doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Sunday, April 17, 2011

ಚಾರಣ... ಚಿತ್ರಪಟ..!

























ಮನ ತಣಿಸುವ ಆಗುಂಬೆ ಚಾರಣ...











ಮನ ತಣಿಸುವ ಆಗುಂಬೆ ಚಾರಣ...

ಆಗುಂಬೆ... ದಕ್ಷಿಣದ ಚಿರಾಪುಂಜಿ ಎಂದೇ ಕರೆಯ ಲ್ಪಡುವ ಆಗುಂಬೆಯನ್ನು ಮಲೆನಾಡಿನ ಮುಖಪುಟವೆಂದು ಬಣ್ಣಿಸುವುದುಂಟು. ಅವೆಷ್ಟೋ ಹಿರಿ-ಕಿರಿಯ ಬೆಟ್ಟಗುಡ್ಡ, ಬೆಳ್ಳನೆ ಹೊಳೆಯುವ ಅಸಂಖ್ಯ ತೊರೆಗಳನ್ನು ತನ್ನಲ್ಲಿ ಹುದುಗಿಸಿಟ್ಟ ಆಗುಂಬೆ ಎನ್ನುವ ಪುಟ್ಟದಾದ ಅಷ್ಟೇ ಸೊಗಸಾದ ಊರಿಗೆ ಕಣ್ಮನ ಸೆಳೆಯುವ ಪಶ್ಚಿಮ ಘಟ್ಟಗಳ ಸಾಲು ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಬಿರುಬಿಸಿಲು ಸುಡುವ ಬೇಸಗೆ ಕಾಲದಲ್ಲಿ ಆಗುಂಬೆಯ ಕಡೆಗೊಮ್ಮೆ ಹೋಗಿಬನ್ನಿ. ಇಲ್ಲಿರುವ ಜಲಪಾತಗಳು ಬೇಸಿಗೆಯಲ್ಲೂ ಬತ್ತದೆ ತಣ್ಣನೆ ಹರಿಯುತ್ತಿರುತ್ತದೆ. ಎತ್ತರದ ಗಿರಿಶೃಂಗಗಳು ಮುಂಜಾನೆಯ ವೇಳೆ ಮಂಜಿನ ಮುಸುಕಿನಲ್ಲಿ ಬಂಧಿಯಾಗಿ ಜೀವನೋತ್ಸಾಹವನ್ನು ತುಂಬುತ್ತದೆ.

ಮಲೆನಾಡಿನ ಸಾಲಿನಲ್ಲಿ ಬರುವ ಆಗುಂಬೆ ಎನ್ನುವ ಪುಟ್ಟ ಹಳ್ಳಿ ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ತೀರಾ ಸಮೀಪದಲ್ಲಿ ಚಾರಣಕ್ಕೆ ಹೇಳಿ ಮಾಡಿಸಿದ ಅನೇಕ ತಾಣಗಳಿವೆ. ಇಲ್ಲಿನ ಸೊಬಗನ್ನು ಸವಿಯಲು ಬೆಟ್ಟ ಹತ್ತಿಳಿಯುವ ಚಾರಣ ಪ್ರಿಯರು, ಪ್ರವಾಸಿಗರು ಇಲ್ಲಿಂದ ತೆರಳುವಾಗ ಮಾತ್ರ ಸೂಯರ್ಾಸ್ತಮಾನದ ರಮ್ಯ ಸೊಬಗನ್ನು ಕಣ್ತುಂಬಿಕೊಳ್ಳದೆ ಹೋಗಲಾರರು. ಸೋಮೇಶ್ವರ ಎನ್ನುವ ಬೆಟ್ಟದ ಬದಿಯ ಹಳ್ಳಿಯನ್ನು ದಾಟಿ ಬಸ್ಸು ಆಗುಂಬೆ ಘಾಟಿಯನ್ನು ಹತ್ತಲು ಆರಂಭಿಸಿದರೆ ಬಸ್ನಲ್ಲಿ ಇರುವ ಎಂಥವರ ಎದೆಯೂ ನಡುಗದೇ ಇರದು. ಕಡಿದಾದ ತಿರುವಿನಲ್ಲಿ ಬಸ್ ಚಾಲಕ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಇನ್ನೊಂದು ಕೈಯನ್ನು ಹಾನರ್್ ಮೇಲಿಟ್ಟು ಬಸ್ಸನ್ನು ಓಡಿಸುವ ಪರಿಗೆ ಬೆರಗು ಹುಟ್ಟದಿರದು. ಇನ್ನೇನು ಘಾಟಿ ಮುಗಿಯಿತು ಅನ್ನುವಾಗ ಅಲ್ಲೇ ರಸ್ತೆಯ ಎಡಬದಿಯಲ್ಲಿ `ಸೂಯರ್ಾಸ್ತಮಾನ ವೀಕ್ಷಣಾ ಸ್ಥಳ' ಎಂಬ ಬೋಡರ್್ ಕಣ್ಣಿಗೆ ಕಾಣುತ್ತದೆ. ಕ್ಷಮಿಸಿ, ಇಲ್ಲಿ ಸಂಚರಿಸುವ ಹೆಚ್ಚಿನ ಬಸ್ಗಳು ಈ ಸ್ಥಳದಲ್ಲಿ ನಿಲುಗಡೆ ಕೊಡುವುದಿಲ್ಲ. ಇಲ್ಲಿ ಬರಲು ಮೇಲಿನ ಸ್ಟಾಪ್ನಲ್ಲಿ ಇಳಿದು ಹಿಂದಕ್ಕೆ ಬರಬೇಕು. ಆಗುಂಬೆ ಮುಖ್ಯಪೇಟೆಯಲ್ಲಿ ಇಳಿದರೆ ಇಲ್ಲಿಗೆ ಬರಲು ಬರೇ ಒಂದು ಕಿ,ಮೀ. ಅಷ್ಟೇ. ಸರಕಾರ ಪ್ರವಾ ಸಿಗರಿಗಾಗಿ ಕಟ್ಟಿದ ವೀಕ್ಷಣಾ ಸ್ಥಳದಲ್ಲಿ ನಿಂತರೆ ದೂರದಿಂದ ಹೆಬ್ರಿ-ಸೋಮೇಶ್ವರ ಟಾರು ರಸ್ತೆ ಬಳುಕಿ ಕುಲುಕಾಡುತ್ತಾ ಸಂಚ ರಿಸುವಂತೆ ತೋರುತ್ತದೆ. ಸೋಮೇಶ್ವರನ ಸನ್ನಿಧಿ, ಬಲಗಡೆ ವಿಶಾಲವಾದ ಪಶ್ಚಿಮ ಘಟ್ಟಗಳ ಸಾಲು ನಮ್ಮನ್ನು ಅದಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.

ಡಾ. ರಾಜ್ಕುಮಾರ್ ಅವರ ಆಕಸ್ಮಿಕ ಚಿತ್ರದ `ಆಗುಂಬೆಯಾ ಪ್ರೇಮ ಸಂಜೆಯಾ... ಮರೆಯಲಾರೆ..' ಈ ಹಾಡು ಪೂತರ್ಿ ಯಾಗಿ ಇಲ್ಲೇ ಚಿತ್ರೀಕರಣವಾಗಿದೆ ಎಂದು ಈಗಲೂ ನೆನಪಿಸಿ ಕೊಳ್ಳುತ್ತಾರೆ ಇಲ್ಲಿನವರು. ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿ ಇಂದು ಗುರುತಿಸಲ್ಪಟ್ಟಿರುವ ಆಗುಂಬೆಯ ಘಾಟಿಯಲ್ಲಿ ಪ್ರವಾಸಿ ಗರಿಗೆ ಸೂಯರ್ಾಸ್ತವನ್ನು ವೀಕ್ಷಿಸಲು ಸೂಕ್ತ ವ್ಯವಸ್ಥೆಯನ್ನು ಸರಕಾರ ಹಲವು ವರ್ಷಗಳ ಹಿಂದೆಯೇ ಮಾಡಿದೆ. ಇಲ್ಲಿನ ಸೂಯರ್ಾಸ್ತವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಇಂದಿಗೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ವಾರಾಂತ್ಯದ ದಿನಗಳಲ್ಲಂತೂ ಆಗುಂಬೆ ಎನ್ನುವ ಸ್ಥಳ ಪ್ರವಾಸಿಗರಿಂದ, ಚಾರಣಿಗರಿಂದ ಕಿಕ್ಕಿರಿದು ತುಂಬುತ್ತದೆ. ಜನರು ತಮಗಾಗಿ ಕಟ್ಟಿರುವ ವೀಕ್ಷಣಾ ಸ್ಥಳದಲ್ಲಿ ಗಂಡು-ಹೆಣ್ಣೆಂಬ ಬೇಧವಿಲ್ಲದೆ ನಿಂತು ಸೂಯರ್ಾಸ್ತ ದೃಶ್ಯವೈಭವವನ್ನು ಮನಸೋ ಇಚ್ಛೆ ಸವಿಯುತ್ತಾರೆ. ಎಲ್ಲರಿಗೂ ತಮ್ಮ ಮೊಬೈಲ್, ಕ್ಯಾಮೆ ರಾಗಳಲ್ಲಿ ಆಗಸದ ಅಂಚಿನಿಂದ ಜಾರಿ ಕಡಲಿಗೆ ಇಳಿಯು ತ್ತಿರುವ ನೇಸರನ ಬಂಧಿಸುವ ಆತುರ... ಹೊಳೆವ ಕೆಂಬಣ್ಣದ ಉಂಡೆಯಾಗಿ, ಬೆಳಕಿನ ಬಟ್ಟಲಾಗಿ, ತಟ್ಟೆಯಾಗಿ, ಚಮಚದಂತೆ ಗೋಚರಿಸಿ ಅಂತಿಮವಾಗಿ ಕಣ್ಣು ಪಿಳಿಪಿಳಿಬಿಟ್ಟು ನೋಡುತ್ತಿದ್ದಂತೆ ಕಡಲಿನಲ್ಲಿ ಜಾರಿ ಕ್ಷಣಮಾತ್ರದಲ್ಲಿ ಮರೆಯಾಗುವ ನೇಸರ ಅಲ್ಲಿ ನೆರೆದ ಅಸಂಖ್ಯ ಪ್ರವಸಿಗರಿಗೆ ನಿತ್ಯ ಮಧುರಾನುಭೂತಿಯನ್ನು ನೀಡುತ್ತಾನೆ. ನೇಸರ ಮರೆಯಾದಂತೆ ವಾಸ್ತವ ಲೋಕಕ್ಕೆ ಮರಳಿ ಸುತ್ತ ಕಣ್ಣು ಹಾಯಿಸಿದರೆ ಬೆಟ್ಟಗಳ ಸಾಲಿನಲ್ಲಿ ಕತ್ತಲೆ ತುಂಬುತ್ತದೆ. ಹಿತವಾದ ತಂಗಾಳಿ ಮೈಸೋಕುತ್ತಾ ಕತ್ತಲಾದುದನ್ನು ನೆನಪಿ ಸುತ್ತದೆ. ವಿಶ್ವದ ಪ್ರಸಿದ್ಧ ಸೂಯರ್ಾಸ್ತವನ್ನು ಸವಿದಿದ್ದೇವೆ ಎಂಬ ಖುಷಿಯಿಂದ ಬೆಟ್ಟ ಇಳಿಯುತ್ತಿದ್ದರೆ ಮನಸ್ಸಿಗಾಗುವ ಸಂತಸ ವಣರ್ಿಸಲಸದಳ.

ಕೂಲ್ ಕೂಲ್ ಚಾರಣ ಸ್ಪಾಟ್ಗಳು:

ಒನಕೆ ಅಬ್ಬಿ ಜಲಪಾತ: ಚಾರಣಪ್ರಿಯರಿಗೆ ಆಗುಂಬೆ ಹೇಳಿ ಮಾಡಿಸಿದ ತಾಣ. ಇಲ್ಲಿ ಸುತ್ತಮುತ್ತ ಕಲವೇ ಕಿ.ಮೀ. ಅಂತರದಲ್ಲಿ ಅಸಂಖ್ಯ ಜಲಧಾರೆ, ಬೆಟ್ಟಗುಡ್ಡ ಚಾರಣಿಗರ ಬರುವಿಕೆಗಾಗಿ ಕಾದಿದೆ. ಆಗುಂಬೆ ಪೇಟೆ ಪ್ರವೇಶಿಸುವುದಕ್ಕೂ ಹಿಂದೆ ರಸ್ತೆಯ ಎಡಬದಿಯಲ್ಲಿ ಒನಕೆ ಅಬ್ಬಿ ಜಲಪಾತ ಎಂಬ ಬೋಡರ್್ ಕಾಣಿಸುತ್ತದೆ, ಇಲ್ಲಿಂದ 3.5 ಕಿ.ಮೀ. ದೂರ ದಟ್ಟವಾದ ಅರಣ್ಯದಲ್ಲಿ ಸಂಚರಿಸಿದರೆ ಆಗುಂಬೆ ಪರ್ವತ ಶ್ರೇಣಿಯಿಂದ ಸುಮಾರು 1,400 ಅಡಿ ಮೇಲಿನಿಂದ ಕೆಳಕ್ಕೆ ಧುಮ್ಮಿಕ್ಕುವ ಒನಕೆ ಅಬ್ಬಿ ಜಲಧಾರೆ ಕಾಣಸಿಗುತ್ತದೆ. ಸೋಮೇಶ್ವರ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುವ ಈ ಸ್ಥಳಕ್ಕೆ ಹೋಗುವಾಗ ಕಾಡಿನಲ್ಲಿ ಅಸಂಖ್ಯ ಔಷಧಿ ಗುಣವುಳ್ಳ ಮರ-ಗಿಡಗಳು ಕಾಣಿಸುತ್ತವೆ. ಮಳೆಗಾಲ ಆರಂಭವಾದರೆ ಇಲ್ಲಿ ಉಂಬುರು(ಇಂಬಳ) ಕಾಟ ಅಧಿಕ. ಬೇಸಿಗೆಯಲ್ಲಿ ಪರವಾಗಿಲ್ಲ. ಆದರೂ ಬ್ಯಾಗ್ನಲ್ಲಿ ಸುಣ್ಣದುಂಡೆ ಇಟ್ಟುಕೊಳ್ಳುವುದು ಒಳಿತು. ಸರಕಾರ ಇಲ್ಲಿ ಹಲವು ವರ್ಷಗಳ ಹಿಂದೆಯೇ ಚಾರಣಿಗರಿಗೆ ಅನುಕೂಲವಾಗಲೆಂದು ಕಲ್ಲಿನ ಮೆಟ್ಟಿಲನ್ನು ನಿಮರ್ಿಸಿದೆ. ಚಾರಣದ ಹಾದಿಯಲ್ಲಿ ಮರಗಳು ಬಿದ್ದು ಅಡಚಣೆಯಾಗುತ್ತಿದ್ದರೂ ಇಲ್ಲಿಗೆ ಹೋದರೆ ಹಿಂತಿರುಗಿ ಬರಲು ಮನಸ್ಸಾಗದು. ಮುಂಜಾನೆ ಬೇಗನೆ ಕಾಡಿನೊಳಕ್ಕೆ ಹೋದರೆ ಕಾಡುಹಂದಿ, ಕರಡಿ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಈ ಬಗ್ಗೆ ಬೋಡರ್್ ಹಾಕಿರದಿದ್ದರೂ ಎಚ್ಚರ ದಿಂದಿರುವುದು ಒಳಿತು. ಆಗಸ್ಟ್ ತಿಂಗಳಿಂದ ಎಪ್ರಿಲ್ ತಿಂಗಳಾಂತ್ಯದವರೆಗೂ ಇಲ್ಲಿಗೆ ಭೇಟಿ ನೀಡಬಹುದು.

ಜೋಗಿ ಗುಂಡಿ: ಆಗುಂಬೆ ಪೇಟೆ ದಾಟಿ ಶೃಂಗೇರಿ ರಸ್ತೆಯಲ್ಲಿ ಎರಡು ಕಿ.ಮೀ. ಮುಂದೆ ಸಾಗಿದರೆ `ಜೋಗಿ ಗುಂಡಿ'ಗೆ ಹೋಗುವ ರಸ್ತೆ ಕಾಣಸಿಗುತ್ತದೆ. ರಸ್ತೆಯನ್ನು ದಾಟಿ ದಟ್ಟಾರಣ್ಯದಲ್ಲಿ ಮೂರು ಕಿ,.ಮೀ. ಚಾರಣ ಕೈಗೊಂಡರೆ ಸುಂದರ ಜಲಧಾರೆ ಜೋಗಿ ಗುಂಡಿ ಇದಿರಾಗುತ್ತದೆ. ಕಾಡಿನ ನಡುವೆ ಮನಸೆಳೆಯುವ ಜಲಧಾರೆಯನ್ನು ಮಳೆ ಗಾಲದಲ್ಲಿ ವೀಕ್ಷಿಸುವುದೇ ಸೊಗಸು. ಬೇಸಿಗೆ ಯಲ್ಲಿ ನೀರು ಬತ್ತದಿದ್ದರೂ ಬೆಟ್ಟದ ಮೇಲಿ ನಿಂದ ಹರಿಯುವ ಜಲಧಾರೆಯಲ್ಲಿ ಅಷ್ಟಾಗಿ ರಭಸ ಇರುವುದಿಲ್ಲ. ಇಲ್ಲಿಯೂ ಇಂಬಳಗಳ ಕಾಟ ಅಧಿಕ. ಆಗಸ್ಟ್ ತಿಂಗಳಿನಿಂದ ಫೆಬ್ರವರಿ ತಿಂಗಳು ಚಾರಣಕ್ಕೆ ಸೂಕ್ತ ಸಮಯ.

ನಿಶಾನಿ ಗುಡ್ಡ: ಆಗುಂಬೆ ಪೇಟೆಯ ಸಮೀಪವೇ ಇರುವ ಶಾಲೆಯ ಹಿಂಭಾಗಕ್ಕೆ ಕಣ್ಣು ಹಾಯಿಸಿದರೆ ಕಾಣುವುದೇ ನಿಶಾನಿ ಗುಡ್ಡ. ಸುಮಾರು ಮೂರು ಕಿ.ಮೀ. ಚಾರಣ ನಡೆಸಿದರೆ ನಿಶಾನಿ ಗುಡ್ಡದ ಮೇಲೇರಿ ನಿಸರ್ಗ ಸೌಂದರ್ಯ ಸವಿಯಬಹುದು. ಇಲ್ಲಿ ಸೂಯರ್ಾಸ್ತ, ಸೂಯರ್ೋದಯ ತುಂಬಾ ಸೊಗಸಾಗಿ ಕಾಣುತ್ತದೆ. ಆಗಸ್ಟ್ ತಿಂಗಳಿನಿಂದ ಎಪ್ರಿಲ್ ತಿಂಗಳಾಂತ್ಯ ದವರೆಗೂ ಇಲ್ಲಿ ನಿಸರ್ಗ ಸೌಂದರ್ಯ ಸವಿಯಲು ಉತ್ತಮ ಪ್ರಕೃತಿಯಿದೆ. ಬೆಟ್ಟದ ಮೇಲೆ ಸಾಗಿದಂತೆ ದಟ್ಟನೆ ಮುತ್ತುವ ಮಂಜಿನ ಹನಿಗಳು ಚಾರಣಿಗರಿಗೆ ವಿಭಿನ್ನ ಅವುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ.

ದೊಡ್ಡಮನೆ: ಆರ್.ಕೆ ನಾರಾಯಣ್ ಬರೆದಿದ್ದ ಕಾದಂ ಬರಿಯನ್ನು ಆಧರಿಸಿ ದಿ. ಶಂಕರ್ನಾಗ್ ನಿಮರ್ಿಸಿದ `ಮಾಲ್ಗುಡಿ ಡೇಸ್' ಧಾರಾವಾಹಿ ಸಂಪೂರ್ಣ ಚಿತ್ರಿತ ವಾಗಿದ್ದು ಆಗುಂಬೆ ಯಲ್ಲಿ. ಇಲ್ಲಿ ಯಾರ ಬಳಿಯೂ ನೀವು `ದೊಡ್ಡಮನೆ ಎಲ್ಲಿ, ಮಾಲ್ಗುಡಿ ಮನೆ ಎಲ್ಲಿ' ಎಂದು ಕೇಳಿದರೆ ಎರಡಂತಸ್ತಿನ ಹತ್ತಿರದಲ್ಲೇ ಇರುವ ದೊಡ್ಡಮನೆಯನ್ನು ತೋರಿಸುತ್ತಾರೆ. ಇಲ್ಲಿ ಹೋಗಿ ದೊಡ್ಡಮನೆಯನ್ನು ಸಂದ ಶರ್ಿಸಿದಲ್ಲಿ ಮನೆ ಯೊಡತಿ ಕಸ್ತೂರಿ ಅಕ್ಕ ಬಿಸಿಬಿಸಿ ಆಗುಂಬೆ ಸ್ಪೆಷಲ್ ಕಷಾಯ ದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ. ಆಗುಂಬೆಯ ಜೀವನಶೈಲಿ, ಬದುಕಿನ ವಿವಿಧ ಮಜಲುಗಳ ಅರಿವಿರುವ ಕಸ್ತೂರಿ ಅಕ್ಕನ ಬಳಿ ಮಾತಾಡುತ್ತ ಕುಳಿತರೆ, ಇಡೀ ಆಗುಂಬೆಯ ಪರಿಚಯ ನಮಗಾಗುತ್ತದೆ.

ಸೋಮೇಶ್ವರ ಮಳೆಕಾಡಿನ ವಿಶ್ರಾಂತಿಧಾಮ: ಆಗುಂಬೆ ಯ ಪೇಟೆಗಿಂತ ಅರ್ಧ ಕಿಮೀ ದೂರ ಸೋಮೇಶ್ವರ ರಸ್ತೆಯಲ್ಲಿ ಸಂಚರಿಸಿದರೆ ಸೋಮೇಶ್ವರ ಮಳೆಕಾಡಿನ ವಿಶ್ರಾಂತಿ ಧಾಮ ಸಿಗುತ್ತದೆ. ಇಲ್ಲಿ ವಿಶಾಲವಾದ ಕೆರೆಯಲ್ಲಿ ಪೆಡಲ್ ಬೋಟಿಂಗ್ ಮಾಡಬಹುದು. ಹತ್ತು ರೂಪಾಯಿಯ ಒಂದು ನೋಟು ಕೊಟ್ಟರೆ ಬೋಟನ್ನು ನಾವೇ ಚಲಾಯಿಸಿಕೊಂಡು ಕೆರೆಗೆ ಒಂದು ಸುತ್ತು ಹಾಕಿ ವಾಪಸ್ ಬರಬಹುದು. ಇಲ್ಲಿ ಮಂಗಗಳ ಉಪದ್ರವೂ ಹೆಚ್ಚು. ಕೆರೆಯ ಬದಿಯಲ್ಲಿ ನಿಮರ್ಿಸಿ ರುವ ಕುಟೀರ, ಬೆಂಚುಗಳಲ್ಲಿ ಸಾಕಷ್ಟು ಹೊತ್ತು ಪ್ರಕೃತಿಯ ಮಡಿಲಿನಲ್ಲಿ ವಿರಮಿಸಿ ವಾಪಸ್ ಆಗಬಹುದು.

ಸೋಮೇಶ್ವರ ಹಪರ್ೆಟೋ ಕ್ಯಾಂಪ್: ಆಗುಂಬೆಯ ದಾರಿಯಲ್ಲಿ ಸೋಮೇಶ್ವರ ಪೇಟೆ ಪ್ರವೇಶಿಸುವುದಕ್ಕೂ ಮುನ್ನ ಹಪರ್ೆಟೋ ಕ್ಯಾಂಪ್ ಸಿಗುತ್ತದೆ. ವಿವಿಧ ಜಾತಿಯ ಸಸ್ಯ, ಪ್ರಾಣಿ, ಹಕ್ಕಿಗಳನ್ನು ನೋಡಿ ಸಂತಸಪಡಲು ಇದು ಹೇಳಿ ಮಾಡುವ ತಾಣ. ಇಲ್ಲಿ ಪ್ರವಾಸಿಗರು, ಚಾರಣಿಗರು ಉಳಿಯಲು ಸೂಕ್ತ ವ್ಯವಸ್ಥೆಯೂ ಇದೆ. ಇಲ್ಲಿ ಒಳಹೋಗಲು ವಿಧಿಸಿರುವ ದರ ಕೊಂಚ ಹೆಚ್ಚೇ ಎಂದೆಣಿಸಿದರೂ ಇಲ್ಲಿ ಸುತ್ತಾಡಿ ಕಾಲ ಕಳೆಯಲು ಯೋಗ್ಯವಾಗಿದೆ.

ಚಾರಣಿಗರಿಗೆ ಟಿಪ್ಸ್:

ಆಗುಂಬೆಯಲ್ಲಿ ಪ್ರವಾಸಿಗರ, ಚಾರಣಿಗರ ಅನುಕೂಲಕ್ಕೆ ಲಾಡ್ಜ್, ಸರಕಾರದ ವಸತಿಗೃಹವೂ ಇದೆ. ಸೋಮೇಶ್ವರದಲ್ಲಿ ಇರುವ ಹಪರ್ೆಟೋ ಕ್ಯಾಂಪ್ನಲ್ಲಿ ಟೆಂಟ್ ವ್ಯವಸ್ಥೆಯೂ ಇದೆ. ಚಾರಣ ಕೈಗೊಂಡ ಸ್ಥಳಗಳಲ್ಲಿ ಊಟ, ತಿಂಡಿ, ನೀರು ಸಿಗುವುದು ಕಷ್ಟ. ಹತ್ತಿರದ ಕ್ಯಾಂಟೀನ್, ಗೂಡಂಗಡಿಯಲ್ಲಿ ಮೊದಲೇ ಹೇಳಿ ಹೋದರೆ ಹಿಂತಿರುಗುವ ಹೊತ್ತಿಗೆ ಬಿಸಿಬಿಸಿ ಮಲೆನಾಡ ಸ್ಪೆಷನ್ ಅಡುಗೆ ರೆಡಿ ಆಗಿರುತ್ತದೆ. ಒಂದು ವೇಳೆ ನೀರು, ಆಹಾರದ ಪೊಟ್ಟಣವನ್ನು ಕಟ್ಟಿಕೊಂಡು ಚಾರಣಕ್ಕೆ ಹೋದರೂ ತಿಂದುಳಿದ ಪ್ಲಾಸ್ಟಿಕ್ ಪೊಟ್ಟಣ, ನೀರಿನ ಬಾಟ್ಲಿಯನ್ನು ಯಾರೂ ಕೇಳುವವರಿಲ್ಲ ಎಂದು ಅಲ್ಲಿ ಬಿಸಾಡದಿರಿ. ಬದಲಿಗೆ ಅದನ್ನು ಕೊಂಡುಹೋದಷ್ಟೇ ಜೋಪಾನವಾಗಿ ಮರಳಿ ತನ್ನಿ. ಚಾರಣ ಬೆಳೆಸುವ ಮುನ್ನ ನಕ್ಸಲ್ ನಿಗ್ರಹ ದಳ ಅಥವಾ ಪೊಲೀಸ್ ಠಾಣೆಯಲ್ಲಿ ಮಾಹಿತಿ. ವಿಳಾಸ ಮೊದಲೇ ನೀಡುವುದು ಒಳಿತು. ಒಂದೊಮ್ಮೆ ನೀಡದೆ ಹಾಗೇ ಹೋದರೆ ಸಿಕ್ಕಿಬಿದ್ದರೆ ಕಷ್ಟ. ನಕ್ಸಲರೆಂಬ ಭ್ರಮೆಯಲ್ಲಿ ಮಾನಸಿಕ ಕಿರುಕುಳ ಕೊಟ್ಟು ಚಾರಣದ ನೆನಪನ್ನು ಕಹಿ ಮಾಡಿಬಿಡುತ್ತಾರೆ.

ಕೆಂಪು ಉಗ್ರರ ನಾಡು?

ಹೆಬ್ರಿ ಪೇಟೆ ದಾಟಿದರೆ ಸಾಕು ನಮ್ಮನ್ನು ಕಾಡುವ ಭಯ ಎಂದರೆ ನಾವೀಗ ಕೆಂಪು ಉಗ್ರರ ಅಥರ್ಾತ್ ನಕ್ಸಲರ ನೆಲದಲ್ಲಿದ್ದೇವೆ ಎನ್ನುವುದು..! ಪತ್ರಿಕೆ, ಟಿವಿ ಚಾನೆಲ್ಲುಗಳು ತಮಗೆ ಸಿಗುವ ಒನ್ಲೈನ್ ಸುದ್ದಿಯನ್ನು ಬೇಕಾಬಿಟ್ಟಿ ಬಳಸಿಕೊಂಡು ಮಲೆನಾಡನ್ನು ನಕ್ಸಲರ ಆವಾಸಸ್ಥಾನ ಎಂಬಷ್ಟರಮಟ್ಟಿಗೆ ಜನರಲ್ಲಿ ಭಯ ಹುಟ್ಟಿಸಿವೆಯೋ, ಅಥವಾ ಪೊಲೀಸ್ ಇಲಾಖೆ ಇಲಿಯನ್ನು ಹುಲಿ ಎಂದು ಭಾವಿಸಿ ಭಯ ಹುಟ್ಟಿಸಿದೆಯೋ ತಿಳಿಯಲಾಗದು. ಆದರೆ ಇಂದಿಗೂ ಆಗುಂಬೆಯ ಬೀದಿಗೆ ಕಾಲಿಟ್ಟರೆ ಸಾಕು ಕಂಡುಬರುವುದು ಮಾತ್ರ ಪೊಲೀಸರದ್ದೇ ದಂಡು..! ಹೆಗಲಲ್ಲೊಂದು ಬ್ಯಾಗು, ಕೈಯಲ್ಲಿ ಕ್ಯಾಮೆರಾ, ಕಾಲಿಗೆ ಚಪ್ಪಲಿ, ಕಪ್ಪು ಬಣ್ಣದ ಶೂ ಇದ್ದರೆ ಹೇಳುವುದೇ ಬೇಡ, ಅಪಾದಮಸ್ತಕವಾಗಿ ನಮ್ಮನ್ನು ನೋಡಿ ಪ್ರಶ್ನೆಗಳ ಸುರಿಮಳೆ ಸುರಿಸುವ ಇವರನ್ನು ಕಂಡು ಅದೆಷ್ಟೋ ಬಾರಿ ಅನಿಸಿದ್ದುಂಟು... ಇವರಿಗಿಂತ ನಕ್ಸಲರೇ ಬೆಟರ್ ಅಂತ. ಇದು ನಾನು ಹೇಳುವ ಮಾತಲ್ಲ. ಅದೇ ಆರ್.ಕೆ.ನಾರಾಯಣ್ ತಮ್ಮ `ಮಾಲ್ಗುಡಿ ಡೇಸ್ನಲ್ಲಿ ಹಾಡಿ ಹೊಗಳಿ ಮಲೆನಾಡು, ಅದೇ ಕುವೆಂಪು ಕುಪ್ಪಳ್ಳಿಯಲ್ಲಿ ಕುಳಿತು, `ಉತ್ತುಂಗ ಶಿಖರಗಳಿರುವುದು ಪ್ರವಾಸಕ್ಕಲ್ಲದೆ, ನಿವಾಸಕ್ಕಲ್ಲ ಎಂದು ಬರೆದ ವಾಕ್ಯ. ದರಾಬೇಂದ್ರೆ, ಕಾರಂತರ ಸೊಬಗಿನ ಮಲೆನಾಡು ಇಂದು ಹಾಗೆ ಉಳಿದಿಲ್ಲ ಎನ್ನುವುದೇ ಬೇಸರದ ಸಂಗತಿ. ಮಲೆನಾಡಿಗೆ ನಕ್ಸಲರೆನ್ನುವ ಮಂದಿ ಬಂದಿದ್ದು ಈಗ್ಗೆ ಕೆಲವು ವರ್ಷಗಳ ಹಿಂದೆ. ಆದರೆ ಆನಂತರದ ಬದಲಾವಣೆಗಳನ್ನು ಗಮನಿಸಿದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ಮಲೆನಾಡು ಎನ್ನುವ ಪ್ರಕೃತಿ ನಿಜಕ್ಕೂ ಕೆಂಪು ಉಗ್ರರ ನೆರಳಿನಲ್ಲಿ ಕರಗುತ್ತಿದೆಯೇ ಅಥವಾ ಹಾಗೆಂಬ ಭ್ರಮೆ ನಮ್ಮನ್ನು ಆವರಿಸಿಕೊಂಡು ಬಿಟ್ಟಿದೆಯೇ ಎನ್ನುವುದು ತಿಳಿಯುತ್ತಿಲ್ಲ.
ಕಾಮತರ ಚರುಮುರಿ

ನೀವು ಆಗುಂಬೆಯ ಸೂಯರ್ಾಸ್ತಮಾನ ಸ್ಥಳಕ್ಕೊಮ್ಮೆ ಭೇಟಿ ಕೊಟ್ಟಿದ್ದರೆ ನಿಮಗೆ ಅಲ್ಲಿ ಚರುಮುರಿ ಮಾರುವ ಕಾಮತರ ಪರಿಚಯ ವಿರಲೇಬೇಕು. ಕಳೆದ 15 ವರ್ಷಗಳಿಂದ ಆಗುಂಬೆಯ ಸೂಯರ್ಾ ಸ್ತಮಾನ ಪ್ರದೇಶವನ್ನು ವ್ಯವಹಾರಕ್ಕೆ ಆಯ್ದುಕೊಂಡಿರುವ ಕಾಮತರ ಮುಖದಲ್ಲಿ ಆಗುಂಬೆಯಲ್ಲಿ ಕಳೆದ ಗತಜೀವನದ ಏರಿಳಿತಗಳು ಅಡಕ ವಾದಂತೆ ಭಾಸವಾಗುತ್ತದೆ. ಇವರು ಮಾಡಿಕೊಡುವ ಮಂಡಕ್ಕಿ ಚರುಮುರಿ ತಿಂದಲ್ಲಿ ಆಗುಂಬೆಯ ಭೇಟಿ ಮರೆಯದ ನೆನಪಾಗಿ ಉಳಿಯುತ್ತೆ ಎಂಬ ಕಾರಣಕ್ಕೋ ಏನೋ ಇವರ ಸುತ್ತ ಗ್ರಾಹಕರಿಗೆ ಕೊರತೆಯೆಂದೂ ಬಂದಿಲ್ಲ. `ಎಲ್ಲಾ ದೇವರ ಅನುಗ್ರಹ, ಆತ ನಡೆಸಿದಂತೆಯೇ ಆಗುತ್ತದೆ' ಎಂದು ಕಾಣದ ದೇವರಿಗೆ ಕೈಮುಗಿಯುವ ಕಾಮತರ ಮನೆ ಇರುವುದು ಸೋಮೇಶ್ವರದಲ್ಲಿ. ಇಳಿವಯಸ್ಸಿನಲ್ಲೂ ಆಗುಂಬೆಯ ಬೆಟ್ಟ ಹತ್ತಿ ವ್ಯವಹಾರ ಮಾಡುವ ಇವರ ಬದುಕು ನಿಜಕ್ಕೂ ಆಗುಂಬೆಯಷ್ಟೇ ಬೆರಗು ಹುಟ್ಟಿಸುತ್ತದೆ. ತನ್ನ ಬಳಿಗೆ ಬರುವ ಪ್ರವಾಸಿಗರನ್ನು ಪ್ರೀತಿಯಿಂದ ಮಾತಾಡಿಸುವ ಕಾಮತರ ಸ್ಪೆಷಲ್ ಚರುಮುರಿ ಸದಾಕಾಲ ಸಿದ್ಧವಾಗಿರುತ್ತದೆ...

Thursday, April 7, 2011

ಅವನೊಬ್ಬನಿದ್ದ ನಮ್ಮೊಂದಿಗೆ...



(ಬಾಳಿನ ದಾರಿಯಲ್ಲಿ ಬೇಗನೆ ಕಳೆದುಹೋದ ಗೆಳೆಯನಿಗೆ ಅಕ್ಷರಗಳ ಅಶ್ರುತರ್ಪಣ)

ಜೀವನ ಅಂದ್ರೆ ಹೀಗೇ ಏನೋ...! ನಾವಂದ್ಕೊಂಡಂತೆ ಆಗಲ್ಲ, ಆಗೋದಾದ್ರೂ ನಮ್ಗೆ ಆಗದವರು ನಮ್ಮನ್ನು ಬಿಡಲ್ಲ... ಹೀಗೆ ಸದಾ ಏರಿಳಿತದ ಜೀವನದಿಂದ ಬೇಸತ್ತು ನಾವಾದ್ರೂ ಯಾಕಪ್ಪಾ ಬದುಕಿರ್ಬೇಕು? ನಾನು ಸತ್ರೆ ಒಳ್ಳೇದಿತ್ತು, ಆವಾಗ ಏನೂ ಟೆನ್ಷನ್ ಇರಲ್ಲ... ಹೀಗೆ ನಮ್ಮ ಪ್ರತಿಯೊಬ್ಬರ ಮನಸ್ಸು ಯಾವತ್ತಾದ್ರೂ ಒಂದ್ಸಲ ಯೋಚಿಸಿರುತ್ತೆ ಬಿಡಿ, ಆದ್ರೆ ಈ ಸತ್ಯಾನಾ ಒಪ್ಕೊಳ್ಳೋಕೆ ಮಾತ್ರ ಯಾರೂ ಸಿದ್ಧರಿರಲ್ಲ...

ಚಿಕ್ಕಂದಿನಿಂದಲೂ ದಿನ, ಕ್ಷಣ ಬಿಡದಂತೆ ಏನಾದರೊಂದು ಸಮಸ್ಯೆ ನಮ್ಮನ್ನು ಕಾಡ್ತಾನೇ ಇರತ್ತೆ. ಈ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಕೆಲವೊಂದು ಹೇಡಿಗಳು ಸಾವಿನ ಮೊರೆ ಹೋಗ್ತಾರೆ. `ಸಾವು' ಅಂತಂದ್ರೆ ಸಮಸ್ಯೆಗಳಿಂದ ಮುಕ್ತಿ ಅನ್ನೋದೇ ಹೆಚ್ಚಿನವರ ವಾದ. ಆದ್ರೆ ಅದೇ ಸಾವಿನಿಂದ ಸಮಸ್ಯೆಗಳ ಆರಂಭ ಅಂತ ತಿಳಿರೋರು ಮಾತ್ರ ತೀರಾ ವಿರಳ. ಹುಟ್ಟು-ಸಾವು ಈ ಎರಡರ ನಡುವೆ ಮೂರು ದಿನದ ಬಾಳು ಅಂತ ದಾಸಶ್ರೇಷ್ಟರೇನೋ ಹೇಳಿದ್ದಾರೆ ಸ್ವಾಮೀ... ಆದ್ರೆ ಈ ಮೂರು ದಿನದ ಬಾಳು ಎಷ್ಟೊಂದು ನೋವು, ಅವಮಾನ, ಕಷ್ಟ ನೀಡುತ್ತೆ ಅಂತ ಅವರ್ಗೇನು ಗೊತ್ತು?

ಹೀಗ ಸಾಯೋದಕ್ಕೆ ಬೇಕಿರೋ ಕಾರಣ, ಆರ್ಹತೆಗಳನ್ನು ಪಟ್ಟಿ ಮಾಡೋದು ಸುಲಭ. ಕ್ಷಣ ಕಾಲ ಯೋಚಿಸಿ ನೋಡಿ. ನಮ್ಮ ಮನಸ್ಸು `ಸಾವು' ಅನ್ನೋ ಎರಡಕ್ಷರಾನಾ ನಮ್ಮ ಕಣ್ಮುಂದೆ ತಂದು ನಿಲ್ಲಿಸಲಿ. ಆಗ ಭಯ ಶುರುವಾಗುತ್ತೆ. ಸಾಯದಕ್ಕಿಂತ ಹೇಗಾದ್ರೂ ಸರಿ ಬದುಕೋದೇ ಬೆಟರ್ ಅನ್ನೋದನ್ನು ಮನಸ್ಸು ಒಪ್ಪಿಕೊಳ್ಳುತ್ತೆ.

ಕೆಲವರು ಮಾತು-ಮಾತಿಗೂ ನಾನು ಸಾಯ್ತೀನಿ ಅಂತ ಹೇಳ್ತಾರೆ, ಆದ್ರೆ ಅಂಥವ್ರು ಯಾರೂ ಸತ್ತ ಉದಾಹರಣೆಗಳೂ ಇಲ್ಲ. ಸಾಯಬೇಕೆಂದಿರುವವರು ಎಂದೂ ತನ್ನ ಸಾವನ್ನು ಯಾರ ಜೊತೆಯೂ ಹಂಚ್ಕೊಳ್ಳಲ್ಲ. ಇಷ್ಟಕ್ಕೂ ಸಾವನ್ನು ನಾವಾಗೇ ತಂದುಕೊಂಡ್ರೆ? ಇದು ಖಂಡಿತಾ ಅಪರಾಧವೇ ಸರಿ. ಎಕ್ಸಾಮಲ್ಲಿ ಫೇಲ್ ಆಗ್ತೀವಿ, ಲವರ್ ಕೈಕೊಟ್ರು, ಮನೇಲಿ ಬೈದ್ರು, ಕೆಲಸ ಕೈಕೊಡುತ್ತೆ ಇಂಥ ಕಾರಣಕ್ಕೆ ಸಾಯ್ಬೇಕು ಅಂಥ ನಿಧರ್ಾರ ಮಾಡರಿಗೆ ನಾನು-ನೀವು ಏನು ಹೇಳೋಕಾಗುತ್ತೆ ಬಿಡಿ. ಅವರಿಗೆ ಒಟ್ಟಾರೆ ಹೇಗಾದ್ರೂ ಸಾಯಲೇಬೇಕು. ಅದಕ್ಕಾಗಿ ಆತ್ಮಹತ್ಯೆ ಎನ್ನುವ ಪಾಪದ ಕೃತ್ಯಕ್ಕೆ ಕೊರಳೊಡ್ಡುತ್ತಾರೆ.

ಆತ್ಮಹತ್ಯೆ ಹೇಳೋಕೆ ಎಷ್ಟೊಂದು ಸುಲಭ ಅಲ್ವಾ? ಆದರೆ ಆತ್ಮಹತ್ಯೆ ಮಾಡ್ಕೊಂಡೋರ ಮನೋಸ್ಥಿತಿ ಹೇಗಿರಬಹುದು ಅಂತ ದೂರದಲ್ಲಿ ನಿಂತು ಕಲ್ಪಿಸಿಕೊಳ್ಳೋಕೂ ಅಸಾಧ್ಯ. ನಾನಂತೂ ಆತ್ಮಹತ್ಯೆ ಮಾಡ್ಕೊಂಡೋರ ಹೆಣ ನೋಡೋಕ್ಕೂ ಹೋಗಲ್ಲ. ಅವರ ನಿಸ್ತೇಜ ದೇಹ ನೋಡಿ ಕಣ್ಣೀರೂ ಸುರಿಸಲ್ಲ. ಯಾಕೇಂದರೆ ನನ್ ಜೀವನದಲ್ಲಿ ಇಂತಹ ಆತ್ಮಹತ್ಯೆಯ ಕೃತ್ಯವನ್ನು ಅದೆಷ್ಟೋ ಕಂಡಿದ್ದೀನಿ. ನಿಮಗೆ ಹೀಗೆ ಹೇಳೋದಕ್ಕೆ ಮುಖ್ಯ ಕಾರಣಾನೇ ನನ್ನ ಬಾಲ್ಯ ಸ್ನೇಹಿತ.

ಅವನೊಬ್ಬನಿದ್ದ ನಮ್ಮೊಂದಿಗೆ...

ನಾನು, ನನ್ನ ಕಸಿನ್ ಬ್ರದರ್ ಮತ್ತು ಆತ ನಾವೆಲ್ಲಾ ಚಡ್ಡಿ ಹಾಕದ ಕಾಲದಿಂದಲೂ ಚಡ್ಡಿದೋಸ್ತ್ಗಳು. ಎಲ್ಲಿಗೋ ಹೋದ್ರೋ ನಮ್ಗೆ ತ್ರಿಮೂತರ್ಿ ಅನ್ನೋ ಅಡ್ಡ ಹೆಸರು ಬೇರೆ. ಕಲಿಯುವುದರಲ್ಲೂ ಅಷ್ಟೇ... ಆತ ನಮಗಿಂತ ಸ್ವಲ್ಪ ಮುಂದೆ, ನಾವೆಲ್ಲಾ ಹಿಂದೆ. ಬಾಲ್ಯದಲ್ಲೇ ಅವನ ಜತೆ ನಾವೆಲ್ಲಾ ಜೀವನಪೂತರ್ಿ ಜತೆಯಾಗಿರುವ ಪಣ ತೊಟ್ಟಿದ್ದೆವು. ಹಸ್ತಕ್ಕೆ ಹಸ್ತವನ್ನು ತಾಗಿಸಿ ಭಾಷೆಯೇನೋ ಕೊಟ್ಟಿದ್ವಿ. ಆದ್ರೆ ಆ ಭಾಷೆ, ಪಣ ಇವೆಲ್ಲದರಿಂದ ಆತನನ್ನು ನಮ್ಜೊತೆ ಉಳಿಸೋಕ್ಕೆ ಆಗಿಲ್ಲ. ಮೆಟ್ರಿಕ್ ಮುಗಿದ ನಂತರ ನಾವು ಮೂವರೂ ಬೇರೆ-ಬೇರೆಯಾದೆವು. ಆತ ಮತ್ತು ನಾನು ಪ್ರತಿದಿನ ಅಲ್ಲದಿದ್ರೂ ವಾರದಲ್ಲಿ ಒಂದು ದಿನ ಭೇಟಿಯಾಗಿ ಮಾತಾಡುವಷ್ಟು ಗೆಳೆತನ ಇನ್ನೂ ಉಳಿದಿತ್ತು. ಆತನಂದ್ರೆ ನನಗೆ ಏನೋ ಅಕ್ಕರೆ... ನಮ್ಮ ಮನೆಯಲ್ಲೂ ಅಷ್ಟೇ... ನನಗಿಂತ ನನ್ನ ಗೆಳೆಯನ ಮೇಲೆ ಮಮತೆ ಹೆಚ್ಚು. ಹೌದು... ಆತ ಇಂದು ನಮ್ಮೊಂದಿಗಿಲ್ಲ... ಆತ ಆತ್ಮಹತ್ಯೆ ಎಂಬ ಪಾಪದ ಕೂಪಕ್ಕೆ ಕೊರಳೊಡ್ಡಿ ಬರಲಾರದ ಊರಿಗೆ ಪಾದ ಬೆಳೆಸಿ ಆಗಿದೆ. ಕೊನೆಯ ಸಲ ನನ್ನನ್ನು ಭೇಟಿಯಾದಾಗ ತುಂಬಾ ಮಾತನಾಡಿದ್ದ. ಆದ್ರೆ ಅದೇ ದಿನ ಕೊನೆಯ ಮಾತು ಹೇಳದೆ ಸಾವಿಗೆ ಶರಣಾದ ಎಂದರೆ ಊಹಿಸಲು ಕಷ್ಟವಾಗಿತ್ತು. ಸಾವು ಅನ್ನೋ ಪದಾನೇ ನನಗಾಗೇ ಅಪರಿಚಿತ. ಹಾಗಾಗಿ ಆತನ ಸಾವನ್ನು ಅರಗಿಸಿಕೊಳ್ಳೋಕೆ ನಾನು ಸಿದ್ಧನಿರಲಿಲ್ಲ. ಆತನ ಮನೆಮುಂದೆ ಶವ ಅಂಗಾತ ಮಲಗಿತ್ತು. ಎಲ್ಲರೂ ಬಿಳಿವಸ್ತ್ರಧಾರಿಗಳೇ... ಅಮ್ಮನ ಬಲವಂತಕ್ಕೆ ಕಟ್ಟುಬಿದ್ದು ಅಲ್ಲಿಗೆ ಹೋಗಿದ್ದೆ. ಆದರೆ ಯಾಕೋ ಮನಸ್ಸು ಕಠಿಣವಾಗಿತ್ತು. ಕಣ್ಣಿಂದ ಒಂದ ಹನಿ ಕಣ್ಣೀರೂ ಉರುಳಲಿಲ್ಲ. ಅವನು ಕಾಲನ ಕರೆಗೆ ಓಗೊಟ್ಟು ಹೋಗಿದ್ದರೆ ಕ್ಷಮಿಸುತ್ತಿದ್ದೆನೇನೋ... ಆದರೆ ಆತನೇ ಕಾಲನನ್ನು ಕೈಬೀಸಿ ಕರೆದರೆ...?

ಸತ್ತವನ ಮನೆಯ ಮುಂದೆ ಜಾತ್ರೆಯ ವಾತಾವರಣ.., ಯಾರು ಯಾರಿಗೆ ಅಳುವುದೋ? ಅಯ್ಯೋ.. ಅಮ್ಮಾ ಅಂತ ಎಷ್ಟು ದಿನ ಬೊಬ್ಬಿಡಬಹುದಲ್ವಾ? ಕೊನೆಗೊಂದು ದಿನ ಕಣ್ಣೀರು ಬತ್ತಿಹೋದಾಗ ಸಾವಕಾಶವಾಗಿ ಅವನ ನೆನಪೂ ಕರಗುತ್ತೆ.

ಬಾಲ್ಯ ಸ್ನೇಹಿತನ ಅಕಾಲ ಮರಣ ನನ್ನನ್ನು ಅಧೀರನನ್ನಾಗಿಸಿದ್ದು ಹೌದು.! ಆಮೇಲೆ ಸಾವಿಗೆ ಭಯ ಪಡಬಾರದು ಅಂದುಕೊಂಡೆ. ಸತ್ತೋರಿಗ ಅತ್ರೆ ಅವರು ಮತ್ತೆ ಬರ್ತಾರಾ? ಅದಕ್ಕೆ ಹೇಳೋದು... ಸಾವು ತಾನಾಗೇ ಬರ್ಬೇಕು, ನಾವು ಅದನ್ನು ಹುಡ್ಕೊಂಡು ಹೋಗೋದು ಮೂರ್ಖತನವೇ ಸರಿ.

ಜೀವನದಲ್ಲಿ ಏನೇ ಸಮಸ್ಯೆ ಬರಲಿ, ಎಷ್ಟೇ ಕಷ್ಟ ಸಿಗಲಿ ಆದರೆ, ಆತ್ಮಹತ್ಯೆಯಂತಹ ಪಾಪಕ್ಕೆ ಕೊರಳೊಡ್ಡುವ ಮುನ್ನ ಕೊಂಚ ಹೊತ್ತು ಯೋಚಿಸೋಣ. ಸಾಯಲು ಮತ್ತು ಸಾಯದಿರಲು ಕಾರಣ ಹುಡುಕೋಣ. ಆತ ಸಾವು ಬೇಡವೆನ್ನಿಸುತ್ತೆ. ಮನಸ್ಸು ಬುದ್ಧಿಯ ಜಾಡು ಹಿಡಿದು ನಡೆಯುತ್ತೆ. ದೂರದಲ್ಲೆಲ್ಲೋ ದೀಪವೊಂದು ಬೆಳಗುತ್ತಿರುವುದು ಕಾಣುತ್ತೆ. ಸಾಯೋದು ಬಿಟ್ಟು ಆ ಕಡೆ ನಡೆದರೆ ಸಾಕು, ನಾವು ನಡೆಯೋ ದಾರಿ ಸ್ಪಷ್ಟವಾಗುತ್ತೆ. ಆದ್ದರಿಂದ ನೋ ಮೋರ್ ಸುಸೈಡ್ ಪ್ಲೀಸ್..

ನಿನ್ನೆಗೆ ಆತ ನನ್ನಿಂದ ದೂರವಾಗಿ 10 ವರ್ಷಗಳು ಸಂದಿವೆ. ಗೆಳೆಯನ ನೆನಪಿನಲ್ಲಿ ಕಣ್ಣು ಮಂಜಾಗುತ್ತಿವೆ. ಮತ್ತೊಂದು ಜನ್ಮ ಅಂತಿದ್ದರೆ ನಾನೂ-ಅವನೂ ಮತ್ತೆ ಗೆಳೆಯರಾಗಿ ಹುಟ್ಟುತ್ತೇವೆ.... ಎಂಬ ವಿಶ್ವಾಸ ಮಾತ್ರ ಹಾಗೇ ಉಳಿದಿದೆ...!!!

Wednesday, March 2, 2011

ಪ್ರೀತೀಲಿ ಬೀಳೋ ಮುನ್ನ...






ಹದಿಹರೆಯಕ್ಕೆ ಕಾಲಿಟ್ಟ ಪ್ರತೀ ಹೆಣ್ಣು ಅಥವಾ ಗಂಡು ಮಕ್ಕಳು ಕೂಡಾ ತನ್ನ ಸಂಗಾತಿಯ ಆಯ್ಕೆಯಲ್ಲಿ ತೊಡಗುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನಡೆವ ದಾರಿಯಲ್ಲಿ ಎದುರಿಗೆ ಸಿಕ್ಕ ಹುಡುಗಿ ಚಂದದ ನಗೆ ಬೀರಿದರೆ ಸಾಕು, ಆಕೆ ತನಗೇ ಸೇರಬೇಕು ಎಂದು ಬಯಸೋ ಹುಡುಗರ ಸಂಖ್ಯೆಗೇನೂ ಕಮ್ಮಿಯಿಲ್ಲ. ಸಿಗೋ ಹುಡುಗೀರನ್ನು ಒಂದು ಬಾರಿ ನೋಡಿ, ಆ ಬಳಿಕ ಬಾರಿ-ಬಾರಿ ತಿರುಗಿ ನೋಡಿ ಸಾಗುವ ಹುಡುಗರ ಕಣ್ಣುಗಳು ಆಕೆಯನ್ನು ತನ್ನ ಖಾಸಗಿ ಆಸ್ತಿಯೇನೋ ಎಂಬಂತೆ ಭಾವಿಸಿ ಪ್ರೀತಿ, ಪ್ರೇಮ ಎಂದು ಹಿಂಬಾಲಿಸುವುದೂ ಇದೆ. ನಾನೀಗ ಹೇಳಹೊರಟಿರುವುದು ಹುಡುಗರ ಬಗ್ಗೆಯಲ್ಲ.

ಸದಾ ನಾಚಿಕೆಯ ಬುಗ್ಗೆಯಾಗಿ, ದೂರದಿಂದ ಹುಡುಗರನ್ನು ಕಂಡ ಕೂಡಲೇ ಕೆನ್ನೆ ಕಂಪಡರಿ ಕಣ್ಣಲ್ಲೇ ಮಾತಾಡೋ ಹುಡ್ಗೀರಿಗೂ ಒಬ್ಬೊಬ್ಬ ಹುಡುಗ ಒಂದೊಂದು ಕಾರಣಕ್ಕೆ ಇಷ್ಟವಾಗ್ತಾರೆ. ಆದ್ರೆ ಇವರಲ್ಲಿ ಶೇಕಡಾ ಐದರಷ್ಟೋ, ಹತ್ತರಷ್ಟೋ ಮಂದಿ ಖುಲ್ಲಾಂಖುಲ್ಲಾ ಆಗಿ ತಮ್ಮ ಹುಡ್ಗರನ್ನು ಆರಿಸಿದ್ರೆ, ಇನ್ನುಳಿದ ಹುಡ್ಗೀರು ತಮ್ಮ ಹುಡುಗನನ್ನು ಅಷ್ಟು ಸುಲಭವಾಗಿ ಆರಿಸೋದಿಲ್ಲ. ಆತನ ಗುಣ-ನಡತೆಗಳ ಇಂಚಿಂಚು ಅಳೆದು ತೂಗಿ ಆತ ತನಗೆ ಸಮರ್ಥನೋ, ಅಲ್ವೋ ಅಂತ ನಿರ್ಧರಿಸ್ತಾರೆ. ಇಂತಹ ಹುಡ್ಗೀರು ನಿಜವಾಗಿಯೂ ಕನಸಿನ ಹುಡ್ಗನ ಬಗ್ಗೆ ಇರಿಸುವ ಹೊಂಗನಸುಗಳೇನು ಅನ್ನೋದರ ಬಗ್ಗೆ ಒಂದು ಪುಟ್ಟ ಸಮೀಕ್ಷೆ.(ತಪ್ಪಿದ್ರೆ ಕ್ಷಮೆ ಇರಲಿ... ನಾನೇ ಮಾಡಿದ್ದು...)

ಸಾಮಾನ್ಯವಾಗಿ ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿ, ಅಡುಗೆ ಕೋಣೆಯೇ ಪ್ರಪಂಚ ಅನ್ನೋ ಕಾಲವೊಂದಿತ್ತು. ಓರಗೆಯ ಹುಡುಗರೊಂದಿಗೆ ಚಿನ್ನಿದಾಂಡು ಆಟವಾಡುತ್ತಿದ್ದ ತುಂಡು ಲಂಗದ ಹುಡುಗಿ ದೊಡ್ಡವಳಾಗಿದ್ದಾಳೆ ಎನ್ನುವುದನ್ನು ಮನೆಮಂದಿ ನೆನಪಿಸಿದ ನಂತರವಂತೂ ಆಕೆ ಪರ್ಮನೆಂಟಾಗಿ ಮನೆಯೊಳಕ್ಕೆ ಸೇರುತ್ತಾಳೆ. ಆ ಬಳಿಕವೂ ಹುಡುಗ್ರ ಜತೆ ಸೇರಿದರೆ ಆಕೆಯ ಬಗ್ಗೆ ನಾನಾ ಬಗೆಯ ಕಮೆಂಟ್ಸ್ಗಳು ಓಣಿಯುದ್ದಕ್ಕೂ ಹರಿದಾಡುತ್ತೆ. ಅಡುಗೆಯ ಸೌಟು, ತಟ್ಟೆಗಳೇ ಆಟದ ವಸ್ತುಗಳಾಗುತ್ತೆ. ಇಂತಹ ಪರಿಸ್ಥಿತಿ ಹಿಂದಿನ ಕಾಲದ್ದಾದರೆ ಈಗ ಪರಿಸ್ಥಿತಿ ತೀರಾ ಭಿನ್ನ. ಹುಡುಗೀರು ಮೊದಲಿನಂತಿಲ್ಲ. ತೀರಾ ಮಾಡನರ್್ ಅಲ್ಲದ, ಗ್ರಾಮೀಣ ಸೊಗಡನ್ನು ಅಷ್ಟಿಷ್ಟು ಅಲ್ಲಲ್ಲಿ ಉಳಿಸ್ಕೊಂಡಿರೋ ಕರಾವಳಿ ತೀರದ ಹುಡ್ಗೀರು ಈಗ ತುಂಬಾನೇ ಬದಲಾಗಿದ್ದಾರೆ. ಹಾಗೆ ಹೇಳೋಕ್ಕೆ ಹೋದ್ರೆ ಹುಡ್ಗೀರು ಟೋಟಲ್ ಆಗಿ ಬದಲಾಗಿದ್ದಾರೆ. ತಮಗೆ ಬೇಕಾದ ಹೇರ್ಕ್ಲಿಪ್ನಿಂದ ಹಿಡಿದು ಕೈ ಹಿಡಿಯೋ ಗಂಡನವರೆಗೆ ಆಕೆ ಆಯ್ಕೆಯ ಸ್ವಾತಂತ್ರ್ಯ ಹೊಂದಿದ್ದಾಳೆ ಅಂದಮೇಲೆ ಕೇಳಬೇಕೆ? ಆಕೆ ಸ್ಮಾಟರ್್ ಆಗಿರೋ ಕಾರಣದಿಂದ ಹುಡುಗರ ದೃಷ್ಟಿಗೆ ಸಿಲುಕದೆಯೂ ಓಡಾಡಬಲ್ಲಳು. ಇಂತಹ ಹುಡುಗಿ ಬಯಸೋದಾದರೂ ಏನನ್ನು ಅನ್ನೋದನ್ನು ತಿಳಿಯೋಣ.

1. ಸಾಮಾನ್ಯವಾಗಿ ಲವ್ ಅಥವಾ ಬಾಯ್ಫ್ರೆಂಡ್ ಈ ಎರಡು ವಿಭಾಗದಲ್ಲೂ ಹೆಣ್ಣಾದವಳು ತನಗೆ ಇಷ್ಟವಾಗೋ ಹುಡುಗನ ಪರ್ಸನಾಲಿಟಿಯನ್ನು ಮೊದಲು ಗಮನಿಸುತ್ತಾಳೆ. ಉತ್ತಮ ದೇಹದಾಢ್ರ್ಯತೆ ಇರಬೇಕೆಂದು ಹುಡ್ಗೀರು ಆಸೆ ಪಟ್ಟರೂ ಸ್ಥೂಲಕಾಯರನ್ನು ಲೈಕ್ ಮಾಡಲ್ಲ. ಸದೃಢವಾಗಿ, ಆರೋಗ್ಯದಿಂದಿರುವ ಹುಡುಗರು ಬಲು ಬೇಗನೆ ಇಷ್ಟವಾಗೋದ್ರಲ್ಲಿ ಸಂಶಯವಿಲ್ಲ.

2. ಹುಡ್ಗೀರಿಗೆ ಹುಡುಗರ ಕಿರುನಗೆಯ ಶೈಲಿಯೂ ತುಂಬಾನೇ ಇಷ್ಟ. ನೀವೇ ಗಮನಿಸಿ. ಸಭೆ ಅಥವಾ ಸಮಾರಂಭದಲ್ಲಿ ಅಂದವಾಗಿ ನಗುವ ಹುಡ್ಗರನ್ನು ನೋಡಿ, `ಆತ ಎಷ್ಟು ಚೆನ್ನಾಗಿ ನಗುತ್ತಾನೆ ನೋಡೇ ಎಂದು ಹೇಳುತ್ತಾರೆ. ಇದರರ್ಥ ಹುಡುಗರ ಸುಂದರ ನಗು ಹುಡ್ಗೀರನ್ನು ಬಹುಬೇಗನೆ ಮೋಡಿ ಮಾಡಬಲ್ಲದು. ಬಾಲಿವುಡ್ ತಾರೆ ಅಕ್ಷಯ್ ಕುಮಾರ್ನನ್ನು ಅರೆಗಳಿಗೆ ನೆನಪಿಸಿಕೊಳ್ಳಿ, ಆಗ ನಿಮಗೇ ತಿಳಿಯುತ್ತದೆ.

3. ಹುಡುಗ ಅಂದವಾಗಿರಬೇಕಾದ್ದು ನಿಜ. ಬಿಳಿ, ಎಣ್ಣೆಕಪ್ಪು ಬಣ್ಣ ಹೊಂದಿದ್ದರೂ ಮುಖದಲ್ಲಿ ತೇಜಸ್ಸು ತುಂಬಿರಬೇಕೆಂದು ಆಶಿಸುವ ಹುಡುಗಿ, ಚುರುಕಾಗಿ ಕಾಣುವ, ಸದಾ ಕ್ರಿಯಾಶೀಲರಾಗಿ ಕಣ್ಣಲ್ಲೇ ನಗುವ ಹುಡುಗರತ್ತ ಬೇಗ ಆಕಷರ್ಿತರಾಗುತ್ತಾರೆ. ಅದೇ ರೀತಿ ಹುಡುಗ ಪ್ರತಿಭಾವಂತನಾಗಿದ್ದು, ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ ಬೇಗನೆ ಆಕಷರ್ಿಸಲ್ಪಡುತ್ತಾನೆ.

4. ಕಪಟವಿಲ್ಲದೆ ನೇರಾನೇರ ಮಾತಾಡುವ ಕಲೆ ಹೊಂದಿದ್ದರೆ ಹುಡುಗ ಬೇಗನೆ ಇಷ್ಟವಾಗುತ್ತಾನೆ. ಮನಸ್ಸಿನಲ್ಲಿ ಏನನ್ನೋ ಇರಿಸಿ, ಬೇರೇನನ್ನೋ ಹೇಳುವ ಹುಡುಗನನ್ನು ಯಾವ ಹುಡುಗಿಯೂ ಕೇರ್ ಮಾಡಲ್ಲ. ನೆಲ ನೋಡದೆ ತಲೆ ಎತ್ತಿ ಮಾತಾಡುವ ಹುಡುಗ ತನ್ನ ಜತೆ ಇರುವಾಗಲಾದರೂ ವಿಧೇಯತೆಯಿಂದ ನಡೆಯಲಿ ಎಂದು ಆಶಿಸೋರೇ ಹೆಚ್ಚು.

5. ಭಯಪಡುವ ಹುಡುಗನನ್ನು ಖಂಡಿತಾ ಹುಡುಗಿ ಮೆಚ್ಚುವುದಿಲ್ಲ. ಏನೇ ಬಂದರೂ ಆತ್ಮವಿಶ್ವಾಸ ಹೊಂದಿದ್ದರೆ ಹುಡುಗ ತನಗೆ ಒಪ್ಪಿಗೆ ಎಂದೇ ಹುಡುಗಿ ಭಾವಿಸುತ್ತಾಳೆ. ಇದು ಆಕೆಯ ಮುಂದಿನ ಬಾಳಿನ ಯೋಚನೆಯನ್ನೂ ಅವಲಂಬಿಸಿರುತ್ತದೆ.

6. ಅಭಿಮಾನ ಎನ್ನುವುದು ಪ್ರೀತಿಯ ಮತ್ತೊಂದು ಮಗ್ಗುಲು. ಹೀಗಾಗಿ ಪ್ರೀತಿ ಅಥವಾ ಸ್ನೇಹದಂತೆಯೇ ತನ್ನನ್ನು ಕಂಡಾಗ ಸೌಂದರ್ಯದ ಬಗ್ಗೆ, ಪ್ರೀತಿಯ ಬಗ್ಗೆ ಕನಿಷ್ಠ ಮೆಚ್ಚುಗೆ, ಅಭಿಮಾನವನ್ನಾದರೂ ಹೊಂದಿರಲಿ ಎಂದೇ ಹುಡ್ಗೀರು ಬಯಸುತ್ತಾರೆ. ತನ್ನ ಹಿತ, ಅಹಿತಗಳನ್ನು ಗಮನಿಸಿ ಕೇರ್ ತೆಗೆದುಕೊಳ್ಳುವ ಹುಡುಗ ಹೆಚ್ಚಿನ ಹುಡುಗಿಯರಿಗೆ ಇಷ್ಟವಾಗುತ್ತಾನೆ.

7. ದಿನನಿತ್ಯದ ಬಿಡುವಿರದ ದುಡಿಮೆಯ ವೇಳೆಯಲ್ಲೂ ತನಗಾಗಿ ಒಂಚೂರು ಟೈಮನ್ನಾದರೂ ತನ್ನ ಹುಡುಗ ಮೀಸಲಿಡಲಿ ಎನ್ನುವುದೇ ಹೆಚ್ಚಿನ ಹುಡ್ಗೀರ ಬೇಡಿಕೆ. ಮಾತು ತಪ್ಪಿ ನಡೆಯುವ, ತನ್ನನ್ನು ಬಿಟ್ಟು ಬೇರೊಬ್ಬಳ ಜತೆ ಸಲುಗೆ ತೋರಿಸುವ ಹುಡುಗರು ಅಷ್ಟಕ್ಕಷ್ಟೆ. ಆದ್ರೆ ಕೆಲವೊಮ್ಮೆ ಟೈಮ್ ಇಲ್ಲ ಎಂಬ ಸಾಮಾನ್ಯ ಸಮಸ್ಯೆಯೇ ಸಂಬಂಧದ ನಡುವೆ ಬಿರುಕು ಮೂಡಿಸಲು ಕಾರಣವಾಗುತ್ತದೆ. ಆತನ ಎಲ್ಲಾ ಗುಣಗಳನ್ನು ಆಕೆ ಮೆಚ್ಚಿ, ಅಡ್ಜಸ್ಟ್ ಆಗಿದ್ದರೂ ಇದೊಂದು ಕಾರಣ ಮಾತ್ರ ಯಾವಾಗಲೂ ಸಹಿಸಿಕೊಳ್ಳುವುದಿಲ್ಲ.

8. ಜವಾಬ್ದಾರಿ ಇರಬೇಕಾದ್ದು ಅತಿಮುಖ್ಯ. ಕುಟುಂಬ, ಮನೆಯಲ್ಲಿ, ಹೋದಲ್ಲಿ, ಬಂದಲ್ಲಿ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಮೇಲೆ ಹುಡ್ಗೀರ ಪ್ರೀತಿ ಅವಲಂಬಿತವಾಗಿರುತ್ತದೆ. ಮನೆಕೆಲಸದಲ್ಲಿ ನೆರವಾಗುವುದು, ತನ್ನನ್ನು ಪ್ರೀತಿಸಿದಂತೆ ತನ್ನ ತಾಯಿ, ತಂದೆಯೊಂದಿಗೆ ಕೂಡಾ ಗೌರವ, ಅಭಿಮಾನದಿಂದ ವ್ಯವಹರಿಸುವ ಹುಡುಗ ಹುಡುಗಿಗೆ ಇಷ್ಟವಾಗುತ್ತಾನೆ.

9. ಹೆಚ್ಚಿನ ಹುಡುಗರು ತಾವು ಹೇಳಬೇಕಾದ್ದನ್ನು ಎಲ್ಲೂ ನಿಲ್ಲಿಸದೆ ಹೇಳಿ ಹುಡುಗಿ ಬಾಯ್ತೆರೆದಾಗ ಮಾತ್ರ ಕಿವಿ ಮುಚ್ಚಿ ತಮ್ಮಷ್ಟಕ್ಕೆ ತಾವಿರುತ್ತಾರೆ. ಇದರಲ್ಲಿ ಹುಡುಗರು ಫೇಲ್ ಆದ್ರೆ ಲವ್ ಲೈಫ್ ಅರ್ಧಕ್ಕೆ ನಿಲ್ಲುತ್ತದೆ. ಕೇಳುವ ಗುಣ ಮುಖ್ಯ. ಆಕೆ ಹೇಳಿದ್ದನ್ನು ಸಮಾಧಾನದಿಂದ ಆಲಿಸಿದರೆ ಆಕೆಗೆ ಅಷ್ಟೇ ಇಷ್ಟವಾಗುತ್ತೆ ಅನ್ನೋದನ್ನು ಮರೆಯಬಾರದು.

10. ಹುಡುಗ ಎಂದರೆ ಜೋರು. ಆದರೆ ತನ್ನ ಜತೆ ಮಾತ್ರ ಆತ ಅನಗತ್ಯ ದರ್ಪ ತೋರುವುದು ಬೇಡ, ಸಾರ್ವಜನಿಕ ಸ್ಥಳಗಳಿಂದ ಹಿಡಿದು ಮನೆಯೊಳಗೆ ಕೂಡಾ ತನ್ನ ಜತೆ ನಯ, ವಿನಯದಿಂದ ನಡೆಯುವ ಹುಡುಗನನ್ನು ಹುಡುಗಿ ಅತಿಯಾಗಿ ಪ್ರೀತಿಸುತ್ತಾಳೆ. ಹುಡುಗ ತನ್ನ ಜನ್ಮತ: ಸ್ವಭಾವ ಬದಿಗಿರಿಸಿ ನವಿರು ಭಾವನೆಗಳಿಂದ ವತರ್ಿಸಿದಲ್ಲಿ ಹುಡುಗಿ ಆತನಿಗೆ ಮನಸೋಲುತ್ತಾಳೆ.

ಈ ಹತ್ತು ಸಿಂಪಲ್ ಸೂತ್ರಗಳು ಯಾವುದಾದ್ರೂ ಹುಡ್ಗಿಯನ್ನು ಪ್ರೀತಿಸ್ಲೇಬೇಕು ಅಂತ ಜಿದ್ದಿಗೆ ಬಿದ್ದಿರೋ ಹುಡುಗರು ಗಮನಿಸಬೇಕಾದ್ದು ಅವಶ್ಯ. ಇವೆಲ್ಲಾ ಗುಣಗಳು ಹುಡ್ಗರಲ್ಲಿ ಇದ್ರೆ ಅವರು ಪ್ರೀತಿಸೋಕ್ಕೂ ಲಾಯಕ್ಕು, ಪ್ರೀತಿ ಪಡೆಯೋಕ್ಕೂ ಲಾಯಕ್ಕು. ಇದರಲ್ಲಿ ಒಂದೆರಡು ಗುಣಗಳು ಮಾತ್ರ ಇದ್ರೆ ಪ್ರಯತ್ನಿಸೋದ್ರಲ್ಲಿ ತಪ್ಪಿಲ್ಲ. ಆದ್ರೆ ಒಮ್ಮೆಗೆ ಸಿಕ್ಕ ಪ್ರೀತಿ ಮತ್ತೆಂದೂ ದೂರವಾಗದು ಅನ್ನೋ ಭ್ರಮೆ ಬೇಡ. ಯಾಕೇಂದ್ರೆ ಪ್ರೀತಿ ಚೇಂಜ್ ಕೇಳುತ್ತೆ. ಕಾಲ ಬದಲಾದಂತೆ ಪ್ರೀತಿಸೋರು ಕೂಡಾ ಬದಲಾಗ್ತಾರೆ. ಪ್ರೀತಿಸಲು ಬೇಕಾಗುವ ಗುಣ, ಲಕ್ಷಣಗಳೂ ಕೂಡಾ ಬದಲಾಗುತ್ತೆ. ಎನಿವೇ... ಭಾವನೆಗಳನ್ನು ಅರಿತುಕೊಳ್ಳೋ ಹುಡುಗ-ಹುಡುಗಿ ಎಲ್ರಿಗೂ ಸಿಗಲಿ. ಆಯ್ಕೆ ಮಾತ್ರ ಜೋಪಾನವಾಗಿರಲಿ.

Friday, February 4, 2011

ಮಾಲ್ಗುಡಿ ಚಿತ್ರಪಟ






ದಕ್ಷಿಣ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಭೇಟಿ ನನ್ನ ಜೀವನದ ಮರೆಯಲಾಗದ ಕ್ಷಣಗಳಲ್ಲಿ ಒಂದು ಎಂದೇ ಭಾವಿಸುತ್ತೇನೆ. ಕೊರೆವ ಚಳಿಗಾಲದಲ್ಲಿ ಹಿಮದಿಂದ ಮಿಂದು ಮೇಲೆದ್ದು ನಿಂತಂತೆ ಗೋಚರಿಸುವ ಆಗುಂಬೆ ಎನ್ನುವ ಮಲೆನಾಡಿನ ಪುಟ್ಟ ಊರು ಅದೆಷ್ಟೋ ಸುಂದರ ಸ್ಥಳಗಳನ್ನು ತನ್ನೊಡಲಿನಲ್ಲಿ ತುಂಬಿಕೊಂಡಿದೆ. ದೂರದರ್ಶನದ ಪ್ರಸಿದ್ಧ ಧಾರಾವಾಹಿ `ಮಾಲ್ಗುಡಿ ಡೇಸ್, ಚಿತ್ರೀಕರಣಗೊಂಡ ದೊಡ್ಡಮನೆ, ಲಾಲೆ ಬೀದಿ ಇಲ್ಲಿಯೇ ಪಕ್ಕದಲ್ಲಿದೆ. ಆಗುಂಬೆಯ ದಟ್ಟವಾದ ಕಾಡಿನಲ್ಲಿ ಅವಿತಿರುವ ಒನಕೆ ಅಬ್ಬಿ ಜಲಧಾರೆಯ ಟ್ರೆಕ್ ಅನುಭವ ಸವಿಯಲು ಆಗುಂಬೆಯ ನೆಲಕ್ಕೊಮ್ಮೆ ಕಾಲೂರಲೇಬೇಕು. ಕಾಡುಪ್ರಾಣಿಗಳ ಸದ್ದು, ಕಾಲಿಟ್ಟಷ್ಟು ಮುತ್ತಿಕೊಳ್ಳುವ ಇಂಬಳಗಳ ಸ್ವಾಗತ ಎಲ್ಲವನ್ನೂ ನೆನೆಸಿಕೊಂಡರೆ ಸಾಕು, ಚಳಿಯಲ್ಲೂ ಮೈ ಬೆವರುತ್ತದೆ...(ಈ ಬಗ್ಗೆ ಸದ್ಯದಲ್ಲೇ ಬರೆಯುತ್ತೇನೆ)

ಅಂತಿರುವ ಆಗುಂಬೆಯಲ್ಲಿ ನಾನು ಮತ್ತು ನನ್ನ ತಂಡ ಕಳೆದ ಒಂದು ಸುಂದರ ಸಂಜೆಯ ಚಿತ್ರಪಟ ನಿಮಗಾಗಿ... ಮಾಲ್ಗುಡಿಗೆ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ ಹೇಳುತ್ತಾ...

Saturday, January 29, 2011

ಮುಸ್ಸಂಜೆಯ ಮಾಲ್ಗುಡಿ ಪಯಣ...





ಮಾಲ್ಗುಡಿ ಹಸರು ಕೇಳದವರು ಬಹುಷ: ವಿರಳವೇ ಇರಬಹುದು. ಸುಮಾರು 15 ವರ್ಷಗಳ ಹಿಂದೆ ದೂರದರ್ಶನ ಚಾನೆಲ್ನಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಜನರನ್ನು ಯಾವ ರೀತಿ ಆಕಷರ್ಿಸಿತ್ತು ಎಂದರೆ ಜನರು ಮಾಲ್ಗುಡಿ ಎಂಬ ಊರಿನ ಬಗ್ಗೆ ಸಹಜವಾಗೇ ಕುತೂಹಲ ಬೆಳೆಸಿದ್ದರು. ಅದು ಪ್ರಸಾರವಾಗುತ್ತಿದ್ದುದು ಹಿಂದಿ ಭಾಷೆಯಲ್ಲಾದರೂ ನಮಗೆಲ್ಲಾ ಅದು ಅಚ್ಚುಮೆಚ್ಚು. ಕಾರಣ ಅದರಲ್ಲಿ ಅಭಿನಯಿಸುತ್ತಿದ್ದ ದಿವಂಗತ ವಿಷ್ಣು, ಶಂಕರನಾಗ್ ಅವರಂತಹ ನಟರುಗಳು. ಮಾತ್ರವಲ್ಲದೆ ಮಾಸ್ಟರ್ ಮಂಜುನಾಥ್ ಎಂಬ ಬಾಲ ಪ್ರತಿಭೆಯನ್ನು ಕಿರುತೆರೆಗೆ ಮೊದಲ ಬಾರಿ ಈ ಧಾರಾವಾಹಿ ಮೂಲಕವೇ ಶಂಕರನಾಗ್ ಪರಿಚಯಿಸಿದ್ದರು. ಆರ್.ಕೆ. ನಾರಾಯಣ್ ರಚಿಸಿದ್ದ `ಸ್ವಾಮಿ ಆ್ಯಂಡ್ ಫ್ರೆಂಡ್ಸ್' ಕಥಾ ಸಂಕಲನವನ್ನು ಹಿರಿಯ ನಟ ಶಂಕರನಾಗ್ ದಕ್ಷ ನಿದರ್ೇಶನದಲ್ಲಿ ಧಾರಾವಾಹಿಯನ್ನಾಗಿ ಮಾಡಲಾಗಿತ್ತು. ಸೊಗಸಾಗಿ ಮೂಡಿಬರುತ್ತಿದ್ದ ಈ ಧಾರಾವಾಹಿಯನ್ನು ರಾತ್ರಿ ನಿದ್ದೆಗೆಟ್ಟಾದರೂ ನೋಡದಿದ್ದರೆ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ. ಆದರೆ ಇದೇ ಮಾಲ್ಗುಡಿ ಬಗ್ಗೆ ಮನದಲ್ಲಿ ಇದ್ದ ಅದೆಷ್ಟೋ ಕುತೂಹಲಕ್ಕೆ ತೆರೆ ಬಿದ್ದಿದ್ದು ದೂರದರ್ಶನಕ್ಕಾಗಿ 25 ವರ್ಷಗಳ ಹಿಂದೆ ಮಾಲ್ಗುಡಿಯಾಗಿ ರೂಪವೆತ್ತಿದ್ದ ದಕ್ಷಿಣದ ಚಿರಾಪುಂಜಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿಗೆ ಕಾಲಿಟ್ಟಾಗಲೇ.

ಹೌದು... ಆರ್.ಕೆ. ನಾರಾಯಣ್ ಬರೆದಿದ್ದ ಪುಸ್ತಕ ಓದಿದ ಮೇಲಂತೂ ಅಲ್ಲಿಗೊಮ್ಮೆ ಭೇಟಿಕೊಡದಿದ್ದರೆ ಹೇಗೆ ಎಂದು ಮನಸ್ಸು ಹೇಳುತ್ತಿತ್ತು. ಮಾಲ್ಗುಡಿ ಎನ್ನುವುದು ಆಗುಂಬೆಯೆಂಬ ಪುಟ್ಟ ಊರಿನ ಒಂದು ಬೀದಿಯಲ್ಲಿ ಮೂಡಿಬಂದ ಅದೆಷ್ಟೋ ಕಲ್ಪನೆಯ ಸಾಕಾರ ರೂಪ ಎಂದು ಅರಿತಾಗ ಆ ಬಗೆಗಿನ ತವಕ, ಕುತೂಹಲ ಇನ್ನಷ್ಟು ಹೆಚ್ಚುತ್ತಿತ್ತು. ಕಾದು ಕಾದು ಕೊನೆಗೊಮ್ಮೆ ಆ ದಿನ ಬಂದೇಬಿಟ್ಟಿತು. ಮಂಗಳೂರಿನಿಂದ ಹೊರಡುವ ಪುಟ್ಟ ಬಸ್ನಲ್ಲಿ ಹೊರಟು ಆಗುಂಬೆ ತಲುಪಿದಾಗ ಮಧ್ಯಾಹ್ನ ದಾಟಿತ್ತು. ಸೂರ್ಯನ ಸುಡು ಬೇಗೆಯ ಸುಳಿವಿರಲಿಲ್ಲ. ಮಳೆ ಹೆಚ್ಚು ಸುರಿಯುವ ಕಾರಣಕ್ಕೋ ಏನೋ, ಅಷ್ಟಾಗಿ ಇಲ್ಲಿ ಬಿಸಿಲು ಸುಡುವುದಿಲ್ಲ. ಇನ್ನೇನು ಕೆಲ ಹೊತ್ತು ಕಳೆದರೆ ಕೊರೆವ ಚಳಿ ಆರಂಭವಾಗುತ್ತದೆ ಎನ್ನುವುದನ್ನು ಪ್ರಕೃತಿ ಸಾರಿ ಹೇಳುತ್ತಿತ್ತು.

ದೊಡ್ಡಮನೆ ಊರಿಗೆ ದೊಡ್ಡದು...

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ದಿವಂಗತ ಶಂಕರನಾಗ್ ಆರಿಸಿದ್ದ ದೊಡ್ಡಮನೆಯ ಬಗ್ಗೆ ಬೀದಿಯಲ್ಲಿ ಯಾರ ಹತ್ರ ಕೇಳಿದರೂ ಮಾಹಿತಿ ಇತ್ತು. ಊರಿಗೆ ದೊಡ್ಡದು ಎಂಬ ಕಾರಣಕ್ಕೇ ಆಗಿರಬೇಕು, ಕೇಳಿದ ತಕ್ಷಣ ಜನರು ಕರಾರುವಾಕ್ಕಾಗಿ ದಾರಿ ತೋರಿಸುತ್ತಿದ್ದರು. ಬಸ್ ತಂಗುದಾಣದಿಂದ ಕಾಲ್ನಡಿಗೆಯ ದೂರದಲ್ಲಿರೋ ದೊಡ್ಡಮನೆ ಸುಮಾರು 115 ವರ್ಷಗಳನ್ನು ಪೂರೈಸಿದೆ. ಮಾಲ್ಗುಡಿ ಧಾರಾವಾಹಿಯ ಬಹುತೇಕ ಎಪಿಸೋಡ್ಗಳಲ್ಲಿ ಕಾಣಿಸಿಕೊಂಡ ಈ ಮನೆಯ ಎದುರು ನಿಂತಾಗ ನಮ್ಮನ್ನು ಸ್ವಾಗತಿಸಿದ್ದು ಮನೆಯ ಯಜಮಾನ್ತಿ ಕಸ್ತೂರಿ ಅಕ್ಕ. 65 ವರ್ಷ ಪ್ರಾಯದ ಇವರು ಆದರದಿಂದ ಬರಮಾಡಿಕೊಂಡು ಉತ್ಸಾಹದ ಚಿಲುಮೆಯಂತೆ ನಮ್ಮನ್ನು ಸತ್ಕರಿಸಿದ ರೀತಿ ಮಲೆನಾಡಿಗರ ಉಪಚಾರವನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಮನೆಗೆ ಸೊಸೆಯಾಗಿ ಬಂದಿರುವ ಕಸ್ತೂರಿ ಅಕ್ಕ ಈಗಲೂ ಊರಿಗೆ ಮಹಾಮಾತೆಯಾಗಿದ್ದಾರೆ. ಅವರ ಔದಾರ್ಯತೆ, ಪ್ರೀತಿ, ಅಕ್ಕರೆಯ ಬಗ್ಗೆ ಊರಿನಲ್ಲಿ ಯಾರಲ್ಲಿ ಕೇಳಿದರೂ ಬೇರೆ ಉತ್ತರ ಸಿಗಲಾರದು. ಅತಿಥಿಗಳು, ಪ್ರವಾಸಿಗರು, ಚಾರಣಿಗರು ಹೀಗೆ ದಣಿದು ಬಂದ ಯಾರಿಗೂ ಎಲ್ಲೂ ಕೊರತೆಯಾಗದಂತೆ ಉಪಚರಿಸುವ ಕಸ್ತೂರಿ ಅಕ್ಕ ಮಾಲ್ಗುಡಿ ಡೇಸ್ ಸೀರಿಯಲ್ನಲ್ಲಿ ಈ ಮನೆ ಕಂಡಿದ್ದರ ಹಿಂದಿನ ರಹಸ್ಯವನ್ನು ಈ ರೀತಿ ವಿವರಿಸುತ್ತಾರೆ.

ಖ್ಯಾತ ನಿದರ್ೇಶಕ ಗಿರೀಶ್ ಕಾನರ್ಾಡ್ ಅವರ ಜತೆ ನಮ್ಮ ಯಜಮಾನರಾದ ವಿಜೇಂದ್ರ ರಾಯರಿಗೆ ಒಳ್ಳೆಯ ಸ್ನೇಹವಿತ್ತು. ದಿವಂಗತ ಶಂಕರನಾಗ್ ಸೀರಿಯಲ್ ಮಾಡುತ್ತೇನೆ. ಒಂದು ದೊಡ್ಡ ಮನೆ ತೋರಿಸಿ ಎಂದಾಗ ಕಾನರ್ಾಡರು ನಮ್ಮ ಮನೆ ತೋರಿಸಿದರು. ಇದರ ಪರಿಣಾಮ ನಾವು ಈ ಮನೆಯನ್ನು ಧಾರಾವಾಹಿ ಚಿತ್ರೀಕರಣಕ್ಕೆ ಬಿಟ್ಟುಕೊಟ್ಟೆವು. ಹಲವು ತಿಂಗಳ ಕಾಲ ಚಿತ್ರೀಕರಣಕ್ಕಾಗಿ ನಮ್ಮ ಮನೆ ಹಾಗೂ ಆಗುಂಬೆಯ ಬೀದಿಯನ್ನು ಬಳಸಿಕೊಂಡ ಶಂಕರನಾಗ್ ನಮ್ಮ ಆತ್ಮೀಯರೇ ಆಗಿಹೋದರು. ಧಾರಾವಾಹಿಯ ಕೊನೆಯ ಕಂತಿನಲ್ಲಿ ನನ್ನ ಮಕ್ಕಳು, ಸಾಕುಪ್ರಾಣಿಗಳನ್ನೂ ಬಳಸಿಕೊಂಡರು ಎಂದು ಕಸ್ತೂರಿ ಅಕ್ಕ ಸ್ಮರಿಸಿಕೊಳ್ಳುತ್ತಾ ಮಾತು ಮುಂದುವರಿಸುತ್ತಾರೆ.

ಮಾಲ್ಗುಡಿ ಡೇಸ್ ಧಾರಾವಾಹಿಯ ಮೂಲಕ ದೊಡ್ಡಮನೆಯ ಸೌಂದರ್ಯ ಜಗತ್ತಿಗೇ ತಿಳಿಯುತ್ತಿದ್ದಂತೆ ಅದೆಷ್ಟೋ ಮಂದಿ ತಮ್ಮ ಚಿತ್ರಗಳಿಗಾಗಿ ಈ ಮನೆಯನ್ನು ಬಾಡಿಗೆಗೆ ಕೊಡಿ ಎಂದರು. ನಾನು ಯಾವುದಕ್ಕೂ ಒಪ್ಪಿಗೆ ಕೊಡಲಿಲ್ಲ. ಆದರೂ ರಮಾನಂದ ಸಾಗರ್ ಅವರ ಒತ್ತಾಯದ ಮೇರೆಗೆ ವಿಕ್ರಂ ಔರ್ ಬೇತಾಳ್ ಧಾರಾವಾಹಿ ಚಿತ್ರೀಕರಣಕ್ಕೆ ಮನೆಯನ್ನು ಬಿಟ್ಟುಕೊಟ್ಟೆವು. ಇದಾದ ಬಳಿಕ ಕೆಲವು ವರ್ಷಗಳ ಹಿಂದೆ ಸುದೀಪ್ ಅವರ ಮೈ ಅಟೋಗ್ರಾಫ್ಗೂ ಮನೆ ಬಳಸಿಕೊಂಡಿದ್ದಾರೆ ಎನ್ನುವ ಇವರ ಮಾತಲ್ಲಿ ಸಿನಿಮಾ ಮಂದಿಯ ಬಗ್ಗೆ ಬೇಸರವೂ ಕಂಡುಬರುತ್ತದೆ. ಸಿನಿಮಾ ಚಿತ್ರೀಕರಣದ ವೇಳೆ ಇಲ್ಲಿದ್ದ ಪುರಾತನ ವಸ್ತುಗಳನ್ನು ಒಡೆದು ಹಾಕಿದ್ದು ಮಾತ್ರವಲ್ಲದೆ ಶುಚಿತ್ವದ ಕಡೆಗೂ ಗಮನ ನೀಡುತ್ತಿರಲಿಲ್ಲ, ಹೀಗಾಗಿ ಇನ್ನು ಮುಂದೆ ಮನೆ ಯಾರಿಗೂ ಬಿಟ್ಟುಕೊಡಬಾರದು ಎಂದು ನಿರ್ಧರಿಸಿದೆ ಎನ್ನುತ್ತಾರೆ ಕಸ್ತೂರಿ ಅಕ್ಕ. ಇದೀಗ ಎರಡು ಅಂತಸ್ತಿನಿಂದ ಗಮನ ಸೆಳೆಯುವ ದೊಡ್ಡಮನೆ ಪ್ರಾರಂಭದಲ್ಲಿ ಮೂರು ಅಂತಸ್ತನ್ನು ಹೊಂದಿತ್ತು. ಸರ್. ಎಂ. ವಿಶ್ವೇಶ್ವರಯ್ಯ ಇಲ್ಲಿಗೆ ಭೇಟಿ ಕೊಟ್ಟಿದ್ದ ವೇಳೆ ಮನೆಯ ಮೇಲಿನ ಒಂದು ಅಂತಸ್ತನ್ನು ತೆಗೆಯಿರಿ ಎಂದು ಸಲಹೆ ನೀಡಿದ್ದರಿಂದ ಇದೀಗ ಎರಡು ಅಂತಸ್ತಿಗೆ ಸೀಮಿತವಾಗಿದೆ ಎನ್ನುತ್ತಾರೆ. ಕಪ್ಪು ಕಲ್ಲಿನಿಂದ ಕಟ್ಟಲ್ಪಟ್ಟಿರುವ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಲೆಕ್ಕ ಹಾಕಲು ಸುಲಭವಾಗಿ ಸಾಧ್ಯವಾಗದು. ನಾಲ್ಕು ಅಡುಗೆ ಕೋಣೆ, ಐದಾರು ದಾಸ್ತಾನು ಕೊಠಡಿ, ಎಂಟು ಬೆಡ್ರೂಂ ಹೊಂದಿರುವ ಈ ಮನೆಯಲ್ಲಿ ನಾಲ್ಕು ಸುತ್ತಲೂ ಪಡಸಾಲೆ ಇದೆ. ಮೂರು ಬಾವಿಯನ್ನೂ ಹೊಂದಿರುವ ದೊಡ್ಡಮನೆಯಲ್ಲಿ ಒಟ್ಟು 70ಕ್ಕೂ ಅಧಿಕ ಕೋಣೆಗಳಿವೆ ಎಂದರೆ ಅಚ್ಚರಿಯಲ್ಲದೆ ಇನ್ನೇನು?

ಸಂಪೂರ್ಣ ಮರದ ಕೆತ್ತನೆ, ಪೀಠೋಪಕರಣ ಹೊಂದಿರುವ ದೊಡ್ಡಮನೆ ನಜಕ್ಕೂ ಕುತೂಹಲದ ಕಣಜ. ಇಷ್ಟು ದೊಡ್ಡದಾದ ಮನೆಯಲ್ಲಿ ಸದ್ಯ ಇರುವುದು ಕಸ್ತೂರಿ ಅವರ ಮಗ-ಸೊಸೆ, ಮೊಮ್ಮಕ್ಕಳು ಹಾಗೂ ಅವರ 85 ವರ್ಷ ಪ್ರಾಯದ ತಾಯಿ. ಶುಚಿತ್ವಕ್ಕಾಗಿ ಕೆಲಸದ ಆಳುಗಳನ್ನು ಇಟ್ಟುಕೊಂಡಿದ್ದು, ದೊಡ್ಡಮನೆ ಈಗ ಪ್ರತೀ ಶನಿವಾರ ಹಾಗೂ ಆದಿತ್ಯವಾರದಂದು ಕಿಕ್ಕಿರಿದು ತುಂಬುತ್ತದೆ. ಬೆಂಗಳೂರು, ಮೈಸೂರು ಕಡೆಯಿಂದ ಬರುವ ಚಾರಣಿಗರು, ಪ್ರವಾಸಿಗರಿಗೆ ಮಲೆನಾಡಿನ ಆತಿಥ್ಯ ನೀಡುವ `ಅಜ್ಜಿಮನೆ'ಯಾಗಿ ಮಾರ್ಪಡುತ್ತದೆ. ದೊಡ್ಡಮನೆಯ ಯಜಮಾನ್ತಿಯೂ ಅಷ್ಟೇ, ಅವರು ಕೊಟ್ಟಷ್ಟು ಹಣ ಪಡೆದು ಅತಿಥಿ ದೇವೋಭವ ಎನ್ನುತ್ತಾರೆ. ಮಲೆನಾಡಿನ ಸಹಜ ಸೌಂದರ್ಯದಿಂದ ಕಂಗೊಳಿಸೋ ದೊಡ್ಡಮನೆ ಇತಿಹಾಸದ ಬಗ್ಗೆ ನೆನಪುಗಳನ್ನು ಕೆದಕುತ್ತಾ ನಮ್ಮೊಂದಿಗೆ ಒಂದಿಷ್ಟು ಹೊತ್ತು ಹರಟಿದ ಕಸ್ತೂರಿ ಅಕ್ಕ ನಮ್ಮನ್ನು ಬೀಳ್ಕೊಡುವ ವೇಳೆ ಮಜ್ಜಿಗೆ, ಚಕ್ಕುಲಿಯ ಸತ್ಕಾರವನ್ನು ಮಾಡದೆ ಬಿಡಲಿಲ್ಲ.

ಮಿಠಾಯಿವಾಲಾ...

ಮಾಲ್ಗುಡಿಯ ಎಪಿಸೋಡ್ ಒಂದರಲ್ಲಿ ಬರುವ ಮಿಠಾಯಿವಾಲಾ ಪಾತ್ರಧಾರಿ ಪಾಂಡುರಂಗ ಪಂಡಿತ್ ಅವರಿಗೆ ವಯಸ್ಸು ಎಂಬತ್ತೈದು ದಾಟಿದರೂ ಅಲ್ಲಿಯೇ ಪಕ್ಕದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಶಂಕರನಾಗ್ ಹಿಂದಿ ಭಾಷೆಯಲ್ಲಿ ಹೇಳಿಕೊಡುತ್ತಿದ್ದ ಡೈಲಾಗ್ ಅನ್ನು ಚಾಚೂ ತಪ್ಪದೆ ಹೇಳುತ್ತಿದ್ದೆ, ಇದರಿಂದ ಅವರಿಗೂ ನಾನು ಆತ್ಮೀಯನಾಗಿದ್ದೆ ಎಂದು ಕನ್ನಡಕ ತೆಗೆದು ಒರೆಸಿಕೊಳ್ಳುವ ಪಾಂಡುರಂಗ ಅವರು ಇಂದಿಗೂ ಅನಂತ್ನಾಗ್ ಈ ದಾರಿಯಲ್ಲಿ ಬರುವವರು ತಮ್ಮ ಕ್ಯಾಂಟೀನ್ಗೆ ಬಾರದೆ ಹೋಗುವುದಿಲ್ಲ ಅನ್ನುತ್ತಾರೆ. ಮಿಠಾಯಿವಾಲಾ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕಲಾವಿದ ಇಡೀ ಆಗುಂಬೆಗೆ ಈಗಲೂ ಮಿಠಾಯಿವಾಲಾನೇ.

ಮಾಲ್ಗುಡಿ ಡೇಸ್ ಚಿತ್ರೀಕರಣಕ್ಕಾಗಿ ಮಾಲ್ಗುಡಿಯಾಗಿ ಬದಲಾಗಿದ್ದ ಆಗುಂಬೆ ಇಂದಿಗೂ ಹಾಗೇ ಇದೆ. ಎಲ್ಲೋ ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಉಳಿದಂತೆ ಮಾಲ್ಗುಡಿ ಪ್ರಕೃತಿಯ ಮಡಿಲಲ್ಲಿ ಹಾಗೇ ತಣ್ಣಗೆ ಮಲಗಿದೆ ಎಂದರೆ ತಪ್ಪಾಗದು. ಎಪಿಸೋಡ್ನಲ್ಲಿ ಕಾಣಿಸಿದ್ದ ಆಗುಂಬೆ ಗ್ರಾ.ಪಂ. ಕಟ್ಟಡ ಈಗಲೂ ಹಾಗೆಯೇ ಇದೆ. ಕಥಾನಾಯಕ ಸ್ವಾಮಿ(ಮಾಸ್ಟರ್ ಮಂಜುನಾಥ್) ಓದಿದ್ದ ಶಾಲೆ ಬೇರೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಎಪಿಸೋಡ್ಗಾಗಿ ಇಲ್ಲಿನ ಸರ್ಕಲ್ನಲ್ಲಿ ಇಡಲಾಗಿದ್ದ ಬ್ರಟಿಷ್ ಅಧಿಕಾರಿ ಸರ್. ಫೆಡ್ರಿಕ್ ಲಾಲೆ ಪ್ರತಿಮೆಯನ್ನು ಗ್ರಾ.ಪಂ. ಸ್ಥಳಾಂತರ ಮಾಡಿದೆ. ಹಿಂದೆ ಇಲ್ಲಿ ಪೊಲೀಸ್ ಠಾಣೆಯ ಪುಟ್ಟ ಕಟ್ಟಡವಿದ್ದರೆ ಇಂದು ನಕ್ಸಲರ ಹೆಜ್ಜೆಗುರುತುಗಳಿಂದ ಎಎನ್ಎಫ್ ಚೆಕ್ಪೋಸ್ಟ್ ಬಂದಿದೆ. ಹೆಜ್ಜೆ, ಹೆಜ್ಜೆಗೂ ಗನ್ ಹಿಡಿದು ಕಾಣಸಿಗುವ ಪೊಲೀಸರು ಆಗುಂಬೆಯ ಹೊಸ ಅತಿಥಿಗಳು. ಉಳಿದಂತೆ ಮಾಲ್ಗುಡಿ ಅಥರ್ಾತ್ ಆಗುಂಬೆ ಕೊಂಚವೂ ಬದಲಾದಂತೆ ಕಂಡುಬರುವುದಿಲ್ಲ. ಇಲ್ಲಿನ ಜನರ ಆದರ, ಸತ್ಕಾರವೂ ಅಷ್ಟೇ. ಮಾಲ್ಗುಡಿಯ ಆ ದಿನಗಳು ಹೇಗಿತ್ತೋ, ಈಗಿನ ದಿನಗಳು ಹಾಗೇ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇಲ್ಲಿನ ಜನರು. ಮುಸ್ಸಂಜೆಯ ಕೆಂಬಣ್ಣ ಬಾನಲ್ಲಿ ಚೆಲ್ಲುತ್ತಿರಲು ಆಗುಂಬೆಯ ಬೀದಿಯಲ್ಲಿ ನಡೆಯುತ್ತಿದ್ದಂತೆ ತಂಗಾಳಿ ಮೈ ಕೊರೆಯುತ್ತಿತ್ತು. ಸುಂದರ ಸೂಯರ್ಾಸ್ತವನ್ನು ಕಣ್ಣಲ್ಲಿ ತುಂಬಿಕೊಂಡು ಮರಳಿ ಬಸ್ ಹತ್ತಿದಾಗ ಮಲೆನಾಡು ಕೈ ಬೀಸಿ ಕರೆದ ಅನುಭವ. ಮರೆಯಲಾರದ ಮಾಲ್ಗುಡಿ ಮಂಜಿನ ಹೊದಿಕೆಯೊಳಗೆ ಮರೆಯಾಗುವ ತವಕದಲಿ ಇದ್ದಂತೆ ಕಂಡುಬರುತ್ತಿತ್ತು.

ಅನಾಥನಾದ ಲಾಲೆ..!

ಮಾಲ್ಗುಡಿ ಡೇಸ್ ಕಥಾಸರಣಿಯಲ್ಲಿ ಫೆಡ್ರಿಕ್ ಲಾಲೆ ಎಂಬ ಬ್ರಿಟಿಷ್ ಸವರ್ಾಧಿಕಾರಿಯೊಬ್ಬನ ಕಥೆಯೂ ಬರುತ್ತದೆ. ಧಾರಾವಾಹಿ ನಿಮರ್ಾಣದ ವೇಳೆ ದಿ. ಶಂಕರನಾಗ್ ಅವರು ಪ್ಯಾರಿಸ್ ಪ್ಲಾಸ್ಟರ್ನಿಂದ ನಿಮರ್ಿಸಲ್ಪಟ್ಟ ಫೆಡ್ರಿಕ್ ಲಾಲೆಯ ಆಳೆತ್ತರದ ಪ್ರತಿಮೆಯನ್ನು ನಿಮರ್ಿಸಿ ಅದನ್ನು ಮಾಲ್ಗುಡಿ ಅಥರ್ಾತ್ ಆಗುಂಬೆಯ ಸರ್ಕಲ್ನಲ್ಲಿ ನಿಲ್ಲಿಸುತ್ತಾರೆ. ಅಂದಿನಿಂದ ಸಮಾರು ಸಮಯ ಧಾರಾವಾಹಿ ತಂಡ ಊರನ್ನು ತೊರೆದು ಹೋದ ಬಳಿಕವೂ ಈ ರಸ್ತೆ ಲಾಲೆ ಬೀದಿ ಎಂದೇ ಕರೆಸಿಕೊಂಡಿದ್ದೂ ಇದೆ. ಆದರೆ ಕಳೆದ ಎರಡು ವರ್ಷದ ಹಿಂದೆ ಆಗುಂಬೆ ಗ್ರಾ,ಪಂ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಲಾಲೆ ಪ್ರತಿಮೆಯನ್ನು ಇಲ್ಲಿಂದ ತೆಗೆಸುವ ನಿಧರ್ಾರ ಕೈಗೊಂಡಿತು. ಅಲ್ಲಿಂದ ಸ್ಥಳೀಯ ಎಸ್ವಿಎಸ್ ಪ್ರೌಢಶಾಲೆಯ ಆವರಣದಲ್ಲಿ ಸ್ವಲ್ಪ ಸಮಯ ನಿಂತಿದ್ದ ಲಾಲೆ ಪ್ರತಿಮೆ ಅಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿದ್ದನ್ನೂ ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿಂದಲೂ ಎತ್ತಂಗಡಿಯಾದ ಪ್ರತಿಮೆ ಶಾಲೆಯ ಹಿಂದಿನ ಮರದ ಬುಡದಲ್ಲಿ ಆಶ್ರಯ ಪಡೆದಿದೆ. ಕೈ, ಕಾಲು ಮುರಿದು ಜೀಣರ್ಾವಸ್ಥೆಯನ್ನು ತಲುಪಿರುವ ಬ್ರಿಟಿಷ್ ಸವರ್ಾಧಿಕಾರಿ ಫೆಡ್ರಿಕ್ ಲಾಲೆ ಪ್ರತಿಮೆ ಅನಾಥವಾಗಿದ್ದು, ಮಾನವನ ದುರಾಸೆ, ಸರ್ವಕ್ಕೂ ತಾನೇ ಅಧಿಕಾರಿಯಾಗಬೇಕೆಂಬ ಹಂಬಲವನ್ನು ಕಂಡು ನಕ್ಕಂತೆ ಭಾಸವಾಗುತ್ತದೆ.

ಆರ್.ಕೆ.ನಾರಾಯಣ್ ಅಂದಂತೆ...

ಸಣ್ಣಕತೆಗಳ ಸಂಗ್ರಹದ ಪುಸ್ತಕಕ್ಕೆ `ಮಾಲ್ಗುಡಿ ಡೇಸ್' ಎಂಬ ಹೆಸರಿಟ್ಟುದರ ಬಗ್ಗೆ ಕತರ್ೃ ಆರ್.ಕೆ.ನಾರಾಯಣ್ ಹೀಗೆ ಹೇಳುತ್ತಾರೆ. ಕತೆಗಳ ಸಂಗ್ರಹಕ್ಕೆ ಒಪ್ಪುವಂತಹ ಭೌಗೋಳಿಕ ಅಂತಸ್ತನ್ನು ತಂದುಕೊಡುವ ಉದ್ದೇಶದಿಂದ ಕಥಾಸಂಕಲನಕ್ಕೆ ಮಾಲ್ಗುಡಿ ಡೇಸ್ ಎಂಬ ಹೆಸರಿಟ್ಟಿದ್ದೇನೆ. ಆದರೆ ಎಲ್ಲಿದೆ ಮಾಲ್ಗುಡಿ ಎಂದು ಆಗಾಗ ನನ್ನನ್ನು ಜನರು ಕೇಳುತ್ತಾರೆ. ಅದು ಕೇವಲ ಕಾಲ್ಪನಕ ಮಾತ್ರ. ಅದು ಯಾವ ಭೌಗೋಳಿಕ ನಕ್ಷೆಯಲ್ಲೂ ಸಿಗಲಾರದು ಎಂಬುದನ್ನು ಮಾತ್ರ ಹೇಳಬಲ್ಲೆ. ಮಾಲ್ಗುಡಿ ದಕ್ಷಿಣ ಭಾರತದ ಸಣ್ಣ ಊರು ಎಂದು ನಾನು ಹೇಳಿದರೆ ಅದು ಅರ್ಧಸತ್ಯದ ಅಭಿವ್ಯಕ್ತಿಯಾಗುತ್ತದೆ. ಏಕೆಂದರೆ ಮಾಲ್ಗುಡಿಯಲ್ಲಿ ಬರುವ ಪಾತ್ರಗಳೆಲ್ಲ ಸಾರ್ವತ್ರಿಕ ಎಂದೇ ನನ್ನ ಅನಿಸಿಕೆ. ಮಾಲ್ಗುಡಿಯ ಪಾತ್ರಗಳನ್ನು ನಾನು ನ್ಯೂಯಾಕರ್್ ನಗರದಲ್ಲಿ ಸಹ ಕಂಡಕೊಳ್ಳಬಲ್ಲೆ. ಇತ್ತೀಚೆಗೆ ಲಂಡನ್ನಿನಲ್ಲಿ ಉತ್ಸಾಹಿ ನಿಮರ್ಾಪಕನೊಬ್ಬ ತಾನು ಒಂದು ಗಂಟೆಯ ಟಿವಿ ಕಾರ್ಯಕ್ರಮ ಮಾಡುವುದಾಗಿಯೂ, ತನ್ನನ್ನು ಮಾಲ್ಗುಡಿಗೆ ಕರೆದೊಯ್ದು ತೋರಿಸುವಿರಾ, ನಿಮ್ಮ ಕಾದಂಬರಿಯ ಪಾತ್ರಗಳನ್ನು ತನ್ನನ್ನು ಪರಿಚಯಿಸುತ್ತೀರಾ ಎಂಬುದಾಗಿ ಕೇಳಿದಾಗ ನಾನು ಒಂದು ಕ್ಷಣ ವಿಚಲಿತನಾದರೂ. ನಾನೀಗ ಒಂದು ಹೊಸ ಕಾದಂಬರಿ ರಚಿಸುವುದರಲ್ಲಿ ನಿರತನಾಗಿದ್ದೇನೆ ಎಂದೆ. ಇನ್ನೊಂದು ಮಾಲ್ಗುಡಿ ಕಾದಂಬರಿಯಾ ಎಂದಾತ ಕೇಳಿದ... ನಾನು ಹೌದು ಎಂದೆ. ಯಾವ ವಿಚಾರವಾಗಿ? ಆತ ಮರುಪ್ರಶ್ನೆ ಎಸೆದ, ಮಾನವ ಆತ್ಮವನ್ನು ಪಡೆದಿರುವ ಹುಲಿಯ ಬಗ್ಗೆ ಎಂದೆ. ಆತ, ಆಹಾ ಒಳ್ಳೇ ಕುತೂಹಲಕಾರಿಯಾಗಿದೆ, ಹಾಗಾದರೆ ನಾನು ಕಾಯುತ್ತೇನೆ, ನಾನು ತಯಾರಿಸಲಿರುವ ಸಾಕ್ಷ್ಯಚಿತ್ರದಲ್ಲಿ ಹುಲಿಯನ್ನೂ ಸೇರಿಸಿದರೆ ಅಧ್ಭುತವಾಗಿರುತ್ತದೆ ಅಂದ.

ಮಾಲ್ಗುಡಿ ಎಲ್ಲಿದೆ?

ಮಾಲ್ಗುಡಿ ಎಂದೇ ಕರೆಯಲ್ಪಡುವ ಆಗುಂಬೆಯ ಬೀದಿ, ದೊಡ್ಡಮನೆಯನ್ನು ಸಂದಶರ್ಿಸಲು ಬಯಸುವವರು ಮಂಗಳೂರಿನಿಂದ ಆಗುಂಬೆ-ಶಿವಮೊಗ್ಗ ಕಡೆ ಸಂಚರಿಸುವ ವೇಗದೂತ ಬಸ್ನಲ್ಲಿ ಸಂಚಾರ ಬೆಳೆಸಬಹುದು. ಆದರೆ ಇವುಗಳು ನಿಗದಿತ ಸಮಯದಲ್ಲಿ ಸಂಚರಿಸುವುದರಿಂದ ಮಂಗಳೂರಿನಿಂದ ಕಾರ್ಕಳ-ಹೆಬ್ರಿ ಮೂಲಕ ಆಗುಂಬೆಯನ್ನು ತಲುಪುವುದು ಸುಲಭ. ಜೂನ್ ಮೊದಲ ವಾರದಿಂದ ಅಕ್ಟೋಬರ್ ತಿಂಗಳವರೆಗೂ ಮಳೆಯ ಆರ್ಭಟ ಸಾಮಾನ್ಯವಾಗಿ ಹೆಚ್ಚೇ ಇರುವುದರಿಂದ ಆ ಬಳಿಕದ ಸಮಯ ಸಂಚಾರಕ್ಕೆ ಯೋಗ್ಯವಾದುದು. ಆಗುಂಬೆಯಲ್ಲಿ ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಚಾರಣಪ್ರಿಯರಿಗೆ ಇಲ್ಲೇ ಹತ್ತಿರದಲ್ಲಿರುವ ಆಗುಂಬೆಯ ದಟ್ಟಾರಣ್ಯದಲ್ಲಿ ಮರೆಯಾಗಿರುವ ಒನಕೆ ಅಬ್ಬಿ ಜಲಪಾತ ವಿಶಿಷ್ಟ ಅನುಭವ ನೀಡಬಲ್ಲುದು. ವಿಷಪೂರಿತ ಹಾವು, ಕಾಡುಪ್ರಾಣಿಗಳು ಹಾಗೂ ಇಂಬಳದ ಹಾವಳಿ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.