಲ್ಲಾ ಅದು ಅಚ್ಚುಮೆಚ್ಚು. ಕಾರಣ ಅದರಲ್ಲಿ ಅಭಿನಯಿಸುತ್ತಿದ್ದ ದಿವಂಗತ ವಿಷ್ಣು, ಶಂಕರನಾಗ್ ಅವರಂತಹ ನಟರುಗಳು. ಮಾತ್ರವಲ್ಲದೆ ಮಾಸ್ಟರ್ ಮಂಜುನಾಥ್ ಎಂಬ ಬಾಲ ಪ್ರತಿಭೆಯನ್ನು ಕಿರುತೆರೆಗೆ ಮೊದಲ ಬಾರಿ ಈ ಧಾರಾವಾಹಿ ಮೂಲಕವೇ ಶಂಕರನಾಗ್ ಪರಿಚಯಿಸಿದ್ದರು. ಆರ್.ಕೆ. ನಾರಾಯಣ್ ರಚಿಸಿದ್ದ `ಸ್ವಾಮಿ ಆ್ಯಂಡ್ ಫ್ರೆಂಡ್ಸ್' ಕಥಾ ಸಂಕಲನವನ್ನು ಹಿರಿಯ ನಟ ಶಂಕರನಾಗ್ ದಕ್ಷ ನಿದರ್ೇಶನದಲ್ಲಿ ಧಾರಾವಾಹಿಯನ್ನಾಗಿ ಮಾಡಲಾಗಿತ್ತು. ಸೊಗಸಾಗಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ರಾತ್ರಿ ನಿದ್ದೆಗೆಟ್ಟಾದರೂ ನೋಡದಿದ್ದರೆ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ಆದರೆ ಇದೇ ಮಾಲ್ಗುಡಿ ಬಗ್ಗೆ ಮನದಲ್ಲಿ ಇದ್ದ ಅದೆಷ್ಟೋ ಕುತೂಹಲಕ್ಕೆ ತೆರೆ ಬಿದ್ದಿದ್ದು ದೂರದರ್ಶನಕ್ಕಾಗಿ 25 ವರ್ಷಗಳ ಹಿಂದೆ ಮಾಲ್ಗುಡಿಯಾಗಿ ರೂಪವೆತ್ತಿದ್ದ ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿಗೆ ಕಾಲಿಟ್ಟಾಗಲೇ.

ಹೌದು... ಆರ್.ಕೆ. ನಾರಾಯಣ್ ಬರೆದಿದ್ದ ಪುಸ್ತಕ ಓದಿದ ಮೇಲಂತೂ ಅಲ್ಲಿಗೊಮ್ಮೆ ಭೇಟಿಕೊಡದಿದ್ದರೆ ಹೇಗೆ ಎಂದು ಮನಸ್ಸು ಹೇಳುತ್ತಿತ್ತು. ಮಾಲ್ಗುಡಿ ಎನ್ನುವುದು ಆಗುಂಬೆಯೆಂಬ ಪುಟ್ಟ ಊರಿನ ಒಂದು ಬೀದಿಯಲ್ಲಿ ಮೂಡಿಬಂದ ಅದೆಷ್ಟೋ ಕಲ್ಪನೆಯ ಸಾಕಾರ ರೂಪ ಎಂದು ಅರಿತಾಗ ಆ ಬಗೆಗಿನ ತವಕ, ಕುತೂಹಲ ಇನ್ನಷ್ಟು ಹೆಚ್ಚುತ್ತಿತ್ತು. ಕಾದು ಕಾದು ಕೊನೆಗೊಮ್ಮೆ ಆ ದಿನ ಬಂದೇಬಿಟ್ಟಿತು. ಮಂಗಳೂರಿನಿಂದ ಹೊರಡುವ ಪುಟ್ಟ ಬಸ್ನಲ್ಲಿ ಹೊರಟು ಆಗುಂಬೆ ತಲುಪಿದಾಗ ಮಧ್ಯಾಹ್ನ ದಾಟಿತ್ತು. ಸೂರ್ಯನ ಸುಡು ಬೇಗೆಯ ಸುಳಿವಿರಲಿಲ್ಲ. ಮಳೆ ಹೆಚ್ಚು ಸುರಿಯುವ ಕಾರಣಕ್ಕೋ ಏನೋ, ಅಷ್ಟಾಗಿ ಇಲ್ಲಿ ಬಿಸಿಲು ಸುಡುವುದಿಲ್ಲ. ಇನ್ನೇನು ಕೆಲ ಹೊತ್ತು ಕಳೆದರೆ ಕೊರೆವ ಚಳಿ ಆರಂಭವಾಗುತ್ತದೆ ಎನ್ನುವುದನ್ನು ಪ್ರಕೃತಿ ಸಾರಿ ಹೇಳುತ್ತಿತ್ತು.

ದೊಡ್ಡಮನೆ ಊರಿಗೆ ದೊಡ್ಡದು...

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ದಿವಂಗತ ಶಂಕರನಾಗ್ ಆರಿಸಿದ್ದ ದೊಡ್ಡಮನೆಯ ಬಗ್ಗೆ ಬೀದಿಯಲ್ಲಿ ಯಾರ ಹತ್ರ ಕೇಳಿದರೂ ಮಾಹಿತಿ ಇತ್ತು. ಊರಿಗೆ ದೊಡ್ಡದು ಎಂಬ ಕಾರಣಕ್ಕೇ ಆಗಿರಬೇಕು, ಕೇಳಿದ ತಕ್ಷಣ ಜನರು ಕರಾರುವಾಕ್ಕಾಗಿ ದಾರಿ ತೋರಿಸುತ್ತಿದ್ದರು. ಬಸ್ ತಂಗುದಾಣದಿಂದ ಕಾಲ್ನಡಿಗೆಯ ದೂರದಲ್ಲಿರೋ ದೊಡ್ಡಮನೆ ಸುಮಾರು 115 ವರ್ಷಗಳನ್ನು ಪೂರೈಸಿದೆ. ಮಾಲ್ಗುಡಿ ಧಾರಾವಾಹಿಯ ಬಹುತೇಕ ಎಪಿಸೋಡ್ಗಳಲ್ಲಿ ಕಾಣಿಸಿಕೊಂಡ ಈ ಮನೆಯ ಎದುರು ನಿಂತಾಗ ನಮ್ಮನ್ನು ಸ್ವಾಗತಿಸಿದ್ದು ಮನೆಯ ಯಜಮಾನ್ತಿ ಕಸ್ತೂರಿ ಅಕ್ಕ. 65 ವರ್ಷ ಪ್ರಾಯದ ಇವರು ಆದರದಿಂದ ಬರಮಾಡಿಕೊಂಡು ಉತ್ಸಾಹದ ಚಿಲುಮೆಯಂತೆ ನಮ್ಮನ್ನು ಸತ್ಕರಿಸಿದ ರೀತಿ ಮಲೆನಾಡಿಗರ ಉಪಚಾರವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಮನೆಗೆ ಸೊಸೆಯಾಗಿ ಬಂದಿರುವ ಕಸ್ತೂರಿ ಅಕ್ಕ ಈಗಲೂ ಊರಿಗೆ ಮಹಾಮಾತೆಯಾಗಿದ್ದಾರೆ. ಅವರ ಔದಾರ್ಯತೆ, ಪ್ರೀತಿ, ಅಕ್ಕರೆಯ ಬಗ್ಗೆ ಊರಿನಲ್ಲಿ ಯಾರಲ್ಲಿ ಕೇಳಿದರೂ ಬೇರೆ ಉತ್ತರ ಸಿಗಲಾರದು. ಅತಿಥಿಗಳು, ಪ್ರವಾಸಿಗರು, ಚಾರಣಿಗರು ಹೀಗೆ ದಣಿದು ಬಂದ ಯಾರಿಗೂ ಎಲ್ಲೂ ಕೊರತೆಯಾಗದಂತೆ ಉಪಚರಿಸುವ ಕಸ್ತೂರಿ ಅಕ್ಕ ಮಾಲ್ಗುಡಿ ಡೇಸ್ ಸೀರಿಯಲ್ನಲ್ಲಿ ಈ ಮನೆ ಕಂಡಿದ್ದರ ಹಿಂದಿನ ರಹಸ್ಯವನ್ನು ಈ ರೀತಿ ವಿವರಿಸುತ್ತಾರೆ.

ಖ್ಯಾತ ನಿದರ್ೇಶಕ ಗಿರೀಶ್ ಕಾನರ್ಾಡ್ ಅವರ ಜತೆ ನಮ್ಮ ಯಜಮಾನರಾದ ವಿಜೇಂದ್ರ ರಾಯರಿಗೆ ಒಳ್ಳೆಯ ಸ್ನೇಹವಿತ್ತು. ದಿವಂಗತ ಶಂಕರನಾಗ್ ಸೀರಿಯಲ್ ಮಾಡುತ್ತೇನೆ. ಒಂದು ದೊಡ್ಡ ಮನೆ ತೋರಿಸಿ ಎಂದಾಗ ಕಾನರ್ಾಡರು ನಮ್ಮ ಮನೆ ತೋರಿಸಿದರು. ಇದರ ಪರಿಣಾಮ ನಾವು ಈ ಮನೆಯನ್ನು ಧಾರಾವಾಹಿ ಚಿತ್ರೀಕರಣಕ್ಕೆ ಬಿಟ್ಟುಕೊಟ್ಟೆವು. ಹಲವು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಮ್ಮ ಮನೆ ಹಾಗೂ ಆಗುಂಬೆಯ ಬೀದಿಯನ್ನು ಬಳಸಿಕೊಂಡ ಶಂಕರನಾಗ್ ನಮ್ಮ ಆತ್ಮೀಯರೇ ಆಗಿಹೋದರು. ಧಾರಾವಾಹಿಯ ಕೊನೆಯ ಕಂತಿನಲ್ಲಿ ನನ್ನ ಮಕ್ಕಳು, ಸಾಕುಪ್ರಾಣಿಗಳನ್ನೂ ಬಳಸಿಕೊಂಡರು ಎಂದು ಕಸ್ತೂರಿ ಅಕ್ಕ ಸ್ಮರಿಸಿಕೊಳ್ಳುತ್ತಾ ಮಾತು ಮುಂದುವರಿಸುತ್ತಾರೆ.

ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲಕ ದೊಡ್ಡಮನೆಯ ಸೌಂದರ್ಯ ಜಗತ್ತಿಗೇ ತಿಳಿಯುತ್ತಿದ್ದಂತೆ ಅದೆಷ್ಟೋ ಮಂದಿ ತಮ್ಮ ಚಿತ್ರಗಳಿಗಾಗಿ ಈ ಮನೆಯನ್ನು ಬಾಡಿಗೆಗೆ ಕೊಡಿ ಎಂದರು. ನಾನು ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ಆದರೂ ರಮಾನಂದ ಸಾಗರ್ ಅವರ ಒತ್ತಾಯದ ಮೇರೆಗೆ ವಿಕ್ರಂ ಔರ್ ಬೇತಾಳ್ ಧಾರಾವಾಹಿ ಚಿತ್ರೀಕರಣಕ್ಕೆ ಮನೆಯನ್ನು ಬಿಟ್ಟುಕೊಟ್ಟೆವು. ಇದಾದ ಬಳಿಕ ಕೆಲವು ವರ್ಷಗಳ ಹಿಂದೆ ಸುದೀಪ್ ಅವರ ಮೈ ಅಟೋಗ್ರಾಫ್ಗೂ ಮನೆ ಬಳಸಿಕೊಂಡಿದ್ದಾರೆ ಎನ್ನುವ ಇವರ ಮಾತಲ್ಲಿ ಸಿನಿಮಾ ಮಂದಿಯ ಬಗ್ಗೆ ಬೇಸರವೂ ಕಂಡುಬರುತ್ತದೆ. ಸಿನಿಮಾ ಚಿತ್ರೀಕರಣದ ವೇಳೆ ಇಲ್ಲಿದ್ದ ಪುರಾತನ ವಸ್ತುಗಳನ್ನು ಒಡೆದು ಹಾಕಿದ್ದು ಮಾತ್ರವಲ್ಲದೆ ಶುಚಿತ್ವದ ಕಡೆಗೂ ಗಮನ ನೀಡುತ್ತಿರಲಿಲ್ಲ, ಹೀಗಾಗಿ ಇನ್ನು ಮುಂದೆ ಮನೆ ಯಾರಿಗೂ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದೆ ಎನ್ನುತ್ತಾರೆ ಕಸ್ತೂರಿ ಅಕ್ಕ. ಇದೀಗ ಎರಡು ಅಂತಸ್ತಿನಿಂದ ಗಮನ ಸೆಳೆಯುವ ದೊಡ್ಡಮನೆ ಪ್ರಾರಂಭದಲ್ಲಿ ಮೂರು ಅಂತಸ್ತನ್ನು ಹೊಂದಿತ್ತು. ಸರ್. ಎಂ. ವಿಶ್ವೇಶ್ವರಯ್ಯ ಇಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ ಮನೆಯ ಮೇಲಿನ ಒಂದು ಅಂತಸ್ತನ್ನು ತೆಗೆಯಿರಿ ಎಂದು ಸಲಹೆ ನೀಡಿದ್ದರಿಂದ ಇದೀಗ ಎರಡು ಅಂತಸ್ತಿಗೆ ಸೀಮಿತವಾಗಿದೆ ಎನ್ನುತ್ತಾರೆ. ಕಪ್ಪು ಕಲ್ಲಿನಿಂದ ಕಟ್ಟಲ್ಪಟ್ಟಿರುವ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಲೆಕ್ಕ ಹಾಕಲು ಸುಲಭವಾಗಿ ಸಾಧ್ಯವಾಗದು. ನಾಲ್ಕು ಅಡುಗೆ ಕೋಣೆ, ಐದಾರು ದಾಸ್ತಾನು ಕೊಠಡಿ, ಎಂಟು ಬೆಡ್ರೂಂ ಹೊಂದಿರುವ ಈ ಮನೆಯಲ್ಲಿ ನಾಲ್ಕು ಸುತ್ತಲೂ ಪಡಸಾಲೆ ಇದೆ. ಮೂರು ಬಾವಿಯನ್ನೂ ಹೊಂದಿರುವ ದೊಡ್ಡಮನೆಯಲ್ಲಿ ಒಟ್ಟು 70ಕ್ಕೂ ಅಧಿಕ ಕೋಣೆಗಳಿವೆ ಎಂದರೆ ಅಚ್ಚರಿಯಲ್ಲದೆ ಇನ್ನೇನು?

ಸಂಪೂರ್ಣ ಮರದ ಕೆತ್ತನೆ, ಪೀಠೋಪಕರಣ ಹೊಂದಿರುವ ದೊಡ್ಡಮನೆ ನಜಕ್ಕೂ ಕುತೂಹಲದ ಕಣಜ. ಇಷ್ಟು ದೊಡ್ಡದಾದ ಮನೆಯಲ್ಲಿ ಸದ್ಯ ಇರುವುದು ಕಸ್ತೂರಿ ಅವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಅವರ 85 ವರ್ಷ ಪ್ರಾಯದ ತಾಯಿ. ಶುಚಿತ್ವಕ್ಕಾಗಿ ಕೆಲಸದ ಆಳುಗಳನ್ನು ಇಟ್ಟುಕೊಂಡಿದ್ದು, ದೊಡ್ಡಮನೆ ಈಗ ಪ್ರತೀ ಶನಿವಾರ ಹಾಗೂ ಆದಿತ್ಯವಾರದಂದು ಕಿಕ್ಕಿರಿದು ತುಂಬುತ್ತದೆ. ಬೆಂಗಳೂರು, ಮೈಸೂರು ಕಡೆಯಿಂದ ಬರುವ ಚಾರಣಿಗರು, ಪ್ರವಾಸಿಗರಿಗೆ ಮಲೆನಾಡಿನ ಆತಿಥ್ಯ ನೀಡುವ `ಅಜ್ಜಿಮನೆ'ಯಾಗಿ ಮಾರ್ಪಡುತ್ತದೆ. ದೊಡ್ಡಮನೆಯ ಯಜಮಾನ್ತಿಯೂ ಅಷ್ಟೇ, ಅವರು ಕೊಟ್ಟಷ್ಟು ಹಣ ಪಡೆದು ಅತಿಥಿ ದೇವೋಭವ ಎನ್ನುತ್ತಾರೆ. ಮಲೆನಾಡಿನ ಸಹಜ ಸೌಂದರ್ಯದಿಂದ ಕಂಗೊಳಿಸೋ ದೊಡ್ಡಮನೆ ಇತಿಹಾಸದ ಬಗ್ಗೆ ನೆನಪುಗಳನ್ನು ಕೆದಕುತ್ತಾ ನಮ್ಮೊಂದಿಗೆ ಒಂದಿಷ್ಟು ಹೊತ್ತು ಹರಟಿದ ಕಸ್ತೂರಿ ಅಕ್ಕ ನಮ್ಮನ್ನು ಬೀಳ್ಕೊಡುವ ವೇಳೆ ಮಜ್ಜಿಗೆ, ಚಕ್ಕುಲಿಯ ಸತ್ಕಾರವನ್ನು ಮಾಡದೆ ಬಿಡಲಿಲ್ಲ.

ಮಿಠಾಯಿವಾಲಾ...

ಮಾಲ್ಗುಡಿಯ ಎಪಿಸೋಡ್ ಒಂದರಲ್ಲಿ ಬರುವ ಮಿಠಾಯಿವಾಲಾ ಪಾತ್ರಧಾರಿ ಪಾಂಡುರಂಗ ಪಂಡಿತ್ ಅವರಿಗೆ ವಯಸ್ಸು ಎಂಬತ್ತೈದು ದಾಟಿದರೂ ಅಲ್ಲಿಯೇ ಪಕ್ಕದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಶಂಕರನಾಗ್ ಹಿಂದಿ ಭಾಷೆಯಲ್ಲಿ ಹೇಳಿಕೊಡುತ್ತಿದ್ದ ಡೈಲಾಗ್ ಅನ್ನು ಚಾಚೂ ತಪ್ಪದೆ ಹೇಳುತ್ತಿದ್ದೆ, ಇದರಿಂದ ಅವರಿಗೂ ನಾನು ಆತ್ಮೀಯನಾಗಿದ್ದೆ ಎಂದು ಕನ್ನಡಕ ತೆಗೆದು ಒರೆಸಿಕೊಳ್ಳುವ ಪಾಂಡುರಂಗ ಅವರು ಇಂದಿಗೂ ಅನಂತ್ನಾಗ್ ಈ ದಾರಿಯಲ್ಲಿ ಬರುವವರು ತಮ್ಮ ಕ್ಯಾಂಟೀನ್ಗೆ ಬಾರದೆ ಹೋಗುವುದಿಲ್ಲ ಅನ್ನುತ್ತಾರೆ. ಮಿಠಾಯಿವಾಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಲಾವಿದ ಇಡೀ ಆಗುಂಬೆಗೆ ಈಗಲೂ ಮಿಠಾಯಿವಾಲಾನೇ.

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ಮಾಲ್ಗುಡಿಯಾಗಿ ಬದಲಾಗಿದ್ದ ಆಗುಂಬೆ ಇಂದಿಗೂ ಹಾಗೇ ಇದೆ. ಎಲ್ಲೋ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಉಳಿದಂತೆ ಮಾಲ್ಗುಡಿ ಪ್ರಕೃತಿಯ ಮಡಿಲಲ್ಲಿ ಹಾಗೇ ತಣ್ಣಗೆ ಮಲಗಿದೆ ಎಂದರೆ ತಪ್ಪಾಗದು. ಎಪಿಸೋಡ್ನಲ್ಲಿ ಕಾಣಿಸಿದ್ದ ಆಗುಂಬೆ ಗ್ರಾ.ಪಂ. ಕಟ್ಟಡ ಈಗಲೂ ಹಾಗೆಯೇ ಇದೆ. ಕಥಾನಾಯಕ ಸ್ವಾಮಿ(ಮಾಸ್ಟರ್ ಮಂಜುನಾಥ್) ಓದಿದ್ದ ಶಾಲೆ ಬೇರೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಎಪಿಸೋಡ್ಗಾಗಿ ಇಲ್ಲಿನ ಸರ್ಕಲ್ನಲ್ಲಿ ಇಡಲಾಗಿದ್ದ ಬ್ರಟಿಷ್ ಅಧಿಕಾರಿ ಸರ್. ಫೆಡ್ರಿಕ್ ಲಾಲೆ ಪ್ರತಿಮೆಯನ್ನು ಗ್ರಾ.ಪಂ. ಸ್ಥಳಾಂತರ ಮಾಡಿದೆ. ಹಿಂದೆ ಇಲ್ಲಿ ಪೊಲೀಸ್ ಠಾಣೆಯ ಪುಟ್ಟ ಕಟ್ಟಡವಿದ್ದರೆ ಇಂದು ನಕ್ಸಲರ ಹೆಜ್ಜೆಗುರುತುಗಳಿಂದ ಎಎನ್ಎಫ್ ಚೆಕ್ಪೋಸ್ಟ್ ಬಂದಿದೆ. ಹೆಜ್ಜೆ, ಹೆಜ್ಜೆಗೂ ಗನ್ ಹಿಡಿದು ಕಾಣಸಿಗುವ ಪೊಲೀಸರು ಆಗುಂಬೆಯ ಹೊಸ ಅತಿಥಿಗಳು. ಉಳಿದಂತೆ ಮಾಲ್ಗುಡಿ ಅಥರ್ಾತ್ ಆಗುಂಬೆ ಕೊಂಚವೂ ಬದಲಾದಂತೆ ಕಂಡುಬರುವುದಿಲ್ಲ. ಇಲ್ಲಿನ ಜನರ ಆದರ, ಸತ್ಕಾರವೂ ಅಷ್ಟೇ. ಮಾಲ್ಗುಡಿಯ ಆ ದಿನಗಳು ಹೇಗಿತ್ತೋ, ಈಗಿನ ದಿನಗಳು ಹಾಗೇ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಜನರು. ಮುಸ್ಸಂಜೆಯ ಕೆಂಬಣ್ಣ ಬಾನಲ್ಲಿ ಚೆಲ್ಲುತ್ತಿರಲು ಆಗುಂಬೆಯ ಬೀದಿಯಲ್ಲಿ ನಡೆಯುತ್ತಿದ್ದಂತೆ ತಂಗಾಳಿ ಮೈ ಕೊರೆಯುತ್ತಿತ್ತು. ಸುಂದರ ಸೂಯರ್ಾಸ್ತವನ್ನು ಕಣ್ಣಲ್ಲಿ ತುಂಬಿಕೊಂಡು ಮರಳಿ ಬಸ್ ಹತ್ತಿದಾಗ ಮಲೆನಾಡು ಕೈ ಬೀಸಿ ಕರೆದ ಅನುಭವ. ಮರೆಯಲಾರದ ಮಾಲ್ಗುಡಿ ಮಂಜಿನ ಹೊದಿಕೆಯೊಳಗೆ ಮರೆಯಾಗುವ ತವಕದಲಿ ಇದ್ದಂತೆ ಕಂಡುಬರುತ್ತಿತ್ತು.

ಅನಾಥನಾದ ಲಾಲೆ..!

ಮಾಲ್ಗುಡಿ ಡೇಸ್ ಕಥಾಸರಣಿಯಲ್ಲಿ ಫೆಡ್ರಿಕ್ ಲಾಲೆ ಎಂಬ ಬ್ರಿಟಿಷ್ ಸವರ್ಾಧಿಕಾರಿಯೊಬ್ಬನ ಕಥೆಯೂ ಬರುತ್ತದೆ. ಧಾರಾವಾಹಿ ನಿಮರ್ಾಣದ ವೇಳೆ ದಿ. ಶಂಕರನಾಗ್ ಅವರು ಪ್ಯಾರಿಸ್ ಪ್ಲಾಸ್ಟರ್ನಿಂದ ನಿಮರ್ಿಸಲ್ಪಟ್ಟ ಫೆಡ್ರಿಕ್ ಲಾಲೆಯ ಆಳೆತ್ತರದ ಪ್ರತಿಮೆಯನ್ನು ನಿಮರ್ಿಸಿ ಅದನ್ನು ಮಾಲ್ಗುಡಿ ಅಥರ್ಾತ್ ಆಗುಂಬೆಯ ಸರ್ಕಲ್ನಲ್ಲಿ ನಿಲ್ಲಿಸುತ್ತಾರೆ. ಅಂದಿನಿಂದ ಸಮಾರು ಸಮಯ ಧಾರಾವಾಹಿ ತಂಡ ಊರನ್ನು ತೊರೆದು ಹೋದ ಬಳಿಕವೂ ಈ ರಸ್ತೆ ಲಾಲೆ ಬೀದಿ ಎಂದೇ ಕರೆಸಿಕೊಂಡಿದ್ದೂ ಇದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಆಗುಂಬೆ ಗ್ರಾ,ಪಂ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಾಲೆ ಪ್ರತಿಮೆಯನ್ನು ಇಲ್ಲಿಂದ ತೆಗೆಸುವ ನಿಧರ್ಾರ ಕೈಗೊಂಡಿತು. ಅಲ್ಲಿಂದ ಸ್ಥಳೀಯ ಎಸ್ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಸ್ವಲ್ಪ ಸಮಯ ನಿಂತಿದ್ದ ಲಾಲೆ ಪ್ರತಿಮೆ ಅಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿದ್ದನ್ನೂ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಂದಲೂ ಎತ್ತಂಗಡಿಯಾದ ಪ್ರತಿಮೆ ಶಾಲೆಯ ಹಿಂದಿನ ಮರದ ಬುಡದಲ್ಲಿ ಆಶ್ರಯ ಪಡೆದಿದೆ. ಕೈ, ಕಾಲು ಮುರಿದು ಜೀಣರ್ಾವಸ್ಥೆಯನ್ನು ತಲುಪಿರುವ ಬ್ರಿಟಿಷ್ ಸವರ್ಾಧಿಕಾರಿ ಫೆಡ್ರಿಕ್ ಲಾಲೆ ಪ್ರತಿಮೆ ಅನಾಥವಾಗಿದ್ದು, ಮಾನವನ ದುರಾಸೆ, ಸರ್ವಕ್ಕೂ ತಾನೇ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಕಂಡು ನಕ್ಕಂತೆ ಭಾಸವಾಗುತ್ತದೆ.

ಆರ್.ಕೆ.ನಾರಾಯಣ್ ಅಂದಂತೆ...

ಸಣ್ಣಕತೆಗಳ ಸಂಗ್ರಹದ ಪುಸ್ತಕಕ್ಕೆ `ಮಾಲ್ಗುಡಿ ಡೇಸ್' ಎಂಬ ಹೆಸರಿಟ್ಟುದರ ಬಗ್ಗೆ ಕತರ್ೃ ಆರ್.ಕೆ.ನಾರಾಯಣ್ ಹೀಗೆ ಹೇಳುತ್ತಾರೆ. ಕತೆಗಳ ಸಂಗ್ರಹಕ್ಕೆ ಒಪ್ಪುವಂತಹ ಭೌಗೋಳಿಕ ಅಂತಸ್ತನ್ನು ತಂದುಕೊಡುವ ಉದ್ದೇಶದಿಂದ ಕಥಾಸಂಕಲನಕ್ಕೆ ಮಾಲ್ಗುಡಿ ಡೇಸ್ ಎಂಬ ಹೆಸರಿಟ್ಟಿದ್ದೇನೆ. ಆದರೆ ಎಲ್ಲಿದೆ ಮಾಲ್ಗುಡಿ ಎಂದು ಆಗಾಗ ನನ್ನನ್ನು ಜನರು ಕೇಳುತ್ತಾರೆ. ಅದು ಕೇವಲ ಕಾಲ್ಪನಕ ಮಾತ್ರ. ಅದು ಯಾವ ಭೌಗೋಳಿಕ ನಕ್ಷೆಯಲ್ಲೂ ಸಿಗಲಾರದು ಎಂಬುದನ್ನು ಮಾತ್ರ ಹೇಳಬಲ್ಲೆ. ಮಾಲ್ಗುಡಿ ದಕ್ಷಿಣ ಭಾರತದ ಸಣ್ಣ ಊರು ಎಂದು ನಾನು ಹೇಳಿದರೆ ಅದು ಅರ್ಧಸತ್ಯದ ಅಭಿವ್ಯಕ್ತಿಯಾಗುತ್ತದೆ. ಏಕೆಂದರೆ ಮಾಲ್ಗುಡಿಯಲ್ಲಿ ಬರುವ ಪಾತ್ರಗಳೆಲ್ಲ ಸಾರ್ವತ್ರಿಕ ಎಂದೇ ನನ್ನ ಅನಿಸಿಕೆ. ಮಾಲ್ಗುಡಿಯ ಪಾತ್ರಗಳನ್ನು ನಾನು ನ್ಯೂಯಾಕರ್್ ನಗರದಲ್ಲಿ ಸಹ ಕಂಡಕೊಳ್ಳಬಲ್ಲೆ. ಇತ್ತೀಚೆಗೆ ಲಂಡನ್ನಿನಲ್ಲಿ ಉತ್ಸಾಹಿ ನಿಮರ್ಾಪಕನೊಬ್ಬ ತಾನು ಒಂದು ಗಂಟೆಯ ಟಿವಿ ಕಾರ್ಯಕ್ರಮ ಮಾಡುವುದಾಗಿಯೂ, ತನ್ನನ್ನು ಮಾಲ್ಗುಡಿಗೆ ಕರೆದೊಯ್ದು ತೋರಿಸುವಿರಾ, ನಿಮ್ಮ ಕಾದಂಬರಿಯ ಪಾತ್ರಗಳನ್ನು ತನ್ನನ್ನು ಪರಿಚಯಿಸುತ್ತೀರಾ ಎಂಬುದಾಗಿ ಕೇಳಿದಾಗ ನಾನು ಒಂದು ಕ್ಷಣ ವಿಚಲಿತನಾದರೂ. ನಾನೀಗ ಒಂದು ಹೊಸ ಕಾದಂಬರಿ ರಚಿಸುವುದರಲ್ಲಿ ನಿರತನಾಗಿದ್ದೇನೆ ಎಂದೆ. ಇನ್ನೊಂದು ಮಾಲ್ಗುಡಿ ಕಾದಂಬರಿಯಾ ಎಂದಾತ ಕೇಳಿದ... ನಾನು ಹೌದು ಎಂದೆ. ಯಾವ ವಿಚಾರವಾಗಿ? ಆತ ಮರುಪ್ರಶ್ನೆ ಎಸೆದ, ಮಾನವ ಆತ್ಮವನ್ನು ಪಡೆದಿರುವ ಹುಲಿಯ ಬಗ್ಗೆ ಎಂದೆ. ಆತ, ಆಹಾ ಒಳ್ಳೇ ಕುತೂಹಲಕಾರಿಯಾಗಿದೆ, ಹಾಗಾದರೆ ನಾನು ಕಾಯುತ್ತೇನೆ, ನಾನು ತಯಾರಿಸಲಿರುವ ಸಾಕ್ಷ್ಯಚಿತ್ರದಲ್ಲಿ ಹುಲಿಯನ್ನೂ ಸೇರಿಸಿದರೆ ಅಧ್ಭುತವಾಗಿರುತ್ತದೆ ಅಂದ.

ಮಾಲ್ಗುಡಿ ಎಲ್ಲಿದೆ?

ಮಾಲ್ಗುಡಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿ, ದೊಡ್ಡಮನೆಯನ್ನು ಸಂದಶರ್ಿಸಲು ಬಯಸುವವರು ಮಂಗಳೂರಿನಿಂದ ಆಗುಂಬೆ-ಶಿವಮೊಗ್ಗ ಕಡೆ ಸಂಚರಿಸುವ ವೇಗದೂತ ಬಸ್ನಲ್ಲಿ ಸಂಚಾರ ಬೆಳೆಸಬಹುದು. ಆದರೆ ಇವುಗಳು ನಿಗದಿತ ಸಮಯದಲ್ಲಿ ಸಂಚರಿಸುವುದರಿಂದ ಮಂಗಳೂರಿನಿಂದ ಕಾರ್ಕಳ-ಹೆಬ್ರಿ ಮೂಲಕ ಆಗುಂಬೆಯನ್ನು ತಲುಪುವುದು ಸುಲಭ. ಜೂನ್ ಮೊದಲ ವಾರದಿಂದ ಅಕ್ಟೋಬರ್ ತಿಂಗಳವರೆಗೂ ಮಳೆಯ ಆರ್ಭಟ ಸಾಮಾನ್ಯವಾಗಿ ಹೆಚ್ಚೇ ಇರುವುದರಿಂದ ಆ ಬಳಿಕದ ಸಮಯ ಸಂಚಾರಕ್ಕೆ ಯೋಗ್ಯವಾದುದು. ಆಗುಂಬೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಚಾರಣಪ್ರಿಯರಿಗೆ ಇಲ್ಲೇ ಹತ್ತಿರದಲ್ಲಿರುವ ಆಗುಂಬೆಯ ದಟ್ಟಾರಣ್ಯದಲ್ಲಿ ಮರೆಯಾಗಿರುವ ಒನಕೆ ಅಬ್ಬಿ ಜಲಪಾತ ವಿಶಿಷ್ಟ ಅನುಭವ ನೀಡಬಲ್ಲುದು. ವಿಷಪೂರಿತ ಹಾವು, ಕಾಡುಪ್ರಾಣಿಗಳು ಹಾಗೂ ಇಂಬಳದ ಹಾವಳಿ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

Tuesday, January 11, 2011

ಅಪರಿಚಿತ ಸ್ನೇಹಿತರಿಗೆ...




ಸ್ನೇಹದ ಕಡಲಲ್ಲೀ... ನೆನಪಿನ ದೋಣಿಯಲೀ...

ಪಯಣಿಗ ನಾನಮ್ಮಾ...

ಪ್ರೀತಿಯ ತೀರವ ಸೇರುವುದೊಂದೇ ಬಾಳಿನ ಗುರಿಯಮ್ಮಾ...

ಈ ಸ್ನೇಹ, ಗೆಳೆತನ ಇದರ ಬಗ್ಗೆ ಎಲ್ರಿಗೂ ತಿಳಿದಿರುತ್ತೆ ಬಿಡಿ. ಹಾಗೇನೇ ಪ್ರೀತಿ, ಒಲುಮೆ ಇವನ್ನು ನಾವು ನಮ್ಮ ಲೈಫಲ್ಲಿ ಅನುಭವಿಸದೇ ಇದ್ರೂ, ಇದರ ಬಗ್ಗೆ ತಿಳಿದಿರ್ತೀವಿ, ಎಲ್ಲೋ ಒಂದು ಕಡೆ ಓದಿರ್ತೀವಿ. ಇದರ ಬಗ್ಗೆ ಎಷ್ಟು ತಿಳಿದ್ರೂ ಕೆಲವೊಮ್ಮೆ ನಾವು ನಮ್ಮ ಲೈಫಲ್ಲಿ ಸ್ನೇಹಕ್ಕೂ-ಪ್ರೀತಿಗೂ ನಡುವಿನ ವ್ಯತ್ಯಾಸಾನಾ ಗುತರ್ಿಸೋದ್ರಲ್ಲಿ ಎಡವಿರ್ತೀವಿ. ಸ್ನೇಹಕ್ಕೂ-ಪ್ರೀತಿಗೂ ಅಜಗಜಾಂತರ ವ್ಯತ್ಯಾಸವಿದ್ರೂ ಹೀಗೇಕಾಗುತ್ತೆ ಅಂತ ತಿಳಿಯಲ್ಲ. ಇದು ಸ್ನೇಹಾನಾ..? ಇದು ಪ್ರೀತೀನಾ..? ಅಂತಾ ತಿಳೀದೇ ಮುಂದುವರಿದ್ರೆ ಮುಂದೆ ಕಷ್ಟಗಳ ಸರಮಾಲೆಯೇ ಎದುರಾಗೋ ಸಾಧ್ಯತೆಯಂತೂ ಇದ್ದೇ ಇರುತ್ತೆ.

ಘಟನೆ-1 ಮೊಬೈಲಿಗೆ ಯಾರ್ದೋ ಮಿಸ್ಕಾಲ್ ಬರುತ್ತೆ. ಹೊಸ ನಂಬರ್. ರಾತ್ರಿ ಹಗಲು ಆ ನಂಬರ್ನಂದ ಬಿಡುವಿಲ್ಲದೆ ಮಿಸ್ಡ್ ಕಾಲ್ಗಳು. ಯಾರಪ್ಪಾ... ಇವ್ರು ಅಂದ್ಕೊಂಡು ಅತ್ತ ಕಡೆ ಕಾಲ್ ಮಾಡಿದ್ರೆ ಅದು ಯಾವುದೋ ಹೆಣ್ಣಿನ ದನಿ. ಮಿಸ್ಡ್ಕಾಲ್ನಲ್ಲಿ ಶುರುವಾದ ಈ ಮೊಬೈಲ್ ಸ್ನೇಹ ಕೆಲವೇ ದಿನ ಕಳೆಯೋದ್ರೊಳಗೆ ಆಳವಾಗಿ ಬೇರೂರಿರುತ್ತೆ. ಅತ್ತ ಕಡೆಯ ಹೆಣ್ಣು-ಇತ್ತ ಕಡೆಯ ಗಂಡು ಇಬ್ಬರೂ ಸ್ನೇಹದ ಕಡಲಲ್ಲಿ ಮಿಂದು ರಾತ್ರಿ-ಹಗಲೆನ್ನದೆ ಏನೇನೋ ಮಾತಾಡ್ತಾರೆ. ಒಬ್ಬರಿಗೊಬ್ಬರ ಪರಿಚಯವೇ ಇಲ್ಲದಿದ್ರೂ ಸ್ನೇಹ ಗಾಢವಾಗುತ್ತಾ ಹೋಗುತ್ತೆ. ಕೊನೆಗೊಂದು ದಿನ ಆ ಘಳಿಗೆ ಬಂದೇ ಬರುತ್ತೆ. ಅವತ್ತು ಯಾರೋ ಒಬ್ರು ಸ್ನೇಹಾನಾ ಪ್ರೀತಿಯಾಗಿ ಪಡೆಯಲು ಹಾತೊರೆಯ್ತಾರೆ. ಆದ್ರೆ ಇಂತಹ ಸ್ನೇಹಿತರಲ್ಲಿ ಕೇವಲ ಮೋಜಿಗಾಗಿ ಅರೆ ಕ್ಷಣ ಮಾತ್ರ ಪ್ರೀತಿಸ್ತೀನಿ ಅನ್ನಬಹುದು. ಆದ್ರೆ ಅದೇ ಶಾಶ್ವತ ವಾಗಿರೋದಿಕ್ಕೆ ಸಾಧ್ಯಾನಾ? ಅಂತೂ ಇಂತೂ... ಪ್ರೀತಿ ಬಂತು, ಅಂತ ಹಾಡಿ ಕುಣಿದ್ರೆ ಆ ಪ್ರೀತಿ ಕೆಲವೇ ದಿನಗಳಲ್ಲಿ ಮರೆಯಾಗಿರುತ್ತೆ.

ಘಟನೆ-2: ಇದ್ದಕಿಂದ್ದಂತೆ ಒಬ್ಬಳು ಹುಡುಗಿಯ ಮೊಬೈಲಿಗೆ ಯಾವುದೋ ಒಂದು ಹೊಸ ನಂಬರಿನಿಂದ ಮೆಸೇಜ್ ಬರುತ್ತೆ. ಇದು ಮುಂದುವರಿದಾಗ ಹುಡುಗಿ ಮಾತಾಡ್ತಾಳೆ. ಆತನೂ ಮಾತಾಡ್ತಾನೆ. ಮುಂದೆ ಇವರಿಬ್ಬರ ಮೊಬೈಲಿಂದ ಬೇಕಾದಷ್ಟು ಮೆಸೇಜ್ಗಳು ರವಾನೆಯಾಗುತ್ತೆ. ಅಷ್ಟರಲ್ಲಿ ಅರವರಿಬ್ರೂ ಲವ್ವಲ್ಲಿ ಬಿದ್ದಿರ್ತಾರೆ. ಇಲ್ಲೂ ಅವರಿಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿರಲ್ಲ, ಎದುರಾಗಿ ಮಾತಾಡಿರಲ್ಲ. ಆದ್ರೂ ಅದು ಪ್ರೀತಿ ಅಂತ ತಿಳ್ಕೊಂಡು ಮುಂದುವರಿಯ್ತಾರೆ.

ಹೀಗೆ ಈ ಮೇಲಿನ ಎರಡು ಸ್ಯಾಂಪಲ್ಲಲ್ಲಿ ಪರಸ್ಪರ ಗುರುತು ಪರಿಚಯವಿಲ್ಲದ ಎರಡು ಜೀವಗಳು ಸ್ನೇಹಕ್ಕೆ ಸಿಕ್ಕಿ ಹಾಕ್ಕೊಳ್ಳುತ್ತೆ. ಇಲ್ಲಿ ಸಿಕ್ಕಿ ಹಾಕ್ಕಿಕೊಳ್ಳುವಾಗ `ಐ ಲವ್ ಯು' ಅನ್ನೋವಾಗ ಮುಂದೇನಾಗುತ್ತೆ ಅನ್ನೋದೇ ತಿಳಿದಿರಲ್ಲ. ಹಾಗಾದ್ರೆ ನೋಡದೇ ಇದ್ರೂ ಪ್ರೀತಿ ಹುಟ್ಟುತ್ತಾ..? ತುಂಬಾ ವಿಚಿತ್ರ ಅನ್ನಿಸುತ್ತೆ ಅಲ್ವಾ? ಇದು ವಿಚಿತ್ರವಾದರೂ ಸತ್ಯ. ಬಹಳ ವರ್ಷಗಳ ಹಿಂದೆ ಹಿಂದಿಯಲ್ಲಿ ಬಿಡುಗಡೆಗೊಂಡಿದ್ದ ಯಶಸ್ವಿ ಚಿತ್ರ `ಸಿಫರ್್ ತುಮ್' ಕನ್ನಡದಲ್ಲಿ `ಯಾರೇ ನೀನು ಚೆಲುವೆ' ಆಯಿತು. ಅದರ ಕಥಾವಸ್ತುವೂ ಇದೇ ಆಗಿತ್ತು. ಅಚಾನಕ್ಕಾಗಿ ಭೇಟಿಯಾಗುವ ಗಂಡು-ಹೆಣ್ಣು ಫೋನ್ ಮುಖಾಂತರ ಸ್ನೇಹಿತರಾಗಿ, ಪ್ರೀತಿಯ ಬಲೆಯಲ್ಲಿ ಬಿದ್ದು ಕೊನೆಗೆ ಆ ಪ್ರೀತಿಯನ್ನು ಪಡೆಯಲು ಪಡುವ ಕಷ್ಟವನ್ನು ನಿದರ್ೆಶಕರು ಸೊಗಸಾಗಿ ನರೂಪಿಸಿದ್ದಾರೆ. ಹೀಗಾಗಿ ಆ ಚಿತ್ರ ಶತದಿನೋತ್ಸವ ಕಂಡಿತು. ಈ ವಿಷಯ ಯಾಕೆ ಹೇಳಿದ್ದೆಂದರೆ, ನೋಡದೆ ಪ್ರೀತಿಸುವ ಕಥಾ ಹಂದರ ನಮಲ್ಲಿ ಅದೆಷ್ಟೋ ಬಂದು ಹೋಗಿದೆ. ಇದು ಪ್ರೀತಿಯಲ್ಲ ಅಂತ ಬುದ್ಧಿಯಿರೋರು ಹೇಳಬಹುದು. ಹದಿಹರೆಯದ ಮಾನಸಿಕ ಸಮಸ್ಯೆ ಅಂತನ್ನಲೂಬಹುದು, ಮನಸ್ಸಿನ ತುಮುಲ ಅಂತಂದ್ರೂ ಓ.ಕೆ. ಆದ್ರೂ ಇಲ್ಲೂ ಒಂದು ಅಪ್ಪಟ ಸ್ನೇಹವಿರುತ್ತೆ. ತಾಜಾತನದಿಂದ ನಳನಳಿಸೋ ಹೂವಿನ ತರಾ ಸ್ನೇಹದ ಸುಗಂಧ ಎಲ್ಲೆಡೆಗೂ ವ್ಯಾಪಿಸಿರುತ್ತೆ.

ನೋಡದೆ ಸ್ನೇಹ ಹುಟ್ಟುತ್ತೆ. ಅದನ್ನು ಹಾಗೇ ಬಿಟ್ಟು ಅದಕ್ಕೆ ನೀರೆರೆದರೆ ಅದು ಬೆಳೆದು ಪ್ರೀತಿಯಾಗುತ್ತೆ. ಆದ್ರೆ ಆ ಸ್ನೇಹವನ್ನು ಸರಿಯಾಗಿ ಗುತರ್ಿಸಿ, ಅಥರ್ೈಸಬೇಕಾದ್ದು ನಮ್ಮ ಕರ್ತವ್ಯ. ಕೆಲವ್ರು ಯಾವುದೋ ಒತ್ತಡದಲ್ಲಿ ಬಿದ್ದು ಪ್ರೀತಿಸ್ತಾರೆ. ಸ್ನೇಹಾನ ಪ್ರೀತಿಯೆಂದು ತಿಳಿದು ಮೋಸದ ಬಲೆಗೆ ಬೀಳ್ತಾರೆ. ಪ್ರೀತಿಸ್ತೀನಿ ಅಂತಂದು ಎಲ್ಲವನ್ನೂ ದೋಚಿ ಪರಾರಿಯಾಗೋರೂ ನಮ್ಮಲ್ಲಿ ಬೇಕಾದಷ್ಟು ಜನ ಇದ್ದಾರೆ. ಹೀಗಾಗಿ ಪ್ರೀತಿ ಹೆಸರಲ್ಲಿ ಇದಕ್ಕೆಲ್ಲಾ ಆಸ್ಪದ ಕೊಡಬಾರದು ತಾನೇ?

ಸ್ನೇಹಕ್ಕೆ ಯಾವುದೇ ಬೇಧವಿಲ್ಲ ನಿಜ. ಜಾತಿ-ಮತ ಬೇಧ ತೋರದೆ ಎಲ್ಲೆಲ್ಲೂ ತುಂಬಿರೋದು ಅಂತಂದ್ರೆ ಈ ಸ್ನೇಹ ಮಾತ್ರ. ನಿಜವಾದ ಸ್ನೇಹಕ್ಕೆ ಮುಖದರ್ಶನದ ಅಗತ್ಯವಿರಲ್ಲ. ಯಾರಿಗ್ಗೊತ್ತು, ನಾಳೆ ನಮ್ಮ ಮುಖದರ್ಶನವಾದ ಕೂಡಲೇ ಅವ್ರಿಗೆ ನಾವು ಬೇಡ ಅನ್ನಿಸೋಕ್ಕೂ ಸಾಧ್ಯವಿದೆ. ಆದ್ದರಿಂದ ಸ್ನೇಹ ಸ್ನೇಹವಾಗೇ ಇರಲಿ. ನಿರ್ಮಲ, ನಿಷ್ಕಲ್ಮಶ ಸ್ನೇಹಾನ ಪ್ರೀತಿಯೆಂದು ತಪ್ಪಾಗಿ ಭಾವಿಸಿದ್ರೆ ನಾಳೆ ನಾವು ಆ ಸ್ನೇಹಾನ ಕಳ್ಕೋಬಹುದು. ನೋಡದೆ ಹುಟ್ಟೋ ಸ್ನೇಹ ಚಿರಕಾಲದ ತನಕ ಶಾಶ್ವತವಾಗಿರಲಿ. ಅದಕ್ಕೆ ಪ್ರೀತಿಯ ಲೇಪನ ಬೇಡ ಅನ್ನುವುದು ನನ್ನ ಅಭಿಮತ. ಒಂದು ವೇಳೆ ಅದೇ ಪ್ರೀತಿಯಾಗಿ ನಮ್ಮ ಮುನ್ನಡೆಸುತ್ತದೆಯಾದ್ರೆ ಅದು ನಿಜಕ್ಕೂ ಸಂತಸದ ಮಾತೇ ಸರಿ. ಗುರುತು ಪರಿಚಯವಿಲ್ಲದೆ ಮಿಸ್ಡ್ ಕಾಲ್, ಮೆಸೇಜ್ ಮೂಲಕ ಪರಿಚಯವಾದ ಅದೆಷ್ಟೋ ಸ್ನೇಹಿತರಿಗೆ ಪ್ರೀತಿ ತುಂಬಿದ ನಮಸ್ಕಾರಗಳು.

ರಾ+ಜ+ಕೀ+ಯ



ರಾ-ರಾವಣ, ಜ-ಜರಾಸಂಧ, ಕೀ-ಕೀಚಕ, ಯ-ಯಮ. ಇವರೆಲ್ಲಾ ಒಟ್ಟು ಸೇರಿದ್ರೆ ನಮ್ಮ ಹಾಳುಗೆಟ್ಟ ರಾಜಕೀಯ ಅನ್ನೋದು ನನಗಿಂತ ನಿಮಗೇ ಚೆನ್ನಾಗಿ ತಿಳಿದಿರಬಹುದು. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ಬರೆಯೋ ಹಕೀಕತ್ತು ನನ್ಗೂ ಇರಲಿಲ್ಲ. ಆದ್ರೂ ಈಗಷ್ಟೇ ತಾ.ಪಂ, ಜಿ.ಪಂ. ಇಲೆಕ್ಷನ್ನು ಮುಗಿದಿದೆ, ಈಗಿನ ರಾಜಕೀಯ ಸ್ಥಿತಿಯಲ್ಲಿ ಯಾವಾಗ ಈ ಇಲೆಕ್ಷನ್ನು ಬರುತ್ತೆ ಅಂತ ಹೇಳೋಕೂ ಆಗಲ್ಲ. ಹೀಗಿರೋವಾಗ ಕೊಂಚನಾದ್ರೂ ನಿಮ್ಗೆ ಹೇಳದೇ ಇದ್ರೆ ಹೇಗೆ ಹೇಳಿ?

ಹಾಗಾದ್ರೆ ರಾಜಕೀಯ ವ್ಯವಸ್ಥೆಯನ್ನೋದು ನಮ್ಮ ಹೆದ್ದಾರಿಯಷ್ಟೂ ಹದಗೆಟ್ಟಿದೆಯಾ, ಅಂತ ನೀವು ನೀವೇ ಕೇಳ್ಕೊಳ್ಳಿ. ಆಗ ನಮಗೇ ತಿಳಿಯುತ್ತೆ, ನಾನ್ಯಾಕೆ ಈ ರೀತಿ ಬರೆದೆನೆಂದು. ಎಳೆ ಪ್ರಾಯದ ಮಗುವಿನಿಂದ ಹಿಡಿದು ಹಣ್ಣುಹಣ್ಣು ಮುದುಕರ ತನಕ ರಾಜಕೀಯ ಅನ್ನೋ ಹೆಸರೆತ್ತಿದ್ರೆ ಸಾಕು, ಸಿಡಿದು ಬೀಳೋ ಜನಾನೇ ನಮ್ಮಲ್ಲಿರೋವಾಗ ವ್ಯರ್ಥ ಆಲಾಪ ಯಾಕೆ ಬೇಕು? ಎಲೆಕ್ಷನ್ನು ಅಂದಮೇಲೆ ಅಲ್ಲಿ ಗಲಾಟೆ, ಪರ-ವಿರೋಧಿಗಳ ನಡುವಿನ ಕಚ್ಚಾಟ, ಕಂಟ್ರಿ ಸಾರಾಯಿಯ ಹಂಚುವಿಕೆ ಇವೆಲ್ಲಾ ಇದ್ದದ್ದೇ. ಎಲೆಕ್ಷನ್ನು ಅಂದ್ರೆ ನನ್ನ ಬಾಲ್ಯದ ನೆನಪುಗಳು ಈಗಲೂ ಮಸುಕು ಮಸುಕಾಗಿ ಗೋಚರಿಸುತ್ತೆ. ನಮ್ಮ ಊರಲ್ಲಿ ಚುನಾವಣೆ ಬಂತಂದ್ರೆ ಗೌಜಿಯೋ ಗೌಜಿ. ಊರಿಗೆ ಊರೇ ಉಲ್ಲಾಸದಿಂದ ಬೆಳಿಗ್ಗೆ ಬೇಗನೇ ಎದ್ದು ಕುಳಿತಿರುತ್ತೆ. ಹೆಚ್ಚಾಗಿ ಈ ಚುನಾವಣೆ ಅನ್ನೋದು ಶಾಲಾ ಮಕ್ಕಳ ರಜಾದಿನಗಳಲ್ಲೇ ಬರೋದ್ರಿಂದ ನಮಗೆಲ್ಲಾ ಏನೋ ಖುಷಿ. ಒಂಭತ್ತು ದಿನಗಳ ನವರಾತ್ರಿ ಉತ್ಸವ ಬಂದಾಗ ನಾನಾ ರೀತಿಯ ವೇಷ ನೋಡೋಕ್ಕೆ ಯಾವ ರೀತಿ ಕಾದಿರ್ತೀವೋ ಅದೇ ರೀತಿ ಚುನಾವಣೆಯೂ ಕೂಡಾ. ಡಿಫರೆನ್ಸ್ ಏನಂದ್ರೆ ನವರಾತ್ರಿಯ ವೇಷಗಳು ತಮ್ಮ ವೇಷವನ್ನು ಪ್ರದಶರ್ಿಸುತ್ತೆ, ಎಲೆಕ್ಷನ್ನು ಸಮಯ ಬರೋ ವೇಷಗಳು ತಮ್ಮ ಒಳಗೊಳಗೇ ನಾನಾ ರೀತಿಯ ವೇಷಗಳನ್ನು ಒಂದಾದ ಮೇಲೊಂದರಂತೆ ಧರಿಸಿರುತ್ತೆ. ಆದ್ರೆ ನಮ್ಮಗಳ ಕಣ್ಣಿಗೆ ಕಾಣೋದಿಲ್ಲ ಅಷ್ಟೆ.

ಚಿಕ್ಕಂದಿನಲ್ಲಿ ಚುನಾವಣೆ ಬಂದಾಗ ನಾನು ಮತ್ತು ನನ್ನ ಗ್ಯಾಂಗ್ಗೆ ಆನಂದವೋ ಆನಂದ. ನಮ್ಮೂರಿನ ಕುಲಗೆಟ್ಟ ರಸ್ತೆಯಲ್ಲಿ ಆಗೊಮ್ಮೆ, ಈಗೊಮ್ಮೆ ಓಡಾಡುವ ಬಿಳಿಯ ಬಣ್ಣದ ಅಂಬಾಸಿಡರ್ ಕಾರು, ಅದರೊಳಗಿಂದ ಕರಿಯ ಕನ್ನಡಕ, ಬಿಳಿ ಪಂಚೆ, ಜುಬ್ಬಾ ತೊಟ್ಟವರು ಕೆಳಗಿಳಿಯುತ್ತಲೇ ನಮ್ಮಗಳ ಉತ್ಸಾಹ ನೂರ್ಮಡಿಯಾಗುತ್ತಿತ್ತು. ಅವರ ಹಿಂದೆ ಮುಂದೆ ಅದೆಷ್ಟೋ ಬಿಳಿಯ ಅಂಗಿಗಳು ಇರುವೆಗಳಂತೆ ಮುತ್ತಿರುವುದನ್ನು ಕಂಡಾಗ ನಮ್ಗೂ ಗೌರವ ಭಾವ. ಅಷ್ಟರಲ್ಲಿ ಒಬ್ಬವೇದಿಕೆಯ ಮೇಲೇರಿ ಮೈಕಾದಲ್ಲಿ ಊರಿನ ಜನರನ್ನು `ಅಕ್ಕನಕುಲೇ... ಅಣ್ಣನಕುಲೇ...' ಎಂದು ಜೋರಾಗಿ ಅರಚಲು ತೊಡಗಿದರೆ ಎದೆ ನಡುಕ ಹುಟ್ಟುತ್ತಿತ್ತು. ಕೊನೆಗೆ ನಮ್ಮ ಊರಿನ ಓಟನ್ನು ಪಡೆಯಲು ಆ ಬಿಳಿಯ ಬಟ್ಟೆಯವರು ವೇದಿಕೆಯ ಮೇಲೆ ಹತ್ತು ಹಲವು ರೀತಿಯ ಆಶ್ವಾಸನೆಗಳನ್ನು ನೀಡುತ್ತಿದ್ದರು. ರಸ್ತೆ, ದಾರಿದೀಪ, ನಳ್ಳಿ ನೀರು, ಬೋರ್ವೆಲ್ ಹೀಗೆ ನಮ್ಮೆಲ್ಲರನ್ನೂ ನಂಬಿಸಿ ಬಿಡುತ್ತಿದ್ದರು. ನಮ್ಮ ಊರಿನವರಿಗೆ ಅವರು ಮನುಷ್ಯರೇ ಅಲ್ಲ, ದೇವರ ತದ್ರೂಪ ಎನ್ನುವ ಭಾವನೆ. ಹೀಗೆ ನಂಬಿಕೆ, ಭರವಸೆಯ ಜತೆಗೆ ಎಲೆಕ್ಷನ್ನು ಮುಗಿದು ಹೋಗುತ್ತಿತ್ತು. ತಿಂಗಳ ಕಾಲ ನಮ್ಮ ಊರಿನ ರಸ್ತೆಯ ತುಂಬಾ ರಾಡಿಯೆಬ್ಬಿಸಿ , ರಸ್ತೆಯ ಗುಂಡಿಯನ್ನು ಇನ್ನಷ್ಟು ಆಳವನ್ನಾಗಿಸಿದ್ದ ಬಿಳಿಯ ಮೋಟಾರು ವಾಹನಗಳು ಕಾಣದಾದಾಗ, ಬಿಳಿ ಅಂಗಿಗಳೆಲ್ಲಾ ಕಾಣದೆ ಮಾಯವಾದಾಗ ಸ್ವಲ್ಪ ದಿನ ಬೋರ್ ಹೊಡೆಸುತ್ತಿತ್ತು.(ನವರಾತ್ರಿ ಮುಗಿದ ನಂತರ ಆಗುತ್ತಲ್ಲಾ ಹಾಗೆ). ಆದ್ರೆ ನಂತರ ನಮ್ಮ ಊರಿನ ಪೆಕರಾಗಳ ಓಟಿನಿಂದ ಗೆದ್ದವರು ಇತ್ತ ತಲೆ ಹಾಕಿ ಮಲಗುವುದನ್ನೂ ಬಿಟ್ಟಾಗ ನಮ್ಮ ಊರಿನ ಹಿರಿ ಜೀವಗಳು ಹಿಡಿಶಾಪ ಹಾಕುವುದನ್ನು ನೋಡಿದ್ದೆ. ಆಗೆಲ್ಲಾ ಇದೊಂದು ನಾಟಕದಂತೆ ಕಾಣುತ್ತಿತ್ತು.

ಬೆಳೆಯುತ್ತಾ ರಾಜಕೀಯದ ಬಗೆಗಿನ ನನ್ನ ಆಸಕ್ತಿಗಳಿಗೆಲ್ಲಾ ಸರಿಯಾದ ಉತ್ತರ ಸಿಕ್ಕಿದಾಗ ಆಶ್ಚರ್ಯವೂ ಆಯಿತೆನ್ನಿ. ಆಮೇಲೆ ರಾಜಕೀಯ ಅಂದ್ರೆ ನನಗೆ ಈ ರೀತಿಯ ನಿಜಾರ್ಥ ಹೊಳೆದದ್ದು. ಈಗಂತೂ ನಮ್ಮ ರಾಜಕೀಯ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದನ್ನು ಕಣ್ಣೆದುರೇ ನೋಡುತ್ತೇವೆ. ಪಟಿಂಗನ ಕೊನೆಯ ಆಸರೆ ಎನ್ನುವಂತೆ ರಾಜಕೀಯ ಕೀಳಾಗಿ ಹೋಗುತ್ತಿದೆ. ಎಲೆಕ್ಷನ್ನು ಹೇಗಾದ್ರೂ ಆಗಲಿ, ಯಾರೇ ಬೇಕಾದ್ರೂ ಕುಣೀಲಿ, ಓಟು ಮಾತ್ರ ನೀಡೋದು ನಮ್ಮ ಹಕ್ಕು ಅಲ್ವೇನ್ರೀ..?

ಲಾಸ್ಟ್ ಲೈನ್: ನಮ್ಮ ಊರಿನ ಅದೇ ಹಿಂದಿನ ಮಣ್ಣಿನ ರಸ್ತೆ, ರಾತ್ರಿಯ ಕತ್ತಲು, ನಮ್ಮೂರಿನ ಹೆಣ್ಮಕ್ಕಳು ಸೊಂಟ ಬಳುಕಿಸ್ಕೊಂಡು, ಕಾಲು ಉಳುಕಿಸ್ಕೊಂಡು ದೂರದ ಕೆರೆ, ನದಿಯಿಂದ ನೀರು ತರುವುದನ್ನು ನೋಡಿ ಅಯ್ಯೋ ಪಾಪ ಅನಿಸುತ್ತೆ. ಆದ್ರೇನು ಮಾಡೋಣ, ಈ ಸಲನಾದ್ರೂ ಸರಿಯಾದ್ರೆ.... ಅನ್ನೋ ದೂರದ ಆಶೆಯಿಂದ ಜನ ಮತ್ತದೇ ತಪ್ಪು ಮಾಡ್ತಿದ್ದಾರೆ.