doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Saturday, August 3, 2013

ನಿತ್ಯ ನೂತನ... ಇರಲಿ ಗೆಳೆತನ



ಆಗಸ್ಟ್ ತಿಂಗಳ ಪ್ರಥಮ ಭಾನುವಾರವನ್ನು ಗೆಳೆತನದ ದಿನ ಎಂಬುದಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳ ದಿನದಂತೆ ಈ ದಿನವೂ ಪಾಶ್ಚಾತ್ಯರ ಬಳುವಳಿಯಾಗಿ ನಮಗೆ ಸಿಕ್ಕಿದ್ದರೂ ಸಮಾಜದ ಇತರ ವಿಶೇಷ ದಿನಗಳ ಮಧ್ಯೆ ಈ ದಿನವೂ ಹಾಸುಹೊಕ್ಕಾಗಿದೆ. `ನಮ್ಮ ಕಾಲದಲ್ಲಿ ಇಂಥದ್ದೆಲ್ಲ ದಿನಗಳ ಆಚರಣೆ ಇರ್ಲಿಲ್ಲ ಅಂತ ಹಿಂದಿನವ್ರು ಮೂಗು ಮುರಿಯ್ತಾರೆ. ಆದ್ರೇನು ಮಾಡೋದು, ಕಾಲೇಜ್ ಹೈಕಳಿಂದ ಹಿಡಿದು ಎಲ್ಕೆಜಿ ಪುಟಾಣಿಗಳ ತನಕ ಕಲರ್ ಕಲರ್ ಫ್ರೆಂಡ್ಶಿಪ್ ಬ್ಯಾಂಡ್ ಹಿಡ್ಕೊಂಡು `ಹ್ಯಾಪಿ ಫ್ರೆಂಡ್ಶಿಪ್ ಡೇ ಅಂದಾಗ ಅವರ ಖುಷಿಗಾಗಿ ಆದ್ರೂ `ಇರ್ಲಿ ಬಿಡಿ ಮಾರಾಯ್ರೇ ಅಂತ ಹೇಳ್ಬೇಕು ತಾನೇ? ಹಾಗೆ ನೋಡಿದ್ರೆ ಫ್ರೆಂಡ್ಶಿಪ್ ಅಥರ್ಾತ್ ಗೆಳೆತನಕ್ಕೂ ಒಂದು ನಿದರ್ಿಷ್ಟ ದಿನ ಅನ್ನೋದು ಬೇಕಾ ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡದೇ ಇರಲ್ಲ ಅಲ್ವಾ?

ಸ್ನೇಹ ನಿಜಕ್ಕೂ ನವಿರಾದ ಸಂಬಂಧ... ಆಂಗ್ಲಕವಿಯೊಬ್ಬ ಸ್ನೇಹಾನ ಈ ರೀತಿ ವಣರ್ಿಸಿದ್ದಾನೆ. `ಮಿಲಿಯಗಟ್ಟಲೆ ಸ್ನೇಹಿತರನ್ನು ಸಂಪಾದನೆ ಮಾಡೋದು ದೊಡ್ಡ ಪವಾಡವಲ್ಲ. ಆದರೆ ನಿಜವಾದ ಗೆಳೆಯನ್ನು ಸಂಪಾದನೆ ಮಾಡೋದು ಮಾತ್ರ ಕಷ್ಟ. ಮಿಲಿಯದಷ್ಟು ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬ ನಿಂತಿರುತ್ತಾನಲ್ಲಾ ಆತನೇ ನಿಜವಾದ ಸ್ನೇಹಿತ ಮತ್ತು ಅದೇ ನೈಜ ಸ್ನೇಹ ಹೀಗೆ ಸ್ನೇಹಕ್ಕೆ ನಾನಾ ಕವಿಗಳು ನಾನಾ ರೀತಿಯ ಭಾಷ್ಯ ಬರೆದಿದ್ದಾರೆ. ಸ್ನೇಹ ಯಾವಾಗ, ಎಲ್ಲಿ ಬೇಕಾದರೂ ಮೂಡಬಹುದು... ನೋಡನೋಡುತ್ತಿದ್ದಂತೆಯೇ ಬೆಳೆದು ಹೆಮ್ಮರವಾಗಬಹುದು. ಅದರೆ ಅದೇ ಸ್ನೇಹ ನಮ್ಮ ಬೆನ್ನಹಿಂದೆ ಎಲ್ಲಿಯತನಕ ಇರುತ್ತೆ ಅನ್ನೋದಷ್ಟೇ ಮುಖ್ಯ. ಇಂದು ಜೊತೆಯಲ್ಲಿ ಸ್ನೇಹಿತರ ದಿನ ಆಚರಿಸಿದವರು ಮುಂದಿನ ವರ್ಷವೂ ಜೊತೆಯಲ್ಲೇ ಇರುತ್ತಾರೆ ಎನ್ನಲಾಗದು. ಆಗ ಇನ್ನಾರೋ ಆ ಜಾಗದಲ್ಲಿ ಇರಬಹುದು. ಯಾಕೆಂದ್ರೆ ನಮ್ಮ ಮನಸ್ಸೇ ಮರ್ಕಟನ ಹಾಗೆ... ಕೆಲವೊಮ್ಮೆ ಯಾರೋ... ಯಾಕೋ... ಇಷ್ಟವಾಗ್ತಾರೆ. ಅವರೇ ನಮ್ಮ ಬೆಸ್ಟ್ ಫ್ರೆಂಡ್ ಅಂತ ತಿಳಿತೀವಿ. ಅಂಥವ್ರ ಜೊತೆ ಎಲ್ಲಾನೂ ಶೇರ್ ಮಾಡ್ಕೋತೀವಿ. ಆದರೆ ಅವರು ಮುಂದೊಂದು ದಿನ ಕಾರಣ ಹೇಳದೆ ಕೈಕೊಟ್ಟುಬಿಡುತ್ತಾರೆ. ಆಗ ಅದೆಷ್ಟೋ ನೋವು, ಅವಮಾನ ಅನುಭವಿಸೋದಿಲ್ಲ ಹೇಳಿ...

ಸಂಶೋಧನೆಗಳ ಪ್ರಕಾರ ಸ್ನೇಹ ಬೆಳೆಸೋದ್ರಲ್ಲಿ ಹುಡುಗರಿಗಿಂತ ಹುಡುಗೀರೇ ಮುಂದು ಅಂತ ಹೇಳಲಾಗುತ್ತೆ. ಹುಡುಗೀರು ಸಾಮಾನ್ಯವಾಗಿ ಬೇಗನೆ ಕೈಕೊಡುವವರು ಎಂದು ಅವಿವೇಕಿಗಳು ಹೇಳಿದರೂ ಸ್ನೇಹವನ್ನು ಜತನವಾಗಿ ಕಾಪಾಡೋದ್ರಲ್ಲಿ ಹುಡುಗೀರೇ ಮುಂದು ಅಂತಾನೂ ಹೇಳ್ತಾರೆ. ಸಾಮಾನ್ಯವಾಗಿ ಗಂಡು-ಗಂಡಿನ ಮಧ್ಯೆ ಇರೋ ಸ್ನೇಹಕ್ಕಿಂತ ಹೆಣ್ಣು-ಹೆಣ್ಣಿನ ನಡುವಿನ ಸ್ನೇಹ ತುಂಬಾನೇ ಗಟ್ಟಿಯಾಗಿರುತ್ತೆ. ಹುಡುಗಿಯರು ಅಭದ್ರತೆಯ ವಾತಾವರಣದಲ್ಲಿ ಎಂದೂ ಸ್ನೇಹ ಮಾಡುವುದಿಲ್ಲ. ಒಂದು ವೇಳೆ ಸ್ನೇಹಕ್ಕೆ ಭದ್ರ ಬುನಾದಿ ಅನ್ನೋದು ಇಲ್ಲ ಅಂತಾದ್ರೆ ಆ ಸ್ನೇಹಾನಾ ಮುರಿಯೋದ್ರಲ್ಲೂ ಹುಡುಗೀರು ಹಿಂದೆ-ಮುಂದೆ ನೋಡಲ್ಲ.

ಅದೇ ಹುಡುಗರ ವಿಚಾರಕ್ಕೆ ಬರೋದಾದ್ರೆ, ಫ್ರೆಂಡ್ಸ್ ಆಗೋರ ಸಂಖ್ಯೆಯೂ ಜಾಸ್ತಿ, ಮರೆಯುವುದೂ ಜಾಸ್ತಿ. ಕೆಲವೊಮ್ಮೆ ಒಂದೇ ಕ್ಲಾಸ್ನಲ್ಲಿ ಜತೆಯಲ್ಲೇ ಕುಳಿತು ಮೇಸ್ಟ್ರನ್ನ ಗೋಳುಹೊಯ್ತಾ ಇದ್ದ ಆಪ್ತಮಿತ್ರನನ್ನೇ ಮರೆಯ್ತೀವಿ. ಆತ ಎಂದಾದರೊಂದು ದಿನ ಎದುರಿಗೆ ಸಿಕ್ಕು, `ಎಂಥ ಮಾರಾಯಾ ನೆನಪಿಲ್ವಾ... ಅಂದ್ರೆ ನೆನಪು ಮಾಡ್ಕೊಂಡು ನಾಲಗೆ ಕಚ್ಚುವ ಸರದಿ ನಮ್ಮದಾಗುತ್ತೆ. ಆದ್ರೆ ಹುಡುಗೀರು ಹಾಗಲ್ಲ, ಮದುವೆಯಾಗಿ, ಮಕ್ಕಳಾಗಿ, ಮುದುಕಿಯರಾದ್ರೂ ಅವಳು-ನಾನೂ ಒಂದೇ ಕ್ಲಾಸ್, ಒಂದೇ ಪ್ರಾಯ ಎಂದು ಮೊಮ್ಮಕ್ಕಳ ಎದುರಾದರೂ ಆಡ್ಕೋತಾ ಇರ್ತಾರೆ. ಒಂದುಕ್ಷಣ ನಮ್ಮ ಸುತ್ತ ಗೆಳೆತನ, ಗೆಳೆಯ-ಗೆಳತಿಯರೇ ಇಲ್ಲ... ಏಕಾಂಗಿ ಎಂಬ ಕಲ್ಪನೆಯನ್ನು ಮಾಡಿನೋಡಿ... ಆಗ ಗೊತ್ತಾಗತ್ತೆ ಗೆಳೆತನದ  ನಿಜವಾದ ವ್ಯಾಲ್ಯೂ.

ಈಗಂತೂ ಕಾಲ ತುಂಬಾನೇ ಬದಲಾಗಿದೆ. ಸಾಮಾಜಿಕ ತಾಣಗಳು ಗೆಳೆತನ ಸಂಪಾದಿಸಲು ಸಾಕಷ್ಟು ದಾರಿಯನ್ನು ಮಾಡಿಕೊಟ್ಟಿವೆ. ನಾನು ಶಾಲೆಗೆ ಹೋಗ್ತಾ ಇದ್ದಾಗ `ಮಂಗಳ ವಾರಪತ್ರಿಕೆ ಗೆಳೆತನ ಸಂಪಾದಿಸಲು ಅವಕಾಶ ಮಾಡಿಕೊಟ್ಟಿತ್ತು. ಒಂದು ಚಿಕ್ಕ ಫೊಟೋ, ಚಿಕ್ಕ ಡೀಟೈಲ್ಸ್, ಹವ್ಯಾಸ, ಅಭಿರುಚಿಯ ಜೊತೆ ವಿಳಾಸ ಇರುತ್ತಿತ್ತು. ಆಗೇನಿದ್ದರೂ ಪತ್ರದ ಮೂಲಕ ಫ್ರೆಂಡ್ಶಿಪ್ ಆಗುತ್ತಿತ್ತು. ಇಲ್ಲಿ ಗಂಡು-ಹೆಣ್ಣು ಸ್ನೇಹಿತರಾಗಿ, ಮದುವೆಯಾಗಿ ಜೊತೆಯಾಗಿ ಬಾಳಿದ ಉದಾಹರಣೆ ಕೂಡಾ ಇದೆ. ಆದರೆ ಇಂದು ಕಾಲ ಬದಲಾಗಿದೆ ಜೊತೆಗೆ ನಾವೂ ಬದಲಾಗಿದ್ದೇವೆ. ಲೆಟರ್ ಬರೆಯೋಕೆ ಟೈಂ ಇಲ್ಲ, ಫೋನ್ ಮಾಡೋಕೆ ಕರೆದರಗಳು ವಿಪರೀತ ಏರಿಕೆಯಾಗಿವೆ. ಹೀಗಾಗಿ ಜನರಿಗೆ ಅಂತಜರ್ಾಲ ತಾಣಗಳು ಕಡಿಮೆ ಖಚರ್ಿಗೆ ಲಾಭದಾಯಕ ಎಂಬಂತೆ ತೋರುತ್ತಿವೆ. ಅಕರ್ುಟ್, ಫೇಸ್ಬುಕ್, ಟ್ವಿಟರ್ ಖಾತೆ ತೆರೆದು ಅಲ್ಲಿರುವವರಿಗೆ ರಿಕ್ವೆಸ್ಟ್ ಕೊಟ್ರೆ ಆಯ್ತು. ಕೆಲವೇ ಕ್ಷಣಗಳಲ್ಲಿ ನೂರಾರು ಸ್ನೇಹಿತರು ನಮ್ಮ ಸುತ್ತಮುತ್ತ ಹುಟ್ಟಿಕೊಳ್ಳುತ್ತಾರೆ. ಆದರೆ ಇವರೆಲ್ಲ ನಮ್ಮ ಬೆಸ್ಟ್ ಫ್ರೆಂಡ್ಗಳಾ... ಖಂಡಿತಾ ಅಲ್ಲ. ಸಾಮಾಜಿಕ ತಾಣಗಳು ಇಂದು ಸ್ನೇಹವನ್ನು ಬಿಕರಿ ಮಾಡುವ ತಾಣಗಳಾಗುತ್ತಿವೆಯೇ ಹೊರತು ಒಳ್ಳೆಯ ಸ್ನೇಹಿತರನ್ನು ಸೃಷ್ಟಿಸುವ ತಾಣಗಳಾಗುತ್ತಿಲ್ಲ. 

ಏನೇ ಇರಲಿ, ಈ ದಿನದ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಸ್ನೇಹಿತರ ಕಳೆದ ಜೊತೆ ಅಮೂಲ್ಯ ದಿನಗಳನ್ನು ನೆನಪು ಮಾಡಿಕೊಳ್ಳೋಣ. ಮೇಸ್ಟ್ರ ಪಾಠದ ಮಧ್ಯೆ ಮಲಗದಿರಲಿ ಎಂದು ಹುಣಸೆಬೀಜ ತಂದುಕೊಡುತ್ತಿದ್ದ ಹೈಸ್ಕೂಲ್ ಗೆಳತಿ, ಅಕೌಂಟ್ಸ್ ನೋಟ್ಬುಕ್ ಮನೆಗೊಯ್ದು ಕಂಪ್ಲೀಟ್ ಮಾಡಿ ತರುತ್ತಿದ್ದ ಕಾಲೇಜ್ ಗೆಳತಿ, ಬುಗರಿಮರಕ್ಕೆ ಕಲ್ಲು ಹೊಡೆಯಲು ಜೊತೆಗೆ ಬರುತ್ತಿದ್ದ ಚಡ್ಡಿದೋಸ್ತ್, ಮೊಬೈಲ್ ನಾಟ್ ರೀಚೆಬಲ್ ಆಗಿದ್ದರೆ ನೆಟ್ವಕರ್್ ಸಿಕ್ಕ ತಕ್ಷಣ ಕರೆಮಾಡಿ `ನನ್ನನ್ನು ಬಿಟ್ಟು ಎಲ್ಲಿ ಹೋಗಿದ್ದೀಯಾ ಮಾರಾಯ ಎಂದು ಕೇಳುವ ಆಪ್ತಮಿತ್ರ, ಫೇಸ್ಬುಕ್ನ ಲೈಕ್, ಕಮೆಂಟ್ಸ್ ಫ್ರೆಂಡ್ಗಳು, ನಾನಾ ಕಾರಣಕ್ಕೆ ಮನಸ್ಸಿಗೆ ಹತ್ತಿರವಾದ ಗೆಳೆಯ-ಗೆಳತಿಯರು... ಹೀಗೆ ಎಲ್ಲರಿಗೂ ಈ ದಿನದ ಶುಭಾಶಯ...

ಸ್ನೇಹವೆಂದರೆ ಹರಿವ ಜಲಧಿ

ಮನದ ತುಮುಲ ದುಗುಡ ಮರೆಸಿ

ಹುರುಪು ತುಂಬುವ ಜೀವನದಿ

ಒರತೆ ಬತ್ತಿ ದಡಕೆ ಒತ್ತಿ

ಚಿಲುಮೆ ಮಾಯವಾದರೂ 

ನೋವ ಮರೆಸಿ ನಗಲು ಕಲಿಸಿ

ಮನದಿ ಹರುಷ ನೆಮ್ಮದಿ

No comments: