doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Tuesday, May 18, 2010

ಎ ಮೇರೆ ವತನ್ ಕೆ ಲೋಗೋ...


ಏ ಮೇರೆ ವತನ್ ಕೆ ಲೋಗೋ
ಝರಾ ಆಂಖ್ ಮೆ ಭರ್ಲೋ ಪಾನಿ
ಜೊ ಶಹೀದ್ ಹುಯೇ ಹೈ ಉನ್ಕಿ
ಝರಾ ಯಾದ್ ಕರೋ ಕುಬರ್ಾನಿ
`ದೇಶ ಸೇವೆಯೇ ಈಶ ಸೇವೆ' ಅಂತ ನಂಬಿರೋ ನಮ್ಮ ಗಡಿ ಕಾಯುವ ಹುತಾತ್ಮ ಸೈನಿಕರನ್ನು ಸ್ಮರಿಸುವ ಈ ಹಾಡು ಅದೆಷ್ಟು ಅರ್ಥಪೂರ್ಣ ಅಲ್ವಾ? ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ನೋ ಹಾಗಾಗುತ್ತೆ. ದೇಶಸೇವೆಯ ಪವಿತ್ರ ಕೈಂಕರ್ಯಕ್ಕೆ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಅದೆಷ್ಟೋ ವೀರಯೋಧರು ನಮ್ಮ ಕಣ್ಣಮುಂದೆ ಮಿಂಚಿ ಮರೆಯಾಗ್ತಾರೆ.
ನಾವು ದಿನನಿತ್ಯದ ಜಂಜಾಟದ ಬದುಕಿನಲಿ ಎಷ್ಟು ಪುರುಸೋತ್ತು ಇಲ್ಲಾಂದ್ರೂ ಊಟ, ತಿಂಡಿ, ನಿದ್ದೆ ಇವನ್ನೆಲ್ಲಾ ಸಮಯಕ್ಕೆ ಸರಿಯಾಗಿ ಮಾಡ್ತೀವಿ. ಆದ್ರೆ ಒಂದರೆಗಳಿಗೆ ನಮ್ಮ ದೇಶದ ಉದ್ದಗಲಕ್ಕೂ ಗಡಿಯಲ್ಲಿ ತನ್ನ ಹೆತ್ತವರು, ಬಂಧು ಬಳಗ, ಸ್ನೇಹಿತರು ಇವರ ನೆನಪಿನಿಂದ ದೂರ ನಿಂತು ದೇಶ ರಕ್ಷಣೆಗಾಗಿ ತನ್ನನ್ನೇ ಮುಡಿಪಾಗಿಟ್ಟ ಆ `ಸೈನಿಕ'ನನ್ನು ನೆನಪಿಸಿಕೊಳ್ಳಿ ನೋಡೋಣ. ಸಾಧ್ಯವೇ ಇಲ್ಲ... ಯಾಕೇಂದ್ರೆ, ಗಡಿಯಲ್ಲಿ ಸೈನಿಕ ಕಾವಲು ಕಾಯೋದನ್ನು ನಾವು ಕಲ್ಪಿಸಿಕೊಳ್ಳಬಹುದೇನೋ, ಆದ್ರೆ ಅವನು ಅಲ್ಲಿ ಯಾವ ಸ್ಥಿತಿಯಲ್ಲಿದ್ದಾನೆ ಅಂತಾ ಊಹಿಸೋಕ್ಕೂ ನಮ್ಮಿಂದಾಗಲ್ಲ. ನಾವು ಮನೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಮಲಗ್ತೀವಿ, ನಮಗೆ ನಮ್ಮ ಮನೆಯೊಳಗಿರೋ ಚಿನ್ನ, ಹಣ, ಒಡವೆ, ವಸ್ತುಗಳು ಎಲ್ಲಿ ಕಳ್ಳರ ಪಾಲಾಗುತ್ತೋ ಅಂತ ಭಯ. ಮನೆ ಮುಂದೆ `ನಾಯಿ ಇದೆ ಎಚ್ಚರಿಕೆ' ಅಂತಾ ದೊಡ್ಡದಾಗಿ ಬೋಡರ್್ ಹಾಕಿರ್ತೀವಿ, ಕಂಪೌಂಡ್ಗೆ ಉದ್ದ ಕೂದಲಿನ ನಾಯಿಯನ್ನು ದೊಡ್ಡ ಸಂಕಲೆಯಲ್ಲಿ ಕಟ್ಟಿರ್ತೀವಿ, ಕಳ್ಳರು ಅಂಗಳಕ್ಕೆ ಬಂದ್ರೆ ತಿಳೀಲಿ ಅಂತ ಅಲಾರಾಂ ವ್ಯವಸ್ಥೆಯನ್ನೂ ಮಾಡಿರ್ತೀವಿ. ಇದೆಲ್ಲಾ ಇದ್ರೂ ನಮ್ಗೆ ಮನೆಯೊಳಗೆ ಕಳ್ಳರು ನುಗ್ಗಿದ್ರೆ ಅಂತ ಭಯ. ಇವೆಲ್ಲಾ ಯಾಕೆ ಇಲ್ಲಿ ಪ್ರಸ್ತಾಪಿಸಿದೆ ಅಂದ್ರೆ ದೇಶವನ್ನು ಶತ್ರುಗಳಿಂದ ಕಾಯೋದು ಅಂದ್ರೆ ನಮ್ಮ ಮನೆಯನ್ನು ಕಾಯುವ ಹಾಗಲ್ಲ ಅಂತ ಹೇಳೋಕೆ. ಅಲ್ಲಿ ಗಡಿಯಲ್ಲಿ ನಿಂತ ಸೈನಿಕ ಕಿಂಚಿತ್ತು ಏಮಾರಿದ್ರೂ ನಮ್ಮ ಮನೆಯನ್ನು ಕಾಯೋ ನಾಯಿ, ಆ ಬೋಡರ್್, ಅಲಾರಾಂ ಇವೆಲ್ಲಾ ವ್ಯರ್ಥ ಅನ್ನೋದು ನಮ್ಗೆ ಮರೆತೇ ಹೋಗಿರುತ್ತೆ.
ಗಡಿ ಕಾಯುವ ಸೈನಿಕ ಎಂದೂ ತನ್ನ ಭವಿಷ್ಯದ ಬಗ್ಗೆ ಚಿಂತಿಸೋದಿಲ್ಲ. ಬದಲಾಗಿ ತನ್ನ ದೇಶ, ತನ್ನ ಜನರು ಅನ್ನೋ ಅಭಿಮಾನದಿಂದ ರಾತ್ರಿ ಹಗಲು ದುಡಿಯ್ತಾನೆ. ನಮ್ಮೂರಿನಲ್ಲಿ ಎರಡು ದಿನ ಶೀತಗಾಳಿ ಬೀಸಿದರೆ, ಚಳಿ ಹೆಚ್ಚಾದರೆ ನಮ್ಗೆ ಶೀತ, ಕೆಮ್ಮು, ಜ್ವರ ಎಲ್ಲಾ ಶುರುವಾಗುತ್ತೆ. ಚಳಿಯ ನಡುಕದಲ್ಲಿ ನಿದ್ದೆ ಹಾರಿ ಹೋಗಿರುತ್ತೆ. ಅದಕ್ಕಾಗಿ ಕಂಬಳಿ ಹೊದ್ದರೂ ನಮಗೆ ನೆಮ್ಮದಿಯಿಲ್ಲ. ಮರುದಿನ ಎದ್ದವರೇ ರಾತ್ರಿಯೆಲ್ಲಾ ಚಳಿಯಿಂದಾಗಿ ನಿದ್ದೇನೇ ಇಲ್ಲ ಅಂತ ತಿರುಗಾ ಮಲಗ್ತೀವಿ. ಗಡಿಯ ಆ ಕೊರೆವ ಚಳಿಯಲ್ಲಿ ಶತ್ರುಗಳಿಂದ ನಮ್ಮನ್ನು ಕಾಪಾಡಲು, ನಡುಗುವ ಕೈಗಳಲ್ಲಿ ಬಂದೂಕು ಹಿಡಿದು ಕಾಯ್ತಾನಲ್ವಾ, ಅವನು ನಿದ್ದೆ ಬಂತು ಅಂತ ಮಲಗಿಬಿಟ್ರೆ, ನಾವು ಶಾಶ್ವತವಾಗಿ ಮಲಗಿಬಿಡಬೇಕಾಗುತ್ತೆ. ಸೈನಿಕ ಅಂದ ಕೂಡಲೇ ಅವನ ಜತೆ ಮಾತಾಡ್ಬೇಕು, ಅವನ ಅನುಭವವನ್ನು ಕೇಳಿ ತಿಳಿಯಬೇಕು ಅಂತ ಮನಸ್ಸು ಹಂಬಲಿಸೋದು ಬಹುಷ: ಆ ಸೈನಿಕನ ಮೇಲಿನ ಗೌರವದಿಂದಲೇ ಇರಬೇಕು.
ನಮ್ಮ ದೇಶವನ್ನು ಆಳುತ್ತಿರುವ ಕುಟಿಲ ರಾಜತಾಂತ್ರಿಕ ವ್ಯವಸ್ಥೆಯಿಂದಾಗಿ ಮೂರಕ್ಷರ ಕಲಿತವರು ಜನನಾಯಕರಾಗಿ ಮೆರೆಯುತ್ತಿದ್ದಾರೆ. ರೌಡಿಗಳು ಎಂ. ಎಲ್ .ಎ. ಗಳಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದಿನನಿತ್ಯ ಲೆಕ್ಕವಿಲ್ಲದಷ್ಟು ಮಂದಿ ಉಗ್ರಗಾಮಿಗಳು ನಮ್ಮ ದೇಶಕ್ಕೆ ಸಡ್ಡು ಹೊಡೆಯಲು ಗಡಿ ರೇಖೆಯುದ್ದಕ್ಕೂ ನುಸುಳಿ ಒಳಬರುತ್ತಿದ್ದಾರೆ. ನಮ್ಮ ಪವಿತ್ರ ಭಾರತ ಭೂಮಿಯಲ್ಲಿ ವಿದ್ವಂಸಕ ಕೃತ್ಯ ನಡೆಸಿ, ನಮ್ಮ ಆಥರ್ಿಕ ಸ್ಥಿರತೆಯನ್ನು ಬುಡಮೇಲು ಮಾಡಲು ಶತ್ರು ರಾಷ್ಟ್ರಗಳು ಪಣತೊಟ್ಟು ನಿಂತಿವೆ. ಇವರೆಲ್ಲರಿಂದ ನಮ್ಮ ದೇಶವನ್ನು ಕಾಯೋದಂದ್ರೆ ಅದು ಸುಲಭದ ಮಾತಲ್ಲ, ಅನನ್ಯ ದೇಶಪ್ರೇಮವನ್ನು ಮೈಗೂಡಿಸಿಕೊಂಡವನಿಂದ ಮಾತ್ರವೇ ಇದು ಸಾಧ್ಯ. ಏನೇ ಇರಲಿ... ನಮ್ಮನ್ನು ಹೆತ್ತ ನಮ್ಮವ್ವನಂತೆಯೇ ನಮ್ಮನ್ನು ಪೊರೆಯುವ ಭಾರತ ಮಾತೆಯೂ ಮಿಗಿಲಲ್ಲವೇ? ತಾಯಿ ಜನ್ಮ ನೀಡುತ್ತಾಳಾದಾರೆ ಭೂಮಿ ತಾಯಿ ನಮಗೆ ಬದುಕಿನ ಎಲ್ಲಾ ಪಾಠವನ್ನು ಕಲಿಸಿಕೊಡುತ್ತಾಳೆ. ನಮ್ಮ ತಾಯಿಯನ್ನು ನಾವು ಯಾವ ರೀತಿ ರಕ್ಷಣೆ ಮಾಡುತ್ತೇವೋ, ಅದಕ್ಕಿಂತ ಹೆಚ್ಚಾಗಿ ಭೂಮಿತಾಯಿಯನ್ನು ಶತ್ರುಗಳಿಂದ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ ತಾನೇ?
ದೇಶಸೇವೆಗೆ ಅವನು, ಇವನು ಎನ್ನುವ ಬೇಧಭಾವವಿಲ್ಲ. ದೇಶಕ್ಕೆ ಗಡಿಯಿದೆಯೇ ಹೊರತು ದೇಶಪ್ರೇಮಕ್ಕೆ ಗಡಿಯಿಲ್ಲ. ಯುವಜನತೆ ದೇಶಾಬಿಮಾನದ ಕಿಚ್ಚನ್ನು ಬೆಳೆಸಿಕೊಳ್ಳಬೇಕು. ದೇಶಸೇವೆಗಾಗಿ ಪ್ರಾಣತ್ಯಾಗ ಮಾಡಿದ ಅಜಾದ್, ಭಗತ್ಸಿಂಗ್, ರಾಜ್ಗುರು, ಇವರು ನಮ್ಮ ರೋಲ್ ಮಾಡೆಲ್ ಆಗ್ಬೇಕು. ಪ್ರತಿಯೊಂದು ಮಗುವಿನಲ್ಲೂ ದೇಶಪ್ರೇಮವನ್ನು ಬಡಿದೆಬ್ಬಿಸುವ ಹಿರಿಯರ ಕತೆಗಳ ಮೂಲಕ ಪ್ರೇರಣೆಯನ್ನು ನೀಡ್ಬೇಕು. ಇದೆಲ್ಲಾ ಪ್ರತಿ ಹೆತ್ತವರ ಕರ್ತವ್ಯವಾದಾಗ ಮಡಿಕೇರಿಯ ಹಾಗೆ ನಮ್ಮಲ್ಲೂ ಪ್ರತಿ ಮನೆಗೊಬ್ಬ ಯೋಧ ಜನ್ಮ ತಳೆಯುತ್ತಾನೆ. ಆಗ ಗಡಿ ಕಾಯುವ ಸೈನಿಕನ ಕೆಲಸವೂ ಹಗುರವಾಗುತ್ತದೆ. ಆ ಹೊತ್ತು ನಮ್ಮ ದೇಶದ ಮೇಲೆ ಕಣ್ಣಿಡಲು ಯಾರೂ ಧೈರ್ಯ ತೋರುವುದಿಲ್ಲ.
ದೇಶಸೇವೆಯಲ್ಲಿ ಹುತಾತ್ಮರಾದವರನ್ನು ಸ್ಮರಿಸಲು ಆ ದಿನ, ಈ ದಿನದ ಅಗತ್ಯವಿಲ್ಲ. ಎಲ್ಲೇ ಇರಲಿ, ಹೇಗೇ ಇರಲಿ ಕ್ಷಣಕಾಲ ಸ್ಮರಣೆಗೆ ಬಂದು ಕಣ್ಣಂಚು ತೇವಗೊಂಡರೆ ಅಷ್ಟೇ ಸಾಕು. ಗಡಿ ಕಾಯುವ ಯೋಧನಿಗೆ ಗೌರವದಿ ಸೆಲ್ಯೂಟ್ ಹೊಡೆದರಷ್ಟೇ ಸಾಲದು, ಆತನ ಸಂಕಷ್ಟವನ್ನು ಅಥರ್ೈಸಿ ಆತನಿಗಾಗಿ ಅನುದಿನ ಹಾರೈಸುವ ಮನಸ್ಸಿರಬೇಕು.
ಜೈ ಹಿಂದ್..!

Saturday, May 15, 2010

ತನ್ನು... ಅವಳ ಮಾತೇ ಇಷ್ಟ


ಅಮ್ಮ...ಲವ್ ಯು



ಅಮ್ಮಾ... ಐ ಲವ್ ಯೂ ಟೂ
ಅಮ್ಮಾ ನನ್ನ ತೋಳಿನಲ್ಲಿ ಕಂದ ನಾನು
ನನ್ನಾ ಸಂಗ ಆಡಲೆಂದು ಬಂದೆ ನಾನು
ಪದ್ಯದ ಸಾಲುಗಳಲ್ಲಿ `ಅಮ್ಮಾ...' ಅನ್ನೋ ಪದವನ್ನು ಕೇಳಿದಾಗ ಹೆತ್ತು, ಹೊತ್ತು, ಸಾಕಿ ಸಲಹಿದ ಅಮ್ಮನನ್ನು ನೆನೆಸಿಕೊಳ್ಳದವರು ಇರಲಿಕ್ಕಿಲ್ಲ. ಅಮ್ಮಾ ಎಂದು ಕೂಗಿದಾಗ ಮನಸ್ಸಿಗಾಗುವ ಸಂತಸ, ಸುಖ ಅಷ್ಟಿಷ್ಟಲ್ಲ. ಅಮ್ಮಾ ಎಂದು ತನ್ನ ಪುಟ್ಟ ಮಗು ಕೂಗಿದಾಗ ಆ ಹೆತ್ತ ಮಾತೆ ತನ್ನೆಲ್ಲಾ ನೋವನ್ನು ಮರೆತು ಓಡೋಡಿ ಹೋಗುತ್ತಾಳಲ್ಲಾ... ಆಗ ಆ ತಾಯಿಗೆ ತನ್ನ ಮಗುವಿಗೇನಾದರೂ ಆಗಿದೆಯೋ? ಎನ್ನುವ ಪ್ರಶ್ನೆಯ ಹೊರತು ಆಕೆಯ ಮನದಲ್ಲಿ ಸ್ವಾರ್ಥದ ಲವಲೇಶವೂ ಇರುವುದಿಲ್ಲ. ಈ ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿಯಂದ್ರೆ ಅದು ತಾಯಿ ಪ್ರೀತಿಯಂತೆ. ಅದಕ್ಕೆ ತಾನೇ ತಾಯಿಯ ಪ್ರೀತಿಯನ್ನು ಇತರೇ ಪ್ರೀತಿಗಿಂತ ವಿಭಿನ್ನವಾಗಿ ನೋಡೋದು. ಈ ಪ್ರೀತಿಗೆ ಸರಿಸಮವಾಗಿ ನಿಲ್ಲೋದು ಈ ಜಗತ್ತಿನಲ್ಲಿ ಬೇರೇನಿದೆ ಹೇಳಿ?
ಮುತ್ತು ಕೊಡೋಳು ಬಂದಾಗ...
ತುತ್ತು ಕೊಟ್ಟೋಳ ಮರೀಬೇಡ
ಅಂತ ಕವಿ ತನ್ನ ಸಾಲಿನಲ್ಲಿ ಹೇಳಿದ್ದರಲ್ಲಿ ಎಷ್ಟೊಂದು ಅರ್ಥವಿದೆಯಲ್ವಾ? ಈಗಿನ ಕಾಲದಲ್ಲಿ ಹೆತ್ತವಳು ಅನ್ನೋ ಪ್ರೀತಿ, ಗೌರವವೇ ತಿಳಿಯದ ಮಕ್ಕಳಿರಬಹುದು. ಮುತ್ತು ಕೊಟ್ಟೋಳು ಬಂದಾಗ ತುತ್ತಿಟ್ಟು ರಮಿಸಿದವಳು ನೆನಪಾಗದಿರೋ ಜನಾ ಇರ್ಬಹುದು. ಆದ್ರೆ ತನ್ನ ಆ ಮಕ್ಕಳಿಗೆ ಕೇಡು ಬಯಸೋ ಅಮ್ಮ ಇರೋಕ್ಕೆ ಸಾಧ್ಯವಿಲ್ಲ. ಕಲಿಯುಗದಲ್ಲಿ ಇದೂ ಕೆಲವೊಮ್ಮೆ ತಿರುಗಾಮುರುಗಾ ಆಗಿರಲು ಸಾಧ್ಯ. ಆದ್ರೆ ಆ ತಾಯಿ ಮನಸ್ಸು ಬದಲಾಗ್ಬೇಕಾದ್ರೆ ಅದಕ್ಕೆ ಬಲವಾದ ಕಾರಣಾನೂ ಇರ್ಬೇಕು ಅನ್ನೋದು ಅಷ್ಟೇ ಸತ್ಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದ್ರೆ ಕೆಟ್ಟ ತಾಯಿ ಹುಟ್ಟೋಕೆ ಸಾಧ್ಯವಿಲ್ಲ ಇದು ಲೋಕಪ್ರಸಿದ್ಧ ನಾಣ್ಣುಡಿ. ತಾನು ಹೆತ್ತು, ಹೊತ್ತು ಸಾಕಿ ಸಲಹಿದ ತನ್ನದೇ ಮಕ್ಕಳು ತನ್ನನ್ನು ತಿರಸ್ಕರಿಸಿ ಮುಂದೆ ಸಾಗಿದರೂ ಹೆತ್ತ ತಾಯಿಯ ಮನಸ್ಸು ವಿಚಲಿತಗೊಳ್ಳೋದಿಲ್ಲ, ಅವರೆಲ್ಲೇ ಇರಲಿ, ಚೆನ್ನಾಗಿರಲಿ ಅಂತಾನೇ ಹಾರೈಸುತ್ತೆ. ಈ ಹರಕೆ, ಹಾರೈಕೆ `ಅಮ್ಮ' ಅನ್ನೋ ದೇವರಿಂದಲೇ ಹೊರತು ಬೇರೆ ಯಾರಿಂದಲೂ ಬರೋಕ್ಕೆ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಅಮ್ಮ ಇತರರಿಗಿಂತ ಪ್ರತ್ಯೇಕ ಸ್ಥಾನಮಾನವನ್ನು ನಮ್ಮಲ್ಲಿ ಪಡೆದುಕೊಂಡಿದ್ದಾಳೆ. ಹೌದು ತನ್ನ ಮಗು ಏನೇ ತಪ್ಪು ಮಾಡಿದರೂ ತಾಯಿಯಾದವಳು ಕ್ಷಮಿಸುತ್ತಾಳೆ. `ಕ್ಷಮಯಾ ಧರಿತ್ರಿ' ಅವಳು. ತಾಯಿ ಮನೆಯ ದೇವತೆಯಿದ್ದಂತೆ. ಆಕೆಯಿಂದಾಗಿ ಇಡೀ ಮನೆಯಲ್ಲಿ ಸುಖ, ಸಂತೃಪ್ತಿ ವೃದ್ಧಿಸುತ್ತದೆ. ಮನೆಯಲ್ಲಿ ಯಾರೇ ಇದ್ದರೂ ಅಮ್ಮ ಇರದಿದ್ದರೆ ಆ ಮನೆ ಖಾಲಿ... ಖಾಲಿ...
ಅಮ್ಮ ಅನ್ನೋ ಮಾಂತ್ರಿಕ ಪದದ ಶಕ್ತೀನೇ ಅಂತದ್ದು. ಪ್ರೀತಿಯಿಂದ ಆಕೆಯನ್ನು ಕರೆದರೆ ಸಾಕು, ಆಕೆ ನಮಗೆ ಪ್ರೀತಿಯ ಗಂಗೆಯನ್ನೇ ಹರಿಸುತ್ತಾಳೆ. ತಪ್ಪು ಮಾಡಿದ್ದೇನೆ ಅಂತ ಮಡಿಲಲ್ಲಿ ಮುಖ ಹುದುಗಿಸಿದರೆ ಸಾಕು ತನ್ನ ಮಗುವಿನ ತಪ್ಪು ಏನೇ ಇರಲಿ ಅದು ಗೌಣವಾಗುತ್ತೆ. ಹೆತ್ತ ತಾಯಿಗೆ ಹೆಗ್ಗಣ ಮುದ್ದು ಅನ್ನೋ ಪದಕ್ಕೆ ಅನ್ವಥವೇ ಆಕೆ. ತನ್ನ ಮಗುವಿನ ತಪ್ಪನ್ನು ಆಕೆ ಅಷ್ಟು ಸುಲಭವಾಗಿ ಒಪ್ಪೋ ಅಮ್ಮ ಅನ್ನುವ ಪದ ಅಕ್ಕರೆ, ಪ್ರೀತಿಯ ಧ್ಯೋತಕ. ಅದಕ್ಕೇ ತಾನೇ ನಾವು ನೋವಾದಾಗ, ಕಷ್ಟ ಬಂದರೂ ಮೊದಲಿಗೆ ಅಮ್ಮಾ ಅಂತ ರೋಧಿಸೋದು. ಯಾವ ಮಗುವಾದ್ರೂ ಹುಟ್ಟಿದ ಕೂಡಲೇ ಅಮ್ಮಾ ಅಂತ ಕರೆಯದೆ `ಮಮ್ಮೀ' ಅಂತಾ ಕರೆಯುತ್ತಾ..? ಅವಕ್ಕೆ ಮಮ್ಮಿ, ಪಪ್ಪ ಅಂತ ಅಭ್ಯಾಸ ಮಾಡಿಸೋ ನಾವುಗಳು, ಆ ಮಗುವಿಗೆ ಅಮ್ಮ ಅನ್ನೋ ಪದದ ಮಹತ್ವಾನೇ ತಿಳಿಯದಂತೆ ಮಾಡಿಬಿಡುತ್ತೇವೆ.
ದಿನ ಕಳೆದಂತೆ ಅಮ್ಮ ಅಂದ್ರೆ ಏನು ಅಂತ ತಿಳಿಯದ ಎಲ್. ಕೆಜಿ, ಯು.ಕೆಜಿ ಮಕ್ಕಳು ಹೆತ್ತವಳನ್ನು ಮಮ್ಮಿ ಅಂತ ಕರೆಯೋದು ನೋಡಿದ್ರೆ ಹಿಂಸೆ ಅಂತನ್ನಿಸುತ್ತೆ. ಅಮ್ಮಾ ಅನ್ನೋ ಪದದಲ್ಲಿರೋ ಪ್ರೀತಿ, ಅಕ್ಕರೆ ಈ ಹಾಳು ಇಂಗ್ಲೀಷ್ನಲ್ಲೇನಿದೆಯೋ ದೇವರಿಗೇ ಗೊತ್ತು. ತನ್ನ ಮಗು ಮಮ್ಮೀ ಅಂತಾ ಹೇಳೋಕ್ಕೆ ಕಲಿತರೆ ಅದೇ ಭಾಗ್ಯ ಅಂತ ತಿಳಿಯೋ ಮಮ್ಮಿಗಳು ಇರೋವಾಗ ಅಮ್ಮ ಅಂತ ಕರೆಯೋ ಮಕ್ಕಳಾದ್ರೂ ಎಲ್ಲಿರುತ್ತೆ?
ನಾವು ಪ್ರತಿವರ್ಷ ಪ್ರೀತಿಗೊಂದು ದಿನ, ಸ್ನೇಹಕ್ಕೊಂದು ದಿನ, ಟೀಚರುಗಳಿಗೆ ಒಂದು ದಿನ ಅಂತ ನೆನಪಲ್ಲಿಟ್ಟು ಆಚರಿಸ್ತೇವೆ. ಆದ್ರೆ ಅಮ್ಮನಿಗೂ ಒಂದು ದಿನ ಇದೆ, ಅದನ್ನು ಆಚರಿಸೋದು ಬಿಡಿ, ಅದರ ಬಗ್ಗೆ ತಿಳಿಯದವರೇ ಸಾಕಷ್ಟು ಜನ ಇದಾರೆ.
ಮಕ್ಕಳಿಗೆ ಅಮ್ಮನೇ ದಾರಿದೀಪ. ಆಕೆ ನಡೆದ ಹಾದಿಯನ್ನು ಅನುಸರಿಸಿದ ಮಕ್ಕಳು ಜೀವನದಲ್ಲಿ ಖಂಡಿತಾ ಮುಂದೆ ಬಂದೇ ಬರ್ತಾರೆ. ಮುಂದೆ ಅಮ್ಮನ ಆದರ್ಶ ಗುಣಗಳು ಆ ಮಕ್ಕಳನ್ನು ಎಡವದಂತೆ ಕಾಪಾಡುತ್ತೆ. ಅಮ್ಮನಾಗುವುದು ಮುಖ್ಯವಲ್ಲ. ಆದ್ರೆ ಮಕ್ಕಳಿಗೆ ಒಳ್ಳೆಯ ಅಮ್ಮನಾಗಿ ಅವರ ಬಾಳು ಬೆಳಗಿಸೋದು ಮುಖ್ಯ. ತಪ್ಪಿದಾಗ ತಿದ್ದಿ, ಎಡವಿದಾಗ ಕೈ ಹಿಡಿದು ಮುನ್ನಡೆಸೋ ಅಮ್ಮ ದೇವತೆಗಿತಲೂ ಒಂದು ಹೆಜ್ಜೆ ಮುಂದಿರುತ್ತಾಳೆ. ಒಂದು ಮಾತಿದೆ, ದೇವರಿಗೆ ಭೂಮಿಯೆಲ್ಲೆಡೆ ಹೋಗಲು ಪುರುಸೋತ್ತಿರಲಿಲ್ಲವಂತೆ, ಆಗ ತನ್ನ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಮ್ಮನನ್ನು ಸೃಷ್ಟಿಸಿದನಂತೆ.
ಇಂದಿನ ಫ್ಯಾಶನ್ ಯುಗದಲ್ಲಿ ಅಮ್ಮ ಅನ್ನೋ ಪ್ರೀತಿ ಬಾಂಧವ್ಯ ಜಸ್ಟ್ ಫ್ರೆಂಡ್ಸ್ ಅನ್ನೋದಕ್ಕೆ ಬಂದು ನಿಂತಿದೆ. ಇದು ಸರಿಯಲ್ಲ. ಅಮ್ಮ ಜಸ್ಟ್ ಫ್ರೆಂಡ್ ಅಲ್ಲ, ಆಕೆ ಬೆಸ್ಟ್ ಫ್ರೆಂಡ್. ಬಾಳಿನುದ್ದಕ್ಕೂ ನಮಗೆ ಕೈ ಹಿಡಿದು ನಡೆಸುವವಳು. ಆಕೆ ಎಲ್ಲಿಯೇ ಇರಲಿ, ಹೇಗೇ ಇರಲಿ. ಆಕೆಯ ನೆನಪು ಸದಾ ಹಸಿರು. ಅಮ್ಮಾ... ಐ ಲವ್ ಯೂ ಟೂ...

Friday, May 14, 2010

Thursday, May 13, 2010

ನೋ ಮೋರ್ ಕಮೆಂಟ್ಸ್ ಪ್ಲೀಸ್...

ಓ ಅವ್ಳಾ... ಕಿವಿಗೊಂದು ಮೊಬೈಲ್ ಅಂಟಿಸ್ಕೊಂಡು ಬಿಟ್ರೆ ಎದುರಲ್ಲಿ ಯಾರು ಬಂದು ಗುದ್ದಿದರೂ ಗೊತ್ತಾಗಲ್ಲ ಅವಳಿಗೆ. ಕಾಲೇಜಿಗೆ ಹೋಗುವಾಗ ಮನೆಯಿಂದ ಬಸ್ ನಿಲ್ದಾಣದ ತನಕ, ಅಲ್ಲಿಂದ ಬಸ್ ಹತ್ತಿ ಕಾಲೇಜ್ನಲ್ಲಿ ಇಳಿಯೋವರೆಗೆ, ಸಂಜೆ ಮರಳಿ ಬಸ್ನಿಂದ ಇಳಿದವಳು ಮನೆ ಕಡೆ ನಡೆಯೋವಾಗ್ಲೂ ಮೊಬೈಲ್ ಕಿವೀಲೇ ನೇತಾಡ್ಬೇಕು. ಅವಳಿಗೆ ಯಾವನೋ ಒಬ್ಬ ಇದ್ದಾನಂತೆ... ಅಲ್ಲಲ್ಲ ಅವಳು ದ್ರೌಪತಿಯ ಥರಾ ನಾಲ್ಕೈದು ಮಂದಿ ಹುಡುಗ್ರ ಜತೆ ಫ್ಲಟರ್್ ಮಾಡ್ತಿರ್ತಾಳೆ ಅಂತೆ. ಮೂರೂ ಬಿಟ್ಟವರಿಗೆ ಯಾರೇನೇ ಹೇಳಿದ್ರೂ ನಾಚಿಕೆ ಎಂಬುದಿರಲ್ಲ. ನನ್ನ ಮಗಳಾಗಿರ್ಬೇಕಾಗಿತ್ತು, ಒದ್ದು ಬುದ್ಧಿ ಕಲಿಸ್ತಿದ್ದೆ. ಆಕೆ ಹಾಗಂತೆ... ಆಕೆ ಹೀಗಂತೆ... ಇಂತಹ ಹಲವಾರು ಮಾತುಗಳನ್ನು ನಮ್ಮ ಸುತ್ತಮುತ್ತ ದಿನಾ ಕೇಳಿರ್ತೀವಿ. ಇದು ನಮ್ಮ ಮನೆಯ ಅಥವಾ ಪಕ್ಕದ ಮನೆಯ ಆಗಷ್ಟೇ ಯೌವನಕ್ಕೆ ಕಾಲಿಟ್ಟ ಹುಡ್ಗಿಗೆ ಅಕ್ಕಪಕ್ಕದ ಜನ ಹೇಳೋ ಮಾತುಗಳು. ಇಂತದ್ದನ್ನೆಲ್ಲಾ ಬೇಜಾನ್ ಕೇಳಿ ನಾವೂ ತಲೆ ಅಲ್ಲಾಡಿಸಿರ್ತೀವಿ. ಆದ್ರೆ ಒಂದು ದಿನನಾದ್ರೂ ಆಕೆಯ ಬಗ್ಗೆ ಕಮೆಂಟ್ ಮಾಡೋಕ್ಕೆ, ಆಕೆಗೆ ಎಲ್ಲಾ ಬಿಟ್ಟವಳೆಂಬ ಸಟರ್ಿಫಿಕೇಟ್ ಕೊಡೋಕ್ಕೆ `ನೀವ್ಯಾರು?' ಅಥವಾ ಅದನ್ನು ಕೇಳಿಕೊಂಡು ಸುಮ್ಮನಿರೋಕ್ಕೆ `ನಾವ್ಯಾರು?' ಅಂತ ಚಿಂತೆ ಮಾಡಿದ್ದೀವಾ?
ಇಲ್ಲಿ ಸಟರ್ಿಫಿಕೇಟ್ ಹೆಣ್ಣು ಮಕ್ಕಳಿಗೆ ಮಾತ್ರ ಸಿಗೋದು, ಅದರಿಂದ ನಾವು ಸೇಫ್ ಎಂದು ಹುಡುಗರು ಭಾವಿಸಬೇಕಾದ್ದಿಲ್ಲ. ಆದ್ರೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿನ ಹೆಂಗಸರೂ ಹೆಚ್ಚಾಗಿ ಹುಡುಗಿಯರತ್ತಲೇ ಬೊಟ್ಟು ಮಾಡಿರುತ್ತಾರೆ ಅನ್ನೋದು ಮಾತ್ರ ನನಿಜ. ಹೆಚ್ಚಾಗಿ ಕಾಲೇಜ್ ಮೆಟ್ಟಿಲು ಹತ್ತಿದ ತಕ್ಷಣ ಅವರನ್ನು ಈ ಕಮೆಂಟ್ಸ್ಗಳು ಬೆನ್ನು ಬೀಳುತ್ತವೆ. ಆಗಷ್ಟೇ ಆಕೆ ಹದಿಹರೆಯಕ್ಕೆ ಕಾಲಿಟ್ಟಿರ್ತಾಳೆ. ಮನೆಯಲ್ಲಿ ಇನ್ನೂ ಪುಟ್ಟ ಮಗು ಎಂದು ಭಾವಿಸಿ ಕೈಗೊಂದು ಮೊಬೈಲು ತೆಗೆಸಿಕೊಟ್ಟು ಕಾಲೇಜಿಗೆ ಕಳುಹಿಸುತ್ತಾರೆ. ಆಕೆ ಮನೆಯಿಂದ ಹೊರಬಂದವಳೇ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಆತುರದಲ್ಲಿ ಕಾಲೇಜಿನ ಬಗ್ಗೆ ಬಣ್ಣ, ಬಣ್ಣದ ಕನಸು ಕಾಣುತ್ತಾ ರಸ್ತೆಗಿಳಿಯುತ್ತಾಳೆ. ರಸ್ತೆಯಲ್ಲಿ ಇದ್ದವರ ಕಣ್ಣುಗಳು ತನ್ನನ್ನೇ ತಿವಿಯುತ್ತಿವೆ ಎಂದು ಭಾಸವಾದರೂ ಭಯಪಡದೆ ನೋಡಿದವರಲ್ಲಿ ನಗು ವಿನಿಮಯ ಮಾಡಿಕೊಳ್ಳುತ್ತಾಳೆ. ರಿಕ್ಷಾ ಚಾಲಕ, ಬಸ್ ಕಂಡಕ್ಟರ್, ಅಂಗಡಿಯವನು... ಹೀಗೆ ಎಲ್ಲರಲ್ಲೂ ನಿಷ್ಕಲ್ಮಶ ನಗು ಮಾತ್ರ. ಇದು ಮುಂದುವರಿಯಿತು ಅಂತ ತಿಳ್ಕೊಳ್ಳಿ. ಆಗ ಬರುತ್ತೆ ಅವಳ ಹಿಂದೆ ಕಮೆಂಟ್ಸ್ಗಳ ಸರಮಾಲೆ. ಅವಳು ಅದರಿಂದ ಪಾರಾಗೋ ದಾರಿ ಕಾಣದೆ ಎಡವಿ ಬಿದ್ದರಂತೂ ಅವಳನ್ನು ಸುತ್ತಿಕೊಳ್ಳುವುದೇ ಡಿ.ಗ್ರೇಡ್ ಸಟರ್ಿಫಿಕೇಟ್ಗಳು. ಅವಳಿಗೆ ಆತನೊಂದಿಗೆ... ಈತನೊಂದಿಗೆ... ಏನೇನೇ ಗುಸುಗುಸು... ಪಿಸುಪಿಸು. ಎಲ್ಲರ ಬಾಯಿ ಮುಚ್ಚಿಸುವಷ್ಟರಲ್ಲಿ ಒಂದೋ ಅವಳು ಈ ಕೆಟ್ಟ ಸಮಾಜಕ್ಕೆ ವಿದಾಯ ಹೇಳಿರ್ತಾಳೆ ಅಥವಾ ಬಸವಳಿದು ಬೆಂಡಾಗಿರುತ್ತಾಳೆ.
ಇದು ಹುಡುಗಿಯರ ಬಗೆಗಿನ ವ್ಯಾಖ್ಯಾನವಾದರೆ ಹುಡುಗರದ್ದು ಇನ್ನೂ ವಿಚಿತ್ರ ಕತೆಗಳು. ಹುಡುಗಿ ಸಂಜೆ ಶಾಲೆ ಬಿಟ್ಟ ನಂತರ ನೇರವಾಗಿ ಮನೆಗೆ ನಡೆಯೋ ಅಭ್ಯಾಸ ಮಾಡಿರ್ತಾಳೆ. ಆದ್ರೆ ಹುಡುಗ ಸಂಜೆ ಶಾಲೆ ಮುಗಿದ ಬಳಿಕ ಒಂದು ಸ್ವಲ್ಪ ಹೊತ್ತು ಆಟವಾಡ್ತಾ ತಡವಾಗಿ ಮನೆಗೆ ಬರ್ತಾನೆ. ಶಾಲೆ ಮುಗಿದು ಕಾಲೇಜಿಗೆ ಸೇರಿದ ಬಳಿಕ ಆತನ ಮನೆ ಹೊರಗಡೆಯ ಗೆಳೆಯರ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ. ಕೈಯಲ್ಲೊಂದು ಮೊಬೈಲ್ ಇದ್ದರಂತೂ ಮೆಸೇಜ್ ಫ್ರೀ ಆಫರ್ ಹಾಕಿಸ್ಕೊಂಡು ಎಲ್ಲೋ ಕುಳಿತು ಕಾಲೇಜ್ ಫ್ರೆಂಡ್ಸ್ಗಳಿಗೆ ಮೆಸೇಜ್ ಮಾಡ್ತಾ ಇದ್ರೆ ರಾತ್ರಿಯಾದದ್ದೇ ತಿಳಿಯುವುದಿಲ್ಲ. ಇದನ್ನು ನೋಡೋ ಸಮಾಜ ಯಾವ ರೀತಿ ಬೇಕಾದ್ರೂ ಅರ್ಥ ಮಾಡ್ಕೋಬಹುದು. ಕುಡುಕನೆಂತಲೂ, ಹುಡ್ಗೀರ ಹಿಂದೆ ಬಿದ್ದಿದ್ದಾನೆ ಅಂತಲೂ ಕಮೆಂಟ್ಸ್ ಮಾಡ್ಬಹುದು. ಇದು ಕಾಲೇಜ್ ಮುಗಿಸಿ ಎಲ್ಲಾದ್ರೂ ಸಣ್ಣಪುಟ್ಟ ಕೆಲಸಕ್ಕೆ ಸೇರಿದ ನಂತರ ಮತ್ತಷ್ಟು ಹೆಚ್ಚುತ್ತೆ. ಆತನ ಬಗ್ಗೆ ಕಾಲಕ್ಕೆ ಅನುಗುಣವಾಗಿ ರೌಡಿ, ಪೊಕರ್ಿ, ಹೆಣ್ಣು ಹುಚ್ಚ... ಹೀಗೆ ನಾನಾ ರೀತಿಯ ಸಟರ್ಿಫಿಕೇಟ್ ಅನ್ನು ಕೊಟ್ಟಿರುತ್ತದೆ ಈ ಸಮಾಜ.
ಈಗಂತೂ ಕಾಲ ಬದಲಾಗಿ ಬಿಟ್ಟಿದೆ. ಬದಲಾವಣೆ ಅನ್ನೋದು ಪ್ರಕೃತಿಯ ಸಹಜ ಗುಣ. ಪ್ರಾಕೃತಿಕ ವೈಚಿತ್ರ್ಯಗಳಲ್ಲಿ ಬದಲಾವಣೆ ಕಂಡು ಬಂದಂತೆ ನಾವೂ, ನೀವೂ ಬದಲಾಗಲೇಬೇಕು. ಆದ್ರೆ ಹೊಸತನದತ್ತ ಹೊರಳುವಾಗ ಸ್ವಲ್ಪವೇ ಎಡವಿದ್ರೂ ಇಂತಹ ಮಾತುಗಳನ್ನು ಕೇಳ್ಬೇಕಾಗುತ್ತೆ. ತುಳುವಿನಲ್ಲಿ ಒಂದು ಗಾದೆ ಮಾತಿದೆ. `ಅಂಡೆದ ಬಾಯಿನಾಂಡಲಾ ಕಟ್ಟೊಲಿ, ಆಂಡ ದೊಂಡೆದ ಬಾಯಿನ್ ಕಟ್ಟರೆ ಸಾಧ್ಯ ಇಜ್ಜಿ' ಅಂತ. ಮನುಷ್ಯರ ಎಲುಬಿಲ್ಲದ ನಾಲಗೆಯೇ ಹಾಗೆ. ಕಂಡದ್ದರ ಬಗ್ಗೆ, ಕೇಳಿದ್ದರ ಬಗ್ಗೆ ಏನಾದ್ರೂ ಕಮೆಂಟ್ಸ್ ಮಾಡದೇ ಇದ್ರೆ ನಾವು ಬದುಕಿದ್ದೂ ಸತ್ತಂತೆ ಎಂದು ಭಾವಿಸುವ ಜನಾನೇ ಇಲ್ಲಿರೋದು. ಹೀಗಾಗಿ ಮಾತು ಆಡಿದರೆ ಹೊಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಗಾದೆ ಮಾತನ್ನು ಯಾರೂ ಕೇರ್ ಮಾಡಲ್ಲ.
ಈ ಕಮೆಂಟ್ಸ್ ಅನ್ನೋದು ಯಾರನ್ನೂ ಬಿಟ್ಟಿಲ್ಲ. ಆಗಷ್ಟೇ ಅಂಗನವಾಡಿಗೆ ಹೋಗೋ ಪುಟ್ಟ ಹುಡ್ಗನಿಂದ ವಯಸ್ಕರ ತನಕ ಎಲ್ಲರಿಗೂ ಕಮೆಂಟ್ಸ್ ಅನ್ವಯವಾಗುತ್ತೆ. ಏನೇ ಮಾಡ್ಲಿ ಅದಕ್ಕೊಂದು ಕಮೆಂಟ್ಸ್, ಎಲ್ಲಿಗೇ ಹೋಗಲಿ ಅಲ್ಲಿಗೂ ಬೆನ್ನು ಬಿಡದ ಕಮೆಂಟ್ಸ್. ಈ ಕಮೆಂಟ್ಸ್ಗಳ ಸಂಖ್ಯೆ ಹೆಚ್ಚಿದಂತೆ ಅವನು ಅಥವಾ ಅವಳು ಹಾಗೆ ಅಂತ ಪುಕ್ಸಟ್ಟೆ ದೊರೆಯುವ ಸಟರ್ಿಫಿಕೇಟ್. ಇಂತಹ ಕೀಳು ಸಟರ್ಿಫಿಕೇಟ್ಗೆ ಬಲಿಯಾಗಿ ನಾವು ಯಾರೆಂದು ನಮಗೇ ಮರೆತು ಹೋಗುವ ಮುನ್ನ ಈ ಬಗ್ಗೆ ಯೋಚಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಅನ್ನೋದು ನನ್ನ ಅಭಿಮತ.

ಸಟರ್ಿಫಿಕೇಟ್ ನೀಡೋರ ಮನೋಸ್ಥಿತಿ:
ಇಲ್ಲಿ ಎಲ್ಲರೂ ಕೆಟ್ಟವರು, ಕೀಳು ಅಭಿರುಚಿಯ ಕಮೆಂಟ್ಸ್ ಮಾಡೋರು ಅಂತ ಹೇಳೋಕ್ಕಾಗಲ್ಲ. ಆದ್ರೆ ಕಮೆಂಟ್ಸ್ಗಳ ವಿರುದ್ಧ ತಿರುಗಿ ನಿಂತು ಅವರ್ಯಾಕೆ ನಮ್ಗೆ ಈ ರೀತಿ ಕಮೆಂಟ್ಸ್ ಮಾಡ್ತಾರೆ ಅಂತ ಯೋಚಿಸಿದ್ರೆ ವಾಸ್ತವ ಸಂಗತಿ ತಿಳಿಯುತ್ತೆ. ಮುಖ್ಯವಾಗಿ ಹೇಳುವುದಾದ್ರೆ ಕಮೆಂಟ್ಸ್ ಮಾಡೋರ ಮನೋಸ್ಥಿತಿಯೂ ಸರಿ ಇರೋದಿಲ್ಲ. ಅವಳು ಅಥವಾ ಅವಳು ಹಾಗೆ ಅಂತ ಹೇಳೋರ ಮನೆಯಲ್ಲಿನ ಮಕ್ಕಳು ಅಂತಹ ಏನೋ ಘನಂದಾರಿ ಕೆಲಸ ಮಾಡಿರ್ತಾರೆ. ಅಥವಾ ಅವರಿಗೆ ವೈಯಕ್ತಿಕ ದ್ವೇಷ ಇರುತ್ತೆ. ಇದು ಯಾವುದೂ ಇಲ್ಲ ಅಂತಂದ್ರೆ ಅವರು ಅವಳ ಅಥವಾ ಅವನ ಬಗ್ಗೆ ಇನ್ನೇನನ್ನೋ ಯೋಚಿಸಿರ್ತಾರೆ. ಆದ್ರೆ ಅವರು ಅಂತಹವಳಲ್ಲ ಅಂತ ತಿಳಿದಾಗ ಅವಳಿಗೆ ಏನಾದ್ರೂ ಸರಿ ಕೆಟ್ಟ ಹೆಸರು ತರ್ಬೇಕು ಅಂತ ಹಾತೊರೆಯುತ್ತಾರೆ. ನೀವು ಈ ಕಸಮೆಂಟ್ಸ್ ಮಾಡೋರನ್ನು ಗಮನವಿಟ್ಟು ನೋಡಿ. ಅವರು ಜೀವನದಲ್ಲಿ ಖುಷಿಯಾಗಿರಲ್ಲ ಮತ್ತು ಅವರ ಮಾತಿಗೆ ಏನಾದರೂ ವೈಯಕ್ತಿಕ ಕಾರಣ ಇದ್ದೇ ಇರುತ್ತೆ. ಇದನ್ನೇ ನಾವು ಕೇಳಿ ಸುಮ್ಮನಿರೋದು ಸರೀನಾ?

ಎಚ್ಚರಿಕೆ ಅಗತ್ಯ:
ನಾವೇನೋ ಟೀಕೆ ಅಥವಾ ಕಮೆಂಟ್ಸ್ ಮಾಡೋರು ಮಾಡ್ತಾನೇ ಇರ್ತಾರಪ್ಪ. ಅವರು ಏನು ಹೇಳಿದ್ರೆ ನಮಗೇನು? ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಮಹಾನ್ ನಟಿಯರ ಬಗ್ಗೆ ಏನೇನೋ ಕಮೆಂಟ್ಸ್ ಮಾಡಲ್ವ? ನಟರುಗಳಿಗೆ ದಿನಕ್ಕೊಬ್ಬ ಹುಡುಗಿಯ ಜತೆ ಸಂಬಂಧ ಇದೆ ಅಂತ ಕೆಲವೊಂದು ಪತ್ರಿಕೆಗಳು ಪುಟಗಟ್ಟಲೆ ಬರೆಯೋಲ್ವ? ಅಷ್ಟೇ ಯಾಕೆ ಇತ್ತೀಚೆಗೆ ಮುಖ್ಯಮಂತ್ರಿ ಯಡ್ಡಿಯವರ ಬಗ್ಗೆ ರೆಡ್ಡಿ ಸೋದರರು ಬಾಯಿಗೆ ಬಂದಂತೆ ಕಮೆಂಟ್ಸ್ ಮಾಡಿಲ್ವಾ? ಅವರ ಮಯರ್ಾದೆ ಏನಾದ್ರೂ ಬೀದಿ ಪಾಲಾಗಿದೆಯಾ? ಅವರು ಕಮೆಂಟ್ಸ್ಗಳಿಗೆ ನೊಂದಿಕೊಂಡಿದ್ದಾರಾ ಅಂತ ತೀಮರ್ಾನಿಸಿ ಬಿಡಬಹುದು. ಆದ್ರೆ ಇದು ದೊಡ್ಡೋರ ವಿಷಯವಾಯ್ತು. ಸಿನಿಮಾ ತಾರೆಯರಿಗೆ, ರಾಜಕೀಯ ನಾಯಕರಿಗೆ ಕಮೆಂಟ್ಸ್ ಅನ್ನೋದು ದೊಡ್ಡ ಸಂಗತಿಯೇ ಅಲ್ಲ. ಅವರು ಅದನ್ನೆಲ್ಲಾ ಹೇಗೋ ಮ್ಯಾನೇಜ್ ಮಾಡ್ತಾರೆ. ಆದ್ರೆ ಇದರಲ್ಲಿ ಪಾಡು ಅನುಭವಿಸೋದು ಮಾತ್ರ ನಮ್ಮ, ನಿಮ್ಮಂತಹ ಸಾಮಾನ್ಯ ಜನರು ಅನ್ನುವುದನ್ನು ತಿಳಿದುಕೊಳ್ಳಬೇಕು. ಕಮೆಂಟ್ಸ್ ಮಾಡಲಿ ಅಂತ ಸುಮ್ಮನಿರುವ ಬದಲು ಒಮ್ಮೆಯಾದರೂ ಅದನ್ನು ಎದುರಿಸುವ ಧೈರ್ಯ ತೋರಬೇಕು. ಇಲ್ಲಾಂದ್ರೆ ಅವರಿಗೂ ಅಭ್ಯಾಸವಾಗಿ ಬಿಡುತ್ತೆ. ನಮಗೂ ಅಭ್ಯಾಸವಾಗುತ್ತೆ.
ಹದಿಹರೆಯಕ್ಕೆ ಕಾಲಿಟ್ಟ ಅಥವಾ ಹದಿಹರೆಯ ಮೀರುವ ವೇಳೆ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳನ್ನು ಈ ಕೆಟ್ಟ ಕಮೆಂಟ್ಸ್ಗಳಿಗೆ ಬಲಿಯಾಗದಂತೆ ಕಾಪಾಡಬೇಕಾದ್ದು ಹೆತ್ತವರ, ಪೋಷಕರ ಕರ್ತವ್ಯ. ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಹೋಗುವಾಗ ಸಭ್ಯತೆ ರೂಢಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿನ ವರ್ತನೆ ಹೇಗಿದ್ದರೆ ಚೆನ್ನ ಅನ್ನೋದನ್ನು ಹೆತ್ತವರು ತಿಳಿಸಿ ಕೊಡಬೇಕು. ಎದುರಿಗೆ ಸಿಕ್ಕವರ ಜತೆ ನಗು ವಿನಿಮಯ ಮಾಡುವುದು ತಪ್ಪಲ್ಲ. ಆದ್ರೆ ಗುರುತು ಪರಿಚಯವಿಲ್ಲದವರು ಮಾತಿಗೆಳೆದರೆ ಮುಂದುವರಿಯದಿರುವುದು ಸೂಕ್ತ. ಬಸ್ ಕಂಡಕ್ಟರ್, ರಿಕ್ಷಾ ಚಾಲಕ, ಅಂಗಡಿಯವನು... ಯಾರೇ ಆಗಿರಲಿ. ರಸ್ತೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಸಲುಗೆ ಒಳ್ಳೆಯದಲ್ಲ. ಅತಿಯಾದ ಸಲುಗೆ, ಸ್ನೇಹ ನಿಮಗೆ ಬೇರೆಯೇ ಆದ ಸಟರ್ಿಫಿಕೇಟ್ ದೊರಕಿಸುವ ಸಾಧ್ಯತೆಯಿದೆ. ಜೀವ ಮತ್ತು ಜೀವನ ಎರಡೂ ಅಮೂಲ್ಯ. ಹೀಗಾಗಿ ಕಮೆಂಟ್ಸ್ಗೆ ಬಲಿಯಾಗುವುದು ಬೇಡ. ಒಂದು ವೇಳೆ ಅಂಥ ಸಟರ್ಿಫಿಕೇಟ್ ಯಾರಾದ್ರೂ ನೀಡಿದ್ರೆ ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬದಲಾಗಲು ಪ್ರಯತ್ನಿಸೋಣ. ಸಟರ್ಿಫಿಕೇಟ್ ನೀಡೋರಿಗೆ ನನ್ನ ಕಿವಿಮಾತು ಏನೆಂದರೆ, ಇನ್ನು ಮುಂದಾದರೂ ಯೋಚಿಸಿ ಸಟರ್ಿಫಿಕೇಟ್ ನೀಡುವುದೊಳ್ಳೆಯದು. ಯಾಕೇಂದ್ರೆ ಇಂದು ನಿಮ್ಮ ಕಮೆಂಟ್ಸ್ಗಳಿಂದ ಬೇರೆಯವರು ನೊಂದರೆ ನಾಳೆ ಮತ್ತ್ಯಾರದ್ದೋ ಕಮೆಂಟ್ಸ್ಗೆ ನೀವು, ನಿಮ್ಮ ಮನೆಯ ಮಕ್ಕಳೂ ಗುರಿಯಾಗುತ್ತಾರೆ. ಆದ್ದರಿಂದ ನೋ...ಮೋರ್ ಕಮೆಂಟ್ಸ್ ಪ್ಲೀಸ್..!