doorada payana...

doorada payana...
ಉತ್ತುಂಗ ಶೃಂಗಗಳಿರುವುದು ಪ್ರವಾಸಕ್ಕಲ್ಲದೆ ನಿವಾಸಕ್ಕಲ್ಲ... -ಕುವೆಂಪು

Friday, June 4, 2010

ಮಳೆ ಬರುವ ಕಾಲಕ್ಕೆ...




ಮಳೆ ಬರುವ ಕಾಲಕ್ಕಾ...


ಮಳೆ ಬಂತೂ... ಮಳೆ ಇದೇನಪ್ಪಾ... ಇನ್ನೂ ಮಳೇನೇ ಬಲರ್ಿಲ್ಲ, ಆವಾಗ್ಲೇ ಮಳೆ ಬಂತು ಅಂತ ಹೇಳ್ತಿದ್ದಾನೆ ಅಂತ ತಿಳ್ಕೋಬೇಡಿ. ಈ `ಮುಂಗಾರು ವಷರ್ಾನುವರ್ಷ ನಿಗದಿತ ಸಮಯಕ್ಕೆ ಬರುತ್ತೆ ಅಂತ ನಾವೇನೋ ತಿಳ್ಕೊಂಡಿರ್ತೇವೆ. ಆದ್ರೆ ಈ ಮುಂಗಾರಿನ ಆರಂಭಕ್ಕೆ ಹೊತ್ತು ಗೊತ್ತು ಅನ್ನೋದೇ ಇರಲ್ಲ. ಕಳೆದ ವರ್ಷ ತುಸು ತಡವಾಗಿ ಆಗಮಿಸಿದ್ದರೆ ಈ ವರ್ಷ ಸದ್ದಿಲ್ಲದೆ ಆಗಮಿಸಿರುತ್ತೆ. ಇನ್ನೇನು ವಾರ ಕಳೆಯುವಷ್ಟರಲ್ಲಿ ಮಳೆಗಾಲ ಆರಂಭವಾಗಿರುತ್ತೆ. ಬಹುಷ: ಈ ಸಲಾನೂ ಮಳೆ ಬೇಗ ಬರುತ್ತೆ ಅಂತ ನೀವುಗಳು ತಿಳ್ಕೊಂಡಿರ್ಬೇಕು ತಾನೇ? ಹುಡ್ಗೀರು ಕೊಡೆ ಹಿಡಿದು ನಡೆಯಲು ಅಭ್ಯಾಸ ಮಾಡ್ಕೋಬೇಕು ತಾನೇ? ಅದಕ್ಕೇ ಹೇಳಿದ್ದು. ನನ್ಗಂತೂ ಯಾಕೋ ಈ ಮಳೆ ಆರಂಭವಾಗುತ್ತೆ ಅಂತ ರೇಡಿಯೋದಲ್ಲಿ ಸುದ್ದಿ ಬಂದ್ರೆ ಸಾಕು, ಭಯ ಶುರುವಾಗುತ್ತೆ. ಅಂದ್ರೆ ನಾನು ಮಳೆಗಾಲದ ವಿರೋಧಿ ಅಂತಾ ತಿಳೀಬೇಡಿ. ಆದ್ರೂ ಮುಂಗಾರು ಅನ್ನೋ ಪದ ಕೇಳಲಷ್ಟೇ ಸೊಗಸು. ಆದ್ರೆ ಈ ಮುಂಗಾರು ಮಳೆ ಅವೇಳೆಯಲ್ಲಿ ಸುರಿದು ಹಾನಿ ಮಾಡೋದು ನೋಡಿದ್ರೆ ಯಾಕಪ್ಪಾ ಬಂತು ಅಂತಾ ಅನ್ನಿಸದಿರದು. ಈ ಸಲಾನೂ ಮುಂಗಾರು ಒಂದು ವಾರಗಳ ಮುಂಚೆ ಕೇರಳಕ್ಕೆ ಆಗಮಿಸುತ್ತೆ ಅಂತ ನಮ್ಮ ಅ(ಹ)ವಮಾನ ಇಲಾಖೆ ಈಗಾಗ್ಲೇ ಹೇಳಿಬಿಟ್ಟಿದೆ. ಹೀಗಾಗಿ ತಿಂಗಳ ಕೊನೆಗೆ ಮಳೆ ಸುರಿಯುವ ಸಾಧ್ಯತೆಯೂ ಇದೆ. ಏನಾದ್ರಾಗಲಿ... ಒಮ್ಮೆ ಮಳೆ ಸುರಿದ್ರೆ ಸಾಕಪ್ಪಾ ದೇವ್ರೇ, ಅಂತ ನಮ್ಮೂರಿನ ರೈತರೆಲ್ಲಾ ಆವಾಗ್ಲೇ ಹರಕೆ ಹೊತ್ತಿದ್ದಾರೆ. ಸುಡುಸುಡು ಬಿಸಿಲ ನಡುವೆ ನೇಗಿಲ ಯೋಗಿ ನಿಡುಸುಯ್ಯುತ್ತಿದ್ರೆ ಅಯ್ಯೋ ಪಾಪ ಅಂತನ್ನಿಸುತ್ತೆ. ಮಳೆ ಬರುವ ಕಾಲಕ್ಕಾ... ಒಳಗ್ಯಾಕ ಕುಂತೀರಿಮೋಡಗಳ ಆಟಾ ನೋಡೋಣ ಅಂತ ನಮ್ಮೂರಿನ ರೈತರು ಇತರರನ್ನು ಕರೆದು ಗದ್ದೆಯ ಕೆಲಸ ಮಾಡಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಗದ್ದೆಯಲ್ಲಿದ್ದ ಕಸವನ್ನು ತೆಗೆದು ಅದಕ್ಕೆ ಬೆಂಕಿ ಹಾಕಿ ಸುಟ್ಟ ಗೊಬ್ಬರವನ್ನು ಉಳುಮೆಗೆ ಬಳಸಲು ರೈತ ಗದ್ದೆಯಲ್ಲಿ ಪೇರಿಸಿಟ್ಟ ದೃಶ್ಯ ನಮ್ಮಲ್ಲಿ ಮಾಮೂಲು. ಪಟ್ಟಣದಲ್ಲಿ ಮುಂಗಾರು ಅಷ್ಟೊಂದು ವಿಶೇಷತೆಯನ್ನು ಪಡೆಯದೇ ಇದ್ರೂ ಹಳ್ಳಿಗಳಲ್ಲಿ ಮಾತ್ರ ಇದು ರೈತರ ಬಹುದಿನಗಳ ಕನಸಂತೆ ಸುರಿಯುತ್ತೆ. ಹಳ್ಳಿಯ ರೈತನೊಬ್ಬ ಮಳೆ ಆರಂಭವಾಗುವ ಈ ಕಾಲಕ್ಕೆ ಎಷ್ಟೊಂದು ಹರುಷ ಚಿತ್ತನಾಗುತ್ತಾನೆಂದರೆ, ಆತನಿಗೆ ಮಳೆಯನ್ನೋದು ಮಣ್ಣಲ್ಲಿ ಬಂಗಾರ ಬೆಳೆಸುವ ಅಮೃತ ಸಿಂಚನವಿದ್ದಂತೆ. ರೈತ ಖುಷಿಪಟ್ಟರೆ ತಾನೇ ಪಟ್ಟಣಿಗರ ಬಾಳು ಹಸಾನಾಗೋದು..? ನಮ್ಮೂರಲ್ಲಂತೂ ಈ ಮುಂಗಾರಿನ ಹನಿ ಭೂಮಿಗೆ ಸೋಕುತ್ತೆ ಅಂತ ಸಿಡಿಲು, ಮಿಂಚು ರೈತನನ್ನು ಎಚ್ಚರಿಸಿದರೆ ಸಾಕು, ಆತ ತನ್ನ ಎತ್ತು, ಕೋಣವನ್ನು ಗದ್ದೆಗೆ ಹೊಡೆದುಕೊಂಡು ಹೋಗಿ ಸುರಿಯುವ ಬಿರುಮಳೆಯನ್ನು ಲೆಕ್ಕಿಸದೆ ಗದ್ದೆ ಉತ್ತರಷ್ಟೇ ರೈತನಿಗೆ ಸಮಾಧಾನ. ಸಿಡಿಲು-ಮಿಂಚುಗಳ ಸಮ್ಮಿಲನವೇ ದುಡಿಯುವ ರೈತನ ಕಿವಿಗಳಿಗೆ ಇಂಪಾದ ಸಂಗೀತದಂತೆ ಕೇಳಿಸುತ್ತಿರುತ್ತೆ. ತನ್ನದೇ ಗುಂಗಿನಲ್ಲಿ ಓಬೇಲೆ... ಹಾಡಿದನೆಂದರೆ ಮುಗೀತು ಮಳೆಗಾಲ ಆರಂಭವಾದಂತೆಯೇ. ಚಿಕ್ಕ ಮಕ್ಕಳಿರುವಾಗ ನನ್ಗೂ ಈ ಮುಂಗಾರು ಬಂದ್ರೆ ಏನೋ ಖುಷಿ, ಸುರಿಯುವ ಮಳೆಗೆ ನಮ್ಮೂರ ಕೆರೆ ತುಂಬಿ ಶಾಲೆಗೆ ರಜೆ ಎಂದು ತಿಳಿದಿದ್ರೂ ಮಳೆಯಲ್ಲಿ ನೆನೆದು ಶಾಲೆಗೆ ಹೋಗುವ ಆಸೆ. ಬಿರುಬಿಸಿಲಿಗೆ ಶಾಲೆಗೆ ಚಕ್ಕರ್ ಹಾಕಿ ಹೊಟ್ಟೆನೋವೆಂದು ಮಲಗುತ್ತಿದ್ದವನು ಮಳೆಯಲ್ಲಿ ಬೇಗನೇ ಎದ್ದು ಶಾಲೆಗೆ ಹೊರಡುವುದು ನೋಡಿ ಅಮ್ಮನಿಗೆ ಅಚ್ಚರಿ. ನಮ್ಮೂರು ನಿಸರ್ಗದ ಅದ್ಭುತ ಸೌಂದಯರ್ಾನಾ ಸವಿಯಲು, ಅದೂ ಮುಂಗಾರಿನ ಮಜಾ ಕಣ್ತುಂಬಿಕೊಳ್ಳಲು ಹೇಳಿ ಮಾಡಿಸಿದ ಊರು. ಅತ್ತ ಬೆಟ್ಟಗುಡ್ಡಗಳ ಸಾಲು ಮಳೆರಾಯನನ್ನು ಕೈ ಬೀಸಿ ಕರೆದರೆ, ಮುಂಗಾರಿನ ಅಭಿಷೇಕಕ್ಕೆ ಭೂರಮೆಯು ಹಸಿರ ಆಭರಣ ಧರಿಸಿ ಖುಷಿಯಲ್ಲಿ ನಲಿದಾಡಿದ ಅನುಭವ. ಹತ್ತಿರದ ನದಿಯೊಂದು ಮಳೆ ನೀರಿಗೆ ತುಂಬಿ ತುಳುಕುವ ದೃಶ್ಯ ನೋಡಿಯೇ ಸವಿಯಬೇಕು. ಬಾಲ್ಯದಲ್ಲಿ ಮುಂಗಾರಿನ ಆರಂಭದ ದಿನ ನಮ್ಮನ್ನೆಲ್ಲಾ ಅಮ್ಮ ಅಂಗಳದಲ್ಲಿ ಮಳೆ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಹೊರಗೆ ಧೋ ಎಂದು ಸುರಿವ ಮಳೆಯ ನಡುವೆ ಅಮ್ಮನ ಮಡಿಲಲ್ಲಿ ಕುಳಿತು ಅಜ್ಜಿ ಮಾಡಿ ಡಬ್ಬ ತುಂಬಿಸಿದ್ದ ಮಳೆಗಾಲದ ಸ್ಪೆಷಲ್ ತಿಂಡಿಯನ್ನು ತಿನ್ನುತ್ತಿದ್ರೆ, ಇಂತಹ ಮಳೆಗಾಲ ತಿಂಗಳಿಗೊಮ್ಮೆ ಬರಲಿ ಅಂತನ್ನಿಸ್ತಾ ಇತ್ತು.ಕಾಲ ಬದಲಾದಂತೆ ಈಗ ಹಿಂದಿನ ಉತ್ಸಾಹವಿಲ್ಲ. ಬಿತ್ತಿದ್ದು ಬೆಳೆಯದೆ ರೈತ ಉತ್ಸಾಹ ಕಳೆದುಕೊಂಡಿದ್ದಾನೆ. ಮಳೆ ಬರುತ್ತೆ... ಆದ್ರೆ ಆ ಮಳೆ ಖುಷಿಯನ್ನು ತರಲ್ಲ, ನಾವು ಮಾಡಿದ ಬೆಳೆಯನ್ನೆಲ್ಲಾ ಕೊಚ್ಚಿಕೊಂಡು ಹೋದಾಗ ಬದುಕು ಬಾರ ಆಗದಿರುತ್ತಾ? ಅದೇ ಮುಂಗಾರು ಮಳೆ... ಹಿಂದಿನ ಉತ್ಸಾಹವಿಲ್ಲ, ಗದ್ದೆಯಲ್ಲಿ ಕೋಣಗಳ ಬದಲಿಗೆ ಮೆಷಿನ್ಗಳು ಬಂದಿವೆ. ಓಬೇಲೆಯ ಪದವಿಲ್ಲ, ಟ್ರ್ಯಾಕ್ಟರ್ ಎಂಜಿನ್ನಿನ ಸದ್ದು ದೂರದ ತನಕ ಕಿವಿಗಪ್ಪಳಿಸುತ್ತೆ.ಮುಂದೆ ಬರಲಿರುವ ಮುಂಗಾರು ರೈತನಿಗೆ ಸುಖ, ಸಮೃದ್ಧಿ ತರಲಿ. ಕಂಡ ಕನಸು ನನಸಾಗಿ ಹಸಿರು ಪೈರು ಹೊಲ ಗದ್ದೆ ತುಂಬಲಿ ಎನ್ನುವ ಹಾರೈಕೆಯೊಂದಿಗೆ...

No comments: