doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, October 4, 2011

ಸಾವು-ಬದುಕಿನ ನಡುವೆ...





ಬದುಕು ಮತ್ತು ಸಾವು ಎರಡೂ ತೀರಾ ಅನಿರೀಕ್ಷಿತವೇನೋ ನಿಜ. ಆದರೆ ಇವೆರಡರ ನಡುವಿನ ಅಂತರ ಮಾತ್ರ ತೀರಾ ಕಿರಿದು ಎನಿಸಿಬಿಡುತ್ತದೆ. ನಾವು ಸಾವಿನ ತನಕ ಹೇಗೋ ಬದುಕಿದ್ದು, ಬದುಕಿಗೊಂದು ಮೌಲ್ಯ ಕಂಡುಕೊಳ್ಳಬೇಕು ಎಂದುಕೊಂಡು ಹೋರಾಟ ನಡೆಸುತ್ತಿರುತ್ತೇವೆ. ಆದರೆ ನಮ್ಮ ಬದುಕನ್ನೇ ಸಾವು ಕಸಿಯಲು ಹೊರಟರೆ...?

ಬದುಕು ಸಾವಿನ ನಡುವೆ ಇರುವುದು ಒಂದು ನಿಟ್ಟುಸಿರು, ಆಕಳಿಕೆ ಇಲ್ಲವೇ ಒಂದು ಬಡಿತ ಅಷ್ಟೇ. ಸಾವಿನ ಅಂಚಿಗೆ ಬಂದು ನಿಂತು ಹಿಂತಿರುಗಿದರೆ ನಮ್ಮವರು ಯಾರೂ ಜತೆಗಿಲ್ಲವೆಂದುಕೊಂಡಾಗ ಆಗುವ ವೇದನೆ ಇದೆಯಲ್ಲಾ... ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ಸಾವಿನ ಅಂಚನ್ನು ತಲುಪಿಯೂ `ಇನ್ನೂ ನೀನು ಬದುಕಬೇಕು, ಮರಳಿ ಹೋಗು, ಎಂದು ಭಗವಂತ ಅಜ್ಞಾಪಿಸಿದ ಬಳಿಕ ಸಾವಿನ ಮನೆಯ ಕದತಟ್ಟಿ ವಾಪಸ್ ಆಗುವುದಿದೆಯಲ್ಲಾ... ಅದು ನಿಜಕ್ಕೂ ಅವಿಸ್ಮರಣೀಯ ಅನುಭವ. ಇದನ್ನು ನೀವು ಪುನರ್ಜನ್ಮ ಎಂದುಕೊಳ್ಳಿ... ಮರುಹುಟ್ಟು ಎಂದು ಕರೆಯಿರಿ... ಆದರೆ ಇಲ್ಲಿ ಹೇಳಹೊರಟಿರುವುದು ಯಾರದ್ದೋ ಕಥೆಯನ್ನಲ್ಲ. ಎರಡು ವರುಷಗಳ ಹಿಂದೆ `ಸತ್ತೇಹೋದೆ ಎಂದು ಅರೆಕ್ಷಣ ಕಣ್ಣುಮುಚ್ಚಿ ಕನಲಿದಾಗ ನನ್ನ ಕೊನೆಯಾಯಿತೆಂದೇ ಭಾವಿಸಿದ್ದೆ.. ಆದರೆ `ಆತನಿಗೆ ಅದು ಒಪ್ಪಿಗೆಯಾಗಲಿಲ್ಲ... ಮತ್ತೆ ಬದುಕಿಸಿದ...

ಗೆಳೆಯರೇ, ಸಾವಿನ ಮನೆಯ ಕದತಟ್ಟಿ ಪವಾಡವೆನ್ನುವಂತೆ ಬದುಕಿ ಬಂದವನ ಕೊನೆಯ ಕ್ಷಣದ ತುಡಿತ ಮಾತ್ರ ಇಲ್ಲಿದೆ. ಮಹಾನವಮಿಯ ಕೊನೆಯ ದಿನದಲ್ಲಿ ನನ್ನ ಜೀವನದಲ್ಲಿ ನಡೆದ ಈ ಘಟನೆ ಇಂದಿಗೂ ನವರಾತ್ರಿ ಬಂದಾಗಲೆಲ್ಲಾ ಕಾಡುತ್ತದೆ... ಈ ಬಗ್ಗೆ ಬರೆಯಬಾರದು ಎಂದು ಮನದ ದುಡುಡಗಳನ್ನು ತಹಬಂದಿಗೆ ತಂದು ಎರಡು ವರ್ಷ ಕಳೆದೆ... ಆದರೂ ಕೈಗಳು ನನ್ನ ಮಾತು ಕೇಳುತ್ತಿಲ್ಲ. ಕೀಲಿಮಣೆಯ ಮುಂದೆ ಕುಳಿತಾಗ ಕೈಗಳು ನನ್ನ ಅರಿವಿಗೆ ಬಾರದೆ ಮುನ್ನಡೆಯುತ್ತಿವೆ.

ಅಂದು ನವರಾತ್ರಿ ಹಬ್ಬದ ಎಂಟನೇ ದಿನ. ನಾಡಿನೆಲ್ಲೆಡೆ ಆಯುಧ ಪೂಜೆಯನ್ನು ಭಾರೀ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಪತ್ರಕರ್ತರಿಗೆ ಹಬ್ಬ-ಹರಿದಿನಗಳ ಆಚರಣೆ, ಸಡಗರ ಅದಾವುದೂ ಇರುವುದಿಲ್ಲ. ಅವರೊಂಥರಾ ಜೀವಚ್ಛವಗಳಿದ್ದಂತೆ. ಎಲ್ಲಿ, ಏನು ಬೇಕಾದರೂ ಆಗಲಿ, ಪತ್ರಕರ್ತನಿಗೆ ಮಾತ್ರ ಆತನ ಕೆಲಸ ಮುಗಿಯುವುದೇ ಇಲ್ಲ. ಹೀಗಿರುವಾಗ ಅಂದು ನಾನೂ ಎಂದಿನಂತೆ ಕೆಲಸಕ್ಕೆ ಹೋಗಿದ್ದೆ. ಮರುದಿನ ಪ್ರೆಸ್ ಮುಚ್ಚುವ ಕಾರಣ ಕೆಲಸದ ಒತ್ತಡವೂ ಹೆಚ್ಚು. ರಾತ್ರಿ ಹನ್ನೊಂದು ಗಂಟೆಯವರೆಗೆ ಆಫೀಸಿನಲ್ಲಿದ್ದು, ಮನೆಗೆ ಹೊರಟಿದ್ದೆ. ನನ್ನ ಬಸ್ ಸ್ಟಾಪ್ ತನಕ ಗೆಳೆಯನ ಬೈಕ್ನಲ್ಲಿ ಬಂದು ನನ್ನ ಹಳೇ ಮಾಡೆಲ್ ಮಾವರ್ೆಲ್ ಅನ್ನು ಅನ್ನು ಮಧ್ಯರಾತ್ರಿಯ ಸುಮಾರಿಗೆ ಎಚ್ಚರಿಸಿದ್ದೆ. ಅದೂ ನನ್ನ ಮಿತ್ರನೇ ಆಗಿಹೋಗಿದ್ದರಿಂದ ನನ್ನ ಒಂದೇ ತುಳಿತಕ್ಕೆ ಮೇಲೆದ್ದು ಹೊರಡಲು ತಯಾರಾಗಿತ್ತು. ಆದರೆ ಹೊರಟು ಕೆಲವೇ ನಿಮಿಷಗಳಲ್ಲಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯ ಕಲ್ಲಿನ ಕಂಬಕ್ಕೆ ಬಡಿದಿತ್ತು...

ಅಮ್ಮಾ... ಎನ್ನುವ ಚೀತ್ಕಾರಕ್ಕೆ ಸ್ಪಂದಿಸುವವರಾರೂ ಅಲ್ಲಿರಲಿಲ್ಲ. ಹನ್ನೆರಡು ಗಂಟೆಯ ಸ್ಮಶಾನ ನೀರವತೆಯಲ್ಲಿ ರಸ್ತೆಯಲ್ಲಿ ಎಲ್ಲರೂ ಇರಬೇಕು ಎಂದು ಊಹಿಸುವುದೂ ವಿಡಂಬನೆಯಾಗುತ್ತದೆ. ಕಣ್ಣಿಗೆ ಸಾವಿರ ನಕ್ಷತ್ರ ಹೊಳೆದಂತೆ, ಮುಖದ ಪೂತರ್ಿ ಹೊರಬರುವ ರಕ್ತ. ಎಲ್ಲೆಡೆ ಕತ್ತಲು... ಕಗ್ಗತ್ತಲು...

ಹೌದು... ನನಗೆ ಈಗಲೂ ಅಸ್ಪಷ್ಟ ನೆನಪಿದೆ. ನಾನು ಶರೀರದ ಇದ್ದ ಬಲವನ್ನೆಲ್ಲಾ ಪ್ರಯೋಗಿಸಿ ಮೇಲೇಳಬೇಕು ಎಂದು ಸಾವಿರ ಬಾರಿ ಮುಂದಾಗಿದ್ದೆ. ಆದರೆ ತಲೆ, ಹಣೆ, ಬಾಯಿ ಒಡೆದು ರಕ್ತ ಕಾರಂಜಿಯಂತೆ ಚಿಮ್ಮುತ್ತಿರುವಾಗ ಕೈಗಳು ತನ್ನಿಂತಾನೇ ಬಲ ಕಳೆದುಕೊಳ್ಳುತ್ತಿತ್ತು. ಎದ್ದು ನಿಲ್ಲಲು ಯತ್ನಿಸುವಷ್ಟರಲ್ಲಿ ಕಣ್ಗಳಿಗೆ ಗಾಢಾಂಧಕಾರ... ತಲೆಗೆ ಬಿದ್ದ ಬಲವಾದ ಏಟು ನನಗೆ ಅಷ್ಟು ಸಾವಕಾಶ ನೀಡದೆ ಉಸಿರಿನ ಜೊತೆ ಚೆಲ್ಲಾಟವಾಡುತ್ತಿತ್ತು.. ಒಮ್ಮೆ ದೀರ್ಘವಾಗಿ ಉಸಿರು ತೆಗೆದುಕೊಂಡ ಅನುಭವ... ಹೌದು... ನಾನಿನ್ನು ಬದುಕುವುದಿಲ್ಲ ಎನ್ನುವುದು ಅರಿವಾಗಿತ್ತು. ಆ ಕ್ಷಣದಲ್ಲಿ ನನ್ನಮ್ಮ ನೆನಪಾದರು. ಅತ್ತೆನೋ, ಬಿಟ್ಟೆನೋ ಎನ್ನುವುದು ನನಗಿನ್ನೂ ತಿಳಿದಿಲ್ಲ. ಯಾಕೆಂದರೆ ಹರಿಯುವ ರಕ್ತದಲ್ಲಿ ನನ್ನ ಅಳುವನ್ನು ಗುರುತಿಸುವುದು ಸಾಧ್ಯವೂ ಆಗಿರಲಿಲ್ಲ. ಇನ್ನೂ ಯಾರ್ಯಾರೋ ನೆನಪಾದರು... ಏನೇನೋ ನೆನಪಾಯಿತು... ಆ ಕ್ಷಣದಲ್ಲೂ ನನ್ನ ದೇವರು ನೆನಪಾದ... ಇನ್ನೇನು ಸಾವು ನನ್ನ ತೀರಾ ಸಮೀಪ ಬಂದು ನಿಂತಿತ್ತು. `ಬದುಕಿದ್ದು ಸಾಕು, ನಡೆ ನನ್ನೊಂದಿಗೆ ಎಂದು ಬಾರಿ-ಬಾರಿ ಕೂಗಿ ಕರೆಯುತ್ತಿತ್ತು. ಬಳಿಕ ಮತ್ತೇನೂ ನೆನಪಿಲ್ಲ... ಸುತ್ತಲೂ ಕತ್ತಲು... ಕಗ್ಗತ್ತಲ ಗೋರಿಯೊಳಗೆ ಯಾರೋ ಕನಲಿದಂತೆ... ಯಾರೋ ಹೆಸರು ಹೇಳಿ ಕೂಗಿದಂತೆ... ಕೋಣ... ಹಗ್ಗ... ಎಲ್ಲವೂ ಅಸ್ಪಷ್ಟ... ಬದುಕಿನ ಜೊತೆ ಸೆಣಸಾಡಿ ಸಾವರಿಸಿಕೊಳ್ಳಲಾರದೆ ಕಣ್ಣುಮುಚ್ಚಿದ್ದೆ...

ಇದಾಗಿ ಗಂಟೆಯೇ ದಾಟಿರಬಹುದು. ಹತ್ತಿರದಲ್ಲಿ ಯಾರೋ ನನ್ನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದರು. ಇನ್ನೂ ಬದುಕಿದ್ದಾನೆ... ಎನ್ನುತ್ತಿದ್ದರು. ತಲೆಯ ಭಾಗದ ಏಟನ್ನು ಕಂಡು ಬೆದರಿದ ಅವರು ಮೇಲೆಬ್ಬಿಸಿದಾಗ ನನಗೆ ಎಲ್ಲಿಂದಲೋ ಮತ್ತೆ ಜೀವ ಬಂದಿತ್ತು. ನಾನೇ ಎದ್ದುನಿಂತು ಆಸ್ಪತ್ರೆಗೆ ಕರೆದೊಯ್ಯಿರಿ ಎಂದೆ... ಆದರೆ ರಸ್ತೆಯಲ್ಲಿ ಬಿದ್ದಾತ ಅಪಘಾತಕ್ಕೆ ಈಡಾಗಿರಲಿ, ಕೊಲೆಯತ್ನವೇ ಆಗಿರಲಿ... ಆಸ್ಪತ್ರೆಗೆ ಕರೆದೊಯ್ಯುವ ಧೈರ್ಯ ಯಾರಲ್ಲಿರುತ್ತೆ? ನನ್ನನ್ನು ರಿಕ್ಷಾದಲ್ಲಿ ಕರೆತಂದು ಮನೆಗೆ ಬಿಟ್ಟರು... ಮನೆಯಲ್ಲಿ ಮತ್ತದೇ ಬೊಬ್ಬೆ... ಸ್ಮಶಾನಸದೃಶ ವಾತಾವರಣ... ಆದರೂ ನನ್ನ ಮನಸ್ಸು ನೀನು ಬದುಕಬೇಕು ಎಂದು ಛಲ ಹುಟ್ಟಿಸುತ್ತಿತ್ತು. ಗೆಳೆಯನ ರಿಕ್ಷಾವನ್ನು ಕರೆದು ನಸುಕಿನ ಮೂರು ಗಂಟೆಗೆ ಆಸ್ಪತ್ರೆ ಸೇರಿದೆ ಗುಟುಕು ಜೀವ ಉಳಿಸಿಕೊಂಡು... ಆಸ್ಪತ್ರೆಗೆ ಇನ್ನೇನು ಸ್ವಲ್ಪ ದಾರಿ ಇದೆ ಎನ್ನುವಾಗಲೇ ದೇಹದ ರಕ್ತ ಖಾಲಿಯಾಗಿತ್ತು... ಎದೆ ಭಾರವಾಗಿ ಕಣ್ಣುಮುಚ್ಚಿದ್ದೆ... ಮತ್ತೆ ಪ್ರಜ್ಞೆ ಬಂದಾಗ ಬಿಳಿ ಬಟ್ಟೆ ಧರಿಸಿದವರು ಸುತ್ತಲೂ ಸೇರಿದ್ದರು. ಮುಖವನ್ನು ಉದ್ದನೆಯ ಸೂಜಿಯಿಂದ ಹೊಲಿಯುತ್ತಿದ್ದರು... ಮುಖದ ಪೂತರ್ಿ 32 ಹೊಲಿಗೆ ಹಾಕಿದ್ದರು.

ನನ್ನ ಮುಖ ನನಗೇ ನೋಡಲು ಭಯವಾಗುತ್ತಿತ್ತು. ಅಮ್ಮ, ಪಪ್ಪ, ಅಕ್ಕ, ತಂಗಿ, ಅಣ್ಣ, ಅತ್ತಿಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು. ಮತ್ತೆ ಮೊದಲಿನಂತಾಗುತ್ತೀಯಾ ಎಂದು ಹಾರೈಸಿದ್ದರು.

ನನ್ನ ಮುಖವನ್ನು ನೋಡುವುದಕ್ಕೂ ಅಸಹ್ಯವಾಗುತ್ತಿತ್ತು. ಭೀಕರವಾಗಿದ್ದ ಮುಖವನ್ನು ನೋಡಲು ಧೈರ್ಯ ಸಾಲುತ್ತಿರಲಿಲ್ಲ. ಆದರೂ ಆಸ್ಪತ್ರೆಯ ಶೌಚಾಲಯದಲ್ಲಿ ಕನ್ನಡಿ ಎದುರು ನಿಂತು ಮುಖವನ್ನು ನೋಡಿದ್ದೆ. ನನಗೆ ಅಳು ಬರಲಿಲ್ಲ... ವೈದ್ಯರು, ನಸರ್್ಗಳ `ಬೇಡ.. ಹೋಗಬೇಡ... ನಾವು ಜವಾಬ್ದಾರರಲ್ಲ.. ಅನ್ನೋ ಮಾತಿನ ನಡುವೆಯೂ ಒಂದೇ ದಿನ ಆಸ್ಪತ್ರೆ ವಾಸ ಪೂರೈಸಿ ಮನೆಗೆ ಹೊರಟೆ... ನಾಲ್ಕು ದಿನ ಇರು ಎಂದ ಮನೆಮಂದಿಗೆ ಇಲ್ಲಿ ಇರಿಸಿದರೆ ಸುಸೈಡ್ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದೆ. ಅಂತೂ-ಇಂತೂ ನನ್ನ ಯಾತ್ರೆ ಮನೆ ಸೇರಿತ್ತು.

ಹದಿನೈದು ದಿನಗಳ ಕಾಲ ದಿನಕ್ಕೆ ಮೂರು ಇಂಜೆಕ್ಷನ್... ಇಪ್ಪತ್ತಕ್ಕೂ ಹೆಚ್ಚು ಮಾತ್ರೆ... ಮೂರು ಬಾರಿ ವೈದ್ಯರ ಭೇಟಿ, ಜ್ಯೂಸ್, ಬಿಸ್ಕತ್ ಇವಿಷ್ಟೇ ನನಗೆ ಗೊತ್ತಿತ್ತು. ಆಗಾಗ ಕನ್ನಡಿ ನೋಡುತ್ತಾ ಕೂರುತ್ತಿದ್ದೆ... ಆಮೇಲೆ ಮುಖದ ಕೆಲವು ಭಾಗ ಬ್ಯಾಂಡೇಜ್ ಹಾಕಿ ಆಫೀಸ್ ಹೋದೆ. ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಮೊದಲಿನಂತಾದೆ...

ಕೆಲವರು ಏನೋ ಯೋಚಿಸಿದ್ದರು... ಆತ ಮತ್ತೆ ಮೊದಲಿನಂತಾಗುವುದಿಲ್ಲ ಎಂದರು... ಕೊಲೆಯತ್ನ ಎಂದು ಬೊಬ್ಬೆ ಹೊಡೆದರು. ಆದರೆ ಇದಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲಿಲ್ಲ. ಈ ದಿನ ಬಂದಾಗ ಮನದ ತುಂಬಾ ದುಗುಡ... ಬೇಸರ... ಖುಷಿಯಾಗಿರಲು ಬಯಸುತ್ತೇನೆ... ಆದರೆ ನೆನಪುಗಳು ಬೆನ್ನು ಬಿಡುವುದಿಲ್ಲ... ಸಿಹಿನೆನಪುಗಳ ನಡುವೆ ಇಂಥ ಕಹಿನೆನಪುಗಳು ಇದ್ದರೆ ಜೀವನ ಚೆಂದ ಅಂತ ನಂಬಿರೋನು ನಾನು...

ಬಹುಷ: ಸಾವಿನ ಕೊನೆಯ ಕ್ಷಣವನ್ನು ನನ್ನಷ್ಟು ಹಿತವಾಗಿ ಯಾರೂ ಅನುಭವಿಸಲಿಕ್ಕಿಲ್ಲ...!!

Saturday, September 17, 2011

ದೋಣಿಗಲ್ ಟು ಎಡಕುಮೇರಿ ರುದ್ರ ರಮಣೀಯ ಗ್ರೀನ್ ವೇ...
















ಮಾನ್ಸೂನ್ ಟ್ರೆಕ್ಕಿಂಗ್ ಅಥರ್ಾತ್ ಮುಂಗಾರಿನ ಚಾರಣ ಅಂದುಕೊಂಡಷ್ಟು ಸುಲಭವಲ್ಲ. ಎಡೆಬಿಡದೆ ಸುರಿಯೋ ಮಳೆ, ರಕ್ತವನ್ನು ಹೆಪ್ಪುಗಟ್ಟಿಸುವ ಚಳಿ, ಮಂಜು ಮುಸುಕಿ ಕ್ಷಣದಲ್ಲೇ ಕಾಣದಾಗುವ ದಾರಿ ಇವೆಲ್ಲ ಚಾರಣಿಗರಿಗೆ ಅಡಿಗಡಿಗೆ ಸವಾಲು ಕೊಡುವುದರ ಜತೆ ಹೊಸತಾದ ಅನುಭವವನ್ನು ನೀಡುತ್ತದೆ. ಮುಂಗಾರಿನ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಚಾರಣ ನಡೆಸೋದು ಆಹ್ಲಾದಕರವಾಗಿರುತ್ತೆ. ಚಾರಣಿಗರಿಗೆ ಮೊಗೆದಷ್ಟೂ ಮತ್ತೆ-ಮತ್ತೆ ಅದೇ ಆಕರ್ಷಣೆ, ವಿಸ್ಮಯಗಳ ತಾಣವಾಗಿರುವ ಪಶ್ಚಿಮಘಟ್ಟ ಸುರಿವ ಮಳೆಯ ನಡುವೆ ಸ್ವರ್ಗಸದೃಶವಾಗಿರುತ್ತೆ. ದಟ್ಟವಾದ ಅರಣ್ಯದ ನಡುವೆ ಬಂಧಿಯಾಗಿರುವ ಅದ್ಭುತ ಸೌಂದರ್ಯವನ್ನು ಮೈವೆತ್ತ ಅಸಂಖ್ಯ ಜಲಧಾರೆಗಳಿಗೆ ಮುಂಗಾರಿನ ವೇಳೆ ನಿತ್ಯ ಯೌವನ. ಬರೇ ಜಲಧಾರೆಯಲ್ಲ... ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಎಣಿಕೆಗೂ ಸಿಗದಷ್ಟು ಗಿರಿ-ಶಿಖರಗಳಿವೆ. ಆದರೆ ಇವೆಲ್ಲವುಗಳಿಗಿಂತ ಕೊಂಚ ಭಿನ್ನ ಅನುಭವ ಸಿಗಬೇಕಾದರೆ ನೀವೊಮ್ಮೆ ಸಕಲೇಶಪುರ ಎನ್ನುವ ಟಿಪ್ಪು ಸುಲ್ತಾನ ಆಳಿದ ನಾಡಿಗೆ ಕಾಲಿಡಬೇಕು. ಇಲ್ಲಿಂದ ಒಂದೆರಡು ಕಿ.ಮೀ. ದೂರದಲ್ಲಿರುವ ದೋಣಿಗಲ್ ಟು ಎಡಕುಮೇರಿ ಚಾರಣವಂತೂ... ಅಬ್ಬಾ... ನೆನಪು ಮಾಡ್ಕೊಂಡಷ್ಟು ಮಧುರ. ಪ್ರಶಾಂತವಾಗಿ ಮಲಗಿರುವಂತೆ ಕಾಣುವ ರೈಲ್ವೇ ಹಳಿಯ ಮೇಲೆ ಒಟ್ಟು 18 ಕಿ.ಮೀ. ಉದ್ದದ `ಗ್ರೀನ್ವೇ' ಚಾರಣ ಮನಸ್ಸಿಗೆ ಖುಷಿ ನೀಡುವುದರ ಜೊತೆ ಎಂಟೆದೆಯ ಬಂಟನಿಗೂ ರೋಚಕ, ರೋಮಾಂಚಕ ಅನುಭವವನ್ನು ನೀಡುತ್ತದೆ.

ಎಲ್ಲಿದೆ ಗ್ರೀನ್ ವೇ?

ಸಕಲೇಶಪುರ ಪ್ರಧಾನ ನಿಲ್ದಾಣದಿಂದ ಸುಮಾರು ಒಂದೂವರೆ ಕಿ.ಮಿ. ಹಿಂದೆ ಬಂದರೆ ದೋಣಿಗಲ್ ರೈಲ್ವೇ ನಿಲ್ದಾಣಕ್ಕೆ ದಾರಿ ಸಿಗುತ್ತದೆ. ಇಲ್ಲಿಂದ ಎಡಕುಮೇರಿ ನಿಲ್ದಾಣ ತಲುಪಬೇಕಾದರೆ ಮಧ್ಯೆ ಕಡವರ ಹಳ್ಳಿ ಎಂಬ ನಿಲ್ದಾಣ ಸಿಗುತ್ತದೆ. ಮಂಗಳೂರು-ಬೆಂಗ ಳೂರು ರೈಲ್ವೇ ಮಾರ್ಗದಲ್ಲಿ ಹಸಿರ ಹೊದಿಕೆ ಹೊದ್ದು ಮಲಗಿರುವಂತೆ ಕಾಣುವ ಎರಡು ನಿಲ್ದಾಣಗಳೇ ದೋಣಿ ಗಲ್ ಮತ್ತು ಎಡಕುಮೇರಿ. ಇವೇ ಚಾರಣಪ್ರಿಯರ ಸ್ವರ್ಗ ಎಂದರೂ ತಪ್ಪಾಗಲಾರದು. ಬೆಂಗಳೂರು, ಮೈಸೂರು, ಹಾಸನ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಚಾರಣಿಗರು ಇಲ್ಲಿ ಚಾರಣ ನಡೆಸಿ ಮನಸ್ಸಿಗೆ ಆನಂದ ಪಟ್ಟುಕೊಳ್ಳುತ್ತಾರೆ. ಎರಡೂ ನಿಲ್ದಾಣಗಳಲ್ಲಿ ರೈಲು ನಿಲ್ಲದಿದ್ದರೂ ರೈಲು ಪ್ರಯಾಣಿಕರ ಕುತೂಹಲ ಮಾತ್ರ ತಣಿಯುವುದಿಲ್ಲ. ಹಚ್ಚಹಸಿರ ಹಾದಿ, ಒಂದು ಬದಿಯಲ್ಲಿ ಎತ್ತರದ ಬೆಟ್ಟ, ಇನ್ನೊಂದು ಬದಿಯಲ್ಲಿ ಆಳವಾದ ಪ್ರಪಾತ, ದೂರದಿಂದ ಕಂಡುಬರುವ ಪಶ್ಚಿಮಘಟ್ಟದ ಕಣಿವೆ ಪ್ರದೇಶ, ಪರ್ವತವನ್ನು ಸೀಳಿಕೊಂಡು ಹರಿಯುವ ಕೆಂಪು ಹೊಳೆಯ ಸೊಬಗು... ತಿರುವು-ಮುರುವು ಹಳಿಯಲ್ಲಿ ಸಾಗುವ ರೈಲು ಕೆಲವೊಮ್ಮೆ ವೇಗ ತಗ್ಗಿಸಿದರೆ ಮತ್ತೊಮ್ಮೆ ವೇಗ ಪಡೆದು ಸಂಚರಿಸುವುದನ್ನು ನೋಡುವುದೇ ಚಂದ.

ದೋಣಿಗಲ್ ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ ಹಸಿರು ಹಾದಿ ಪ್ರಾರಂಭವಾಗುತ್ತದೆ. ಕಣ್ಣು ಹಾಯಿಸಿದಷ್ಟು ಕಾಣುವ ಹಸಿರುಟ್ಟ ಭೂರಮೆಯ ಸೊಬಗು, ನಡುವೆ ಕಣ್ಣು ಹಾಯಿಸಿದಷ್ಟೂ ದೀರ್ಘವಾಗುವ ರೈಲ್ವೇ ಹಳಿ ನಮ್ಮನ್ನು ಮುಂದೆ-ಮುಂದೆ ಹೆಜ್ಜೆ ಹಾಕುವಂತೆ ಪ್ರೇರೇಪಿಸುತ್ತದೆ. ಕಿ.ಮೀ. ದೂರ ಸಾಗಿದರೆ ಮೊದಲ ಸುರಂಗ ಮಾರ್ಗ ಧುತ್ತನೆ ಎದುರಾಗುತ್ತದೆ. ಇದೇನೂ ದೊಡ್ಡ ಸುರಂಗವಲ್ಲ, ಈ ಕಡೆಯಿಂದ ಆ ಕಡೆಗೆ ಬೆಳಕು ಹರಿಯುತ್ತದೆ. ಆದರೆ ಇದನ್ನು ದಾಟಿ ಮುಂದೆ ಸಾಗಿದಾಗ ಸಿಗುವ ಎರಡನೇ ಸುರಗವಿದೆಯಲ್ಲಾ... ಅದು ನಮ್ಮನ್ನು ಕ್ಷಣಮಾತ್ರ ಭೀತಿಗೊಡ್ಡುತ್ತದೆ. ಬೆಳಕಿನಿಂದ ಕತ್ತಲೆಗೆ ಒಮ್ಮೆಲೇ ಪ್ರವೇಶ ಪಡೆಯುವ ಕಾರಣ ಸುರಂಗದೊಳಗೆ ಕಣ್ಣು ಕತ್ತಲೆ ಬೀಳುವುದೊಂದೇ ಬಾಕಿ. ಆಕ್ಷಣದಲ್ಲಿ ಬ್ಯಾಗ್ನಲ್ಲಿ ಭದ್ರವಾಗಿಟ್ಟ ಟಾಚರ್್ ನೆನನಾಪುತ್ತದೆ. ಕೈಯಲ್ಲಿ ಟಾಚರ್್ ಬೆಳಕನ್ನು ಹಾಯಿಸಿ ಸುರಂಗದ ಮಧ್ಯಭಾಗಕ್ಕೆ ಹೋದಂತೆಲ್ಲ ಉಸಿರು ಕಟ್ಟಿಸುವ ಅನುಭವ, ಮರಗಟ್ಟಿಸುವ ಚಳಿ, ಮೇಲ್ಗಡೆಯಿಂದ ಬೀಳುವ ಹಿಮದಂತಿಹ ನೀರು, ಭೀತಿಯಿಂದ ಜೋರಾಗಿ ಬಡಿಯುವ ಎದೆ... ಹೀಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಸುರಂಗ ದಾಟಿದರೆ ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಂದು ಸುರಂಗ ನಮ್ಮನ್ನು ಸ್ವಾಗತಿಸುತ್ತದೆ. ಹೀಗೆ ಚಾರಣದುದ್ದಕ್ಕೂ ಅನೇಕ ಸುರಂಗಗಳು ನಮ್ಮನ್ನು ಪರೀಕ್ಷೆಗೆ ಒಡ್ಡುತ್ತವೆ. ಇಷ್ಟು ಮಾತ್ರವಲ್ಲದೆ ಚಾರಣದ ದಣಿವನ್ನು ನಿವಾರಿಸಲು ರೈಲ್ವೇ ಹಳಿಗೆ ತಾಗಿಕೊಂಡೇ ಅಸಂಖ್ಯ ಹಿರಿ-ಕಿರಿಯ ಜಲಪಾತಗಳು ವೇಗದಿಂದ ಧುಮ್ಮಿಕ್ಕುತ್ತಿರುತ್ತವೆ. ಇವುಗಳ ನೀರಿಗೆ ಮೈಯೊಡ್ಡಿ ನಿಂತರೆ ಎಂತಹ ದಣಿವೂ ಕ್ಷಣಮಾತ್ರದಲ್ಲೇ ಮಾಯ. ಬೆಟ್ಟದ ಮೇಲಿಂದ ಹರಿಯುವ ಜಲಧಾರೆಯನ್ನೇ ಕುಡಿದು ದಣಿವು ನಿವಾರಿಸಿ ಕೊಳ್ಳಬಹುದು.

ಇಲ್ಲಿಂದ ಸುಮಾರು ಆರು ಕಿ.ಮೀ. ದೂರದಲ್ಲಿ ಕಡವರಹಳ್ಳಿ ರೈಲ್ವೇ ನಿಲ್ದಾಣ ಸಿಗುತ್ತದೆ. ಇಲ್ಲಿ ಗೂಡ್ಸ್ ರೈಲುಗಳು ಮಾತ್ರ ನಿಲುಗಡೆಯಾಗುತ್ತದೆ, ಇನ್ನುಳಿದಂತೆ ಮಂಗಳೂರು-ಬೆಂಗಳೂರು ನಡುವೆ ಓಡುವ ರೈಲು ಇಲ್ಲಿ ನಿಲುಗಡೆ ಘೋಷಿಸದೆ ನಿಧಾನಕ್ಕೆ ಬಳುಕುತ್ತಾ ಮುಂದೆ ಸಾಗುತ್ತದೆ. ಹಾಸನ-ಮಂಗಳೂರು ರೈಲ್ವೇ ಹಳಿ ಪೂತರ್ಿಗೊಳ್ಳದ ಕಾರಣ ಇಲ್ಲಿ ರೈಲುಗಳ ಸಂಖ್ಯೆಯೂ ಹೆಚ್ಚಿಲ್ಲ, ಓಡಾಟವೂ ಮಿತಿಯಲ್ಲಿದೆ. ಇಲ್ಲಿನ ನಿಲ್ದಾಣದಲ್ಲಿ ಇರುವುದು ಇಬ್ಬರೇ. ಒಬ್ಬ ಸ್ಟೇಷನ್ ಮಾಸ್ಟರ್ ಮತ್ತೊಬ್ಬ ಅವನ ಸಹಾಯಕ. ಬೆಟ್ಟದ ಬದಿಯಲ್ಲಿರೋ ಸಣ್ಣ ನಿಲ್ದಾಣದ ಹತ್ರ ನಿಂತರೆ ದೂರದಲ್ಲಿ ಶಿರಾಡಿ ಘಾಟಿ ಮಸುಕಾಗಿ ಗೋಚರಿಸುತ್ತದೆ. ಇಲ್ಲಿಂದ ಮುಂದಕ್ಕೆ ಸಿಗುವುದೇ ಎಡಕುಮೇರಿ ನಿಲ್ದಾಣ... ಸುಬ್ರಹ್ಮಣ್ಯ ದಾರಿಯಾಗಿ ಎಡಕುಮೇರಿ ನಿಲ್ದಾಣಕ್ಕೆ ಬಂದರೆ ಅಲ್ಲಿಂದ ದೋಣಿಗಲ್ ಚಾರಣವನ್ನೂ ಮಾಡಬಹುದು. ರೈಲ್ವೇ ಹಳಿ, ಕಬ್ಬಿಣದ ರೈಲ್ವೇ ಮೇಲ್ಸೇತುವೆ, ಸುರಂಗಮಾರ್ಗ, ಆಳವಾದ ಪ್ರಪಾತ, ಕೆಂಪುಹೊಳೆಯ ವೈಯ್ಯಾರ, ಅಸಂಖ್ಯ ಜಲಧಾರೆ, ಪಶ್ಚಿಮಘಟ್ಟ ಪರ್ವತ ಶ್ರೇಣಿ... ಎಲ್ಲವೂ ಹಸಿರೋ ಹಸಿರು... ಪ್ರಕೃತಿಯ ಮಡಿಲಲ್ಲಿ ಧನ್ಯರಾಗುವ ಬಯಕೆ ನಿಮಗಿದ್ದರೆ ಸರ್ವಸಿದ್ಧತೆಯೊಂದಿಗೆ `ಗ್ರೀನ್ವೇ' ಚಾರಣ ಕೈಗೊಳ್ಳಿ. ಪ್ರಕೃತಿಯ ಮಡಿಲಲ್ಲಿ ಸಖತ್ ಎಂಜಾಯ್ ಮಾಡಿ...

Thursday, June 30, 2011

My Favourite song....

Sunday, May 15, 2011


ಎಷ್ಟು ಜನುಮವೆತ್ತಿದರೂ ನೀನೇ ಎನಗೆ ಗೆಳತಿ..

ಆಕೆ ನನ್ನ ಬಾಲ್ಯ ಸ್ನೇಹಿತೆಯಲ್ಲ... ಸ್ಕೂಲ್, ಕಾಲೇಜ್ ಮೇಟ್ ಮೊದಲೇ ಅಲ್ಲ... ಸ್ನೇಹಿತೆಯರು ಅಟೋಗ್ರಾಫ್ ಬುಕ್ನಲ್ಲಿ ಜೀವನದುದ್ದಕ್ಕೂ ನಾವು ಬೆಸ್ಟ್ ಫ್ರೆಂಡ್ಸ್, ಎದುರು ಸಿಕ್ಕಾಗ ನಕ್ಕು ಮಾತಾಡಿಸು, ಎಂಬಿತ್ಯಾದಿ ಸುಳ್ಳಿನ ಕಂತೆಯನ್ನು ಬರೆದು ಕೊನೆಗೆ ಮದುವೆಯ ಕಾಗದ ಕೊಡಲು ಮರೆಯದಿರು ಎಂದವರು ಎದುರು ಸಿಕ್ಕಾಗಲೂ ತೀರಾ ಅಪರಿಚಿತರಂತೆ ಬದಿಗೆ ಸರಿದಾಗ ಆಕಸ್ಮಿಕವಾಗಿ ಆದ ಗೆಳೆತನ ನಮ್ಮದು. ಕಳೆದ ಐದು ವರ್ಷಗಳಿಂದ ನಮ್ಮ ನಡುವೆ ಪ್ರತಿದಿನ ಮುಂಜಾನೆಯ ಸುಪ್ರಭಾತದಿಂದ ಹಿಡಿದು ರಾತ್ರಿ ದಿಂಬಿಗೆ ತಲೆಯಾನಿಸುವವರೆಗೆ ಮೆಸೇಜ್ ಹರಿದಾಡುತ್ತಿತ್ತೇ ವಿನ: ಬೇರೇನೂ ಇರಲಿಲ್ಲ. ನಮಗೆ ಪರಸ್ಪರ ಭೇಟಿಯಾಗಬೇಕಾದ ಅವಶ್ಯಕತೆಯೂ ಕಂಡಿರಲಿಲ್ಲ... ಯಾಕೆಂದರೆ ಸ್ನೇಹದಲ್ಲಿ ನಮ್ಮ ನಡುವೆ ಅಂತಸ್ತು, ಸೌಂದರ್ಯ ಯಾವುದೂ ಗಣನೆಗೆ ಸಿಕ್ಕಿರಲಿಲ್ಲ. ಆದರೆ ಈಗ ಆಕೆ ಒಮ್ಮಲೇ ಮದುವೆಯಾಗ್ತಿರೋ ಸುದ್ದಿ ಪ್ರಕಟಿಸಿದ್ದಾಳೆ. ಜತೆಗೆ ಕಾಡರ್್ ಕಳುಹಿಸುತ್ತೇನೆ, ಬನ್ನಿ ಅಂತಾನೂ ಹೇಳಿದ್ದಾಳೆ. ಇದು ನನಗೆ ಎಷ್ಟು ಖುಷಿ ತಂದಿದೆಯೋ ಅಷ್ಟೇ ನೋವು ಕೂಡಾ ಕಾಡುತ್ತಿದೆ. ಒಬ್ಬ ಒಳ್ಳೇ ಗೆಳತಿ ನನ್ನಿಂದ ದೂರವಾಗ್ತಾ ಇದ್ದಾಳೆ ಅಂತ... ಬಾಳಿನಲ್ಲಿ ಕೆಲವೊಮ್ಮೆ ಹಠಾತ್ತಾಗಿ ಸಿಗೋ ಇಂಥ ತಿರುವುಗಳು ಖುಷಿಗಿಂತ ಜಾಸ್ತಿ ನೋವನ್ನು ಕೊಡುತ್ತೆ ಅಲ್ವಾ..? ಬಹುಷ: ಇದು ಆಕೆಗೆ ನನ್ನ ಕೊನೆಯ ಸ್ನೇಹ ಪತ್ರ....

ಆಕೆ ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ...

ಆಕೆಯ ಮೊಗದಲ್ಲಿ ನಗೆಮಲ್ಲಿಗೆ ಬಾಡದಿರಲಿ....

ಗೆಳತಿ,

ಈ ಪತ್ರಾನಾ ಎಲ್ಲಿಂದ ಆರಂಭಿಸ್ಬೇಕು ಅಂತಾನೇ ತೋಚುತ್ತಿಲ್ಲ... ಕಾರಣ ಮನದ ಮೂಲೆಯಲ್ಲಿ ಮಡುಗಟ್ಟಿದ ಭಾವನೆಗಳು ಅದ್ಯಾಕೋ ತುಂಬಾನೇ ನೋವು ಕೊಡ್ತಾ ಇವೆ ಅನಿಸುತ್ತೆ... ನಮ್ಮ ನಡುವಿನ ಸ್ನೇಹ ಇಂದು-ನಿನ್ನೆ ಆರಂಭಗೊಂಡಿದ್ದಲ್ಲ. ಕಳೆದ ಕೆಲವು ವರ್ಷಗಳಿಂದ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುತ್ತಾ ಬೆಳೆದವರು ನಾವು. ನಿನ್ನ ಪರಿಚಯ ಆಕಸ್ಮಿಕವಾಗಿದ್ದರೂ ಈ ಇಷ್ಟೂ ವರ್ಷಗಳಲ್ಲಿ ನಮ್ಮೊಳಗಿನ ಯಾವುದೋ ಬಂಧವೊಂದು ನಮ್ಮಿಬ್ಬರನ್ನು ಬಿಟ್ಟೂ ಬಿಡದಂತೆ ಬಂಧಿಯನ್ನಾಗಿ ಮಾಡಿತ್ತು ಎಂದರೆ ಅತಿಶಯವಲ್ಲ. ಒಂದು ದಿನ ನನ್ನ ಮೆಸೇಜ್ ಬಾರದೇ ಹೋದರೆ ನೀನು, ನಿನ್ನ ಮೆಸೇಜ್ ಬಾರದೆ ಹೋದರೆ ನಾನು ಅದೆಷ್ಟು ಚಡಪಡಿಸಿದ್ದೆವು ಅನ್ನೋದು ನಮಗಿಂತ ಚೆನ್ನಾಗಿ ಇನ್ನಾರು ತಿಳಿಯೋಕ್ಕೆ ಸಾಧ್ಯ ಅಲ್ವಾ? ಏನೋ ನಿನ್ನ ಜತೆ ನನ್ನ ಮನಸ್ಸಿನ ಭಾವನೆಗಳನ್ನೆಲ್ಲಾ ಹೇಳ್ಕೊಳ್ಬೇಕು ಅಂತ ರೂಮಲ್ಲಿ ಒಬ್ಬನೇ ಕಂಪ್ಯೂಟರ್ ಎದುರು ಕೂತ್ಕೊಂಡ್ರೆ ಕೈ ನಾನೆಣಿಸಿದಷ್ಟು ವೇಗವಾಗಿ ಕೀಬೋಡರ್್ ಮೇಲೆ ಓಡುತ್ತಿಲ್ಲ... ಕಣ್ಣಲ್ಲಿ ನೀರು ಇನ್ನೇನು ಹೊರಬರಲು ಕಾಯುತ್ತಿದೆ... ಇದು ದು:ಖದ ಕಣ್ಣೀರು ಅಂತ ತಪ್ಪಾಗಿ ತಿಳ್ಕೋಬೇಡ ಪುಟ್ಟಿ... ಯಾಕೆ ಗೊತ್ತಾ? ನಾನು ಜೀವನದಲ್ಲಿ ಕಣ್ಣೀರು ಹಾಕೋದನ್ನು ತುಂಬಾನೇ ಕಡಿಮೆ ಮಾಡಿದ್ದೀನಿ. ಹಿಂದೆಲ್ಲಾ ನನ್ನ ಕಣ್ಣೀರಿಗೆ ಬೆಲೆ ಇಲ್ಲ ಅಂತ ನಾನ್ ತಿಳ್ಕೊಂಡಿದ್ರೆ ಇಂದು ನನ್ನ ಕಣ್ಣಾಲಿಗಳು ತೇವಗೊಂಡಿರುವುದಕ್ಕೆ ಕಾರಣ ಅಂತೂ ಇದ್ದೇ ಇದೆ.

ಏನೆಂದು ಬರೆಯಲಿ ಹೇಳು? ಇನ್ನು ಕೆಲವು ದಿನ ಕಳೆಯುವಷ್ಟರಲ್ಲಿ ನೀನು ಮದುವಣಗಿತ್ತಿಯಾಗಿ ಸಿಂಗರಿಸಿ ಹಸೆಮಣೆ ಏರಲು ತಯಾರಾಗಿ ನಿಂತಿರುತ್ತೀಯಾ... ನಿನಗ್ಗೊತ್ತಾ, ನೀನು ದಿಢೀರನೆ ಅಂತ ಮದುವೆ ಆಗ್ತಿರೋ ಸುದ್ದಿ ಕೇಳಿ ನಾನೆಷ್ಟು ಖುಷಿ ಪಟ್ಟೆ ಎಂದು. ಹೆಣ್ಣಿಗೆ ಕುತ್ತಿಗೆಯಲ್ಲಿ ತಾಳಿ ಬೀಳೋದಕ್ಕೆ ಎಂತೆಂಥ ಪಾಡು ಪಡೋದನ್ನು ನೋಡಿದ್ದೀನಿ. ಅದೂ ನನ್ನ ಗೆಳತೀನಾ ನೋಡಿದ ಹುಡ್ಗ ಒಂದೇ ಕಣ್ಣೋಟದಲ್ಲಿ ಮದುವೆ ಮಾಡ್ಕೊಡಿ ಅದೂ ತಿಂಗಳೊಳಗೆ ಅಂತಂದ್ರೆ ಖುಷಿ ಪಡದೇ ಇರೋಕ್ಕೆ ಸಾಧ್ಯಾನಾ ಹೇಳು? ಬಹುಷ: ನನ್ನಷ್ಟು ಯಾರೂ ಖುಷಿ ಪಟ್ಟಿರಲಿಕ್ಕಿಲ್ಲ. ಆದ್ರೆ ಒಂದು ಕ್ಷಣ ನನ್ನಷ್ಟಕ್ಕೆ ಕುಳಿತು ನಮ್ಮ ಇಷ್ಟು ವರ್ಷದ ಸ್ನೇಹದ ಬಗ್ಗೆ ಯೋಚಿಸ್ದೆ ನೊಡು. ಆಗ ಮಾತ್ರ ಕಣ್ಣಾಲಿಗಳು ತೇವಗೊಂಡಿತ್ತು. ಇಷ್ಟು ವರುಷ ನನ್ನ ಜೀವದ ಜೊತೆಯಾಗಿ ಪ್ರತಿದಿನ ನಸುಕಿನ ಸುಪ್ರಭಾತದಿಂದ ಹಿಡಿದು ರಾತ್ರಿ ನಿದ್ದೆಗೆ ಜಾರುವವರೆಗೆ ಜೊತೆಯಿದ್ದವಳು ನೀನು. ನಾನು ತುಂಬಾ ಮುಂಗೋಪಿ. ನನ್ನ ಮನಸ್ಸಿಗೆ ಯಾರಾದ್ರೂ ಬೇಸರ ಆಗೋ ರೀತಿ ವತರ್ಿಸಿದ್ರೆ ನನಗೆ ಬೇಗನೆ ಕೋಪ ಬರುತ್ತೆ. ಅಂತದ್ರಲ್ಲಿ ನನ್ನ ಮನಸ್ಸಿಗೆ ಇಷ್ಟು ವರ್ಷಗಳಲ್ಲಿ ಕೊಂಚಾನೂ ಬೇಸರ ಆಗದ ಹಾಗೆ ನಾನು ಕೋಪಿಸ್ಕೊಳ್ಳದ ಹಾಗೆ ನೋಡ್ಕೊಂಡ ನೀನು ನಿಜಕ್ಕೂ ಗ್ರೇಟ್..!

ನಮ್ಮ ಸ್ನೇಹ ಇಷ್ಟು ದೂರ ಸಾಗಿದ ರೀತಿ ಎಣಿಸ್ಕೊಂಡ್ರೆ ಈಗ ನಿಜಕ್ಕೂ ನಾನು ಕನಸು ಕಾಣ್ತಿದ್ದೀನಾ ಅನ್ನಿಸ್ತಿದೆ. ನನ್ಗೆ ಏನೇ ಬೇಸರ ಆದ್ರೂ, ಮನಸ್ಸಿಗೆ ಏನೇ ನೋವಾದ್ರೂ ನನ್ಗೆ ಮೊದಲು ನೆನಪಾಗ್ತಾ ಇದ್ದಿದ್ದು ನೀನು ಮಾತ್ರ. ನಿನ್ಗೆ ಮೆಸೇಜ್ ಮಾಡಿ ಎಲ್ಲಾನೂ ಹೇಳಿಬಿಟ್ರೆ ಆರಾಮವಾಗಿ ನಿದ್ರೆ ಮಾಡ್ತಿದ್ದೆ. ನಾನು ಬದುಕಿನಲ್ಲಿ ಭರವಸೆ ಕಳ್ಕೊಳ್ಳೋ ಸಮಯ ಬಂದಾಗ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದವಳು ನೀನು. ನಾನು ಏನೇ ಬರೆದ್ರೂ ಚೆನ್ನಾಗಿದೆ, ಕಂಟಿನ್ಯೂ ಮಾಡಿ ಅಂತ ದೂರದಿಂದಲೇ ಹಾರೈಸಿದವಳು ನೀನು. ಹೀಗಿರೋವಾಗ ಒಮ್ಮೆಲೇ ಮದುವೆ ಆಗಿ ಗಂಡನ ಹಿಂದೆ ನಡೆವಾಗ ಕೊಂಚನಾದ್ರೂ ನೋವಾಗದೇ ಇರುತ್ತಾ ಹೇಳು? ನಸುಕಿನಲ್ಲಿ ನಾನು ಎದ್ದಾಗಲಿಂದ ಹಿಡಿದು ರಾತ್ರಿ ದಿಂಬಿಗೆ ತಲೆಯಾನಿಸುವವರೆಗೆ ಇದ್ದ ಒಬ್ಬಳೇ ಗೆಳತಿ ನೀನು ಮಾತ್ರ.

ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದ್ದೀಯಾ... ಭಗವಂತ ಒಳ್ಳೇದು ಮಾಡ್ತಾನೆ ಅಂತ ಹಾರೈಸುತ್ತಿದ್ದ ನಾನು ನಿನ್ನ ಮದುವೆ ಸುದ್ದಿಯಿಂದ ನನ್ನ ಹಾರೈಕೆ ನಿಜ ಆಯ್ತು ಅಂತ ಖುಷಿ ಪಡ್ತಿದ್ದೀನಿ. ಆದ್ರೆ ಇನ್ನೊಂದೆಡೆ ನೋವು ನನ್ನ ಕಾಡ್ತಾ ಇದೆ. ಇಷ್ಟು ಬರಯೋವಷ್ಟರಲ್ಲಿ ಗಂಟಲುಬ್ಬಿ ಬರ್ತಾ ಇದೆ. ಮದುವೆಯಾದ್ಮೇಲೆ ನಮ್ಮ ಗೆಳೆತನ ಇರ್ಬಹುದು. ಅದು ನಕ್ಷತ್ರ, ಭೂಮಿ, ಸೂರ್ಯ, ಚಂದ್ರ ಇರೋವರೆಗೆ ಶಾಶ್ವತ ನಿಜ. ಆದ್ರೆ ಹಿಂದೆ ನಮ್ಮ ನಡುವೆ ಇದ್ದ ಸಲುಗೆ ಮುಂದೆ ಇರಲ್ಲ, ಇರಕೂಡದು ಅಂತಾನೂ ಗೊತ್ತು. ನನ್ನ ಬೆಸ್ಟ್ ಫ್ರೆಂಡ್ ಮದುವೆಯಾದ್ಳು ಅಂತ ನಿನ್ನ ಸ್ಥಾನ ತುಂಬಲು ಬೇರೆಯವರಿಗೆ ಎಂದೂ ಅವಕಾಶ ನೀಡಲ್ಲ ಇದಂತೂ ಸತ್ಯ. ಏನೇ ಇರಲಿ... ಮದುವೆಯ ಸಂಭ್ರಮದಲ್ಲಿ ಇರೋ ನಿನ್ಗೆ ಈ ಪತ್ರ ಬರೆದು ಕಣ್ಣಂಚು ತೇವಗೊಳಿಸಿದ್ದಕ್ಕೆ ಕ್ಷಮೆಯಿರಲಿ. ನನ್ಗೊತ್ತು... ಈ ಲೆಟರ್ ಒದಿದ ಕೂಡ್ಲೇ ನನ್ ಸೆಲ್ಗೆ ನಿನ್ ಕಾಲ್, ಮೆಸೇಜ್ ಬಂದೇ ಬರುತ್ತೆ ಅಂತ.. ಮತ್ತೆ `ನಾನಿದ್ದೀನಿ' ಅನ್ನೋ ಭರವಸೆಯ ಮಾತುಗಳು... `ಬೇಸರ ಮಾಡ್ಕೋಬೇಡ' ಅನ್ನೋ ಸಾಂತ್ವನ... ಹೌದು..! ನಾನೂ ಭಗವಂತನಲ್ಲಿ ಅದನ್ನೇ ಕೇಳ್ತಾ ಇದ್ದೀನಿ. ನನ್ನ ಮುದ್ದು ಗೆಳತಿ ಎಲ್ಲೇ ಇದ್ರೂ, ಹೇಗೇ ಇದ್ರೂ ಸುಖವಾಗಿರಲಿ. ನಾನು ಎಷ್ಟು ಜನುಮವೆತ್ತಿದರೂ ಆಕೆ ಎನ್ನ ಗೆಳತಿಯಾಗಿ ಪ್ರೋತ್ಸಾಹದ ಚಿಲುಮೆಯಾಗಿರಲಿ. ನನ್ನ ನೆನಪು ಸದಾ ಆಕೆಯ ಜೊತೆಗಿರಲಿ.

ಪತ್ರ ಓದಿ ಪ್ಲೀಸ್ ಅಳ್ಬೇಡ... ಖುಷಿಯಾಗಿರು. ಮದುವೆಯಾಗಿ ಹೋದೆ ಅಂತ ನಿನ್ನ ಮರೆವೆ ಎಂದುಕೊಳ್ಳದಿರು. ನನ್ನ ಉಸಿರು ಇರುವ ತನಕ ನಿನ್ನ ನೆನಪು ನನ್ನ ಮನಸ್ಸಿನಾಳದಲ್ಲಿ ಮನೆ ಮಾಡಿರುತ್ತೆ. ಅಲ್ಲಿ ಸ್ನೇಹದ ಸಿಂಚನ ಸದಾ ಪಸರಿಸಿರುತ್ತೆ. ಎಲ್ಲಿದ್ದರೂ ನಿನ್ನ ಮದುವೆ ದಿನ ಖಂಡಿತಾ ಬಂದೇ ಬರ್ತೀನಿ... ನಿನ್ನ ಬೆಸ್ಟ್ ಫ್ರೆಂಡ್ ಸ್ಥಾನ ಕೊಟ್ಟು ಇಷ್ಟು ವರ್ಷ ನನ್ನ ನೋವು-ನಲಿವಿನಲ್ಲಿ ಭಾಗಿಯಾದ ನಿನ್ಗೆ ನಾನೆಂದೂ ಚಿರಋಣಿ.... ಹಾಗೇ ಮದುವೆಯ ಮುಂಗಡ ಶುಭಾಶಯಗಳು ಅನ್ನುತ್ತಾ....

ಇಂತಿ.

ಚಂದ್ರಮ


Sunday, April 17, 2011

ಚಾರಣ... ಚಿತ್ರಪಟ..!

























ಮನ ತಣಿಸುವ ಆಗುಂಬೆ ಚಾರಣ...











ಮನ ತಣಿಸುವ ಆಗುಂಬೆ ಚಾರಣ...

ಆಗುಂಬೆ... ದಕ್ಷಿಣದ ಚಿರಾಪುಂಜಿ ಎಂದೇ ಕರೆಯ ಲ್ಪಡುವ ಆಗುಂಬೆಯನ್ನು ಮಲೆನಾಡಿನ ಮುಖಪುಟವೆಂದು ಬಣ್ಣಿಸುವುದುಂಟು. ಅವೆಷ್ಟೋ ಹಿರಿ-ಕಿರಿಯ ಬೆಟ್ಟಗುಡ್ಡ, ಬೆಳ್ಳನೆ ಹೊಳೆಯುವ ಅಸಂಖ್ಯ ತೊರೆಗಳನ್ನು ತನ್ನಲ್ಲಿ ಹುದುಗಿಸಿಟ್ಟ ಆಗುಂಬೆ ಎನ್ನುವ ಪುಟ್ಟದಾದ ಅಷ್ಟೇ ಸೊಗಸಾದ ಊರಿಗೆ ಕಣ್ಮನ ಸೆಳೆಯುವ ಪಶ್ಚಿಮ ಘಟ್ಟಗಳ ಸಾಲು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬಿರುಬಿಸಿಲು ಸುಡುವ ಬೇಸಗೆ ಕಾಲದಲ್ಲಿ ಆಗುಂಬೆಯ ಕಡೆಗೊಮ್ಮೆ ಹೋಗಿಬನ್ನಿ. ಇಲ್ಲಿರುವ ಜಲಪಾತಗಳು ಬೇಸಿಗೆಯಲ್ಲೂ ಬತ್ತದೆ ತಣ್ಣನೆ ಹರಿಯುತ್ತಿರುತ್ತದೆ. ಎತ್ತರದ ಗಿರಿಶೃಂಗಗಳು ಮುಂಜಾನೆಯ ವೇಳೆ ಮಂಜಿನ ಮುಸುಕಿನಲ್ಲಿ ಬಂಧಿಯಾಗಿ ಜೀವನೋತ್ಸಾಹವನ್ನು ತುಂಬುತ್ತದೆ.

ಮಲೆನಾಡಿನ ಸಾಲಿನಲ್ಲಿ ಬರುವ ಆಗುಂಬೆ ಎನ್ನುವ ಪುಟ್ಟ ಹಳ್ಳಿ ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ತೀರಾ ಸಮೀಪದಲ್ಲಿ ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ಇಲ್ಲಿನ ಸೊಬಗನ್ನು ಸವಿಯಲು ಬೆಟ್ಟ ಹತ್ತಿಳಿಯುವ ಚಾರಣ ಪ್ರಿಯರು, ಪ್ರವಾಸಿಗರು ಇಲ್ಲಿಂದ ತೆರಳುವಾಗ ಮಾತ್ರ ಸೂಯರ್ಾಸ್ತಮಾನದ ರಮ್ಯ ಸೊಬಗನ್ನು ಕಣ್ತುಂಬಿಕೊಳ್ಳದೆ ಹೋಗಲಾರರು. ಸೋಮೇಶ್ವರ ಎನ್ನುವ ಬೆಟ್ಟದ ಬದಿಯ ಹಳ್ಳಿಯನ್ನು ದಾಟಿ ಬಸ್ಸು ಆಗುಂಬೆ ಘಾಟಿಯನ್ನು ಹತ್ತಲು ಆರಂಭಿಸಿದರೆ ಬಸ್ನಲ್ಲಿ ಇರುವ ಎಂಥವರ ಎದೆಯೂ ನಡುಗದೇ ಇರದು. ಕಡಿದಾದ ತಿರುವಿನಲ್ಲಿ ಬಸ್ ಚಾಲಕ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಇನ್ನೊಂದು ಕೈಯನ್ನು ಹಾನರ್್ ಮೇಲಿಟ್ಟು ಬಸ್ಸನ್ನು ಓಡಿಸುವ ಪರಿಗೆ ಬೆರಗು ಹುಟ್ಟದಿರದು. ಇನ್ನೇನು ಘಾಟಿ ಮುಗಿಯಿತು ಅನ್ನುವಾಗ ಅಲ್ಲೇ ರಸ್ತೆಯ ಎಡಬದಿಯಲ್ಲಿ `ಸೂಯರ್ಾಸ್ತಮಾನ ವೀಕ್ಷಣಾ ಸ್ಥಳ' ಎಂಬ ಬೋಡರ್್ ಕಣ್ಣಿಗೆ ಕಾಣುತ್ತದೆ. ಕ್ಷಮಿಸಿ, ಇಲ್ಲಿ ಸಂಚರಿಸುವ ಹೆಚ್ಚಿನ ಬಸ್ಗಳು ಈ ಸ್ಥಳದಲ್ಲಿ ನಿಲುಗಡೆ ಕೊಡುವುದಿಲ್ಲ. ಇಲ್ಲಿ ಬರಲು ಮೇಲಿನ ಸ್ಟಾಪ್ನಲ್ಲಿ ಇಳಿದು ಹಿಂದಕ್ಕೆ ಬರಬೇಕು. ಆಗುಂಬೆ ಮುಖ್ಯಪೇಟೆಯಲ್ಲಿ ಇಳಿದರೆ ಇಲ್ಲಿಗೆ ಬರಲು ಬರೇ ಒಂದು ಕಿ,ಮೀ. ಅಷ್ಟೇ. ಸರಕಾರ ಪ್ರವಾ ಸಿಗರಿಗಾಗಿ ಕಟ್ಟಿದ ವೀಕ್ಷಣಾ ಸ್ಥಳದಲ್ಲಿ ನಿಂತರೆ ದೂರದಿಂದ ಹೆಬ್ರಿ-ಸೋಮೇಶ್ವರ ಟಾರು ರಸ್ತೆ ಬಳುಕಿ ಕುಲುಕಾಡುತ್ತಾ ಸಂಚ ರಿಸುವಂತೆ ತೋರುತ್ತದೆ. ಸೋಮೇಶ್ವರನ ಸನ್ನಿಧಿ, ಬಲಗಡೆ ವಿಶಾಲವಾದ ಪಶ್ಚಿಮ ಘಟ್ಟಗಳ ಸಾಲು ನಮ್ಮನ್ನು ಅದಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.

ಡಾ. ರಾಜ್ಕುಮಾರ್ ಅವರ ಆಕಸ್ಮಿಕ ಚಿತ್ರದ `ಆಗುಂಬೆಯಾ ಪ್ರೇಮ ಸಂಜೆಯಾ... ಮರೆಯಲಾರೆ..' ಈ ಹಾಡು ಪೂತರ್ಿ ಯಾಗಿ ಇಲ್ಲೇ ಚಿತ್ರೀಕರಣವಾಗಿದೆ ಎಂದು ಈಗಲೂ ನೆನಪಿಸಿ ಕೊಳ್ಳುತ್ತಾರೆ ಇಲ್ಲಿನವರು. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಇಂದು ಗುರುತಿಸಲ್ಪಟ್ಟಿರುವ ಆಗುಂಬೆಯ ಘಾಟಿಯಲ್ಲಿ ಪ್ರವಾಸಿ ಗರಿಗೆ ಸೂಯರ್ಾಸ್ತವನ್ನು ವೀಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಸರಕಾರ ಹಲವು ವರ್ಷಗಳ ಹಿಂದೆಯೇ ಮಾಡಿದೆ. ಇಲ್ಲಿನ ಸೂಯರ್ಾಸ್ತವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಇಂದಿಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ವಾರಾಂತ್ಯದ ದಿನಗಳಲ್ಲಂತೂ ಆಗುಂಬೆ ಎನ್ನುವ ಸ್ಥಳ ಪ್ರವಾಸಿಗರಿಂದ, ಚಾರಣಿಗರಿಂದ ಕಿಕ್ಕಿರಿದು ತುಂಬುತ್ತದೆ. ಜನರು ತಮಗಾಗಿ ಕಟ್ಟಿರುವ ವೀಕ್ಷಣಾ ಸ್ಥಳದಲ್ಲಿ ಗಂಡು-ಹೆಣ್ಣೆಂಬ ಬೇಧವಿಲ್ಲದೆ ನಿಂತು ಸೂಯರ್ಾಸ್ತ ದೃಶ್ಯವೈಭವವನ್ನು ಮನಸೋ ಇಚ್ಛೆ ಸವಿಯುತ್ತಾರೆ. ಎಲ್ಲರಿಗೂ ತಮ್ಮ ಮೊಬೈಲ್, ಕ್ಯಾಮೆ ರಾಗಳಲ್ಲಿ ಆಗಸದ ಅಂಚಿನಿಂದ ಜಾರಿ ಕಡಲಿಗೆ ಇಳಿಯು ತ್ತಿರುವ ನೇಸರನ ಬಂಧಿಸುವ ಆತುರ... ಹೊಳೆವ ಕೆಂಬಣ್ಣದ ಉಂಡೆಯಾಗಿ, ಬೆಳಕಿನ ಬಟ್ಟಲಾಗಿ, ತಟ್ಟೆಯಾಗಿ, ಚಮಚದಂತೆ ಗೋಚರಿಸಿ ಅಂತಿಮವಾಗಿ ಕಣ್ಣು ಪಿಳಿಪಿಳಿಬಿಟ್ಟು ನೋಡುತ್ತಿದ್ದಂತೆ ಕಡಲಿನಲ್ಲಿ ಜಾರಿ ಕ್ಷಣಮಾತ್ರದಲ್ಲಿ ಮರೆಯಾಗುವ ನೇಸರ ಅಲ್ಲಿ ನೆರೆದ ಅಸಂಖ್ಯ ಪ್ರವಸಿಗರಿಗೆ ನಿತ್ಯ ಮಧುರಾನುಭೂತಿಯನ್ನು ನೀಡುತ್ತಾನೆ. ನೇಸರ ಮರೆಯಾದಂತೆ ವಾಸ್ತವ ಲೋಕಕ್ಕೆ ಮರಳಿ ಸುತ್ತ ಕಣ್ಣು ಹಾಯಿಸಿದರೆ ಬೆಟ್ಟಗಳ ಸಾಲಿನಲ್ಲಿ ಕತ್ತಲೆ ತುಂಬುತ್ತದೆ. ಹಿತವಾದ ತಂಗಾಳಿ ಮೈಸೋಕುತ್ತಾ ಕತ್ತಲಾದುದನ್ನು ನೆನಪಿ ಸುತ್ತದೆ. ವಿಶ್ವದ ಪ್ರಸಿದ್ಧ ಸೂಯರ್ಾಸ್ತವನ್ನು ಸವಿದಿದ್ದೇವೆ ಎಂಬ ಖುಷಿಯಿಂದ ಬೆಟ್ಟ ಇಳಿಯುತ್ತಿದ್ದರೆ ಮನಸ್ಸಿಗಾಗುವ ಸಂತಸ ವಣರ್ಿಸಲಸದಳ.

ಕೂಲ್ ಕೂಲ್ ಚಾರಣ ಸ್ಪಾಟ್ಗಳು:

ಒನಕೆ ಅಬ್ಬಿ ಜಲಪಾತ: ಚಾರಣಪ್ರಿಯರಿಗೆ ಆಗುಂಬೆ ಹೇಳಿ ಮಾಡಿಸಿದ ತಾಣ. ಇಲ್ಲಿ ಸುತ್ತಮುತ್ತ ಕಲವೇ ಕಿ.ಮೀ. ಅಂತರದಲ್ಲಿ ಅಸಂಖ್ಯ ಜಲಧಾರೆ, ಬೆಟ್ಟಗುಡ್ಡ ಚಾರಣಿಗರ ಬರುವಿಕೆಗಾಗಿ ಕಾದಿದೆ. ಆಗುಂಬೆ ಪೇಟೆ ಪ್ರವೇಶಿಸುವುದಕ್ಕೂ ಹಿಂದೆ ರಸ್ತೆಯ ಎಡಬದಿಯಲ್ಲಿ ಒನಕೆ ಅಬ್ಬಿ ಜಲಪಾತ ಎಂಬ ಬೋಡರ್್ ಕಾಣಿಸುತ್ತದೆ, ಇಲ್ಲಿಂದ 3.5 ಕಿ.ಮೀ. ದೂರ ದಟ್ಟವಾದ ಅರಣ್ಯದಲ್ಲಿ ಸಂಚರಿಸಿದರೆ ಆಗುಂಬೆ ಪರ್ವತ ಶ್ರೇಣಿಯಿಂದ ಸುಮಾರು 1,400 ಅಡಿ ಮೇಲಿನಿಂದ ಕೆಳಕ್ಕೆ ಧುಮ್ಮಿಕ್ಕುವ ಒನಕೆ ಅಬ್ಬಿ ಜಲಧಾರೆ ಕಾಣಸಿಗುತ್ತದೆ. ಸೋಮೇಶ್ವರ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಈ ಸ್ಥಳಕ್ಕೆ ಹೋಗುವಾಗ ಕಾಡಿನಲ್ಲಿ ಅಸಂಖ್ಯ ಔಷಧಿ ಗುಣವುಳ್ಳ ಮರ-ಗಿಡಗಳು ಕಾಣಿಸುತ್ತವೆ. ಮಳೆಗಾಲ ಆರಂಭವಾದರೆ ಇಲ್ಲಿ ಉಂಬುರು(ಇಂಬಳ) ಕಾಟ ಅಧಿಕ. ಬೇಸಿಗೆಯಲ್ಲಿ ಪರವಾಗಿಲ್ಲ. ಆದರೂ ಬ್ಯಾಗ್ನಲ್ಲಿ ಸುಣ್ಣದುಂಡೆ ಇಟ್ಟುಕೊಳ್ಳುವುದು ಒಳಿತು. ಸರಕಾರ ಇಲ್ಲಿ ಹಲವು ವರ್ಷಗಳ ಹಿಂದೆಯೇ ಚಾರಣಿಗರಿಗೆ ಅನುಕೂಲವಾಗಲೆಂದು ಕಲ್ಲಿನ ಮೆಟ್ಟಿಲನ್ನು ನಿಮರ್ಿಸಿದೆ. ಚಾರಣದ ಹಾದಿಯಲ್ಲಿ ಮರಗಳು ಬಿದ್ದು ಅಡಚಣೆಯಾಗುತ್ತಿದ್ದರೂ ಇಲ್ಲಿಗೆ ಹೋದರೆ ಹಿಂತಿರುಗಿ ಬರಲು ಮನಸ್ಸಾಗದು. ಮುಂಜಾನೆ ಬೇಗನೆ ಕಾಡಿನೊಳಕ್ಕೆ ಹೋದರೆ ಕಾಡುಹಂದಿ, ಕರಡಿ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಈ ಬಗ್ಗೆ ಬೋಡರ್್ ಹಾಕಿರದಿದ್ದರೂ ಎಚ್ಚರ ದಿಂದಿರುವುದು ಒಳಿತು. ಆಗಸ್ಟ್ ತಿಂಗಳಿಂದ ಎಪ್ರಿಲ್ ತಿಂಗಳಾಂತ್ಯದವರೆಗೂ ಇಲ್ಲಿಗೆ ಭೇಟಿ ನೀಡಬಹುದು.

ಜೋಗಿ ಗುಂಡಿ: ಆಗುಂಬೆ ಪೇಟೆ ದಾಟಿ ಶೃಂಗೇರಿ ರಸ್ತೆಯಲ್ಲಿ ಎರಡು ಕಿ.ಮೀ. ಮುಂದೆ ಸಾಗಿದರೆ `ಜೋಗಿ ಗುಂಡಿ'ಗೆ ಹೋಗುವ ರಸ್ತೆ ಕಾಣಸಿಗುತ್ತದೆ. ರಸ್ತೆಯನ್ನು ದಾಟಿ ದಟ್ಟಾರಣ್ಯದಲ್ಲಿ ಮೂರು ಕಿ,.ಮೀ. ಚಾರಣ ಕೈಗೊಂಡರೆ ಸುಂದರ ಜಲಧಾರೆ ಜೋಗಿ ಗುಂಡಿ ಇದಿರಾಗುತ್ತದೆ. ಕಾಡಿನ ನಡುವೆ ಮನಸೆಳೆಯುವ ಜಲಧಾರೆಯನ್ನು ಮಳೆ ಗಾಲದಲ್ಲಿ ವೀಕ್ಷಿಸುವುದೇ ಸೊಗಸು. ಬೇಸಿಗೆ ಯಲ್ಲಿ ನೀರು ಬತ್ತದಿದ್ದರೂ ಬೆಟ್ಟದ ಮೇಲಿ ನಿಂದ ಹರಿಯುವ ಜಲಧಾರೆಯಲ್ಲಿ ಅಷ್ಟಾಗಿ ರಭಸ ಇರುವುದಿಲ್ಲ. ಇಲ್ಲಿಯೂ ಇಂಬಳಗಳ ಕಾಟ ಅಧಿಕ. ಆಗಸ್ಟ್ ತಿಂಗಳಿನಿಂದ ಫೆಬ್ರವರಿ ತಿಂಗಳು ಚಾರಣಕ್ಕೆ ಸೂಕ್ತ ಸಮಯ.

ನಿಶಾನಿ ಗುಡ್ಡ: ಆಗುಂಬೆ ಪೇಟೆಯ ಸಮೀಪವೇ ಇರುವ ಶಾಲೆಯ ಹಿಂಭಾಗಕ್ಕೆ ಕಣ್ಣು ಹಾಯಿಸಿದರೆ ಕಾಣುವುದೇ ನಿಶಾನಿ ಗುಡ್ಡ. ಸುಮಾರು ಮೂರು ಕಿ.ಮೀ. ಚಾರಣ ನಡೆಸಿದರೆ ನಿಶಾನಿ ಗುಡ್ಡದ ಮೇಲೇರಿ ನಿಸರ್ಗ ಸೌಂದರ್ಯ ಸವಿಯಬಹುದು. ಇಲ್ಲಿ ಸೂಯರ್ಾಸ್ತ, ಸೂಯರ್ೋದಯ ತುಂಬಾ ಸೊಗಸಾಗಿ ಕಾಣುತ್ತದೆ. ಆಗಸ್ಟ್ ತಿಂಗಳಿನಿಂದ ಎಪ್ರಿಲ್ ತಿಂಗಳಾಂತ್ಯ ದವರೆಗೂ ಇಲ್ಲಿ ನಿಸರ್ಗ ಸೌಂದರ್ಯ ಸವಿಯಲು ಉತ್ತಮ ಪ್ರಕೃತಿಯಿದೆ. ಬೆಟ್ಟದ ಮೇಲೆ ಸಾಗಿದಂತೆ ದಟ್ಟನೆ ಮುತ್ತುವ ಮಂಜಿನ ಹನಿಗಳು ಚಾರಣಿಗರಿಗೆ ವಿಭಿನ್ನ ಅವುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

ದೊಡ್ಡಮನೆ: ಆರ್.ಕೆ ನಾರಾಯಣ್ ಬರೆದಿದ್ದ ಕಾದಂ ಬರಿಯನ್ನು ಆಧರಿಸಿ ದಿ. ಶಂಕರ್ನಾಗ್ ನಿಮರ್ಿಸಿದ `ಮಾಲ್ಗುಡಿ ಡೇಸ್' ಧಾರಾವಾಹಿ ಸಂಪೂರ್ಣ ಚಿತ್ರಿತ ವಾಗಿದ್ದು ಆಗುಂಬೆ ಯಲ್ಲಿ. ಇಲ್ಲಿ ಯಾರ ಬಳಿಯೂ ನೀವು `ದೊಡ್ಡಮನೆ ಎಲ್ಲಿ, ಮಾಲ್ಗುಡಿ ಮನೆ ಎಲ್ಲಿ' ಎಂದು ಕೇಳಿದರೆ ಎರಡಂತಸ್ತಿನ ಹತ್ತಿರದಲ್ಲೇ ಇರುವ ದೊಡ್ಡಮನೆಯನ್ನು ತೋರಿಸುತ್ತಾರೆ. ಇಲ್ಲಿ ಹೋಗಿ ದೊಡ್ಡಮನೆಯನ್ನು ಸಂದ ಶರ್ಿಸಿದಲ್ಲಿ ಮನೆ ಯೊಡತಿ ಕಸ್ತೂರಿ ಅಕ್ಕ ಬಿಸಿಬಿಸಿ ಆಗುಂಬೆ ಸ್ಪೆಷಲ್ ಕಷಾಯ ದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ. ಆಗುಂಬೆಯ ಜೀವನಶೈಲಿ, ಬದುಕಿನ ವಿವಿಧ ಮಜಲುಗಳ ಅರಿವಿರುವ ಕಸ್ತೂರಿ ಅಕ್ಕನ ಬಳಿ ಮಾತಾಡುತ್ತ ಕುಳಿತರೆ, ಇಡೀ ಆಗುಂಬೆಯ ಪರಿಚಯ ನಮಗಾಗುತ್ತದೆ.

ಸೋಮೇಶ್ವರ ಮಳೆಕಾಡಿನ ವಿಶ್ರಾಂತಿಧಾಮ: ಆಗುಂಬೆ ಯ ಪೇಟೆಗಿಂತ ಅರ್ಧ ಕಿಮೀ ದೂರ ಸೋಮೇಶ್ವರ ರಸ್ತೆಯಲ್ಲಿ ಸಂಚರಿಸಿದರೆ ಸೋಮೇಶ್ವರ ಮಳೆಕಾಡಿನ ವಿಶ್ರಾಂತಿ ಧಾಮ ಸಿಗುತ್ತದೆ. ಇಲ್ಲಿ ವಿಶಾಲವಾದ ಕೆರೆಯಲ್ಲಿ ಪೆಡಲ್ ಬೋಟಿಂಗ್ ಮಾಡಬಹುದು. ಹತ್ತು ರೂಪಾಯಿಯ ಒಂದು ನೋಟು ಕೊಟ್ಟರೆ ಬೋಟನ್ನು ನಾವೇ ಚಲಾಯಿಸಿಕೊಂಡು ಕೆರೆಗೆ ಒಂದು ಸುತ್ತು ಹಾಕಿ ವಾಪಸ್ ಬರಬಹುದು. ಇಲ್ಲಿ ಮಂಗಗಳ ಉಪದ್ರವೂ ಹೆಚ್ಚು. ಕೆರೆಯ ಬದಿಯಲ್ಲಿ ನಿಮರ್ಿಸಿ ರುವ ಕುಟೀರ, ಬೆಂಚುಗಳಲ್ಲಿ ಸಾಕಷ್ಟು ಹೊತ್ತು ಪ್ರಕೃತಿಯ ಮಡಿಲಿನಲ್ಲಿ ವಿರಮಿಸಿ ವಾಪಸ್ ಆಗಬಹುದು.

ಸೋಮೇಶ್ವರ ಹಪರ್ೆಟೋ ಕ್ಯಾಂಪ್: ಆಗುಂಬೆಯ ದಾರಿಯಲ್ಲಿ ಸೋಮೇಶ್ವರ ಪೇಟೆ ಪ್ರವೇಶಿಸುವುದಕ್ಕೂ ಮುನ್ನ ಹಪರ್ೆಟೋ ಕ್ಯಾಂಪ್ ಸಿಗುತ್ತದೆ. ವಿವಿಧ ಜಾತಿಯ ಸಸ್ಯ, ಪ್ರಾಣಿ, ಹಕ್ಕಿಗಳನ್ನು ನೋಡಿ ಸಂತಸಪಡಲು ಇದು ಹೇಳಿ ಮಾಡುವ ತಾಣ. ಇಲ್ಲಿ ಪ್ರವಾಸಿಗರು, ಚಾರಣಿಗರು ಉಳಿಯಲು ಸೂಕ್ತ ವ್ಯವಸ್ಥೆಯೂ ಇದೆ. ಇಲ್ಲಿ ಒಳಹೋಗಲು ವಿಧಿಸಿರುವ ದರ ಕೊಂಚ ಹೆಚ್ಚೇ ಎಂದೆಣಿಸಿದರೂ ಇಲ್ಲಿ ಸುತ್ತಾಡಿ ಕಾಲ ಕಳೆಯಲು ಯೋಗ್ಯವಾಗಿದೆ.

ಚಾರಣಿಗರಿಗೆ ಟಿಪ್ಸ್:

ಆಗುಂಬೆಯಲ್ಲಿ ಪ್ರವಾಸಿಗರ, ಚಾರಣಿಗರ ಅನುಕೂಲಕ್ಕೆ ಲಾಡ್ಜ್, ಸರಕಾರದ ವಸತಿಗೃಹವೂ ಇದೆ. ಸೋಮೇಶ್ವರದಲ್ಲಿ ಇರುವ ಹಪರ್ೆಟೋ ಕ್ಯಾಂಪ್ನಲ್ಲಿ ಟೆಂಟ್ ವ್ಯವಸ್ಥೆಯೂ ಇದೆ. ಚಾರಣ ಕೈಗೊಂಡ ಸ್ಥಳಗಳಲ್ಲಿ ಊಟ, ತಿಂಡಿ, ನೀರು ಸಿಗುವುದು ಕಷ್ಟ. ಹತ್ತಿರದ ಕ್ಯಾಂಟೀನ್, ಗೂಡಂಗಡಿಯಲ್ಲಿ ಮೊದಲೇ ಹೇಳಿ ಹೋದರೆ ಹಿಂತಿರುಗುವ ಹೊತ್ತಿಗೆ ಬಿಸಿಬಿಸಿ ಮಲೆನಾಡ ಸ್ಪೆಷನ್ ಅಡುಗೆ ರೆಡಿ ಆಗಿರುತ್ತದೆ. ಒಂದು ವೇಳೆ ನೀರು, ಆಹಾರದ ಪೊಟ್ಟಣವನ್ನು ಕಟ್ಟಿಕೊಂಡು ಚಾರಣಕ್ಕೆ ಹೋದರೂ ತಿಂದುಳಿದ ಪ್ಲಾಸ್ಟಿಕ್ ಪೊಟ್ಟಣ, ನೀರಿನ ಬಾಟ್ಲಿಯನ್ನು ಯಾರೂ ಕೇಳುವವರಿಲ್ಲ ಎಂದು ಅಲ್ಲಿ ಬಿಸಾಡದಿರಿ. ಬದಲಿಗೆ ಅದನ್ನು ಕೊಂಡುಹೋದಷ್ಟೇ ಜೋಪಾನವಾಗಿ ಮರಳಿ ತನ್ನಿ. ಚಾರಣ ಬೆಳೆಸುವ ಮುನ್ನ ನಕ್ಸಲ್ ನಿಗ್ರಹ ದಳ ಅಥವಾ ಪೊಲೀಸ್ ಠಾಣೆಯಲ್ಲಿ ಮಾಹಿತಿ. ವಿಳಾಸ ಮೊದಲೇ ನೀಡುವುದು ಒಳಿತು. ಒಂದೊಮ್ಮೆ ನೀಡದೆ ಹಾಗೇ ಹೋದರೆ ಸಿಕ್ಕಿಬಿದ್ದರೆ ಕಷ್ಟ. ನಕ್ಸಲರೆಂಬ ಭ್ರಮೆಯಲ್ಲಿ ಮಾನಸಿಕ ಕಿರುಕುಳ ಕೊಟ್ಟು ಚಾರಣದ ನೆನಪನ್ನು ಕಹಿ ಮಾಡಿಬಿಡುತ್ತಾರೆ.

ಕೆಂಪು ಉಗ್ರರ ನಾಡು?

ಹೆಬ್ರಿ ಪೇಟೆ ದಾಟಿದರೆ ಸಾಕು ನಮ್ಮನ್ನು ಕಾಡುವ ಭಯ ಎಂದರೆ ನಾವೀಗ ಕೆಂಪು ಉಗ್ರರ ಅಥರ್ಾತ್ ನಕ್ಸಲರ ನೆಲದಲ್ಲಿದ್ದೇವೆ ಎನ್ನುವುದು..! ಪತ್ರಿಕೆ, ಟಿವಿ ಚಾನೆಲ್ಲುಗಳು ತಮಗೆ ಸಿಗುವ ಒನ್ಲೈನ್ ಸುದ್ದಿಯನ್ನು ಬೇಕಾಬಿಟ್ಟಿ ಬಳಸಿಕೊಂಡು ಮಲೆನಾಡನ್ನು ನಕ್ಸಲರ ಆವಾಸಸ್ಥಾನ ಎಂಬಷ್ಟರಮಟ್ಟಿಗೆ ಜನರಲ್ಲಿ ಭಯ ಹುಟ್ಟಿಸಿವೆಯೋ, ಅಥವಾ ಪೊಲೀಸ್ ಇಲಾಖೆ ಇಲಿಯನ್ನು ಹುಲಿ ಎಂದು ಭಾವಿಸಿ ಭಯ ಹುಟ್ಟಿಸಿದೆಯೋ ತಿಳಿಯಲಾಗದು. ಆದರೆ ಇಂದಿಗೂ ಆಗುಂಬೆಯ ಬೀದಿಗೆ ಕಾಲಿಟ್ಟರೆ ಸಾಕು ಕಂಡುಬರುವುದು ಮಾತ್ರ ಪೊಲೀಸರದ್ದೇ ದಂಡು..! ಹೆಗಲಲ್ಲೊಂದು ಬ್ಯಾಗು, ಕೈಯಲ್ಲಿ ಕ್ಯಾಮೆರಾ, ಕಾಲಿಗೆ ಚಪ್ಪಲಿ, ಕಪ್ಪು ಬಣ್ಣದ ಶೂ ಇದ್ದರೆ ಹೇಳುವುದೇ ಬೇಡ, ಅಪಾದಮಸ್ತಕವಾಗಿ ನಮ್ಮನ್ನು ನೋಡಿ ಪ್ರಶ್ನೆಗಳ ಸುರಿಮಳೆ ಸುರಿಸುವ ಇವರನ್ನು ಕಂಡು ಅದೆಷ್ಟೋ ಬಾರಿ ಅನಿಸಿದ್ದುಂಟು... ಇವರಿಗಿಂತ ನಕ್ಸಲರೇ ಬೆಟರ್ ಅಂತ. ಇದು ನಾನು ಹೇಳುವ ಮಾತಲ್ಲ. ಅದೇ ಆರ್.ಕೆ.ನಾರಾಯಣ್ ತಮ್ಮ `ಮಾಲ್ಗುಡಿ ಡೇಸ್ನಲ್ಲಿ ಹಾಡಿ ಹೊಗಳಿ ಮಲೆನಾಡು, ಅದೇ ಕುವೆಂಪು ಕುಪ್ಪಳ್ಳಿಯಲ್ಲಿ ಕುಳಿತು, `ಉತ್ತುಂಗ ಶಿಖರಗಳಿರುವುದು ಪ್ರವಾಸಕ್ಕಲ್ಲದೆ, ನಿವಾಸಕ್ಕಲ್ಲ ಎಂದು ಬರೆದ ವಾಕ್ಯ. ದರಾಬೇಂದ್ರೆ, ಕಾರಂತರ ಸೊಬಗಿನ ಮಲೆನಾಡು ಇಂದು ಹಾಗೆ ಉಳಿದಿಲ್ಲ ಎನ್ನುವುದೇ ಬೇಸರದ ಸಂಗತಿ. ಮಲೆನಾಡಿಗೆ ನಕ್ಸಲರೆನ್ನುವ ಮಂದಿ ಬಂದಿದ್ದು ಈಗ್ಗೆ ಕೆಲವು ವರ್ಷಗಳ ಹಿಂದೆ. ಆದರೆ ಆನಂತರದ ಬದಲಾವಣೆಗಳನ್ನು ಗಮನಿಸಿದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ಮಲೆನಾಡು ಎನ್ನುವ ಪ್ರಕೃತಿ ನಿಜಕ್ಕೂ ಕೆಂಪು ಉಗ್ರರ ನೆರಳಿನಲ್ಲಿ ಕರಗುತ್ತಿದೆಯೇ ಅಥವಾ ಹಾಗೆಂಬ ಭ್ರಮೆ ನಮ್ಮನ್ನು ಆವರಿಸಿಕೊಂಡು ಬಿಟ್ಟಿದೆಯೇ ಎನ್ನುವುದು ತಿಳಿಯುತ್ತಿಲ್ಲ.
ಕಾಮತರ ಚರುಮುರಿ

ನೀವು ಆಗುಂಬೆಯ ಸೂಯರ್ಾಸ್ತಮಾನ ಸ್ಥಳಕ್ಕೊಮ್ಮೆ ಭೇಟಿ ಕೊಟ್ಟಿದ್ದರೆ ನಿಮಗೆ ಅಲ್ಲಿ ಚರುಮುರಿ ಮಾರುವ ಕಾಮತರ ಪರಿಚಯ ವಿರಲೇಬೇಕು. ಕಳೆದ 15 ವರ್ಷಗಳಿಂದ ಆಗುಂಬೆಯ ಸೂಯರ್ಾ ಸ್ತಮಾನ ಪ್ರದೇಶವನ್ನು ವ್ಯವಹಾರಕ್ಕೆ ಆಯ್ದುಕೊಂಡಿರುವ ಕಾಮತರ ಮುಖದಲ್ಲಿ ಆಗುಂಬೆಯಲ್ಲಿ ಕಳೆದ ಗತಜೀವನದ ಏರಿಳಿತಗಳು ಅಡಕ ವಾದಂತೆ ಭಾಸವಾಗುತ್ತದೆ. ಇವರು ಮಾಡಿಕೊಡುವ ಮಂಡಕ್ಕಿ ಚರುಮುರಿ ತಿಂದಲ್ಲಿ ಆಗುಂಬೆಯ ಭೇಟಿ ಮರೆಯದ ನೆನಪಾಗಿ ಉಳಿಯುತ್ತೆ ಎಂಬ ಕಾರಣಕ್ಕೋ ಏನೋ ಇವರ ಸುತ್ತ ಗ್ರಾಹಕರಿಗೆ ಕೊರತೆಯೆಂದೂ ಬಂದಿಲ್ಲ. `ಎಲ್ಲಾ ದೇವರ ಅನುಗ್ರಹ, ಆತ ನಡೆಸಿದಂತೆಯೇ ಆಗುತ್ತದೆ' ಎಂದು ಕಾಣದ ದೇವರಿಗೆ ಕೈಮುಗಿಯುವ ಕಾಮತರ ಮನೆ ಇರುವುದು ಸೋಮೇಶ್ವರದಲ್ಲಿ. ಇಳಿವಯಸ್ಸಿನಲ್ಲೂ ಆಗುಂಬೆಯ ಬೆಟ್ಟ ಹತ್ತಿ ವ್ಯವಹಾರ ಮಾಡುವ ಇವರ ಬದುಕು ನಿಜಕ್ಕೂ ಆಗುಂಬೆಯಷ್ಟೇ ಬೆರಗು ಹುಟ್ಟಿಸುತ್ತದೆ. ತನ್ನ ಬಳಿಗೆ ಬರುವ ಪ್ರವಾಸಿಗರನ್ನು ಪ್ರೀತಿಯಿಂದ ಮಾತಾಡಿಸುವ ಕಾಮತರ ಸ್ಪೆಷಲ್ ಚರುಮುರಿ ಸದಾಕಾಲ ಸಿದ್ಧವಾಗಿರುತ್ತದೆ...