doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Monday, July 26, 2010

ಕೋಪಿಸೋದ್ರಲ್ಲಿ ಇರೋ ಸುಖ...




ಕೋಪದಲ್ಲಿ ಇರೋ ಸುಖ..!

  • `ಕೋಪ' ಅನ್ನೋದು ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಮುಂಗಾರಿನ ಸಮಯದಲ್ಲಿ ಎನಿಸ್ಕೊಂಡಾಗ ಬರೋ ಸಿಡಿಲಿನಂತೆ ನಮ್ಗೆ ತೀರಾ ಚಿರಪರಿಚಿತ ಪದ. ಕರಿ ಮೋಡ ಮುಸುಕಿದಂತೆ ನಮ್ಮ ಮನಸ್ಸನ್ನು ಆವರಿಸಿ, ಮೈ ಮನದಲ್ಲಿ ಸಂಚಲನ ಉಂಟು ಮಾಡೋ ಈ ಕೋಪದ ಮಜಾ ಸವಿದವರಿಗಷ್ಟೇ ಗೊತ್ತು. ಕೋಪದ ಮಹಿಮೆ ಬಲ್ಲವರಾರೋ? ಆದ್ರೆ ಈ ಕೋಪ ಅನ್ನೋದು ಯಾಕೆ ಬರುತ್ತೆ ಅಂತ ನಾವ್ಯಾರೂ ಊಹಿಸೋದೇ ಇಲ್ಲ. ಒಂದು ವೇಳೆ ಹಾಗೆ ಊಹಿಸೋದಿಕ್ಕೆ ಕೆಲ ಕಾಲ ತೆಗೆದುಕೊಂಡ್ರೂ ಆಗ ಎಲ್ಲಿಲ್ಲದ ಕೋಪ ಬರುತ್ತೆ. ಹೀಗೆ ಕೋಪವನ್ನು ನಾನಾ ರೀತಿಯಲ್ಲಿ ವಿಂಗಡಣೆ ಮಾಡೋದೇನೋ ಸರಿ. ಆದ್ರೆ ಕೆಲವೊಂದು ಸಲ ಈ ತರದ ಕೋಪಗಳಿಂದ ಲಾಭಕ್ಕಿಂತ ನಷ್ಠವೇ ಹೆಚ್ಚು ಅನ್ನೋದು ಅಷ್ಟೇ ದಿಟ.
    ನನ್ಗಂತೂ ಆಗಾಗ ಕೆಟ್ಟ ಕೋಪ ಬರುತ್ತೆ ಸ್ವಾಮೀ... ಈ ರೀತಿ ಕೋಪ ಬಂದಾಗ ನಾನು ಮನುಷ್ಯನಾಗಿರಲ್ಲ ಅಂತ ನಮ್ಮ ಮುಂದೆ ನಿಂತ್ಕೊಂಡು ತನ್ನ ಕೋಪದ ವರ್ಣನೆ ಮಾಡೋರನ್ನ ಬೇಜಾನ್ ನೋಡಿರ್ತೀವಿ. ಆತ ತಾನೊಬ್ಬ ಮಹಾನ್ ವ್ಯಕ್ತಿ ಅನ್ನೋ ತರಾ ಫೋಸ್ ಕೊಡ್ತಾ ನಿಂತಿದ್ರೆ ನಮ್ಗೆ ಇನ್ನಷ್ಟು ಕೋಪ ಬಂದಿರುತ್ತೆ. ಈ ಕೋಪಕ್ಕೆ ಕಾರಣಾನೂ ಬೇಕಿಲ್ಲ, ಅದಕ್ಕೆ ಅದರದ್ದೇ ಆದ ನಿದರ್ಿಷ್ಠ ಸ್ವರೂಪವೂ ಇಲ್ಲ. ಹಾಗಂತ ಈ ಕೋಪಾನ ಹಾಗೆ ಸುಮ್ಮನೆ ಬಿಡೋಕ್ಕಾಗುತ್ತಾ? ಬನ್ನಿ... ಈ ಕೋಪದ ಬಗ್ಗೆ ನಾವಾದ್ರೂ ಸ್ವಲ್ಪ ಹೊತ್ತು ಹರಟೋಣ.
    ಸಾಮಾನ್ಯವಾಗಿ ಕೋಪ ಯಾವಾಗ ಬರುತ್ತೆ ಅಂತ ಹೇಳೋಕ್ಕಾಗಲ್ಲ. ಬೆಳಿಗ್ಗೆದ್ದು ಆಫೀಸಿಗೆ ಹೊರಡೋ ತಯಾರಿಯಲ್ಲಿರ್ತೀವಿ. ಆಗ ನಮ್ಗೆ ಬೇಕಿದ್ದ ವಸ್ತುಗಳು ನಮ್ಮಿಂದ ಮರೆಯಾಗಿ ಸಕಾಲದಲ್ಲಿ ಸಿಗೋದಿಲ್ಲ. ಆಗಂತೂ ಕೂಡ್ಲೇ ಕೋಪ ಬಂದ್ಬಿಡುತ್ತೆ. ಅಮ್ಮ ತಿಂಡಿ ಮಾಡಿಟ್ಟು ಹತ್ರ ತಂದು ಕೊಡೋದು ಲೇಟಾದ್ರೆ ಆಗ್ಲೂ ಕೋಪ. ತಿಂಡಿ ತಿಂದು ಅಜರ್ೆಂಟಲ್ಲಿ ವಾಚು, ಪಸರ್ು ಮರೆತು ಬಸ್ಟ್ಯಾಂಡ್ಗೆ ತೆರಳಿದ್ರೆ ಬಸ್ಸು ನಮ್ಮನ್ನೇ ಬಿಟ್ಟು ಹೋಗಿರುತ್ತೆ. ನಾವು ಬಸ್ಸು ಕಾಯ್ಬೇಕೋ? ಬಸ್ಸು ನಮ್ಮನ್ನು ಕಾಯ್ಬೇಕೋ, ತಿಳಿಯದಾಗುತ್ತೆ. ಆಗ ಅನ್ಯಾಯವಾಗಿ ಡ್ರೈವರ್ ಮಹಾಶಯ ನಮ್ಮ ಕೋಪದ ಶಾಪಕ್ಕೆ ಗುರಿಯಾಗ್ಬೇಕಾಗುತ್ತೆ.
    ಸಿಕ್ಕಿದ ಬಸ್ನಲ್ಲಿ ಅಷ್ಟಿಷ್ಟು ತೂರ್ಕೊಂಡು ಒಳ ನುಗ್ಗಿದ್ರೆ ಕಂಡಕ್ಟರ್ನ ಹಾಳು ಬೈಗುಳ ಬೇರೆ. 4 ರೂಪಾಯಿ ಟಿಕೆಟ್ಗೆ 10 ರೂ ನೀಡಿದ್ರೆ ಚಿಲ್ಲರೆ ಇಲ್ಲ ಅನ್ನೋದು ನಮ್ಮ ಕಂಡಕ್ಟರ್ಗಳ ಸ್ಟೈಲ್. ಹಿಂದಿನ ಸ್ಟಾಪ್ನಲ್ಲಿ ಯಾರೋ ಟೈಂ ಕೀಪರ್ ಪುಣ್ಯಾತ್ಮ ಬೈದಿರ್ತಾನೆ, ಅದನ್ನು ಆತ ನಮ್ಮ ಮೇಲೆ ಒಂಚೂರೂ ಬಿಡದೆ ಕಾರಿ ಬಿಡ್ತಾನೆ. ಬಸ್ನಲ್ಲಿ ಮೆಲ್ಲಗೆ ಬೈದು ಬಿಟ್ರೆ ಪರ್ವಾಗಿಲ್ಲ, ಅಂತ ಸುಮ್ಮನಿರಬಹುದು. ಆದ್ರೆ ಕಾಲೇಜು ಹುಡ್ಗೀರ ಮುಂದೆ ಬೈದ್ರೆ ನಾವು ಸುಮ್ಮನಿರ್ತೀವಾ? ಆವಾಗ್ಲೆ ನಮ್ಗೆ ಕೆಟ್ಟ ಕೋಪ ಬರೋದು. ಹೀಗೆ ಕೆಲವೊಮ್ಮೆ ನಾವು ದಿನಕ್ಕೆಷ್ಟು ಸಾರಿ ಕೋಪ ಮಾಡ್ಕೋತೀವಿ ಅಂತ ನೆನಪೇ ಆಗಲ್ಲ.
    ಆಫೀಸಿಗೆ ಹೋದ್ರೆ ಅಲ್ಲೂ ಕೋಪ. ದಿನಾಲೂ ತಲೆ ತಿನ್ನೋರು ಅವತ್ತೂ ಅದನ್ನೇ ಮುಂದುವರಿಸಿದ್ರೆ ಸಾಕು, ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಮತ್ತೆ ಮನಸ್ಸಿಗೆ ಸಮಾಧಾನ ಹೇಳಿ ಸುಮ್ಮನಾಗೋ ಹೊತ್ತಿಗೆ ಕೋಪವೇನೋ ಇಳಿದಿರುತ್ತೆ. ಆದ್ರೆ ಕೋಪ ಮಾತ್ರ ನಮ್ಮನ್ನು ಆ ದಿನ ಪೂತರ್ಿ ನಕ್ಷತ್ರಿಕನ ಹಾಗೆ ಬೆನ್ನ ಹಿಂದೆ ಬಿದ್ದು ಕಾಡ್ತಾ ಇರುತ್ತೆ. ಹೀಗೆ ಕೋಪ ಮಾಡ್ಕೊಂಡು ರಸ್ತೆ ಮೇಲೆ ನಡೆಯ್ತಾ ಇದ್ರೆ ಎದುರಿಗೆ ಸಿಗೋರೆಲ್ಲಾ ನಮ್ಮ ಕೋಪಕ್ಕೆ ಗುರಿಯಾಗ್ತಾರೆ. ಹೆಚ್ಚಿನವರು ಮನೆಗೆ ಬಂದ ಮೇಲೆ ಹೆಂಡತಿಯ ನಗು ಮುಖ ನೋಡಿಯಾದ್ರೂ ತಣ್ಣಗಾಗ್ತಾರೆ. ಅವರಿಗೆ ಗೊತ್ತಿರುತ್ತೆ, ಬಡವನ ಕೋಪ ದವಡೆಗೆ ಮೂಲ ಅಂತ. ಮನೇಲಿ ಹೆಂಡತಿಯಲ್ಲಿ ಕೋಪಿಸ್ಕೊಂಡ್ರೆ ಈಗ ಸಿಗ್ತಾ ಇರೋ ಉಪಚಾರಾನೂ ಸಿಗೋದಿಲ್ಲ, ನೆಮ್ಮದೀನೂ ಇರಲ್ಲ. ಆಕೆ ಅರೆ ಬೇಯಿಸಿದ ಬೇಯಿಸಿದ ಅಡುಗೆ ತಿಂದು ಮಲಗಿದಾಗ ಕೋಪವೆಲ್ಲಾ ಇಳಿದುಬಿಡುತ್ತೆ. ಅದಕ್ಕೆ ಬುದ್ಧಿವಂತ ಗಂಡಸರು ತಮ್ಮ ಹೆಂಡತಿಯ ಮುಂದೆ ಕೋಪ ಪ್ರದಶರ್ಿಸೋಕ್ಕೆ ಹೋಗಲ್ಲ, ಒಂದು ವೇಳೆ ಹೋದ್ರೂ ಹೆಂಡತಿಯಾದವಳು ಹೇಳ್ತಾಳೆ, `ನೀವೊಮ್ಮೆ ಮನೆಗೆ ಬನ್ನಿ' ಅಂತ. ಇದರರ್ಥ ಮನೇಲಿ ಗ್ರಹಚಾರ ಕಾದಿರುತ್ತೆ ಅಂತ ಬೇರೆ ಹೇಳ್ಬೇಕಾಗಿಲ್ಲ ತಾನೇ? ಹೆಂಡತಿ ಗಂಡನ ಕೋಪಕ್ಕೆ ಉತ್ತರ ನೀಡಲು `ರಾತ್ರಿಯಾಗ್ಲಿ, ಬೆಡ್ರೂಮ್ಗೆ ಬರ್ತಾರಲ್ವಾ... ಆಗ ವಿಚಾರಿಸ್ಕೋತೀನಿ' ಅಂತ ಮನದಲ್ಲೇ ಮಂಡಿಗೆ ತಿನ್ತಾ ಇರ್ತಾಳೆ. ಹೀಗೆ ಕೋಪ ಸವರ್ಾಂತಯರ್ಾಮಿಯಾಗಿ ಅಲ್ಲೂ, ಇಲ್ಲೂ ಎಲ್ಲೆಲ್ಲೂ ಇರುತ್ತೆ. ಇವೆಲ್ಲದಕ್ಕಿಂತ ಭಿನ್ನವಾಗಿರೋದು ಪ್ರೇಮಿಗಳ ಕೋಪ... ಸಾಮನ್ಯವಾಗಿ ಹುಸಿಮುನಿಸಿನಿಂದ ಆರಂಭವಾಗೋ ಇದು ನಂತರ ಬೃಹತ್ತಾಗಿ ಬೆಳೆದು ದೊಡ್ಡ ಜಗಳವೇ ಆಗಿ ಬಿಡುತ್ತೆ. ಆಗ ಕೆಲವರಂತೂ ಏನೇನೋ ಮಾತಾಡೋದುಂಟು ಮಾರಾಯ್ರೇ... ಕೋಪಿಸ್ಕೊಂಡಾಗ ಪ್ರೇಮಿಗಳು ಅನ್ನೋದೇ ಮರೆತು ಶತ್ರುಗಳ ತರಾ ಕಾದಾಟಕ್ಕೆ ಇಳೀತಾರೆ. ಈ ಜಗಳ ಮುಗಿಯಲು ಕಣ್ಣೀರಿನ ಧಾರೆ ಎರಡೂ ಕಡೆಯಿಂದ ಧಾರಾಕಾರವಾಗಿ ಸುರೀಬೇಕು. ಆಗ ಇಬ್ಬರಿಗೂ ಸಮಾಧಾನವಾಗಿ ದಿನದ ಕೋಪಕ್ಕೆ ಫುಲ್ಸ್ಟಾಪ್. ಕೋಪ ಮರೆತು ಕಣ್ಣಂಚು ಒದ್ದೆಯಾಗಿ ಪರಸ್ಪರ ಸ್ಸಾರಿ ಕೇಳೋದಿದೆಯಲ್ವಾ? ಅದರಷ್ಟು ಸುಮಧುರ ಕ್ಷಣ ಮತ್ತೊಂದಿಲ್ಲ ಅನ್ನೋದು ನನ್ನ ಮಾತು. ಆಗ ಪ್ರೇಮಿ ಜತೆಗಿದ್ದರಂತೂ ಹೇಳೋದೇ ಬೇಡ. ಪರಸ್ಪರ ಬಾಹು ಬಂಧನದಲ್ಲಿ ಕರಗಿ ಸಂತೈಸೋ ಆ ಕ್ಷಣ ಅವಿಸ್ಮರಣೀಯ. ಕೋಪ ಬರೋದು ಸವರ್ೆ ಸಾಮಾನ್ಯ. ಆದ್ರೆ ಆ ಕೋಪಾನ ಮರೆತು ಪರಸ್ಪರ ಸಂತೈಸೋದು ಮುಖ್ಯ. ಅದಕ್ಕೆ ನಾನು ಮೊದಲು, ಅವನು ಮೊದಲು ಎನ್ನುವ ಹಠ, ಅಹಮ್ಮಿನ ಲವಲೇಶಾನೂ ಇರ್ಬಾರ್ದು. ಹಾಗಾದಾಗ ಮಾತ್ರ ಕೋಪಿಸ್ಕೊಳ್ಳೋದು ಚೆನ್ನಾಗಿರುತ್ತೆ. ಇಲ್ಲಾಂದ್ರೆ ಕೋಪ ಮತ್ತಷ್ಟು ಜಾಸ್ತಿಯಾಗಿ ಅವಾಂತರವನ್ನೆಬ್ಬಿಸುತ್ತೆ. ಅದಕ್ಕೆ ನನ್ನಾಕೆ ಆಗಾಗ ಹೇಳ್ತಿರ್ತಾಳೆ, ಕೋಪ ಕಡಿಮೆ ಮಾಡ್ಕೊಳ್ಳಿ ಅಂತ. ಆಗ ನನ್ಗೆ ಕೆಟ್ಟ ಕೋಪ ಬರುತ್ತೆ. ಎನಿವೇ... ಕೋಪ ಮರೆತು ಮತ್ತೆ ನಗಿಸುವ ನನ್ನವಳಿಗೆ ಥ್ಯಾಂಕ್ಸ್ ಹೇಳ್ತಾ, ವಂದನೆಗಳು.

Tuesday, July 13, 2010

ಕೊಡಚಾದ್ರಿಯ ತುದಿಗೆ...











ಕೊಡಚಾದ್ರಿಯ ತುದಿಗೆ...

ಬಿಡುವಿರದ ದಿನಗಳ ನಡುವೆಯೂ ಟ್ರೆಕ್ಕಿಂಗ್ ಅಥರ್ಾತ್ ಚಾರಣ ಅಂತಂದ್ರೆ ಕಿವಿ ನಿಮಿರಿಸೋ ನಮ್ಮ ಸಮಾನ ಮನಸ್ಕ ಗೆಳೆಯರ ತಂಡ ಈ ಬಾರಿ ಟ್ರೆಕ್ಕಿಂಗ್ ಹೊರಟಿದ್ದು ಮಂಜು ಕವಿಯುವ ನಾಡಿಗೆ... ಇಬ್ಬನಿ ಹನಿಯಾಗಿ ಹನಿಯೋ ಕೊಡಚಾದ್ರಿಯ ತುದಿಗೆ...
ಕೊಡಚಾದ್ರಿ ಟ್ರೆಕ್... ಅದೂ ಬಿಡದೆ ಕಾಡೋ ಮುಂಗಾರಿನ ನಡುವೆ..! ನಿಮಗೆಲ್ಲೋ ತಲೆ ಕೆಟ್ಟಿರಬೇಕು. ಬೇಸಿಗೆ ಕಾಲಕ್ಕೆ ಅಲ್ಲಿ ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. ರಸ್ತೆ ಬಂದ್ ಆಗಿ ಹಲವಾರು ಕಿ.ಮೀ. ದೂರ ಕಲ್ಲುಗುಡ್ಡವನ್ನೇರಿ ನಡೆದೇ ಹೋಗಬೇಕಾದ ಪರಿಸ್ಥಿತಿ ಬೇರೆ. ಹೀಗಿರುವಾಗ ಜಡಿಮಳೆಗೆ ಎದೆಯೊಡ್ಡಿ ಕೊಡಚಾದ್ರಿ ಬೆಟ್ಟವೇರುವುದುಂಟಾ... ಅಂತ ಕೊಡಚಾದ್ರಿ ಹೆಸರು ಕೇಳಿದವರೆಲ್ಲಾ ತಮಾಷೆ ಮಾಡ್ತಾ ಇದ್ರು. ಆದ್ರೂ ಹಿಡಿದ ಪಟ್ಟು ಸಡಿಲಿಸದ ನಮ್ಮ ಗೆಳೆಯರ ತಂಡ ಹೇಗಾದ್ರೂ ಸರಿ, ಅಲ್ಲಿ ಹೋಗೋಕ್ಕೆ ಮುಂಗಾರೇ ಸೂಕ್ತ. ಅದೊಂದು ನೆನಪಿನಂಗಳದಲ್ಲಿ ಮರೆಯಾಗದೆ ಉಳಿದೀತು ಅಂತಂದು ಭಾರೀ ಸಾಹಸಕ್ಕೆ ಹೊರಟಂತೆ ಹೊರಟೇ ಬಿಟ್ಟಿತು.
ಮಂಜು ಮುಸುಕಿದ ಹಾದಿ..!
ಕೊಡಚಾದ್ರಿ ಹೆಸರು ಕೇಳಲಷ್ಟೇ ಮಧುರ. ಆದರೆ ಕೊಡಚಾದ್ರಿ ತಲುಪಲು ಮಂಗಳೂರಿನಿಂದ ಅಂದಾಜು 250 ಕಿ.ಮೀ. ಸಂಚರಿಸಬೇಕು. ಮುಸ್ಸಂಜೆಯ ವೇಳೆ ಮಂಗಳೂರು ಬಿಟ್ಟು ತೆರಳಿದ ನಮ್ಮ ತಂಡ ಬೈಕ್ನಲ್ಲೇ ಸಂಚಾರ ನಡೆಸಿ ಕೊಲ್ಲೂರು ತಲುಪುವಾಗ ರಾತ್ರಿ ಹನ್ನೊಂದು ಗಂಟೆ. ಅಲ್ಲಿ ರಾತ್ರಿ ಕಳೆದು ಮುಂಜಾನೆ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ನಮ್ಮ ತಂಡ ಕೊಡಚಾದ್ರಿಯ ಚಾರಣ ಸುಖ ಅನುಭವಿಸಲು ಹೊರಟು ನಿಂತಿತ್ತು. ಆಗಿನ್ನೂ ಬೆಳಗಾಗಿರಲಿಲ್ಲ. ಹಕ್ಕಿಗಳು ಬೆಳಗಾಯಿತು ಎಂದು ಎಲ್ಲರನ್ನೂ ಎಬ್ಬಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದುವು. ಮಂಜು ಮುಸುಕಿದ ಕೊಲ್ಲೂರಿನ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಿಸಿ ಹೊರಟಾಗ ಚುಮುಚುಮು ಚಳಿ ಬೇರೆ ನಮ್ಮ ಜತೆಯಾಗಿತ್ತು. ಕೊಲ್ಲೂರು ದೇವಳದ ಎಡಭಾಗದಲ್ಲಿ ಬಲಕ್ಕೆ ತಿರುಗಿದಲ್ಲಿ ಕೊಡಚಾದ್ರಿಗೆ ಹೋಗುವ ರಸ್ತೆ ಸಿಗುತ್ತದೆ.
ಸುಮಾರು 13 ಕಿ.ಮೀ. ಬೈಕ್ನಲ್ಲಿ ಸಂಚರಿಸುವ ಮಜಾನೇ ಬೇರೆ. ಮಂಜು ತಬ್ಬಿದ ಹಸಿರು ಕಾನನದ ನಡುವೆ ಸಂಚರಿಸುವಾಗ ಎದುರಿನ ಬೈಕ್ ಕ್ಷಣಮಾತ್ರ ಕಾಣದಾಗುತ್ತದೆ. ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತು ಕಂಗೊಳಿಸುವ ಕೊಡಚಾದ್ರಿಯ ತಪ್ಪಲು ಪ್ರದೇಶ ಕಣ್ತುಂಬಿಕೊಳ್ಳಲು ಮಳೆಗಾಲವೇ ಸಕಾಲ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಸುತ್ತಲೂ ಕೊಲ್ಲೂರು ಮೂಕಾಂಬಿಕಾ ರಕ್ಷಿತಾರಣ್ಯ, ನಡುವೆ ಕಪ್ಪಗೆ ಮಿರಮಿರನೆ ಹೊಳೆಯುವ ಟಾರು ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕಣ್ಣು ಹಾಯಿಸಿದರೆ ಹಾಲ್ನೊರೆಯಂತೆ ಬಳುಕುತ್ತಾ ಮೇಲ್ಗಡೆಯಿಂದ ಧುಮ್ಮಿಕ್ಕುವ ಜಲಧಾರೆ, ಕಾಡುಬಾಳೆ, ಕಾಡು ಹಲಸಿನ ಮರಗಳು ಇವನ್ನೆಲ್ಲಾ ನೋಡುತ್ತಿದ್ದರೆ ಪ್ರಕೃತಿಯ ಮಡಿಲಿನಲ್ಲಿ ನಿಜಕ್ಕೂ ಧನ್ಯತಾಭಾವ ಮೂಡುತ್ತದೆ.
ಕರಕಟ್ಟ ಎಂಬಲ್ಲಿ ರಸ್ತೆಯ ಬದಿಯ ಫಲಕವೊಂದು ಕೊಡಚಾದ್ರಿಗೆ 10ಕಿ.ಮೀ. ಎಂದು ಸೂಚಿಸುತ್ತದೆ. ಇಲ್ಲಿಂದ ಮುಂದೆ ಬೈಕ್ನಲ್ಲಿ ಅರ್ಧ ಕಿ.ಮೀ. ಸಾಗುವ ಸಾಹಸವೇನೋ ಮಾಡಬಹುದು. ಆದ್ರೆ ಬೈಕ್ ಟಯರ್ಗಳ ಗ್ಯಾರಂಟಿ ಹೇಳಲಾಗದು. ಯಾಕೆಂದರೆ ಅಲ್ಲಲ್ಲಿ ರಸ್ತೆಗಡ್ಡವಾಗಿ ಬೃಹತ್ ಗಾತ್ರದ ಸಾಗುವಾನಿ, ಬೀಟೆ ಮರಗಳು ನೆಲಕ್ಕುರುಳಿರುತ್ತವೆ. ಕಲ್ಲು, ಮಣ್ಣಿನ ದಿಣ್ಣೆಯನ್ನು ಒಳಗೊಂಡ ಏರು ರಸ್ತೆಯಲ್ಲಿ ಸಾಗುವುದು ಅಸಾಧ್ಯವೂ ಹೌದು. ಈ ಕಾರಣಕ್ಕಾಗಿ ನಮ್ಮ ತಂಡ ಬೈಕ್ ನಿಲ್ಲಿಸಿ ಕೆಳಕ್ಕಿಳಿಯಲೇಬೇಕಾಯಿತು.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಚಾರಣ ಕೈಗೊಳ್ಳುವ ಚಾರಣಿಗರಿಗೆ ಸಾಮಾನ್ಯವಾಗಿ ಇಂಬಳದ ಪರಿಚಯವಿದ್ದೇ ಇರುತ್ತದೆ. ಇದಕ್ಕೆ ಉಂಬಳ, ತುಳುವಿನಲ್ಲಿ ಉಂಬುರು ಎಂದೆಲ್ಲಾ ಕರೆಯುತ್ತಾರೆ. ಬೈಕ್ನಿಂದ ಕೆಳಗಿಳಿದದ್ದೇ ನಮಗೆ ಸ್ವಾಗತ ಕೋರಿದ್ದು ರಾಶಿ ರಾಶಿ ಇಂಬಳಗಳು. ನಮ್ಮ ರಕ್ತ ಹೀರಲೆಂದೇ ದಾಹಗೊಂಡು ಕಾದು ನಿಂತ ರಕ್ಕಸನ ರೀತಿ ಒಮ್ಮೆ ಭಾಸವಾಯಿತು. ಎಲ್ಲಿಂದಲೋ ಓಡೋಡಿ ಬಂದು ಕಾಲಿನ ಮೇಲೆ ಹತ್ತಿ ಕ್ಷಣದಲ್ಲಿ ರಕ್ತ ಹೀರಿ ನೇತಾಡುವ ಇಂಬಳಗಳ ಪರಿಚಯ ಮೊದಲೇ ಇದ್ದುದರಿಂದ ನಾವು ಆದಷ್ಟು ಜಾಗ್ರತೆ ವಹಿಸಿದ್ದೆವು. ಆದರೂ ಬೆಂಬಿಡದ ಇಂಬಳ ರಕ್ತ ಹೀರಿ ಹಿಗ್ಗಿದಾಗ ಅಯ್ಯೋ... ಬೆಲೆಬಾಳುವ ರಕ್ತವನ್ನು ಯಾರಿಗಾದರೂ ದಾನವಾದ್ರೂ ಮಾಡಬಹುದಿತ್ತು ಅನ್ನಿಸಿತ್ತು.
ಅರೆಕ್ಷಣ ನಿಂತರೆ ಕಾಲಿಗೆ ಮುತ್ತಿಕೊಳ್ಳುವ ಇಂಬಳ, ಏರು ಹಾದಿಯಲ್ಲಿ ಏದುಸಿರು ಬಿಡುತ್ತಾ ಸಂಚಾರ, ಇವೆಲ್ಲದರ ನಡುವೆ ದಣಿವನ್ನು ಮರೆಸೋ ದಟ್ಟವಾದ ಕಾನನದ ನಡುವೆ ಚಾರಣ ನಡೆಸೋದು ಸುಲಭವಲ್ಲ ಅಂತ ಗೊತ್ತಾಗಿದ್ದು ಆ ವೇಳೆಗೇ. ಮಳೆರಾಯ ಆಗೊಮ್ಮೆ ಈಗೊಮ್ಮೆ ಕೊಂಚ ಬಿಡುವು ಕೊಟ್ಟು ಮತ್ತೆ ತನ್ನ ಕೆಲಸ ಮಾಡುತ್ತಿದ್ದ. ಜಕರ್ಿನ್ ತೊಟ್ಟರೂ ಪೂತರ್ಿ ನೆನೆಯುವ ಜಡಿಮಳೆಗೆ ಸುಮಾರು 3 ಕಿ.ಮೀ. ಸಂಚರಿಸಿದರೆ ಮಳಯಾಲಿ ಟೀ ಶಾಪ್ ಸಿಗುತ್ತದೆ. ಬೆಟ್ಟದ ನಡುವೆ ಒಂಟಿಯಾಗಿ ಟೀ ಶಾಪ್ ತೆರೆದು ಕಷ್ಟಗಳಿಗೆ ಮೈತೆರೆದು ವನ್ಯಜೀವಿಗಳ ಜತೆ ಬದುಕುವ ಮಳಯಾಲಿ ಟೀ ಶಾಪ್ ಮಾಲಕ ನಮಗೆಲ್ಲಾ ಟೀ ವಿತರಿಸಿದ. ಅಲ್ಲಿಯೇ ಇಂಬಳವನ್ನು ಯಾಮಾರಿಸುವ ಸುಣ್ಣದ ಉಂಡೆ ಹಿಡಿದುಕೊಂಡ ನಮ್ಮ ತಂಡ ಮತ್ತೆ ಚಾರಣ ಮುಂದುವರಿಸಿತು.
ಆನಂತರದ ಚಾರಣ ನೆನೆಸಿದಂತಿರದೆ ರುದ್ರ ರಮಣೀಯವಾಗಿತ್ತು. ಕೊಡಚಾದ್ರಿಯ ಶಿಖರ ದೂರದಿಂದಲೇ ಕೈ ಬೀಸಿ ಕರೆಯುತ್ತಿತ್ತು. ಕಲ್ಲಿನ ಕಡಿದಾದ ದುರ್ಗಮ ಹಾದಿಗಳಲ್ಲಿ ಸಾಗುತ್ತಿರಬೇಕಾದರೆ ಪ್ರಕೃತಿಯ ರಮ್ಯ ಪ್ರಪಂಚ ಕಣ್ಮುಂದೆ ಬಂದು ನಿಲ್ಲುತ್ತದೆ. ಕೊಂಚ ವಿರಮಿಸೋಣ ಎಂದರೆ ಇಂಬಳಗಳು ನಾವೂ ಬರ್ತೀವಿ ಅಂತ ಜತೆಯಾಗ್ತಾ ಇತ್ತು. ಮಂಜು ಮುಸುಕಿದ ಮೂರು ದಟ್ಟವಾದ ಅರಣ್ಯವನ್ನು ದಾಟುವಾಗ ನಮ್ಮ ತಂಡ ಸುಸ್ತೋ ಸುತ್ತು. ಅಂತೂ ಇಂತು ಕೊಡಚಾದ್ರಿ ಗಿರಿ ಏರಿದೆವು ಅಂದಾಗ ಗೈಡ್ ಚಂದ್ರ ಜತೆಯಾಗಿ, ಸರ್ವಜ್ಞ ಪೀಠಕ್ಕೆ ಇನ್ನೂ 3 ಕಿ.ಮೀ. ಹೋಗಬೇಕು ಅಂದಾಗ ಮಳೆಯಲ್ಲಿ ಹೋಗೋದು ಹೇಗಪ್ಪಾ ಅನ್ನಿಸಿದ್ದು ಸಹಜ.
ಧ್ಯಾನಸ್ಥ ಸರ್ವಜ್ಞನಿಗೊಂದು ಪೀಠ
ಸರ್ವಜ್ಞ ತನ್ನ ಹೊನ್ನಿನಂತಹ ನುಡಿಮುತ್ತುಗಳ ಮೂಲಕ ಜನರ ಬಾಯಲ್ಲಿ ನಿತ್ಯ ಹರಿದಾಡುತ್ತಿದ್ದರೆ ಕೊಡಚಾದ್ರಿಯ ನೆತ್ತಿಯ ಮೇಲೆ ಧ್ಯಾನಸ್ಥನಾಗಿದ್ದಾನೆ. ಪ್ರಪಂಚದ ಅಂಕುಡೊಂಕುಗಳನ್ನು ತನ್ನ ವಚನಗಳ ಮೂಲಕ ತಿದ್ದಿದ ಮಹಾಶಿಲ್ಪಿ ಸರ್ವಜ್ಞ ಪ್ರಕೃತಿಯ ನಡುವೆ ಮಗುವೇ ಆಗಿದ್ದಾನೆ. ಸರ್ವಜ್ಞನ ಪೀಠಕ್ಕೊಂದು ಸುತ್ತು ಬಂದು ತಲೆಬಾಗಿಸಿ ವಂದಿಸಿದ ನಮಗೆ ಚಾರಣಕ್ಕೊಂದು ಅರ್ಥ ಕಂಡುಕೊಂಡ ಧನ್ಯತೆ. ಸಮುದ್ರ ಮಟ್ಟದಿಂದ ಸುಮಾರು 1400 ಅಡಿ ಎತ್ತರದಲ್ಲಿ ನಿಂತು ಇಡೀ ಲೋಕದ ಸೌಂದರ್ಯ, ಪ್ರಕೃತಿಯ ಚೆಲುವು ನೋಡುತ್ತಿದ್ದರೆ ಸಮಯ ಕಳೆದುದು ತಿಳಿಯದು. ಕೊರೆಯುವ ಚಳಿ, ವೇಗವಾಗಿ ಬಡಿಯುವ ಮಳೆಹನಿ, ಜೋರಾದ ಗಾಳಿ, ಮುತ್ತಿಕ್ಕುವ ಮಂಜಿನ ನಡುವೆ ಕೊಡಚಾದ್ರಿ ಮಾನ್ಸೂನ್ ಟ್ರೆಕ್ ನಿಜಕ್ಕೂ ವಣರ್ಿಸಲಸದಳ ಅನುಭವ.
ಕೊಡಚಾದ್ರಿ ಇಳಿದು ಭಟ್ಟರ ಮನೆ ವೀಕ್ಷಿಸಿ, ಹುಲಿರಾಯ ದೇವನಿಗೆ ನಮಸ್ಕರಿಸಿ ಚಂದ್ರ ಅವರ ಪುಟ್ಟ ಮನೆಯಲ್ಲಿ ಊಟ ಮುಗಿಸಿ ಸಂಜೆ 4 ಗಂಟೆಗೆ ಬೆಟ್ಟ ಇಳಿಯಲು ತೊಡಗಿದ ನಮಗೆ ಏನೋ ಕಾಲು ನಿಂತಲ್ಲಿ ನಿಲ್ಲದೆ ಬಲ ಕಳೆದುಕೊಂಡು ನಡುಗುತ್ತಿತ್ತು. ಜೋರಾದ ಮಳೆಯಲ್ಲಿ ಮತ್ತೆ ಎರಡು ಗಂಟೆ ಚಾರಣ ಮುಗಿಸಿ ಹಿಂತಿರುಗಿ ಬೈಕ್ ಏರುವಾಗ ದೂರದಲ್ಲಿ ಕೊಡಚಾದ್ರಿ ತಲೆ ಎತ್ತಿ ನಿಂತಿತ್ತು. ಕೊಡಚಾದ್ರಿಯಿಂದ ಕೊಲ್ಲೂರಿಗೆ ಮತ್ತದೇ ಮುಸ್ಸಂಜೆಯ ಮಬ್ಬು ಕತ್ತಲಿನಲ್ಲಿ ಸಂಚಾರ ಬೆಳೆಸಿದ ನಮಗೆ ಏನೋ ಕಳೆದುಕೊಂಡ ದು:ಖ, ಹಾಗೇ ಏನೋ ಸಾಧಿಸಿದ ಸುಖ ಹೆಜ್ಜೆಹೆಜ್ಜೆಗೆ ಕಾಡುತ್ತಿತ್ತು.